ಚಾಮರಾಜನಗರ: ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾ.ಜಿ.ಬಸವರಾಜು ಅವರಿಗೆ ಚಾಮರಾಜನಗರದ ಹರಳುಕೋಟೆ ಜನಾರ್ದನ ದೇವಾಲಯದಲ್ಲಿ ಜನಾರ್ದನ ಪ್ರತಿಷ್ಠಾನದ ವತಿಯಿಂದ ನ್ಯಾಯಾಂಗ ಮೇರು ಬಿರುದು ಕೊಟ್ಟು ಸನ್ಮಾನಿಸಲಾಯಿತು. ನ್ಯಾ.ಜಿ.ಬಸವರಾಜು ಅವರು ಈ ಹಿಂದೆ ಚಾಮರಾಜನಗರ ಪ್ರದಾನ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು.
ಅರ್ಚಕ ಅನಂತ ಪ್ರಸಾದ್, ಸಾಹಿತಿ ಲಕ್ಷ್ಮಿ ನರಸಿಂಹ, ವಕೀಲರ ಸಂಘದ ಅಧ್ಯಕ್ಷ ಇಂದೂಶೇಖರ್ ಇನ್ನಿತರರು ಈ ವೇಳೆ ಹಾಜರಿದ್ದರು. ಇದಾದ ಬಳಿಕ ನ್ಯಾಯಾಧೀಶರು ಚಾಮರಾಜನಗರದ ವಿವಿಧ ದೇಗುಲಗಳಿಗೆ ಕುಟುಂಬಸ್ಥರೊಂದಿಗೆ ತೆರಳಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ರಾಜೇಶ್ ಅವರಿಗೆ 'ಕಲಾತಪಸ್ವಿ' ಬಿರುದು ಬಂದಿದ್ದು ಹೇಗೆ?