ETV Bharat / state

ಬಂಡೀಪುರ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಲಾರಿ ಕೆಟ್ಟು ವಾಹನ ಸಂಚಾರಕ್ಕೆ ಅಡ್ಡಿ - ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಲಾರಿ ಕೆಟ್ಟು ನಿಂತ ಕಾರಣ ಭಾರಿ ವಾಹನಗಳಿಗೆ ಸಂಚಾರ ವ್ಯತ್ಯಯವಾಯಿತು.

truck-jammed
ಸಂಚಾರಕ್ಕೆ ಅಡ್ಡಿ
author img

By

Published : Oct 26, 2020, 8:10 PM IST

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಲಾರಿ ಕೆಟ್ಟು ನಿಂತ ಕಾರಣ ಭಾರಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಯಿತು.

ಕೇರಳದ ಮಲಪ್ಪುರಂಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಮೇಲುಕಾಮನಹಳ್ಳಿ ಚೆಕ್​​ಪೋಸ್ಟ್​ ಬಳಿಯ ತಿರುವಿನಲ್ಲಿ ಆ್ಯಕ್ಸೆಲ್ ತುಂಡಾದ ಕಾರಣ ರಸ್ತೆ ಮಧ್ಯೆ ನಿಂತು ಹೋಗಿತ್ತು. ಇದರಿಂದಾಗಿ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಚೆಕ್​ಪೋಸ್ಟ್​​ನಲ್ಲಿ ವಾಹನಗಳನ್ನು ಬಿಟ್ಟರೆ ಕಾಡಿನ ಮಧ್ಯೆ ವಾಹನಗಳು ನಿಲ್ಲುತ್ತವೆ ಎಂದು ಸುಮಾರು ಎರಡು ಗಂಟೆಗಳ ಕಾಲ ಚೆಕ್​​ಪೋಸ್ಟ್​​ ಬಳಿ ಭಾರಿ ವಾಹನಗಳನ್ನು ತಡೆ ಹಿಡಿಯಲಾಗಿತ್ತು.

ಲಾರಿ ಕೆಟ್ಟು ವಾಹನ ಸಂಚಾರಕ್ಕೆ ಅಡ್ಡಿ

ಲಾರಿಗಳು ಸುಮಾರು ಒಂದು ಕಿಲೋಮೀಟರವರೆಗೆ ಸಾಲು ಗಟ್ಟಿ ನಿಂತಿದ್ದವು. ಬಳಿಕ ಮೆಕ್ಯಾನಿಕ್ ಬಂದು ವಾಹನ ಸರಿಪಡಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಲಾರಿ ಕೆಟ್ಟು ನಿಂತ ಕಾರಣ ಭಾರಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಯಿತು.

ಕೇರಳದ ಮಲಪ್ಪುರಂಗೆ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಮೇಲುಕಾಮನಹಳ್ಳಿ ಚೆಕ್​​ಪೋಸ್ಟ್​ ಬಳಿಯ ತಿರುವಿನಲ್ಲಿ ಆ್ಯಕ್ಸೆಲ್ ತುಂಡಾದ ಕಾರಣ ರಸ್ತೆ ಮಧ್ಯೆ ನಿಂತು ಹೋಗಿತ್ತು. ಇದರಿಂದಾಗಿ ಬೇರೆ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಚೆಕ್​ಪೋಸ್ಟ್​​ನಲ್ಲಿ ವಾಹನಗಳನ್ನು ಬಿಟ್ಟರೆ ಕಾಡಿನ ಮಧ್ಯೆ ವಾಹನಗಳು ನಿಲ್ಲುತ್ತವೆ ಎಂದು ಸುಮಾರು ಎರಡು ಗಂಟೆಗಳ ಕಾಲ ಚೆಕ್​​ಪೋಸ್ಟ್​​ ಬಳಿ ಭಾರಿ ವಾಹನಗಳನ್ನು ತಡೆ ಹಿಡಿಯಲಾಗಿತ್ತು.

ಲಾರಿ ಕೆಟ್ಟು ವಾಹನ ಸಂಚಾರಕ್ಕೆ ಅಡ್ಡಿ

ಲಾರಿಗಳು ಸುಮಾರು ಒಂದು ಕಿಲೋಮೀಟರವರೆಗೆ ಸಾಲು ಗಟ್ಟಿ ನಿಂತಿದ್ದವು. ಬಳಿಕ ಮೆಕ್ಯಾನಿಕ್ ಬಂದು ವಾಹನ ಸರಿಪಡಿಸಿದ ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.