ETV Bharat / state

ಬಾಗೇಪಲ್ಲಿಯಲ್ಲಿ ದಂಡ ಜಡಿದ ಎಎಸ್ಐ ಮೇಲೆ ಕಾರು ಚಾಲಕನಿಂದ ಹಲ್ಲೆ ಯತ್ನ: ಮುಂದೇನಾಯ್ತು?

author img

By

Published : Sep 30, 2019, 10:11 AM IST

ಬಾಗೇಪಲ್ಲಿಯಲ್ಲಿ ಕಾರು ಚಾಲಕನೋರ್ವ ಸೀಟ್​ ಬೆಲ್ಟ್ ಹಾಕದ್ದಕ್ಕೆ ಎಎಸ್​ಐ ದಂಡ ವಿಧಿಸಿದ್ದರು. ಇದರಿಂದ ಆಕ್ರೋಶಗೊಂಡ ಚಾಲಕ ಎಎಸ್​ಐ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಬಾಗೇಪಲ್ಲಿ ಪೊಲೀಸ್​ ಠಾಣೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸುತ್ತಿದ್ದ ಚಾಲಕನೋರ್ವ ಎಎಸ್ಐ ದಂಡ ವಿಧಿಸಿದ್ದರಿಂದ ಅವರ ವಿರುದ್ಧವೇ ಆಕ್ರೋಶಗೊಂಡು ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

ದಂಡ ಹಾಕಿದ್ದಕ್ಕೆ ಎಎಸ್ಐ ಮೇಲೆ ಹಲ್ಲೆಗೆ ಯತ್ನಿಸಿದ ಕಾರು ಚಾಲಕ

ಕಾರು ಚಾಲಕ ರವಿ ಎಂಬಾತ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತನ್ನ ತಾಯಿಯನ್ನು ಕರೆ ತರುವ ಆತುರದಲ್ಲಿ ಸೀಟ್​ ಬೆಲ್ಟ್ ಹಾಕುವುದನ್ನು ಮರೆತಿದ್ದ ಎನ್ನಲಾಗ್ತಿದೆ. ಇದೇ ವೇಳೆ ಎಎಸ್ಐ ರಾಮಚಂದ್ರಪ್ಪ ವಾಹನ ತಪಾಸಣೆ ಮಾಡುವಾಗ ಕಾರನ್ನು ನಿಲ್ಲಿಸಿ ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸುತ್ತಿದ್ದಿಯಾ ಎಂದು 500 ರೂ. ದಂಡ ಪಾವತಿಸುವಂತೆ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಚಾಲಕ ರವಿಯು ಎಎಸ್ಐ ಮೇಲೆ ಹಲ್ಲೆಗೆ ಮುಂದಾಗಿದ್ದ ಎಂದು ದೂರಲಾಗಿದೆ.

ಘಟನೆ ವೇಳೆ ಚಾಲಕನ ಜೊತೆ ಸಾರ್ವಜನಿಕರು ಸೇರಿ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಎಎಸ್​ಐ ರಾಮಚಂದ್ರಪ್ಪ ಸಾರ್ವಜನಿಕರಿಗೆ ಟ್ರಾಫಿಕ್​ ರೂಲ್ಸ್ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಸಮಾಧಾನ ಮಾಡಿ ಕಳಿಸಿದ್ದಾರೆ. ಚಾಲಕ ತನ್ನ ತಪ್ಪನ್ನು ತಿಳಿದು ಎಎಸ್​ಐಗೆ ಕ್ಷಮೆ ಕೇಳಿದ್ದಾನೆ.

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸುತ್ತಿದ್ದ ಚಾಲಕನೋರ್ವ ಎಎಸ್ಐ ದಂಡ ವಿಧಿಸಿದ್ದರಿಂದ ಅವರ ವಿರುದ್ಧವೇ ಆಕ್ರೋಶಗೊಂಡು ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.

