ETV Bharat / state

ರಂಗೇರಿದ ಗಡಿಜಿಲ್ಲೆ ಲೋಕಸಮರ : ಕಾಂಗ್ರೆಸ್- ಬಿಜೆಪಿ ನಡುವೆ ಡಿಜಿಟಲ್​ ವಾರ್​​..!!

ಸಚಿವ ಸಂಪುಟದಿಂದ ಕೈಬಿಟ್ಟಾಗ ನಿಮ್ಮ ಪರ ಧ್ರುವನಾರಾಯಣ ದೆಹಲಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಲಾಬಿ ಮಾಡಲಿಲ್ಲವೇ...? ಆ ಸಂದರ್ಭ ನೀವು ಬೆಂಬಲಿಗರ ಸಭೆ ಕರೆದಾಗ ನಿಮ್ಮ ಜೊತೆಗೆ ಇದ್ದವರು ಇದೇ ಧ್ರುವನಾರಾಯಣ್ ಅಲ್ಲವೇ...?

author img

By

Published : Mar 28, 2019, 9:47 PM IST

ಧ್ರುವನಾರಾಯಣ್, ವಿ.ಶ್ರೀನಿವಾಸ ಪ್ರಸಾದ್

ಚಾಮರಾಜನಗರ: ಲೋಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ವಿರುದ್ಧ ಬಿಜೆಪಿಯಿಂದ ವಿ.ಶ್ರೀನಿವಾಸ ಪ್ರಸಾದ್​ ಕಣಕ್ಕಿಳಿದ ಮೇಲೆ ಜಿಲ್ಲಾ ರಾಜಕಾರಣ ರಂಗೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ವಾಕ್ಸಮರ ತಾರಕ್ಕೇರಿದೆ.

ಕೆಲವು ದಿನದ ಹಿಂದೆಯಷ್ಟೆ ವಿ.ಶ್ರೀನಿವಾಸ್​ ಪ್ರಸಾದ್​​ ಅರ್ಜುನ, ಆರ್.ಧ್ರುವನಾರಾಯಣ ಕರ್ಣ ಹಾಗೂ ನರೇಂದ್ರ ಮೋದಿ ಕೃಷ್ಣನಂತೆ ಚಿತ್ರಿಸಿ ಚಾಮರಾಜನಗರ ಕುರುಕ್ಷೇತ್ರದ ಸಂದೇಶಗಳನ್ನು ಹರಿಬಿಟ್ಟಿದ್ದರು. ಬಳಿಕ, ವಿ.ಶ್ರೀನಿವಾಸಪ್ರಸಾದ್​ಗೆ 13 ಪ್ರಶ್ನೆಗಳು ಎಂಬ ಸಂದೇಶ ರವಾನಿಸಿದ್ದ ಕಾಂಗ್ರೆಸ್​ಪರ ನೆಟ್ಟಿಗರಿಗೆ ಬಿಜೆಪಿ ಕಾರ್ಯಕರ್ತರು ಕೂಡ ಮರು ಉತ್ತರ ನೀಡಿದ್ದಾರೆ.

ನೆಟ್ಟಿಗರು ಶ್ರೀನಿವಾಸ ಪ್ರಸಾದ್​ಗೆ ಕೇಳಿದ್ದ ಪ್ರಶ್ನೆಗಳು
- 2008ರಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಖರ್ಗೆ ಅವರು ನಂಜನಗೂಡಿನಿಂದಲೇ ಸ್ಪರ್ಧಿಸುವಂತೆ ಧ್ರುವನಾರಾಯಣ ರವರಿಗೆ ತಾಕೀತು ಮಾಡಿದಾಗ, ನಂಜನಗೂಡಿನಲ್ಲಿ ಸ್ಪರ್ಧಿಸುವುದಾಗಿ ಪ್ರಸಾದ್ ನನ್ನ ಬಳಿ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾನು ಕೊಳ್ಳೇಗಾಲದಲ್ಲೇ ಸ್ಪರ್ಧಿಸುವುದಾಗಿ ಹೇಳಿ ನಿಮಗೆ ನಂಜನಗೂಡಿನಲ್ಲಿ ಅವಕಾಶ ಮಾಡಿಕೊಟ್ಟಿದ್ದು ಸುಳ್ಳೇ....?


- 2008ರಲ್ಲಿ ಆಗಷ್ಟೆ ಕೊಳ್ಳೇಗಾಲದಿಂದ ಗೆದ್ದಿದ್ದ ಧ್ರುವನಾರಾಯಣ್ ರವರು 2009ರ ಲೋಕಸಭಾ ಚುನಾವಣೆಯಲ್ಲಿ ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ತಪ್ಪಿಸುವ ಸಲುವಾಗಿ ಧ್ರುವನಾರಾಯಣ್ ರವರನ್ನು ಕಣಕ್ಕಿಳಿಯುವಂತೆ ಒತ್ತಡ ಹೇರಿದಾಗ ಸ್ಪರ್ದಿಸಲು ಒಲ್ಲೆ ಎಂದಾಗ ಒತ್ತಾಯಪೂರ್ವಕವಾಗಿ ನಿಲ್ಲಿಸಿ ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ತಪ್ಪಿಸಿ ಶಿವಣ್ಣ ಅವರ ಬೆನ್ನಿಗೆ ಚೂರಿ ಹಾಕಿದ್ದು ಮರೆತು ಬಿಟ್ಟರೇ...?

- 2013ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನೀವು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಾಗ ನಿಮ್ಮ ಬೆನ್ನಿಗೆ ನಿಂತು ನಾನೇ ಅಭ್ಯರ್ಥಿ ಎನ್ನುವ ಮಟ್ಟಿಗೆ ಅಖಾಡಕ್ಕಿಳಿದು ಗೆಲ್ಲಿಸಿಕೊಂಡು ಬಂದ ಧ್ರುವನಾರಾಯಣ್ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದು ಸುಳ್ಳೆ...? ಗಮನಾರ್ಹವೆಂದರೆ, ಅಂದು ಜೆಡಿಎಸ್ ಅಲೆಯಲ್ಲಿ ಗೆಲುವಿನ ಸಮೀಪ ಬಂದಿದ್ದ ಸೋದರ ಸಂಬಂಧಿ ಕಳಲೆ ಕೇಶವಮೂರ್ತಿ ವಿರುದ್ಧ ನಿಮ್ಮನ್ನು ಗೆಲ್ಲಿಸಿದ ಧ್ರುವನಾರಾಯಣ್ ನಿಮ್ಮ ಗೌರವ ಕಾಪಾಡಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಮಂತ್ರಿ ಮಾಡಲು ನೆರವಾಗಲಿಲ್ಲವೇ...?

- ಸಚಿವ ಸಂಪುಟದಿಂದ ಕೈಬಿಟ್ಟಾಗ ನಿಮ್ಮ ಪರ ಧ್ರುವನಾರಾಯಣ ದೆಹಲಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಲಾಬಿ ಮಾಡಲಿಲ್ಲವೇ...? ಆ ಸಂದರ್ಭ ನೀವು ಬೆಂಬಲಿಗರ ಸಭೆ ಕರೆದಾಗ ನಿಮ್ಮ ಜೊತೆಗೆ ಇದ್ದವರು ಇದೇ ಧ್ರುವನಾರಾಯಣ್ ಅಲ್ಲವೇ...?

- ಮಾಗಿದ ವಯಸ್ಸಲ್ಲಿ ಬೆಳೆಯುತ್ತಿರುವ ದಲಿತ ರಾಜಕಾರಣಿಗಳಿಗೆ ಆದರ್ಶ ಆಗುವುದು ಬಿಟ್ಟು ದ್ವೇಷದ ಜ್ವಾಲೆಗೆ ಕಿಡಿ ಹೊತ್ತಿಸುವ ನಿಮ್ಮ ಈ ನಡೆಯಿಂದ ಮತದಾರರು ಏನನ್ನು ನಿರೀಕ್ಷಿಸಲು ಸಾಧ್ಯವಿದೆ ತಿಳಿಸುವಿರಾ....?7. 45 ವರ್ಷ ಸುದೀರ್ಘ ಮೀಸಲಾತಿ ಕ್ಷೇತ್ರದಲ್ಲಿ ದಲಿತ ರಾಜಕಾರಣಿಯಾಗಿ ಅಧಿಕಾರ ಅನುಭವಿಸಿರುವ ನೀವು ಎರಡನೇ ತಲೆಮಾರಿನ ಒಬ್ಬ ದಲಿತ ನಾಯಕನನ್ನು ಹುಟ್ಟು ಹಾಕಿ ಬೆಳೆಸಿದ ನಿದರ್ಶನವಿದ್ದರೆ ಬಹಿರಂಗ ಪಡಿಸುವಿರಾ....?

