ETV Bharat / state

ಬಂದ್​​ ಕಾರ್ಮಿಕರ ಬೇಡಿಕೆಗಿಂತ ರಾಜಕೀಯವಾಗಿ ಬಳಕೆಯಾದಂತಿದೆ: ಸಚಿವ ಸುರೇಶ್​ ಕುಮಾರ್​​​

ಭಾರತ್​ ಬಂದ್ ಕಾರ್ಮಿಕರ ಬೇಡಿಕೆಗಿಂತ ರಾಜಕೀಯ ಬೇಡಿಕೆಗಾಗಿ ಆದಂತಿದೆ ಎಂದು ಶಿಕ್ಷಣ ಹಾಗೂ ಕಾರ್ಮಿಕ ಸಚಿವ ಸುರೇಶ್ ಕುಮಾರ್ ಹೇಳಿದರು.

author img

By

Published : Jan 8, 2020, 12:27 PM IST

Suresh Kumar Talk About To Organizations
ಸಚಿವ ಸುರೇಶ್ ಕುಮಾರ್

ಚಾಮರಾಜನಗರ: ಭಾರತ್​ ಬಂದ್ ಕಾರ್ಮಿಕರ ಬೇಡಿಕೆಗಿಂತ ರಾಜಕೀಯ ಬೇಡಿಕೆಗಾಗಿ ಆದಂತಿದೆ ಎಂದು ಶಿಕ್ಷಣ ಹಾಗೂ ಕಾರ್ಮಿಕ ಸಚಿವ ಸುರೇಶ್ ಕುಮಾರ್ ಹೇಳಿದರು.

ನಗರದ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾಯಯುತ ಬೇಡಿಕೆಗಳನ್ನು ಚರ್ಚಿಸಿದರೆ ಅವುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರದ ಸಿದ್ಧವಿದೆ. ಆದರೆ ದಿಢೀರನೇ ಇವರ ಹೋರಾಟ ರಾಜಕೀಯವಾಗಿ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.

ಸಚಿವ ಸುರೇಶ್ ಕುಮಾರ್

ಬಂದ್​​​ಗೆ ಕರೆ ನೀಡುವವರು ಜನ ವಿರೋಧಿಯಾಗಿರದಂತೆ ಯೋಚಿಸಬೇಕು. ಒಂದು ವೇಳೆ ಬಂದ್ ಯಶಸ್ವಿಯಾದರೆ ಅಂದೇ ದುಡಿದು ಅಂದೇ ತಿನ್ನುವವರ ಕಥೆ ಏನಾಗಬೇಕು ಎಂದು ಪ್ರಶ್ನಿಸಿದರು.

ಸಿ.ಟಿ.ರವಿ ಕನ್ನಡ ಸಂಘಟನೆಗಳ ಬಗ್ಗೆ ಮಾತನಾಡಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ‌. ನಮಗೆ ಕನ್ನಡ, ಕನ್ನಡ ಸಂಘಟನೆಗಳ ಬಗ್ಗೆ ಅಭಿಮಾನವಿದೆ ಎಂದರು‌. ಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆಗೆ ಮುಂದಿನ ವಾರ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುವುದಾಗಿ ಇದೇ ವೇಳೆ ತಿಳಿಸಿದರು.

ಚಾಮರಾಜನಗರ: ಭಾರತ್​ ಬಂದ್ ಕಾರ್ಮಿಕರ ಬೇಡಿಕೆಗಿಂತ ರಾಜಕೀಯ ಬೇಡಿಕೆಗಾಗಿ ಆದಂತಿದೆ ಎಂದು ಶಿಕ್ಷಣ ಹಾಗೂ ಕಾರ್ಮಿಕ ಸಚಿವ ಸುರೇಶ್ ಕುಮಾರ್ ಹೇಳಿದರು.

ನಗರದ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾಯಯುತ ಬೇಡಿಕೆಗಳನ್ನು ಚರ್ಚಿಸಿದರೆ ಅವುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರದ ಸಿದ್ಧವಿದೆ. ಆದರೆ ದಿಢೀರನೇ ಇವರ ಹೋರಾಟ ರಾಜಕೀಯವಾಗಿ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.

