ETV Bharat / state

ಚಾಮರಾಜನಗರ ಲೋಕಲ್ ಫೈಟ್​​ಗೆ ನಾಳೆ ಮತದಾನ: ಕಮಲ-ಕೈ ನಡುವೆ ಹಣಾಹಣಿ - congress-bjp big Fight

ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕೊಳ್ಳೇಗಾಲ ನಗರಸಭೆಯ 1 ವಾರ್ಡ್ ಹಾಗೂ 4 ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ.

Tomorrow chamarajnagar local election
author img

By

Published : Nov 11, 2019, 10:21 PM IST

ಚಾಮರಾಜನಗರ: ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕೊಳ್ಳೇಗಾಲ ನಗರಸಭೆಯ 1 ವಾರ್ಡ್ ಹಾಗೂ 4 ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಗ್ರಾಪಂ ಹೊರತುಪಡಿಸಿ ಎಲ್ಲೆಡೆಯೂ ಇವಿಎಂ ಬಳಸಲಾಗುತ್ತಿದ್ದು, ನವೆಂಬರ್​ 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಚಾಮರಾಜನಗರ ತಾಲೂಕಿನ ಹರದನಹಳ್ಳಿ ಜಿಪಂ ಕ್ಷೇತ್ರ, ಯಳಂದೂರು ತಾಪಂ ಯರಿಯೂರು ಕ್ಷೇತ್ರ ಹಾಗೂ ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್, ಬಾಣೂರು, ಚಿಕ್ಕಮಾಲಾಪುರ ಕ್ಷೇತ್ರ, ಬಂಡೀಪುರ, ಹಸಗೂಲಿ ಕ್ಷೇತ್ರಗಳಿಗೆ ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ.

ಕಮಲ-ಕೈ ನಡುವೆ ಹಣಾಹಣಿ

ಕೈ-ಕಮಲ ಪೈಟ್: ಹರದನಹಳ್ಳಿ ಜಿಪಂ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಮತ್ತು ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಹರದನಹಳ್ಳಿ ಜಿಪಂ ಕ್ಷೇತ್ರದಲ್ಲಿ ಉಪ್ಪಾರ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪುಟ್ಟರಂಗಶೆಟ್ಟಿ ಪರ ಸ್ವಜಾತಿ ಮತಗಳು ತಮಗೆ ಬರುವ ವಿಶ್ವಾಸವಿದೆ. ಒಂದು ವೇಳೆ ಕೈಕೊಟ್ಟರೇ ಬಿಜೆಪಿ ವಿಜಯಿಯಾಗಲಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಆರ್.ಧೃವನಾರಾಯಣ್ ಅವರಿಗಿಂತ ಶ್ರೀನಿವಾಸ ಪ್ರಸಾದ್ ಹೆಚ್ಚು ಮತ ಪಡೆದಿದ್ದರು. ಇದೀಗ ಆ ಸೇಡು ತೀರಿಸಿಕೊಳ್ಳಲು ಧೃವನಾರಾಯಣ ಅವರು ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಜೊತೆಗೂಡಿ ಭಾರೀ ಕಸರತ್ತು ನಡೆಸಿದ್ದಾರೆ. ವೀರಶೈವರ ಮತ ಸೆಳೆಯಲು ಗುಂಡ್ಲುಪೇಟೆ ಕ್ಷೇತ್ರದ ಯುವನಾಯಕ ಎಚ್.ಎಂ.ಗಣೇಶ್ ಪ್ರಸಾದ್ ಮತ್ತು ನಾಯಕರ ಮತ ಸೆಳೆಯಲು ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಕರೆತಂದು ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪರ ಸಂಸದ ವಿ.ಶೀನಿವಾಸ ಪ್ರಸಾದ್, ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಸಿ.ಗುರುಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಪ್ರಚಾರ ನಡೆಸಿದ್ದಾರೆ. ಹರದನಹಳ್ಳಿ ಜಿಪಂ ಕ್ಷೇತ್ರದಲ್ಲಿ ಒಟ್ಟು 38 ಮತಗಟ್ಟೆಗಳಿದ್ದು, 29,602 ಮತದಾರರಿದ್ದಾರೆ.

