ಚಾಮರಾಜನಗರ: ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಮೂಲಕ ತಮಿಳುನಾಡಿನ ಸೇಲಂಗೆ ತೆರಳಬೇಕಿದ್ದ 57 ಕಾರ್ಮಿಕರು ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಸಿಲುಕಿಕೊಂಡು ಅತಂತ್ರರಾಗಿದ್ದಾರೆ.
ಮಾಹಿತಿ ಕೊರತೆ ಹಿನ್ನೆಲೆ ಬಂಡೀಪುರದ ಕೆಕ್ಕನಹಳ್ಳಿ ಚೆಕ್ಪೋಸ್ಟ್ಗೆ ತೆರಳುವ ಬದಲಿಗೆ ಕೌದಳ್ಳಿ ಮಾರ್ಗವಾಗಿ ಬಂದಿದ್ದಾರೆ. ಹೀಗಾಗಿ ಅಲ್ಲಿನ ಚೆಕ್ಪೋಸ್ಟ್ನಲ್ಲಿ ಪ್ರವೇಶ ನಿರಾಕರಿಸಲಾಗಿದೆ.
ಕೊಡಗು ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆದು ಬಸ್ನಲ್ಲಿ ಬಂದಿದ್ದರು. ಆದರೆ, ಗಡಿಯಲ್ಲಿ ಬಿಡದ ಕಾರಣ ಬಸ್ ಚಾಲಕ ಕಾರ್ಮಿಕರನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ. ಈ ಕುರಿತು ಮಾಹಿತಿ ಪಡೆದ ಕೌದಳ್ಳಿ ಗ್ರಾಪಂ ಸಿಬ್ಬಂದಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ತಮಿಳುನಾಡಿನ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಎರಡು ಬಸ್ಗಳಲ್ಲಿ ಕಾರ್ಮಿಕರನ್ನು ತವರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಗ್ರಾಪಂ ಪಿಡಿಒ ಪ್ರದೀಪ್ ತಿಳಿಸಿದ್ದಾರೆ.