ETV Bharat / state

ಗುಂಡ್ಲುಪೇಟೆ: ಸ್ನೇಹಿತ ಚುಚ್ಚಿದ ಚಾಕು ಸಮೇತ ಯುವಕ ಆಸ್ಪತ್ರೆಗೆ ದಾಖಲು

author img

By

Published : Dec 1, 2021, 10:22 PM IST

ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಸ್ನೇಹಿತರಿಬ್ಬರ ನಡುವೆ ಮಾರಾಮಾರಿಯಾಗಿ ಚುಚ್ಚಿದ ಚಾಕು ಸಮೇತ ಆಸ್ಪತ್ರೆಗೆ ಯುವಕ ದಾಖಲಾಗಿದ್ದಾನೆ.

knife stabbed to friend
ಚಾಕು ಇರಿತ ಪ್ರಕರಣ

ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ‌ ಸ್ನೇಹಿತರಿಬ್ಬರ ನಡುವೆ ಮಾರಾಮಾರಿಯಾಗಿ ಅದರಲ್ಲಿ ಒಬ್ಬ ಚಾಕು ಇರಿತಕ್ಕೆ ಒಳಗಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕತುಪ್ಪೂರು ಗ್ರಾಮದ ಕೌಶಿಕ್ ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದು, ಸಂಜಯ್ ಎಂಬಾತನನ್ನು ಕೊಲೆಯತ್ನ ಪ್ರಕರಣದಡಿ ಪೊಲೀಸರು ಬಂಧಿಸಿದ್ದಾರೆ. ಕೌಶಿಕ್ ಹಾಗೂ ಸಂಜು ಇಬ್ಬರೂ ಸ್ನೇಹಿತರಾಗಿದ್ದು, ಮಾತನಾಡುತ್ತ ಕುಳಿತಿದ್ದ ವೇಳೆ ಗಲಾಟೆ ಉಂಟಾಗಿ ವಿಕೋಪಕ್ಕೆ ತಿರುಗಿದೆ. ಕೌಶಿಕ್​ನ ಹೊಟ್ಟೆ ಭಾಗಕ್ಕೆ ಸಂಜು ಚಾಕು ಚುಚ್ಚಿದ್ದಾನೆ. ಕೂಡಲೇ, ಸ್ಥಳೀಯರು ಚಾಕು ಸಮೇತ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಕೌಶಿಕ್ ಹೊಟ್ಟೆಯ ಭಾಗದಲ್ಲೇ ಚಾಕು ಉಳಿದಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಮೈಸೂರಿಗೆ ರವಾನಿಸಿದ್ದು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಸಿಕೆ ಹಾಕಲು ಹೋದ ವೇಳೆ ಕುರಿಗಾಯಿ, ವ್ಯಕ್ತಿಯೊಬ್ಬನ ಹೈಡ್ರಾಮ: ಮನೆಗಳಿಗೆ ನುಗ್ಗಿ ವ್ಯಾಕ್ಸಿನ್​ ಹಾಕಿದ ಸಿಬ್ಬಂದಿ.. VIDEO

ಚಾಮರಾಜನಗರ: ಕ್ಷುಲ್ಲಕ ಕಾರಣಕ್ಕೆ‌ ಸ್ನೇಹಿತರಿಬ್ಬರ ನಡುವೆ ಮಾರಾಮಾರಿಯಾಗಿ ಅದರಲ್ಲಿ ಒಬ್ಬ ಚಾಕು ಇರಿತಕ್ಕೆ ಒಳಗಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕತುಪ್ಪೂರು ಗ್ರಾಮದ ಕೌಶಿಕ್ ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದು, ಸಂಜಯ್ ಎಂಬಾತನನ್ನು ಕೊಲೆಯತ್ನ ಪ್ರಕರಣದಡಿ ಪೊಲೀಸರು ಬಂಧಿಸಿದ್ದಾರೆ. ಕೌಶಿಕ್ ಹಾಗೂ ಸಂಜು ಇಬ್ಬರೂ ಸ್ನೇಹಿತರಾಗಿದ್ದು, ಮಾತನಾಡುತ್ತ ಕುಳಿತಿದ್ದ ವೇಳೆ ಗಲಾಟೆ ಉಂಟಾಗಿ ವಿಕೋಪಕ್ಕೆ ತಿರುಗಿದೆ. ಕೌಶಿಕ್​ನ ಹೊಟ್ಟೆ ಭಾಗಕ್ಕೆ ಸಂಜು ಚಾಕು ಚುಚ್ಚಿದ್ದಾನೆ. ಕೂಡಲೇ, ಸ್ಥಳೀಯರು ಚಾಕು ಸಮೇತ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಕೌಶಿಕ್ ಹೊಟ್ಟೆಯ ಭಾಗದಲ್ಲೇ ಚಾಕು ಉಳಿದಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಮೈಸೂರಿಗೆ ರವಾನಿಸಿದ್ದು ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಸಿಕೆ ಹಾಕಲು ಹೋದ ವೇಳೆ ಕುರಿಗಾಯಿ, ವ್ಯಕ್ತಿಯೊಬ್ಬನ ಹೈಡ್ರಾಮ: ಮನೆಗಳಿಗೆ ನುಗ್ಗಿ ವ್ಯಾಕ್ಸಿನ್​ ಹಾಕಿದ ಸಿಬ್ಬಂದಿ.. VIDEO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.