- ಚುನಾವಣಾ ಪ್ರಚಾರದಲ್ಲಿ ಬೈಯುವುದನ್ನೇ ಚಾಳಿ ಮಾಡಿಕೊಂಡಿರುವ ನೀವು ಪ್ರಜಾಪ್ರಭುತ್ವ ಆಶಯ, ಮೌಲ್ಯವನ್ನು ಎತ್ತಿ ಹಿಡಿಯುತ್ತಿದ್ದೀನಿ ಅಂತ ಭಾವಿಸಿದ್ದೀರಾ...?

social-media
ಡಿಜಿಟಲ್​ ವಾರ್​​

ಹೀಗೆ 13 ಪ್ರಶ್ನೆಗಳನ್ನ ಮಾಡಿತ್ತು. ಈ ಪ್ರಶ್ನೆಗಳಿಗೂ ಇತಿಹಾಸದಲ್ಲಿ ನಡೆದುಹೋದ ರಾಜಕೀಯ ಚಟುವಟಿಕೆಯ ಬಗ್ಗೆ ಸಾಕ್ಷಾಧಾರಗಳೊಂದಿಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಕೇಳಿದ್ದ ಪ್ರತಿಯೊಂದು ಪ್ರಶ್ನೆಗೂ ಸವಿವರವಾದ ಉತ್ತರ ನೀಡುವುದರ ಮುಖಾಂತರ ಕಾಂಗ್ರೆಸ್​ನ ಧೃವನಾರಾಯಣ್​ರ ಸಾಧಕ ಭಾದಕಗಳನ್ನು ವ್ಯಾಖ್ಯಾನಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ನೀಡಿದ ಕೆಲ ಉತ್ತರಗಳ ತುಣುಕುಗಳು ಹೀಗಿವೆ

social-media
ಡಿಜಿಟಲ್​ ವಾರ್​​

..!


ಚಾಮರಾಜನಗರ: ಲೋಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ವಿರುದ್ಧ ಬಿಜೆಪಿಯಿಂದ ವಿ.ಶ್ರೀನಿವಾಸ ಪ್ರಸಾದ್​ ಕಣಕ್ಕಿಳಿದ ಮೇಲೆ ಜಿಲ್ಲಾ ರಾಜಕಾರಣ ರಂಗೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ವಾಕ್ಸಮರ ತಾರಕ್ಕೇರಿದೆ.

ಕೆಲವು ದಿನದ ಹಿಂದೆಯಷ್ಟೆ ವಿ.ಶ್ರೀನಿವಾಸ್​ ಪ್ರಸಾದ್​​ ಅರ್ಜುನ, ಆರ್.ಧ್ರುವನಾರಾಯಣ ಕರ್ಣ ಹಾಗೂ ನರೇಂದ್ರ ಮೋದಿ ಕೃಷ್ಣನಂತೆ ಚಿತ್ರಿಸಿ ಚಾಮರಾಜನಗರ ಕುರುಕ್ಷೇತ್ರದ ಸಂದೇಶಗಳನ್ನು ಹರಿಬಿಟ್ಟಿದ್ದರು. ಬಳಿಕ, ವಿ.ಶ್ರೀನಿವಾಸಪ್ರಸಾದ್​ಗೆ 13 ಪ್ರಶ್ನೆಗಳು ಎಂಬ ಸಂದೇಶ ರವಾನಿಸಿದ್ದ ಕಾಂಗ್ರೆಸ್​ಪರ ನೆಟ್ಟಿಗರಿಗೆ ಬಿಜೆಪಿ ಕಾರ್ಯಕರ್ತರು ಕೂಡ ಮರು ಉತ್ತರ ನೀಡಿದ್ದಾರೆ.

ನೆಟ್ಟಿಗರು ಶ್ರೀನಿವಾಸ ಪ್ರಸಾದ್​ಗೆ ಕೇಳಿದ್ದ ಪ್ರಶ್ನೆಗಳು
- 2008ರಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಖರ್ಗೆ ಅವರು ನಂಜನಗೂಡಿನಿಂದಲೇ ಸ್ಪರ್ಧಿಸುವಂತೆ ಧ್ರುವನಾರಾಯಣ ರವರಿಗೆ ತಾಕೀತು ಮಾಡಿದಾಗ, ನಂಜನಗೂಡಿನಲ್ಲಿ ಸ್ಪರ್ಧಿಸುವುದಾಗಿ ಪ್ರಸಾದ್ ನನ್ನ ಬಳಿ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾನು ಕೊಳ್ಳೇಗಾಲದಲ್ಲೇ ಸ್ಪರ್ಧಿಸುವುದಾಗಿ ಹೇಳಿ ನಿಮಗೆ ನಂಜನಗೂಡಿನಲ್ಲಿ ಅವಕಾಶ ಮಾಡಿಕೊಟ್ಟಿದ್ದು ಸುಳ್ಳೇ....?


- 2008ರಲ್ಲಿ ಆಗಷ್ಟೆ ಕೊಳ್ಳೇಗಾಲದಿಂದ ಗೆದ್ದಿದ್ದ ಧ್ರುವನಾರಾಯಣ್ ರವರು 2009ರ ಲೋಕಸಭಾ ಚುನಾವಣೆಯಲ್ಲಿ ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ತಪ್ಪಿಸುವ ಸಲುವಾಗಿ ಧ್ರುವನಾರಾಯಣ್ ರವರನ್ನು ಕಣಕ್ಕಿಳಿಯುವಂತೆ ಒತ್ತಡ ಹೇರಿದಾಗ ಸ್ಪರ್ದಿಸಲು ಒಲ್ಲೆ ಎಂದಾಗ ಒತ್ತಾಯಪೂರ್ವಕವಾಗಿ ನಿಲ್ಲಿಸಿ ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ತಪ್ಪಿಸಿ ಶಿವಣ್ಣ ಅವರ ಬೆನ್ನಿಗೆ ಚೂರಿ ಹಾಕಿದ್ದು ಮರೆತು ಬಿಟ್ಟರೇ...?

- 2013ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನೀವು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಾಗ ನಿಮ್ಮ ಬೆನ್ನಿಗೆ ನಿಂತು ನಾನೇ ಅಭ್ಯರ್ಥಿ ಎನ್ನುವ ಮಟ್ಟಿಗೆ ಅಖಾಡಕ್ಕಿಳಿದು ಗೆಲ್ಲಿಸಿಕೊಂಡು ಬಂದ ಧ್ರುವನಾರಾಯಣ್ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದು ಸುಳ್ಳೆ...? ಗಮನಾರ್ಹವೆಂದರೆ, ಅಂದು ಜೆಡಿಎಸ್ ಅಲೆಯಲ್ಲಿ ಗೆಲುವಿನ ಸಮೀಪ ಬಂದಿದ್ದ ಸೋದರ ಸಂಬಂಧಿ ಕಳಲೆ ಕೇಶವಮೂರ್ತಿ ವಿರುದ್ಧ ನಿಮ್ಮನ್ನು ಗೆಲ್ಲಿಸಿದ ಧ್ರುವನಾರಾಯಣ್ ನಿಮ್ಮ ಗೌರವ ಕಾಪಾಡಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಮಂತ್ರಿ ಮಾಡಲು ನೆರವಾಗಲಿಲ್ಲವೇ...?

- ಸಚಿವ ಸಂಪುಟದಿಂದ ಕೈಬಿಟ್ಟಾಗ ನಿಮ್ಮ ಪರ ಧ್ರುವನಾರಾಯಣ ದೆಹಲಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಲಾಬಿ ಮಾಡಲಿಲ್ಲವೇ...? ಆ ಸಂದರ್ಭ ನೀವು ಬೆಂಬಲಿಗರ ಸಭೆ ಕರೆದಾಗ ನಿಮ್ಮ ಜೊತೆಗೆ ಇದ್ದವರು ಇದೇ ಧ್ರುವನಾರಾಯಣ್ ಅಲ್ಲವೇ...?