ಸಚಿವ ಸುರೇಶ್ ಕುಮಾರ್

ಬಂದ್​​​ಗೆ ಕರೆ ನೀಡುವವರು ಜನ ವಿರೋಧಿಯಾಗಿರದಂತೆ ಯೋಚಿಸಬೇಕು. ಒಂದು ವೇಳೆ ಬಂದ್ ಯಶಸ್ವಿಯಾದರೆ ಅಂದೇ ದುಡಿದು ಅಂದೇ ತಿನ್ನುವವರ ಕಥೆ ಏನಾಗಬೇಕು ಎಂದು ಪ್ರಶ್ನಿಸಿದರು.

ಸಿ.ಟಿ.ರವಿ ಕನ್ನಡ ಸಂಘಟನೆಗಳ ಬಗ್ಗೆ ಮಾತನಾಡಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ‌. ನಮಗೆ ಕನ್ನಡ, ಕನ್ನಡ ಸಂಘಟನೆಗಳ ಬಗ್ಗೆ ಅಭಿಮಾನವಿದೆ ಎಂದರು‌. ಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆಗೆ ಮುಂದಿನ ವಾರ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುವುದಾಗಿ ಇದೇ ವೇಳೆ ತಿಳಿಸಿದರು.

Intro:ಇಂದಿನ ಬಂದ್ ಕಾರ್ಮಿಕ ಬೇಡಿಕೆಗಿಂತ ರಾಜಕೀಯವಾಗಿ ಬಳಕೆ: ಕಾರ್ಮಿಕ ಸಚಿವ ಸುರೇಶ್ ಕುಮಾರ್


ಚಾಮರಾಜನಗರ: ಇಂದು ದಿಡೀರನೇ ಕೆಲವು ಸಂಘಟನೆಗಳ ಕರೆ ನೀಡಿರುವ ಬಂದ್ ಕಾರ್ಮಿಕ ಬೇಡಿಕೆಗಿಂತ ರಾಜಕೀಯ ಬೇಡಿಕೆಯಾಗಿದೆ ಎಂದು ಶಿಕ್ಷಣ ಹಾಗೂ ಕಾರ್ಮಿಕ ಸಚಿವ ಸುರೇಶ್ ಕುಮಾರ್ ಹೇಳಿದರು.

Body:ನಗರದ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನ್ಯಾಯಯುತ ಬೇಡಿಕೆಗಳನ್ನು ಚರ್ಚಿಸಲು, ಪರಿಹರಿಸಲು ಕೇಂದ್ರ ಸರ್ಕಾರದ ಸಿದ್ಧವಿದೆ. ಆದರೆ, ದೀಡೀರನೇ ಇವರ ಹೋರಾಟ ರಾಜಕೀಯವಾಗಿ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.


ಬಂದ್ ಎನ್ನುವುದು ಜನವಿರೋಧಿಯಾಗಿದೆ, ಬಂದ್ ಗೆ ಕರೆ ನೀಡುವವರು ಯೋಚಿಸಬೇಕು. ಒಂದು ವೇಳೆ ಬಂದ್ ಯಶಸ್ವಿಯಾದರೇ ಅಂದೇ ದುಡಿದು ಅಂದೇ ಬದುಕುವವರ ಕಥೆ ಏನು ಎಂದು ಪ್ರಶ್ನಿಸಿದರು.

ಸಿ.ಟಿ.ರವಿ ಕನ್ನಡ ಸಂಘಟನೆಗಳ ಬಗ್ಗೆ ಮಾತನಾಡಿರುವುದನ್ನು ತಪ್ಪಾಗಿ ಅರ್ಥೈಸಿಸಲಾಗಿದೆ‌. ನಮಗೆ ಕನ್ನಡ, ಕನ್ನಡ ಸಂಘಟನೆಗಳ ಬಗ್ಗೆ ಅಭಿಮಾನವಿದೆ ಎಂದರು‌.

Conclusion:ಇನ್ನು, ಮಹದೇಶ್ವರ ಬೆಟ್ಟದ ತಪ್ಪಲಿನ ದೊಡ್ಡಾನೆಗೆ ಮುಂದಿನ ವಾರ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುವುದಾಗಿ ಮಾಹಿತಿ ನೀಡಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.