ಚಾಮರಾಜನಗರ: ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಕೊಳ್ಳೇಗಾಲ ನಗರಸಭೆಯ 1 ವಾರ್ಡ್ ಹಾಗೂ 4 ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ. ಗ್ರಾಪಂ ಹೊರತುಪಡಿಸಿ ಎಲ್ಲೆಡೆಯೂ ಇವಿಎಂ ಬಳಸಲಾಗುತ್ತಿದ್ದು, ನವೆಂಬರ್​ 14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಚಾಮರಾಜನಗರ ತಾಲೂಕಿನ ಹರದನಹಳ್ಳಿ ಜಿಪಂ ಕ್ಷೇತ್ರ, ಯಳಂದೂರು ತಾಪಂ ಯರಿಯೂರು ಕ್ಷೇತ್ರ ಹಾಗೂ ಕೊಳ್ಳೇಗಾಲ ನಗರಸಭೆಯ 19ನೇ ವಾರ್ಡ್, ಬಾಣೂರು, ಚಿಕ್ಕಮಾಲಾಪುರ ಕ್ಷೇತ್ರ, ಬಂಡೀಪುರ, ಹಸಗೂಲಿ ಕ್ಷೇತ್ರಗಳಿಗೆ ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ.

ಕಮಲ-ಕೈ ನಡುವೆ ಹಣಾಹಣಿ

ಕೈ-ಕಮಲ ಪೈಟ್: ಹರದನಹಳ್ಳಿ ಜಿಪಂ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಮತ್ತು ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಹರದನಹಳ್ಳಿ ಜಿಪಂ ಕ್ಷೇತ್ರದಲ್ಲಿ ಉಪ್ಪಾರ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪುಟ್ಟರಂಗಶೆಟ್ಟಿ ಪರ ಸ್ವಜಾತಿ ಮತಗಳು ತಮಗೆ ಬರುವ ವಿಶ್ವಾಸವಿದೆ. ಒಂದು ವೇಳೆ ಕೈಕೊಟ್ಟರೇ ಬಿಜೆಪಿ ವಿಜಯಿಯಾಗಲಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಆರ್.ಧೃವನಾರಾಯಣ್ ಅವರಿಗಿಂತ ಶ್ರೀನಿವಾಸ ಪ್ರಸಾದ್ ಹೆಚ್ಚು ಮತ ಪಡೆದಿದ್ದರು. ಇದೀಗ ಆ ಸೇಡು ತೀರಿಸಿಕೊಳ್ಳಲು ಧೃವನಾರಾಯಣ ಅವರು ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಜೊತೆಗೂಡಿ ಭಾರೀ ಕಸರತ್ತು ನಡೆಸಿದ್ದಾರೆ. ವೀರಶೈವರ ಮತ ಸೆಳೆಯಲು ಗುಂಡ್ಲುಪೇಟೆ ಕ್ಷೇತ್ರದ ಯುವನಾಯಕ ಎಚ್.ಎಂ.ಗಣೇಶ್ ಪ್ರಸಾದ್ ಮತ್ತು ನಾಯಕರ ಮತ ಸೆಳೆಯಲು ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಕರೆತಂದು ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪರ ಸಂಸದ ವಿ.ಶೀನಿವಾಸ ಪ್ರಸಾದ್, ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಸಿ.ಗುರುಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಪ್ರಚಾರ ನಡೆಸಿದ್ದಾರೆ. ಹರದನಹಳ್ಳಿ ಜಿಪಂ ಕ್ಷೇತ್ರದಲ್ಲಿ ಒಟ್ಟು 38 ಮತಗಟ್ಟೆಗಳಿದ್ದು, 29,602 ಮತದಾರರಿದ್ದಾರೆ.

Intro:ಚಾಮರಾಜನಗರ ಲೋಕಲ್ ಫೈಟ್ ಗೆ ನಾಳೆ ಮತದಾನ: ಕಮಲ- ಕೈ ನಡುವೆ ಹಣಾಹಣಿ

ಚಾಮರಾಜನಗರ: ವಿವಿಧ ಕಾರಣಗಳಿಂದ ತೆರವಾಗಿರುವ ಒಂದು ಜಿಪಂ, ತಾಪಂ, ಕೊಳ್ಳೇಗಾಲ ನಗರಸಭೆಯ ೧ ವಾರ್ಡ್ ಹಾಗೂ 4 ಗ್ರಾಪಂ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, ಈಗಾಗಲೇ ಮತಗಟ್ಟೆ ಅಧಿಕಾರಿಗಳು ಆಯಾ ಕ್ಷೇತ್ರಗಳಿಗೆ ತೆರಳಿದ್ದಾರೆ.