- ಮಾಗಿದ ವಯಸ್ಸಲ್ಲಿ ಬೆಳೆಯುತ್ತಿರುವ ದಲಿತ ರಾಜಕಾರಣಿಗಳಿಗೆ ಆದರ್ಶ ಆಗುವುದು ಬಿಟ್ಟು ದ್ವೇಷದ ಜ್ವಾಲೆಗೆ ಕಿಡಿ ಹೊತ್ತಿಸುವ ನಿಮ್ಮ ಈ ನಡೆಯಿಂದ ಮತದಾರರು ಏನನ್ನು ನಿರೀಕ್ಷಿಸಲು ಸಾಧ್ಯವಿದೆ ತಿಳಿಸುವಿರಾ....?7. 45 ವರ್ಷ ಸುದೀರ್ಘ ಮೀಸಲಾತಿ ಕ್ಷೇತ್ರದಲ್ಲಿ ದಲಿತ ರಾಜಕಾರಣಿಯಾಗಿ ಅಧಿಕಾರ ಅನುಭವಿಸಿರುವ ನೀವು ಎರಡನೇ ತಲೆಮಾರಿನ ಒಬ್ಬ ದಲಿತ ನಾಯಕನನ್ನು ಹುಟ್ಟು ಹಾಕಿ ಬೆಳೆಸಿದ ನಿದರ್ಶನವಿದ್ದರೆ ಬಹಿರಂಗ ಪಡಿಸುವಿರಾ....?

- ಚುನಾವಣಾ ಪ್ರಚಾರದಲ್ಲಿ ಬೈಯುವುದನ್ನೇ ಚಾಳಿ ಮಾಡಿಕೊಂಡಿರುವ ನೀವು ಪ್ರಜಾಪ್ರಭುತ್ವ ಆಶಯ, ಮೌಲ್ಯವನ್ನು ಎತ್ತಿ ಹಿಡಿಯುತ್ತಿದ್ದೀನಿ ಅಂತ ಭಾವಿಸಿದ್ದೀರಾ...?

social-media
ಡಿಜಿಟಲ್​ ವಾರ್​​

ಹೀಗೆ 13 ಪ್ರಶ್ನೆಗಳನ್ನ ಮಾಡಿತ್ತು. ಈ ಪ್ರಶ್ನೆಗಳಿಗೂ ಇತಿಹಾಸದಲ್ಲಿ ನಡೆದುಹೋದ ರಾಜಕೀಯ ಚಟುವಟಿಕೆಯ ಬಗ್ಗೆ ಸಾಕ್ಷಾಧಾರಗಳೊಂದಿಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಕೇಳಿದ್ದ ಪ್ರತಿಯೊಂದು ಪ್ರಶ್ನೆಗೂ ಸವಿವರವಾದ ಉತ್ತರ ನೀಡುವುದರ ಮುಖಾಂತರ ಕಾಂಗ್ರೆಸ್​ನ ಧೃವನಾರಾಯಣ್​ರ ಸಾಧಕ ಭಾದಕಗಳನ್ನು ವ್ಯಾಖ್ಯಾನಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ನೀಡಿದ ಕೆಲ ಉತ್ತರಗಳ ತುಣುಕುಗಳು ಹೀಗಿವೆ

social-media
ಡಿಜಿಟಲ್​ ವಾರ್​​

..!


Intro:ರಂಗೇರಿದ ಗಡಿಜಿಲ್ಲೆ ಲೋಕಸಮರ : ಕಾಂಗ್ರೆಸ್ ಕಾರ್ಯಕರ್ತರ 13 ಪ್ರಶ್ನೆಗೆ ಬಿಜೆಪಿಗರ ಉತ್ತರ! 



ಚಾಮರಾಜನಗರ: ಲೋಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ವಿರುದ್ಧ ಬಿಜಪಿಯಿಂದ ವಿ.ಶ್ರೀನಿವಾಸಪ್ರಸಾದ ಕಣಕ್ಕಿಳಿದ ಮೇಲೆ ಜಿಲ್ಲಾ ರಾಜಕರಾಣ ರಂಗೇರಿದ್ದು, ಎಫ್ ಬಿ, ವಾಟ್ಸಾಪ್ ನಲ್ಲಿ ಪರ-ವಿರೋಧದ ವಾಕ್ಸಾಮರ ತಾರಕ್ಕೇರಿದೆ.





Body:ಕೆಲವು ದಿನದ ಹಿಂದೆಯಷ್ಟೆ ವಿಶ್ರೀ ಅರ್ಜುನ, ಆರ್.ಧ್ರುವನಾರಾಯಣ ಕರ್ಣ ಹಾಗೂ ನರೇಂದ್ರ ಮೋದಿ ಕೃಷ್ಣನಂತೆ ಚಿತ್ರಿಸಿ ಚಾಮರಾಜನಗರ ಕುರುಕ್ಷೇತ್ರದ ಸಂದೇಶಗಳನ್ನು ಹರಿಬಿಟ್ಟಿದ್ದರು. ಬಳಿಕ, ವಿ.ಶ್ರೀನಿವಾಸಪ್ರಸಾದ್ ಗೆ 13 ಪ್ರಶ್ನೆಗಳು ಎಂಬ ಸಂದೇಶ ರವಾನಿಸಿದ್ದ ಕಾಂಗ್ರೆಸ್ ಪರ ನೆಟ್ಟಿಗರಿಗೆ ಬಿಜೆಪಿ ಕಾರ್ಯಕರ್ತರು ಮರು ಉತ್ತರ ನೀಡಿ ಎರಡೂ ಸಂದೇಶಗಳನ್ನೂ ವೈರಲ್ ಮಾಡಿದ್ದಾರೆ.


ನೆಟ್ಟಿಗರು ಕೇಳಿದ್ದ ಪ್ರಶ್ನೆಗಳು


1. 2008ರಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಖರ್ಗೆ ಅವರು ನಂಜನಗೂಡಿನಿಂದಲೇ ಸ್ಪರ್ಧಿಸುವಂತೆ ಧ್ರುವನಾರಾಯಣ ರವರಿಗೆ ತಾಕೀತು ಮಾಡಿದಾಗ, ನಂಜನಗೂಡಿನಲ್ಲಿ ಸ್ಪರ್ಧಿಸುವುದಾಗಿ ಪ್ರಸಾದ್ ನನ್ನ ಬಳಿ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಾನು ಕೊಳ್ಳೇಗಾಲದಲ್ಲೇ ಸ್ಪರ್ಧಿಸುವುದಾಗಿ ಹೇಳಿ ನಿಮಗೆ ನಂಜನಗೂಡಿನಲ್ಲಿ ಅವಕಾಶ ಮಾಡಿಕೊಟ್ಟಿದ್ದು ಸುಳ್ಳೇ....?


2. 2008ರಲ್ಲಿ ಆಗಷ್ಟೆ ಕೊಳ್ಳೇಗಾಲದಿಂದ ಗೆದ್ದಿದ್ದ  ಧ್ರುವನಾರಾಯಣ್ ರವರು 2009ರ ಲೋಕಸಭಾ  ಚುನಾವಣೆಯಲ್ಲಿ ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ತಪ್ಪಿಸುವ ಸಲುವಾಗಿ ಧ್ರುವನಾರಾಯಣ್ ರವರನ್ನು ಕಣಕ್ಕಿಳಿಯುವಂತೆ ಒತ್ತಡ ಹೇರಿದಾಗ ಸ್ಪರ್ದಿಸಲು ಒಲ್ಲೆ ಎಂದಾಗ  ಒತ್ತಾಯಪೂರ್ವಕವಾಗಿ ನಿಲ್ಲಿಸಿ ಕಾಗಲವಾಡಿ ಶಿವಣ್ಣ ಅವರಿಗೆ ಟಿಕೆಟ್ ತಪ್ಪಿಸಿ ಶಿವಣ್ಣ ಅವರ ಬೆನ್ನಿಗೆ ಚೂರಿ ಹಾಕಿದ್ದು ಮರೆತು ಬಿಟ್ಟರೇ...? 


3. 2013ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನೀವು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದಾಗ ನಿಮ್ಮ ಬೆನ್ನಿಗೆ ನಿಂತು ನಾನೇ ಅಭ್ಯರ್ಥಿ ಎನ್ನುವ ಮಟ್ಟಿಗೆ ಅಖಾಡಕ್ಕಿಳಿದು ಗೆಲ್ಲಿಸಿಕೊಂಡು ಬಂದ ಧ್ರುವನಾರಾಯಣ್ ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದು ಸುಳ್ಳೆ...?

