ETV Bharat / state

ಮನೆ ಕಟ್ಟಿಸಲು ಹಣ ಡ್ರಾ ಮಾಡಿದ ಶಿಕ್ಷಕನಿಗೆ ಪೆಪ್ಪರ್ ಸ್ಪ್ರೇ ಮಾಡಿ 2 ಲಕ್ಷ ದೋಚಿದ ಕಳ್ಳ!

author img

By

Published : Oct 23, 2021, 2:36 PM IST

ಮನೆ ಕಟ್ಟಿಸಲು ಹಣ ಡ್ರಾ ಮಾಡಿದ ಶಿಕ್ಷಕನಿಗೆ ಪೆಪ್ಪರ್ ಸ್ಪ್ರೇ ಮಾಡಿ ಹಾಡಹಗಲೇ 2 ಲಕ್ಷ ದೋಚಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

Thieves 2 lakh robbery, Thieves 2 lakh robbery from teacher, Thieves 2 lakh robbery from teacher in Chamarajanagar, Chamarajangar crime news, 2 ಲಕ್ಷ ದರೋಡೆ ಮಾಡಿದ ಕಳ್ಳರು, ಶಿಕ್ಷಕನಿಂದ 2 ಲಕ್ಷ ದರೋಡೆ ಮಾಡಿದ ಕಳ್ಳರು, ಚಾಮರಾಜನಗರದಲ್ಲಿ ಶಿಕ್ಷಕನಿಂದ 2 ಲಕ್ಷ ದರೋಡೆ ಮಾಡಿದ ಕಳ್ಳರು, ಚಾಮರಾಜನಗರ ಅಪರಾಧ ಸುದ್ದಿ,
ಹಾಡಹಗಲೇ 2 ಲಕ್ಷ ಪಂಗನಾಮ

ಚಾಮರಾಜನಗರ: ಶಿಕ್ಷಕರೊಬ್ಬರಿಗೆ ಪೆಪ್ಪರ್ ಸ್ಪ್ರೇ ಹೊಡೆದು ಹಾಡಹಗಲೇ 2 ಲಕ್ಷ ರೂ. ದರೋಡೆ ಮಾಡಿರುವ ಘಟನೆ ನಗರದ ಭುವನೇಶ್ವರಿ ವೃತ್ತದ ಸಮೀಪ ನಡೆದಿದೆ.

ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಗರದ ಹೌಸಿಂಗ್ ಬೋರ್ಡ್ ನಿವಾಸಿ ಶಿವಕುಮಾರ್​ ಮನೆ ಕಟ್ಟಿಸುವ ಸಲುವಾಗಿ ಇಟ್ಟಿದ್ದ ಒಂದು ಲಕ್ಷ ರೂ. ಹಣ ಮತ್ತು ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷ ರೂ. ಹೌಸಿಂಗ್ ಲೋನ್ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದರು. ತಾವು ತಂದಿದ್ದ ಬ್ಯಾಗ್​ನಲ್ಲಿ 2 ಲಕ್ಷ ರೂ. ಹಾಕಿಕೊಂಡು ಬಸ್​ಗಾಗಿ ಕಾಯುತ್ತಿದ್ದರು.

ಇದನ್ನು ಗಮನಿಸಿದ ಕಳ್ಳನೊಬ್ಬ ಬಸ್​ಗಾಗಿ ಕಾಯುತ್ತಿದ್ದ ಶಿಕ್ಷಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾನೆ. ಕೂಡಲೇ ಶಿವಕುಮಾರ್​ ಕಣ್ಣಿಗೆ ಉರಿ ಕಾಣಿಸಿಕೊಂಡಿದ್ದರಿಂದ ಬ್ಯಾಗ್​ನ್ನು ಪಕ್ಕಕ್ಕಿಟ್ಟು ವಾಟರ್ ಬಾಟಲ್ ಮುಖವನ್ನು ತೊಳೆದುಕೊಳ್ಳುತ್ತಿದ್ದರು. ಈ ವೇಳೆ, ಕಳ್ಳ ಹಣವಿದ್ದ ಬ್ಯಾಗ್​ವನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ.

ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಭುವನೇಶ್ವರಿ ವೃತ್ತದ ಆಸುಪಾಸಿನ ಮಳಿಗೆಗಳಲ್ಲಿರುವ ಸಿಸಿಟಿವಿಗಳನ್ನು ಪೊಲೀಸರು ಈಗ ಜಾಲಾಡುತ್ತಿದ್ದಾರೆ‌.

ಚಾಮರಾಜನಗರ: ಶಿಕ್ಷಕರೊಬ್ಬರಿಗೆ ಪೆಪ್ಪರ್ ಸ್ಪ್ರೇ ಹೊಡೆದು ಹಾಡಹಗಲೇ 2 ಲಕ್ಷ ರೂ. ದರೋಡೆ ಮಾಡಿರುವ ಘಟನೆ ನಗರದ ಭುವನೇಶ್ವರಿ ವೃತ್ತದ ಸಮೀಪ ನಡೆದಿದೆ.

ಚಾಮರಾಜನಗರ ತಾಲೂಕಿನ ಕಾಳನಹುಂಡಿಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ನಗರದ ಹೌಸಿಂಗ್ ಬೋರ್ಡ್ ನಿವಾಸಿ ಶಿವಕುಮಾರ್​ ಮನೆ ಕಟ್ಟಿಸುವ ಸಲುವಾಗಿ ಇಟ್ಟಿದ್ದ ಒಂದು ಲಕ್ಷ ರೂ. ಹಣ ಮತ್ತು ಕೆನರಾ ಬ್ಯಾಂಕಿನಲ್ಲಿ ಒಂದು ಲಕ್ಷ ರೂ. ಹೌಸಿಂಗ್ ಲೋನ್ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದರು. ತಾವು ತಂದಿದ್ದ ಬ್ಯಾಗ್​ನಲ್ಲಿ 2 ಲಕ್ಷ ರೂ. ಹಾಕಿಕೊಂಡು ಬಸ್​ಗಾಗಿ ಕಾಯುತ್ತಿದ್ದರು.

ಇದನ್ನು ಗಮನಿಸಿದ ಕಳ್ಳನೊಬ್ಬ ಬಸ್​ಗಾಗಿ ಕಾಯುತ್ತಿದ್ದ ಶಿಕ್ಷಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾನೆ. ಕೂಡಲೇ ಶಿವಕುಮಾರ್​ ಕಣ್ಣಿಗೆ ಉರಿ ಕಾಣಿಸಿಕೊಂಡಿದ್ದರಿಂದ ಬ್ಯಾಗ್​ನ್ನು ಪಕ್ಕಕ್ಕಿಟ್ಟು ವಾಟರ್ ಬಾಟಲ್ ಮುಖವನ್ನು ತೊಳೆದುಕೊಳ್ಳುತ್ತಿದ್ದರು. ಈ ವೇಳೆ, ಕಳ್ಳ ಹಣವಿದ್ದ ಬ್ಯಾಗ್​ವನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ.

ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದ್ದು, ಭುವನೇಶ್ವರಿ ವೃತ್ತದ ಆಸುಪಾಸಿನ ಮಳಿಗೆಗಳಲ್ಲಿರುವ ಸಿಸಿಟಿವಿಗಳನ್ನು ಪೊಲೀಸರು ಈಗ ಜಾಲಾಡುತ್ತಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.