Body:ಚಾಮರಾಜನಗರ ತಾಲೂಕಿನ ಹರದನಹಳ್ಳಿ ಜಿಪಂ ಕ್ಷೇತ್ರ, ಯಳಂದೂರು ತಾಪಂನ ಯರಿಯೂರು ಕ್ಷೇತ್ರ ಹಾಗೂ ಕೊಳ್ಳೇಗಾಲ ನಗರಸಭೆಯ ೧೯ನೇ ವಾರ್ಡ್, ಕೊಳ್ಳೇಗಾಲ ತಾಲೂಕಿನ ತೆಳ್ಳನೂರು ಗ್ರಾಪಂನ ಬಾಣೂರು ಕ್ಷೇತ್ರ, ಹನೂರು ತಾಲೂಕಿನ ಚಿಕ್ಕಮಾಲಾಪುರ ಗ್ರಾಪಂನ ಚಿಕ್ಕಮಾಲಾಪುರ ಕ್ಷೇತ್ರ, ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಪಂನ ಬಂಡೀಪುರ ಕ್ಷೇತ್ರ, ರಾಘವಾಪುರ ಗ್ರಾಪಂನ ಹಸಗೂಲಿ ಕ್ಷೇತ್ರಗಳಿಗೆ ಮಂಗಳವಾರ ಬೆಳಗ್ಗೆ ೭ ರಿಂದ ಸಂಜೆ ೫ ರವರೆಗೆ ಚುನಾವಣೆ ನಡೆಯಲಿದ್ದು ಗ್ರಾಪಂ ಹೊರತುಪಡಿಸಿ ಎಲ್ಲೆಡೆಯೂ ಇವಿಎಂ ಬಳಸಲಾಗುತ್ತಿದ್ದು, ನ.೧೪ರಂದು ಆಯಾ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.

ಕೈ-ಕಮಲಕ್ಕೆ ಪೈಟ್: ಹರದನಹಳ್ಳಿ ಜಿಪಂ ಕ್ಷೇತ್ರ ಶಾಸಕ ಪುಟ್ಟರಂಗಶೆಟ್ಟಿ ಮತ್ತು ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರು ನಡುವೆ ಪ್ರತಿಷ್ಟೆ ಏರ್ಪಟ್ಟಿದ್ದು ಕದನ ಕುತೂಹಲ ಕೆರಳಿಸಿದೆ.

ಹರದನಹಳ್ಳಿ ಜಿಪಂ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಉಪ್ಪಾರ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು ಪುಟ್ಟರಂಗಶೆಟ್ಟಿ ಅವರಿಗೆ ಸ್ವ ಜಾತಿ ಮತಗಳು ಕೈಕೊಟ್ಟರೇ ಬಿಜೆಪಿ ವಿಜಯಿಯಾಗಲಿದೆ. ಉಪ್ಪಾರ ಸಮುದಾಯ ಸ್ವಜಾತಿ ನಾಯಕನ ಬೆನ್ನಿಗೆ ನಿಂತರೇ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ನಗೆ ಬೀರಲಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ ಅವರಿಗಿಂತ ಶ್ರೀನಿವಾಸ ಪ್ರಸಾದ್ ಹೆಚ್ಚು ಮತಗಳಿಸಿದ್ದರು.
ಇದೀಗ ಆ ಸೇಡನ್ನು ತೀರಿಸಿಕೊಳ್ಳಬೇಕು ಎಂದು ಧ್ರುವನಾರಾಯಣ ಅವರು ಶಾಸಕ ಪುಟ್ಟರಂಗಶೆಟ್ಟಿ , ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಅವರ ಜೊತೆಗೂಡಿ ಭಾರೀ ಕಸರತ್ತು ನಡೆಸುವುದಲ್ಲದೆ, ವೀರಶೈವರ ಮತ ಸೆಳೆಯಲು ಗುಂಡ್ಲುಪೇಟೆ ಕ್ಷೇತ್ರದ ಯುವ ನಾಯಕ ಎಚ್.ಎಂ. ಗಣೇಶ್ ಪ್ರಸಾದ್ ಮತ್ತು ನಾಯಕರ ಮತ ಸೆಳೆಯಲು ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಕರೆತಂದು
ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪರ ಸಂಸದ ವಿ. ಶೀನಿವಾಸಪ್ರಸಾದ್, ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ,
ಮಾಜಿ ಶಾಸಕ ಸಿ. ಗುರುಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಪ್ರಚಾರ ನಡೆಸಿದ್ದಾರೆ.

Conclusion:ಹರದನಹಳ್ಳಿ ಜಿಪಂ ಕ್ಷೇತ್ರದಲ್ಲಿ ಒಟ್ಟು ೩೮ ಮತಗಟ್ಟೆಗಳಿದ್ದು
೨೯೬೦೨ ಮತದಾರರಿದ್ದು ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.