ಗಮನಾರ್ಹವೆಂದರೆ, ಅಂದು ಜೆಡಿಎಸ್ ಅಲೆಯಲ್ಲಿ ಗೆಲುವಿನ ಸಮೀಪ ಬಂದಿದ್ದ ಸೋದರ ಸಂಬಂಧಿ ಕಳಲೆ ಕೇಶವಮೂರ್ತಿ ವಿರುದ್ಧ ನಿಮ್ಮನ್ನು ಗೆಲ್ಲಿಸಿದ ಧ್ರುವನಾರಾಯಣ್ ನಿಮ್ಮ ಗೌರವ ಕಾಪಾಡಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಮಂತ್ರಿ ಮಾಡಲು ನೆರವಾಗಲಿಲ್ಲವೇ...?


4. ಸಚಿವ ಸಂಪುಟದಿಂದ ಕೈಬಿಟ್ಟಾಗ ನಿಮ್ಮ ಪರ ಧ್ರುವನಾರಾಯಣ ದೆಹಲಿ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಲಾಬಿ ಮಾಡಲಿಲ್ಲವೇ...? ಆ ಸಂದರ್ಭ ನೀವು ಬೆಂಬಲಿಗರ ಸಭೆ ಕರೆದಾಗ ನಿಮ್ಮ ಜೊತೆಗೆ ಇದ್ದವರು ಇದೇ ಧ್ರುವನಾರಾಯಣ್ ಅಲ್ಲವೇ...? ನಿಮ್ಮನ್ನು ಬೆಂಬಲಿಸಿ ಒಬ್ಬ ಶಾಸಕನಾದರೂ ನಿಮ್ಮನ್ನು ಹಿಂಬಾಲಿಸಿದ್ರಾ...? ಆ ಸಂದರ್ಭ ಸಿದ್ದರಾಮಯ್ಯ ಕೆಂಗಣ್ಣಿಗೆ ಧ್ರುವನಾರಾಯಣ್ ಗುರಿಯಾಗಿದ್ದು ನಿಮಗೆ ಕಾಣಲಿಲ್ಲವೇ...?


5. ಹೋಗಲಿ ಇಷ್ಟಾಗಿಯೂ ಧ್ರುವನಾರಾಯಣ್ ಯಾವ ಸಂದರ್ಭದಲ್ಲಾದರೂ ನಿಮ್ಮ ಹಿರಿತನಕ್ಕೆ ಧಕ್ಕೆ ತರುವ ರೀತಿ ಮಾತನಾಡಿದ್ದಾರೆಯೇ...? ನೀವು ಇಷ್ಟು ಕೀಳುಮಟ್ಟಕ್ಕೆ ಇಳಿದು ಬಾಯಿ ಹರಿಬಿಡುವ ನೀವು ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿ ಎನ್ನುವ ನಿಮ್ಮ ಹಿರಿತನಕ್ಕೆ ಶೋಭೆ ತರುವುದೇ...? ಬೆನ್ನಿಗೆ ಚೂರಿ ಹಾಕಿಸಿಕೊಳ್ಳುವಷ್ಟು ನೀವು ಬಲಹೀನರೇ...?


6. 10 ವರ್ಷ ಸಂಸದರಾಗಿ ಆರ್.ಧ್ರುವನಾರಾಯಣ್ ರವರ ಯಾವುದಾದರೂ ಒಂದು ವೈಫಲ್ಯವನ್ನು ನಿಮ್ಮಿಂದ ಗುರುತಿಸಲು ಸಾಧ್ಯವಾಗಿದೆಯೇ...? ಸಂಸದರಾಗಿ ಮತದಾರರಿಗೆ ಅಗೌರಮ ತಂದಿದ್ದಾರೆಯೇ...? ಇಲ್ಲ ಎಂದ ಮೇಲೆ ಬದಲಾವಣೆಯೇ ಅಪ್ರಸ್ತುತ ಅಲ್ಲವೇ...? ನಿಮ್ಮ ಸ್ಪರ್ಧೆ ಅನವಶ್ಯಕವಲ್ಲವೆ...?


7. 45 ವರ್ಷ ಸುದೀರ್ಘ ಮೀಸಲಾತಿ ಕ್ಷೇತ್ರದಲ್ಲಿ ದಲಿತ ರಾಜಕಾರಣಿಯಾಗಿ ಅಧಿಕಾರ ಅನುಭವಿಸಿರುವ ನೀವು ಎರಡನೇ ತಲೆಮಾರಿನ ಒಬ್ಬ ದಲಿತ ನಾಯಕನನ್ನು ಹುಟ್ಟು ಹಾಕಿ ಬೆಳೆಸಿದ ನಿದರ್ಶನವಿದ್ದರೆ ಬಹಿರಂಗ ಪಡಿಸುವಿರಾ....??


8. ಎರಡನೇ ತಲೆಮಾರಿನ ದಲಿತ ಸಮುದಾಯದ ಉದಯೋನ್ಮುಖ ನಾಯಕರಾಗಿ ರಾಷ್ಟç ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿ ದೇಶದ ನಂ.4 ಸಂಸದರಾಗಿ ಹೊರಹೊಮ್ಮಿರುವ ಆರ್.ಧ್ರುವನಾರಾಯಣ ಅವರ ಸಾಧನೆ, ಬೆಳವಣಿಗೆಯನ್ನು ಒಬ್ಬ ಹಿರಿಯ ದಲಿತ ನಾಯಕನಾಗಿ ಪಕ್ಷಾತೀತವಾಗಿ ನೀವು ಬೆಂಬಲಿಸಿದ್ದರೆ ಇಂದು ದಲಿತ ಸಮುದಾಯದ ಪ್ರತಿ ಮನೆ ಮನದಲ್ಲಿ ನೆಲೆಯೂರುವ ಅವಕಾಶವಿತ್ತು. ಆದರೆ ನೀವು ಮಾಡಿದ್ದೆÃನು...? ಚುನಾವಣಾ ನಿವೃತ್ತಿ ಘೋಷಿಸಿದ ನಂತರವೂ ಸ್ಪರ್ಧೆಗಿಳಿದ್ದೀರಲ್ಲ ಇದೇನಾ ನಿಮ್ಮ ಬದ್ಧತೆ...? 

ಸ್ವಂತ ಶಕ್ತಿ ಮೇಲೆ  ಮಿನುಗುತಾರೆಯಾಗಿ ಬೆಳಗುತ್ತಿರುವ ಧ್ರುವನಾರಾಯಣ ರವರನ್ನು ರಾಜಕೀಯವಾಗಿ ತುಳಿಯುವ ಸಂಘ ಪರಿವಾರದ ಗಾಳಕ್ಕೆ ದಾಳವಾಗಿಬಿಟ್ಟರಲ್ಲ ಮಾನ್ಯ ಶ್ರೀನಿವಾಸಪ್ರಸಾದ್ ಇದೇನಾ ನೀವು ದಲಿತ ಸಮುದಾಯಕ್ಕೆ ಕೊಟ್ಟ ಬಹುದೊಡ್ಡ ಕಾಣಿಕೆ...?  


9. ಮಾಗಿದ ವಯಸ್ಸಲ್ಲಿ ಬೆಳೆಯುತ್ತಿರುವ ದಲಿತ ರಾಜಕಾರಣಿಗಳಿಗೆ ಆದರ್ಶ ಆಗುವುದು ಬಿಟ್ಟು ದ್ವೇಷದ ಜ್ವಾಲೆಗೆ ಕಿಡಿ ಹೊತ್ತಿಸುವ ನಿಮ್ಮ ಈ ನಡೆಯಿಂದ ಮತದಾರರು ಏನನ್ನು ನಿರೀಕ್ಷಿಸಲು ಸಾಧ್ಯವಿದೆ ತಿಳಿಸುವಿರಾ....? 


10. ಚುನಾವಣಾ ಪ್ರಚಾರದಲ್ಲಿ ಬೈಯುವುದನ್ನೇ ಚಾಳಿ ಮಾಡಿಕೊಂಡಿರುವ ನೀವು ಪ್ರಜಾಪ್ರಭುತ್ವ ಆಶಯ, ಮೌಲ್ಯವನ್ನು ಎತ್ತಿ ಹಿಡಿಯುತ್ತಿದ್ದಿÃನಿ ಅಂತ ಭಾವಿಸಿದ್ದಿÃರಾ...? 