ದಂಡ ಹಾಕಿದ್ದಕ್ಕೆ ಎಎಸ್ಐ ಮೇಲೆ ಹಲ್ಲೆಗೆ ಯತ್ನಿಸಿದ ಕಾರು ಚಾಲಕ

ಕಾರು ಚಾಲಕ ರವಿ ಎಂಬಾತ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತನ್ನ ತಾಯಿಯನ್ನು ಕರೆ ತರುವ ಆತುರದಲ್ಲಿ ಸೀಟ್​ ಬೆಲ್ಟ್ ಹಾಕುವುದನ್ನು ಮರೆತಿದ್ದ ಎನ್ನಲಾಗ್ತಿದೆ. ಇದೇ ವೇಳೆ ಎಎಸ್ಐ ರಾಮಚಂದ್ರಪ್ಪ ವಾಹನ ತಪಾಸಣೆ ಮಾಡುವಾಗ ಕಾರನ್ನು ನಿಲ್ಲಿಸಿ ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸುತ್ತಿದ್ದಿಯಾ ಎಂದು 500 ರೂ. ದಂಡ ಪಾವತಿಸುವಂತೆ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಚಾಲಕ ರವಿಯು ಎಎಸ್ಐ ಮೇಲೆ ಹಲ್ಲೆಗೆ ಮುಂದಾಗಿದ್ದ ಎಂದು ದೂರಲಾಗಿದೆ.

ಘಟನೆ ವೇಳೆ ಚಾಲಕನ ಜೊತೆ ಸಾರ್ವಜನಿಕರು ಸೇರಿ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಎಎಸ್​ಐ ರಾಮಚಂದ್ರಪ್ಪ ಸಾರ್ವಜನಿಕರಿಗೆ ಟ್ರಾಫಿಕ್​ ರೂಲ್ಸ್ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಸಮಾಧಾನ ಮಾಡಿ ಕಳಿಸಿದ್ದಾರೆ. ಚಾಲಕ ತನ್ನ ತಪ್ಪನ್ನು ತಿಳಿದು ಎಎಸ್​ಐಗೆ ಕ್ಷಮೆ ಕೇಳಿದ್ದಾನೆ.

Intro:ದಂಡ ಹಾಕಿದ್ದಕ್ಕೆ ಎಎಸ್ಐ ಮೇಲೆ ಹಲ್ಲೆಗೆ ಯತ್ನ Body:ಬಾಗೇಪಲ್ಲಿ ಸಿಟ್ ಬೆಲ್ಟ್ ಧರಿಸದೇ ಕಾರು ಚಲಾಯುಸುತಿದ್ದ ಚಾಲಕನಿಗೆ ಎಎಸ್ಐ ದಂಡ ವಿಧಿಸದ್ದರಿಂದ ಆಕ್ರೋಶಗೊಂಡ ಚಾಲಕ ರವಿ ಎಎಸ್ಐ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ Conclusion:ಕಾರು ಚಾಲಕ ರವಿ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಗೆ ತನ್ನ ತಾಯಿಯನ್ನು ಕರೆ ತರುವ ಆತುರದಲ್ಲಿ ಸಿಟ್ ಬೆಲ್ಟ್ ಅಕುವುದು ಮರೆತ್ತಿದ್ದಾನೆ.

ಎಎಸ್ಐ ರಾಮಚಂದ್ರಪ್ಪ ವಾಹನ ತಪಾಸಣೆ ಮಾಡುವಾಗ ಓಮ್ನಿ ಕಾರನ್ನು ನಿಲ್ಲಿಸಿ ಸಿಟ್ ಬೆಲ್ಟ್ ಹಾಕದೆ ಚಲಾಯಿಸುತ್ತಿದ್ದ ರೂ.500 ದಂಡ ಬರೆದು ಪಾವತಿಸಬೇಕು ಎಂದು ಕೇಳಿದಾಗ ಕಾರ್ ಚಾಲಕ ರವಿ ಎಎಸ್ಐ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾನೆ.

ರವಿ ಓಮ್ನಿ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿಕೊಂಡು ರವಿ ಜೊತೆ ಸಾರ್ವಜನಿಕರು ಸೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಅಕಿದರು. ಎಎಸ್ಐ ರಾಮಚಂದ್ರಪ್ಪ ಸಾರ್ವಜನಿಕರಿಗೆ ಆ ಘಟನೆ ಬಗ್ಗೆ ವಿವರಣೆ ಮಾಡಿ ಸಾರ್ವಜನಿಕರಿಗೆ ಸಮಾಧಾನ ಮಾಡಿ ಕಳಿಹಿಸಿದ್ದಾರೆ

ಎಎಸ್ಐ ರಾಮಚಂದ್ರಪ್ಪ ನವರಿಗೆ ಓಮ್ನಿ ಕಾರ್ ಚಾಲಕ ರವಿ ತಪ್ಪನ್ನು ತಿಳಿದು ಕ್ಷಮೆ ಕೇಳಿ ಹಿಂದಿರಿಗಿದ್ದಾನೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.