11. ಮಾತೆತ್ತಿದರೆ ಧ್ರುವನಾರಾಯಣ ಸೋಲಿಸಲೆಂದೆ ಅಖಾಡಕ್ಕೆ ಧುಮುಕಿದ್ದೀನಿ ಅಂತೀರಲ್ಲ ಹಾಗಾದರೆ ನಿಮಗೆ ಕ್ಷೇತ್ರದ ಬಗ್ಗೆ ಕನಿಷ್ಠ ಕಾಳಜಿ, ದೂರದೃಷ್ಟಿ ಯೋಜನೆ, ಮತದಾರರ ನಿರೀಕ್ಷೆ ಈಡೇರಿಸುವ ಇರಾದೆಯಿಲ್ಲ  ಎಂದಾಯಿತು... ಅಂದಮೇಲೆ ಯಾವ ಪುರುಷಾರ್ಥಕ್ಕಾಗಿ ಜನ ನಿಮಗೆ ಓಟು ಹಾಕಬೇಕು ಉತ್ತರಿಸುವಿರಾ...?


 12. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿ ಮಾಡಬೇಕು ಅದಕ್ಕಾಗಿ ಬಿಜೆಪಿ ಬೆಂಬಲಿಸಿ ಅಂತೀರಲ್ಲ... ಎಲ್ಲಿ ಹೋಯಿತು ನಿಮ್ಮ 'ಬುದ್ಧನೆಡೆಗೆ ಮರಳಿ ಮನೆಗೆ...' ನಡೆ. ಕೋಮುಶಕ್ತಿಗೆ ಅಧಿಕಾರದ ಕೀಲಿ ಕೈ ಕೊಡಿ ಅಂತ ಮಂಕುಬೂದಿ ಎರಚಲು ಸಂಘ ಪರಿವಾರದ ಕೀಲಿ ಕೈಗೊಂಬೆ ಆಗಿದ್ದಿರಲ್ಲ, ಎಲ್ಲಿ ಅಡಗಿ ಹೋಯಿತು ನಿಮ್ಮ ಸಮಾಜವಾದ, ಸಮತಾವಾದ...??


13. 45 ವರ್ಷದ ಮೀಸಲಾತಿ ರಾಜಕಾರಣ ಮಾಡಿಕೊಂಡು ಬಂದು ದಲಿತ ನಾಯಕ ಎಂದು ಬಿಂಬಿಸಿಕೊಂಡ ನೀವು ನಂಜನಗೂಡು ಉಪಚುನಾವಣೆಯಲ್ಲಿ ಪ್ರತಿಕಾರಕ್ಕಾಗಿ ಅನಿವಾರ್ಯವಾಗಿ ಬಿಜೆಪಿಯಿಂದ ಸ್ಪರ್ಧೆಗೆ ಧುಮುಕ್ಕಿದ್ರಿ. ಅದನ್ನು ಮನ್ನಿಸಿ ನಮ್ಮ ಹೃದಯದಲ್ಲಿ ನಿಮಗೆ ಗೌರವ ಸ್ಥಾನ ಕೊಟ್ಟಿದ್ದೆÃವು. ಆದರೆ ನಿವೃತ್ತಿ ಘೋಷಿಸಿದ ನಂತರವೂ ಮತ್ತದೇ ಕೋಮುವಾದಿ ಬಿಜೆಪಿಯಿಂದ ಕಣಕ್ಕಿಳಿದ್ದೀರಲ್ಲ  ಯಾವ ಸಂದೇಶ ರವಾನಿಸಲು ಹೊರಟಿದ್ದೀರಿ ಮಾನ್ಯ ಪ್ರಸಾದ್ ಅವರೇ..? 

‘ಇಷ್ಟು ದಿನ ಅಧಿಕಾರಕ್ಕಾಗಿ ನಕಲಿ ದಲಿತ ಮುಖವಾಡ ಧರಿಸಿ ನಿವೃತ್ತಿ ಘೋಷಿಸಿದ್ದೆ, ಇದೀಗ ನನ್ನ ಅಸಲಿ ಮುಖವಾಡದಿಂದ ಚುನಾವಣೆಗೆ ಬಂದಿರುವೆ’ ಅನ್ನೊ ಸಂದೇಶ ಸಾರಲು ಹೊರಟಿರುವಿರಾ...? 

ವೈರಲ್ಲಾಗಿರುವ ಬಿಜೆಪಿಗರ ಉತ್ತರ:



1.2008 ರಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಮಾನ್ಯ ಖಗೆ೯ಯವರನ್ನು ಕನಾ೯ಟಕದ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸಿ ಚುನಾವಣಾ ರಾಜಕೀಯ ವಿಶ್ರಾಂತಿ ಪಡೆದಿದ್ದ ವಿ.ಶ್ರೀನಿವಾಸ ಪ್ರಸಾದ್ ರವರು ರಾಜ್ಯ ರಾಜಕಾರಣಕ್ಕೆ ಬಂದಿದ್ದು ತಪ್ಪೇ? 


2.ಕ್ಷೇತ್ರ ಪುನರ್ ವಿಂಗಡನೆಯಾದ ಮೇಲೆ ಕ್ಷೇತ್ರಕ್ಕಾಗಿ ಪರದಾಡುತ್ತಿದ್ದ ಅದೊಂದು ದಿನ ಈಗ ಪ್ರಸಾದ್ ಅವರ ಜೊತೆ ಇರುವ ನಿಮ್ಮ ಮಾಜಿ ಆಪ್ತರೊಬ್ಬರು ವೀರಪ್ಪ ಮೊಯ್ಲಿ ಅವರ ಮನೆಗೆ ಹೋದಾಗ ಧ್ರುವ ನಾರಾಯಣ್ ನೀವು ಯಾವ ಕ್ಷೇತ್ರದ ಆಕ್ಷಾಂಕ್ಷಿ ಎಂದು ಕೇಳಿದರು,ನೀವು ನಂಜನಗೂಡು ಎಂದಾಗ ಏ ಹುಷಾರು ಕಣಪ್ಪ..ಖಗೆ೯ಯವರನ್ನ ದಲಿತ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸಿದ್ದು ವಿಶ್ರಾಂತಿಯಲ್ಲಿ ಪ್ರಸಾದ್ ರವರು ಖಗೆ೯ಜೀ ಹಾಗೂ ಇತರ ಮುಖಂಡರ ಒತ್ತಾಯದ ಮೇರೆಗೆ ನಂಜನಗೂಡಿನಲ್ಲಿ ಸ್ಪಧಿ೯ಸುವ ಸಾಧ್ಯತೆ ಇದೆ ಇದರಿಂದ ಹಳೇ ಮೈಸೂರು ಭಾಗದಲ್ಲಿ ತುಂಬಾ ಅನುಕೂಲವಾಗಲಿದ್ದು ಪ್ರಸಾದ್ ಅವರ ಸ್ಪಧೆ೯ ಖಚಿತ ಈ ಕೂಡಲೇ ನಿಮ್ಮ ಹಿರಿಯ ನಾಯಕರಾದ ಪ್ರಸಾದ್ ಅವರನ್ನ ಸಂಪಕಿ೯ಸಿ ಅವರ ಮಾಗ೯ದಶ೯ನ ಪಡೆಯಿರಿ ಎಂದು ನಿಮಗೆ ವೀರಪ್ಪಮೊಯ್ಲಿ ಯವರು ಸೂಚಿಸಿರಲಿಲ್ಲವೇ?


2. ಶ್ರೀನಿವಾಸ ಪ್ರಸಾದ್ ರವರ ಜೊತೆಗೆ ಬಹುಕಾಲವಿದ್ದ 'ಕಾಗಲವಾಡಿ ಶಿವಣ್ಣ' ಅವರ ನಾಮಬಲದೊಂದಿಗೆ ಜೀವನ ಸಾಗಿಸುತ್ತಿದ್ದ ಇವರನ್ನ ಎಂ.ಪಿ.ಮಾಡಿದ್ದು ಪ್ರಸಾದ್ ರವರ ತಪ್ಪೇ? 2009 ರಲ್ಲಿ ಲೋಕಸಭೆ ಚುನಾವಣೆ ಬಂದಾಗ ಒಂದು ಬಟನ್ ಒತ್ತುವುದರ ಮೂಲಕ ಕೋಟಿ-ಕೋಟಿ ದುಡ್ಡು ಬಾಚಿ ಮೀಸಲು ಕ್ಷೇತ್ರಕ್ಕೆ ಕಳಂಕ ತಂದಂತಹ ಕಾಗಲಾವಾಡಿ ಶಿವಣ್ಣನನ್ನ ಬೇಡವೆಂದು ಹೇಳಿದ್ದು ತಪ್ಪೇ?ಇಷ್ಟೇ ಯಾಕೆ ಎರಡು ಜಿಲ್ಲೆಯ ಸಿದ್ರಾಮಯ್ಯರ ಹಾದಿಯಾಗಿ ಎಲ್ಲ ಶಾಸಕರು ಪತ್ರಕ್ಕೆ ಸಹಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಗೆ ಶಿಫಾರಸ್ಸು ಮಾಡಿರಲಿಲ್ಲವೇ? ಇದು ಹೇಗೆ ಬೆನ್ನಿಗೆ ಚೂರಿ ಆದೀತು?

2009ರ ಲೋಕಸಭಾ ಚುನಾವಣಾ ವೇಳೆಯಲ್ಲಿ ವಿಧಾನಸಭೆಯಲ್ಲಿ ಮೂರನೇ ಸಾಲಿನಲ್ಲಿ ಕುಳಿತಿದ್ದ ಧ್ರುವ ನಾರಾಯಣ್ ರವರು,ಪ್ರಸಾದ್ ಅವರ ಕಿವಿಯಲ್ಲಿ ಬಂದು ಹೇಳಿದ್ದೇನು?  ದಿ.ಬಿ.ರಾಚಯ್ಯ ರವರ ಕುಟುಂಬದ ಮೇಲೆ ಗೌರವವಿಲ್ಲದ ಧ್ರುವ ನಾರಾಯಣರು ಈ ಬಾರಿ ಶಿವಣ್ಣನಿಗೆ ಹೈಕಮಾಂಡ್ ಟಿಕೆಟ್ ನೀಡಿದರೆ  ಎ.ಆರ್.ಕೃಷ್ಣಮೂರ್ತಿಯನ್ನು ರಾಜಕೀಯವಾಗಿ ಮುಗಿಸಬೇಕೆಂದು ಪ್ರಸಾದ ರವರ  ಕಿವಿಯಲ್ಲಿ ಚುಚ್ಚಿವುದರ ಮೂಲಕ ಎ.ಆರ್. ಕೃಷ್ಣಮೂತಿ೯ಯವರ ಬೆನ್ನಿಗೆ ಚೂರಿ ಇರಿದದ್ದು ಯಾರು? 


3. 2013ರಲ್ಲಿ ಪ್ರಸಾದ್ ರವರಿಗೆ ಅರೋಗ್ಯ ಹದಗೆಟ್ಟಿದ್ದ ಸಂದಭ೯ದಲ್ಲಿ ನನಗೆ ಚುನಾವಣೆಗೆ ಸ್ಪಧಿ೯ಸುವಂತೆ ಬಲವಂತ ಮಾಡಬೇಡಿ ಸಾಕಾಗಿದೆ ಎಂದಿದ್ದರು,ಚುನಾವಣೆ ಘೋಷಣೆಯಾಗುವ 15 ದಿನ ಮುಂಚಿತವಾಗಿ ನಂಜನಗೂಡು- ಚಾ.ನಗರ ರಸ್ತೆಯಲ್ಲಿರುವ ಪ್ರಸಾದ್ ರವರು ಹಣ ಮಂಜೂರು ಮಾಡಿಸಿಕೊಟ್ಟಿದ್ದ 'ಮೇದಾರ  ಸಮುದಾಯ ಭವನದ ಗುದ್ದಲಿ ಪೂಜೆ ಸಮಾರಂಭದಲ್ಲಿ ನೀವು ಬಹಿರಂಗವಾಗಿ ಹೇಳಿದ್ದೇನು? ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳಿದ್ದು ಈ ಬಾರಿ ಪ್ರಸಾದ್ ರವರು ನಿರಾಸದಾಯಕವಾಗಿ ಜಯ ಗಳಿಸುವರು ಈ ಬಾರಿ ಸ್ಪಧೆ೯ಯಿಂದ ಹಿಂದೆ ಸರಿದರೆ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದ್ದು ಮುಂದೆ ಲೋಕಸಭೆ ಚುನಾವಣೆಯೂ ಇರುವುದರಿಂದ ಪ್ರಸಾದ್ ರವರು ನಿಲ್ಲಲೇಬೇಕು ಇಲ್ಲದಿದ್ದದ್ದರೆ ಅವರ ಅನುಪಸ್ಥಿತಿ ನಮ್ಮ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಿದ್ದು ನೆನಪಿಲ್ಲವೇ?


4.ಕಂದಾಯ ಮಂತ್ರಿ ಮಾಡಿದ್ದು ಸಿದ್ದರಾಮಯ್ಯನೂ ಅಲ್ಲ,ದೊಡ್ಡರಾಮಯ್ಯನೂ ಅಲ್ಲ ಆಸ್ಕರ್ ಫನಾ೯ಂಡಿಸ್.ಕಂದಾಯ ಮಂತ್ರಿ ಮಾಡಲು ನೀವು ಸಹಾಯ ಮಾಡಿದ್ದೇ ಆದರೆ 2009 ರಲ್ಲಿ ಲೋಕಸಭೆಗೆ ಟಿಕೆಟ್ ಪಡೆಯಲು ನಿಮ್ಮಿಂದ ಯಾಕೆ ಸಾಧ್ಯವಾಗಲಿಲ್ಲ..?? ಆಗ ನಿಮಗೆ ಸಹಾಯ ಮಾಡಿದ್ದು ಯಾರು? ಮೂರನೇ ನೇ ಪ್ರಶ್ನೆಯಲ್ಲಿ ತಾವು 'ದೀಪಕ್' ಅವರೇ ಕಂದಾಯ ಮಂತ್ರಿ ಮಾಡಲು ಸಹಾಯ ಮಾಡಲಿಲ್ಲವೆಂದು ಹೇಳಿರುವಿರಿ ಧ್ರುವ ನಾರಾಯಣ್ ಅಷ್ಟೊಂದು ಪ್ರಭಾವ ಶಾಲಿಯಾಗಿದ್ದರೆ ಸಿದ್ದರಾಮಯ್ಯನವರು ಸಚಿವ ಸಂಪುಟದಿಂದ ಕೈ ಬಿಡುವುದನ್ನ ತಪ್ಪಿಸಲಿಲ್ಲವೇಕೇ?? ಧ್ರುವ ನಾರಾಯಣ್ ರವರೇ ಕಾಂಗ್ರೆಸ್  ಹೈಕಮಾಂಡ್ ಗೆ 'ದಲಿತಪರ ಪ್ರಜ್ಞೆ' ಇದ್ದಿದ್ದರೆ ಸಿದ್ದರಾಮಯ್ಯನ ಕುತಂತ್ರಕ್ಕೆ ಹಣದ ವ್ಯಾಮೋಹಕ್ಕೆ ಒಳಗಾಗಿ 'ಚಿಂತಕ ರಾಜಕಾರಣಿ'ಎನಿಸಿಕೊಂಡಿದ್ದ ಪ್ರಸಾದ್ ಕೈ ಬಿಡುತ್ತಿರಲಿಲ್ಲ.ಅವರನ್ನು ಕೈ ಬಿಟ್ಟಿದ್ದಕ್ಕೆ ಈಗಲೂ ಸಹ ಹೈಕಮಾಂಡ್ ಆಗಲಿ ಬಹುದೊಡ್ಡ ನಾಯಕರಾದ ಸಿದ್ದರಾಮಯ್ಯ ನವರಾಗಲಿ ಇದುವರೆಗೂ ಸಹ ಉತ್ತರ ನೀಡಿಲ್ಲವೇಕೇ?? ಅಂದು ಸಿದ್ದರಾಮಯ್ಯರ ಕೆಂಗಣ್ಣಿಗೆ ಧ್ರುವ ನಾರಾಯಣ್ ರವರು ಗುರಿಯಾಗಿದ್ದರೆ ಡಾ.ಹೆಚ್.ಸಿ.ಮಹದೇವಪ್ಪನವರ ಮಗ  'ಸುನೀಲ್ ಬೋಸ್ ರ ಬೆನ್ನಿಗೆ ಚೂರಿಹಾಕಿ ಒಂದು ಸಮುದಾಯವನ್ನ ಎತ್ತಿಕಟ್ಟಿ(ಸಿದ್ದರಾಮಯ್ಯ) ಕಳಲೆ ಕೇಶವಮೂತಿ೯ಯವರಿಗೆ ಟಿಕೆಟ್ ದೊರಕುವಂತೆ ಮಾಡಿದ್ದು ಎದೆಗಾರಿಕೆಯ ಲಕ್ಷಣವೇ?? 


5.ಹೌದು ಧ್ರುವ ನಾರಾಯಣ್ ರವರು ಯಾವುದೇ ಸಂದಭ೯ದಲ್ಲೂ ಕೂಡ ನಿಮಗೆ ಧಕ್ಕೆ ತರುವ ನಿಟ್ಟಿನಲ್ಲಿ ಮಾತನಾಡಿದ್ದಾರೆಯೇ ಎಂಬ ನಿಮ್ಮ ಅಭಿಪ್ರಾಯ....ಓ ಹೌದ ಸಂವಿಧಾನ ಪರಮೋಚ್ಛ ಪಾಲಿ೯ಮೆಂಟಿನ ಸದಸ್ಯರಾಗಿ ಮನೆ-ಮನೆಗೆ ಕಾಯ೯- ಕಾಯ೯ಕತ೯ರಿಗೆ ಮುಖಂಡ-ಮುಖಂಡರುಗಳಿಗೆ  ಪ್ರಸಾದ್ ಅವರನ್ನು ಸೋಲಿಸಲು ಸ್ವತಃ ತಾವೇ ಹಣ ಹಂಚಿದ್ದು,ನಿಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಿ ಇದಕ್ಕೆ ನಿಮ್ಮ ಉಂಬುತನದ ಉತ್ತರ ನಿರೀಕ್ಷೆ ಮಾಡುವುದಿಲ್ಲ.


6.ಇಡೀ ದೇಶದಲ್ಲೇ ಪಪ್ರಥಮ ಬಾರಿಗೆ ಲೋಕಸಭಾ ಕ್ಷೇತ್ರದ ಪ್ರತಿಹಳ್ಳಿ ಹಳ್ಳಿಯನ್ನು ಸುತ್ತಿ ಪ್ರತಿ ಗ್ರಾಮದಲ್ಲೂ ಕೂಡ ಸವ೯ಜನಾಂಗದ ಮುಖಂಡರುಗಳನ್ನ ಹೆಸರಿಡಿದು ಕರೆಯುವಷ್ಟು ಹೆಗ್ಗಳಿಕೆ ಪ್ರಸಾದ್ ರದ್ದು.ಇವರ ನಾಮಬಲದಿಂದ ಗ್ರಾಮ ಪಂಚಾಯಿತಿ,ತಾ.ಪಂ.ಜಿ.ಪಂ.ಸದಸ್ಯರಾಗಿರುವವರು ಇಲ್ಲವೇನು? ಕನಾ೯ಟಕ ರಾಜ್ಯದಲ್ಲಿ ಇವರಿಗಿಂತ ಅತ್ಯಂತ ಪ್ರಾಮಾಣಿಕ ರಾಜಕಾರಣಿ ಇದ್ದರೆ ಉದಾಹರಣೆ ನೀಡಿ.ನಂಜನಗೂಡು ಉಪಚುನಾವಣೆಯಲ್ಲಿ ಮಾನ್ಯ ಸಂಸದರು ಹಿರಿಯ ಮುತ್ಸದ್ದಿ ರಾಜಕಾರಣಿಯನ್ನು ಆಡಳಿತ ಯಂತ್ರದ ದುರುಪಯೋಗ ಪಡಿಸಿಕೊಂಡು ಸೋಲಿಸಿದ್ದು ಅಗೌರವದ ಸಂಕೇತವಲ್ಲವೇನು?


7. ಪ್ರಸಾದ್ ಅವರ ರಾಜಕೀಯ ಜೀವನ ಪ್ರಾರಂಭವಾದದ್ದು ಕ್ರಾಂತಿಕಾರಿ ಅಂಬೇಡ್ಕರ್ ವಾದಿ ಬಿ.ಬಸವಲಿಂಗಪ್ಪನವರಿಗೆ ಅವಮಾನವಾದಾಗ ದಿ.ದೇವರಾಜ ಅರಸು ರವರ ವಿರುದ್ದ ಸಿಡಿದೆದ್ದು 'ಶೋಷಿತರ ಶಕ್ತಿ' ಏನೆಂಬುದನ್ನು ತೋರಿಸಿದ್ದು ತಪ್ಪೇ? ಪ್ರಸಾದ್ ರವರು ಕಾಂಗ್ರೆಸ್ ಯೂತ್ ಅಧ್ಯಕ್ಷರಾಗಿದ್ದಾಗ
ಮೀಸಲು ಕ್ಷೇತ್ರಗಳನ್ನು ಒಳಗೊಂಡಂತೆವಸಾಮಾನ್ಯ 48 ಜನ ಕಾಯ೯ಕತ೯ರಿಗೆ ಟಿಕೆಟ್ ನೀಡಿ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬಲಿಲ್ಲವೇ? 


8.ಪಾಪ....ಎರಡನೇ ತಲೆಮಾರಿನ ಡಾ.ಹೆಚ್.ಸಿ.ಮಹದೇವಪ್ಪ ಅವರನ್ನ ತುಳಿದ ಹೆಗ್ಗಳಿಕೆ ನಿಮಗಲ್ಲವೇ? ಅಲ್ಲದೇ ಹೆಚ್.ಸಿ.ಎಂ.ನಿಮಗಿಂತಲೂ ವಿದ್ಯಾವಂತರಲ್ಲವೇ? ಬುದ್ದಿವಂತರಲ್ಲವೇ?  ದಿ.ಬಿ.ರಾಚಯ್ಯನವರ ಶಿಷ್ಯ ಎಂಬ ಏಕೈಕ ಕಾರಣಕ್ಕೆ ತುಳಿದದ್ದು ಸರಿಯೇ?

ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ನಂಬರ್ 1 ಹಹಹ....ಯಾವುದರಲ್ಲಿ? ಹಾಜರಾತಿಯಲ್ಲಿ ಪ್ರಶ್ನೆ ಕೇಳುವುದರಲ್ಲಿ ಅಷ್ಟೇ ತಾನೆ,ರಾಷ್ಟ್ರೀಯ -ಅಂತರ ರಾಷ್ಟ್ರೀಯ ವಿಚಾರವಾಗಿ ಅಲ್ಲದೇ ದಲಿತರ ವಿಚಾರ ಬಂದಾಗ ಎದೆಗಾರಿಕೆಯಿಂದ ಚಚಿ೯ಸಿದ ಕೀತಿ೯ ನಿಮಗಿದೆಯೇ? ನಿಮ್ಮ ಖಗೆ೯ಜೀ ಅವರಿಗಿದೆಯೇ? ಇವತ್ತು ಗಿಲಿಟ್ ರಾಜಕಾರಣ ಮಾಡಿಕೊಂಡು ಕೇವಲ ಲೆಟರ್ ಹೆಡ್ ರಾಜಕಾರಣದಿಂದ ಮನೆ ಮಾತಾಗಿರುವ ನೀವು ಧೈಯ೯ದಿಂದ ಮಿನುಗುವ ನಕ್ಷತ್ರವಾಗಿದ್ದೀರಾ? ಚುನಾವಣಾ ನಿವೃತ್ತಿ ಘೋಷಿಸಿದ ನಂತರವು ಒತ್ತಾಯ ಪೂವ೯ಕವಾಗಿ ಅದರಲ್ಲೂ ಬಿಜೆಪಿಯಿಂದಲೇ ಎಲ್ಲಾ ಮಲೀನ ಮನಸ್ಸುಗಳನ್ನು ಎದೆಗಾರಿಕೆಯಿಂದ ಎದುರಿಸಿ ನ್ಯಾಯ ದೊರಕಿಸಿ ಕೊಡಬಲ್ಲಂತಹ ಶಕ್ತಿ ಪ್ರಸಾದ್ ಅವರಿಗಿಲ್ಲವೇ? 1999ರಲ್ಲಿ ಇದೇ ಬಿಜೆಪಿಯ ಸಂಘಪರಿವಾರದಿಂದ ಸಂತೆಮರಳ್ಳಿ ಕ್ಷೇತ್ರದ ಹುರಿಯಾಳಾಗಿ ಚುನಾವಣಾ ಕಣಕ್ಕೆ ಮೊದಲು ಧುಮುಕಿದ್ದು ಯಾರು? ಸ್ವಾಮಿ..


9.ಹೌದು ಮಾಗಿದ ವಯಸ್ಸಿನಲ್ಲಿ ಬೆಳೆಯುತ್ತಿರುವ ರಾಜಕಾರಣಿಗಳಿಗೆ ಆದಶ೯ವಾಗಿದ್ದ ಪ್ರಸಾದ್ ಅವರನ್ನು ಮಾಗಿದ ದಲಿತ ರಾಜಕಾರಣಿಗೆ ಅವರಷ್ಟೇ ವಯಸ್ಸಾಗಿರುವ ಸಿದ್ದರಾಮಯ್ಯನವರು ಕುಚೆಷ್ಟೇ ಮಾಡಿದ್ದು ಸರಿಯೇ? ಆಗಲಿ ಇದರ ಫಲಿತಾಂಶ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದೊರತಿದೆ (36,032 ಮತ) 


10.ಪ್ರಸಾದ್ ರವರು ಚುನಾವಣಾ ರಾಜಕೀಯದಲ್ಲಿ ಎಂದೂ ಕೂಡ ಸಂಸದೀಯ ಪದಗಳನ್ನ ಹೊರತುಪಡಿಸಿ  ದ್ವೇಷ,ಅಸೂಯೆ,ಜಾತಿ ರಾಜಕಾರಣ ಮಾಡಿದವರೇ ಅಲ್ಲ, ಅದರ ಕೀತಿ೯ ಈ ರಾಷ್ಟ್ರದಲ್ಲಿ ಮೊದಲು ನಿಮ್ಮ ಸಿದ್ದರಾಮಯ್ಯರಿಗೆ ಸಲ್ಲಬೇಕು.


11 ಡೊಂಗಿ ಸಮಾಜವಾದಿ,ದ್ರೋಹದ ನಾರಾಯಣ ಇವರುಗಳ ವಿರುದ್ದವಷ್ಟೇ ಅಲ್ಲ ಇದು ಎಲ್ಲಾ ಕುತಂತ್ರಗಳಿಗೆ ಉತ್ತರ ನೀಡುವ ಚುನಾವಣಾ ಸ್ಪಧೆ೯,ಪುರುಷಾಥ೯ ಎಂಬ ಪದ ಇಡೀ ರಾಜ್ಯದಲ್ಲಿ ಯಾರಿಗಾದರೂ ಮೀಸಲು ಇದೆ ಎಂದರೆ ಅದು ಕ್ರಾಂತಿಕಾರಿ 'ಬಿ.ಬಸವಲಿಂಗಪ್ಪ' ಇನ್ನೊಬ್ಬರನ್ನು ನೀವೇ ತಿಳಿದುಕೊಳ್ಳಿ...?? 


12.ಬುದ್ದನೆಡೆಗೆ ಮರಳಿ ಮನೆಗೆ ಕಾಯ೯ಕ್ರಮದ ರೂವಾರಿ ಪ್ರಸಾದ್ ರವರು ಯಾಕೆ? ಸ್ವಾಮಿ ಸಿದ್ದರಾಮಯ್ಯ ಸಮೇತ ಈ ನಾರಾಯಣಾಧಿಯಾಗಿ ಜಾತಿ ಜನಗಣತಿಯಲ್ಲಿ ಧಮ೯ ಯಾವುದನ್ನು ನಮೂದಿಸಿದ್ದಾರೆ ಸ್ವಲ್ಪ ತಿಳಿಸಿ ಹೇಳುವಿರಾ? ಹೋಗಲಿ ಬಿಡಿ ಇವರ ಮನೆಯ ಶುಭ ಸಮಾರಂಭಗಳು ಯಾವ ಸಂಪ್ರದಾಯದಲ್ಲಿ ನಡೆಯುತ್ತವೆ ಎಂಬುದು ಜನರಿಗೆ ತಿಳಿದಿಲ್ಲವೇ?? 


13. ಪ್ರಸಾದ್ ರವರ 45 ವಷ೯ಗಳ ರಾಜಕಾರಣದಲ್ಲಿ ಅವರ ಅತ್ಯಂತ ಸಂವೇದನಾ ಶೀಲ ರಾಜಕಾರಣ ಪ್ರಾರಂಭದ ದಿನ ಅದು ಬಾಬಾ ಸಾಹೇಬರ ಪ್ರೇರಣೆ,ನೀವು (ಕಾಂಗ್ರೆಸ್) ಅಂತಹ ಕ್ರಾಂತಿಕಾರಕ ಯೋಜನೆಯನ್ನು ರೂಪಿಸಿದ ಬಸವಲಿಂಗಪ್ಪನವರನ್ನು ದಿ.ದೇವರಾಜಅರಸು ರವರ ಸಚಿವ ಸಂಪುಟದಿಂದ ಕೈ ಬಿಟ್ಟು ಮೊದಲ ಬಾರಿಗೆ ದಲಿತ ಮುಖ್ಯಮಂತ್ರಿ ವಂಚಿತರನ್ನಾಗಿ ಮಾಡಿದ್ದೀರಲ್ಲಾ ನಿಮಗೆ ನ್ಯಾಯ ಅನ್ನಿಸಿಲ್ಲವೇ? ಬಿ.ಬಸವಲಿಂಗಪ್ಪನವರ ನಂತರ ದಲಿತ ಸಮುದಾಯದ ಬೌದ್ದ ರಾಜಕಾರಣಿ ಕೆ.ಎಚ್.ರಂಗನಾಥ್ ರವರಿಗೆ ಕೆಪಿಸಿಸಿ ಪಟ್ಟ ಬಿಟ್ಟು ಬೇರೇನೂ ನೀಡಿದ್ದೀರಿ? ದಲಿತರ ಪರ ಧ್ವನಿ ಎತ್ತಿದ ಈ ನಮ್ಮ ಶ್ರೀನಿವಾಸ ಪ್ರಸಾದ್ ಅವರಿಗೆ ಕೊಟ್ಟಿದ್ದು 'ಗಡಿಯಾರ'ದ ಗುರುತು 'ಕೈ' ಗುರುತಲ್ಲ..
ಹೋಗಲಿ ಬಿಡಿ ದೇಶದ ಪರಮೋಚ್ಛ ಸಂಸ್ಥೆೃಯಾದ 44 ಲೋಕಸಭಾ ಸದಸ್ಯರ ನಾಯಕ ಖಗೆ೯ಯವರು ಮೋದಿಯನ್ನು 5 ವಷ೯ದಲ್ಲಿ ಎದುರಿಸಿ ಮಾತನಾಡಿದ ಕೀತಿ೯ ಖಗೆ೯ಯವರಿಗೆ ಇದೆಯಲ್ಲವೇ?? ಆದರೆ ಕನಾ೯ಟಕವೆಂದರೆ ಸಿದ್ದರಾಮಯ್ಯರ ತೀಮಾ೯ನವೇ ಅಂತಿಮವಾಗಿರುತ್ತದೆ ಸೋಲಿಲ್ಲದ ಸರದಾರರಾದ ಹಿರಿಯ ದಲಿತ ನಾಯಕನಿಗೆ ಕಾಂಗ್ರೆಸ್ ಹೈಕಮಾಂಡ್ ನೀಡುವ ಗೌರವವೇನು? ಸಿದ್ದರಾಮಯ್ಯ ನೀಡುವ ಗೌರವವೇನು?




Conclusion:ಹೀಗೆ ಪ್ರಶ್ನೆ-ಉತ್ತರಗಳು ಎಫ್ ಬಿ, ವಾಟ್ಸಾಪ್ ಗ್ರೂಪ್ ಗಳಲ್ಲಿ ನೆಟ್ಟಿಗರು ಹರಿಬಿಟ್ಟಿದ್ದು ಪ್ರಶ್ನೋತ್ತರದ ಪರ-ವಿರೋಧದ ಚರ್ಚೆಯಲ್ಲಿ ಮುಳುಗಿದ್ದಾರೆ‌.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.