ETV Bharat / state

ಯಳಂದೂರಿನ ಐತಿಹಾಸಿಕ ಕಾರಾಪುರ ಮಠಕ್ಕೆ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಉತ್ತರಾಧಿಕಾರಿ! - ಐತಿಹಾಸಿಕ ಕಾರಾಪುರ ಮಠ

ಯಳಂದೂರು ಕಾರಾಪುರ ವಿರಕ್ತಮಠಕ್ಕೆ ಉತ್ತರಾಧಿಕಾರಿಯಾಗಿ ಚಾಮರಾಜನಗರ ‌ಮರಿಯಾಲ ಮಠದ 10ನೇ ತರಗತಿ ವಿದ್ಯಾರ್ಥಿ ಸಾಗರ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

ಕಾರಾಪುರ ಮಠಕ್ಕೆ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಉತ್ತರಾಧಿಕಾರಿ
ಕಾರಾಪುರ ಮಠಕ್ಕೆ ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಉತ್ತರಾಧಿಕಾರಿ
author img

By

Published : May 7, 2021, 10:58 AM IST

ಚಾಮರಾಜನಗರ: ಸಾವಿರಾರು ವರ್ಷಗಳ ಇತಿಹಾಸ ಇರುವ ಕಾರಾಪುರ ವಿರಕ್ತಮಠಕ್ಕೆ ಉತ್ತರಾಧಿಕಾರಿಯಾಗಿ ಚಾಮರಾಜನಗರ ‌ಮರಿಯಾಲ ಮಠದ 10ನೇ ತರಗತಿ ವಿದ್ಯಾರ್ಥಿಯನ್ನು ನೇಮಕ ಮಾಡಲಾಗಿದೆ.

ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ದೊರೆಸ್ವಾಮಿ ಹಾಗೂ ಶೀಲಾ ದಂಪತಿ ಪುತ್ರ ಸಾಗರ್ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಈ ಸಂಬಂಧ ಗುರುವಾರ ಪಟ್ಟಣದ ಕಾರಾಪುರ ವಿರಕ್ತ ಮಠದಲ್ಲಿ ಮಠಾಧೀಶರಾದ ಬಸವಲಿಂಗ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸನ್ಯಾಸ ದೀಕ್ಷೆ ಹಾಗೂ ಪಟ್ಟಾಧಿಕಾರ ಕಾರ್ಯಕ್ರಮವನ್ನು ಸರಳವಾಗಿ ನೆರವೇರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕ್ರಿ.ಶ. 1010ರ ಐತಿಹ್ಯ ಈ ಮಠಕ್ಕಿದೆ. ಸುಖಿ ಬಸವರಾಜೇಂದ್ರಸ್ವಾಮಿ ಒಡೆಯರ್ ಇಲ್ಲಿನ ಪ್ರಥಮ ಮಠಾಧ್ಯಕ್ಷರಾಗಿದ್ದು, ಮಲೆ ಮಹದೇಶ್ವರರು ಇಲ್ಲಿಗೆ ಭೇಟಿ ನೀಡಿ ಧ್ಯಾನ ಮಾಡಿದ್ದರು ಎಂಬ ಇತಿಹಾಸ ಈ ಮಠಕ್ಕಿದೆ. ಮಠಾಧ್ಯಕ್ಷರ ಆಯ್ಕೆಯಲ್ಲಿ ಗುರು ಪರಂಪರೆಯನ್ನು ಹೊಂದಿರುವ ಇದಕ್ಕೆ 16ನೇ ಮಠಾಧ್ಯಕ್ಷರಾಗಿ ಸಾಗರ್ ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ ಎಂದು ಬಸವಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.‌

ಇದನ್ನೂ ಓದಿ : ಚಾಮರಾಜನಗರ ದುರಂತ: ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಸಂಸ್ಥೆ

ಚಾಮರಾಜನಗರ: ಸಾವಿರಾರು ವರ್ಷಗಳ ಇತಿಹಾಸ ಇರುವ ಕಾರಾಪುರ ವಿರಕ್ತಮಠಕ್ಕೆ ಉತ್ತರಾಧಿಕಾರಿಯಾಗಿ ಚಾಮರಾಜನಗರ ‌ಮರಿಯಾಲ ಮಠದ 10ನೇ ತರಗತಿ ವಿದ್ಯಾರ್ಥಿಯನ್ನು ನೇಮಕ ಮಾಡಲಾಗಿದೆ.

ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ದೊರೆಸ್ವಾಮಿ ಹಾಗೂ ಶೀಲಾ ದಂಪತಿ ಪುತ್ರ ಸಾಗರ್ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಈ ಸಂಬಂಧ ಗುರುವಾರ ಪಟ್ಟಣದ ಕಾರಾಪುರ ವಿರಕ್ತ ಮಠದಲ್ಲಿ ಮಠಾಧೀಶರಾದ ಬಸವಲಿಂಗ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸನ್ಯಾಸ ದೀಕ್ಷೆ ಹಾಗೂ ಪಟ್ಟಾಧಿಕಾರ ಕಾರ್ಯಕ್ರಮವನ್ನು ಸರಳವಾಗಿ ನೆರವೇರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕ್ರಿ.ಶ. 1010ರ ಐತಿಹ್ಯ ಈ ಮಠಕ್ಕಿದೆ. ಸುಖಿ ಬಸವರಾಜೇಂದ್ರಸ್ವಾಮಿ ಒಡೆಯರ್ ಇಲ್ಲಿನ ಪ್ರಥಮ ಮಠಾಧ್ಯಕ್ಷರಾಗಿದ್ದು, ಮಲೆ ಮಹದೇಶ್ವರರು ಇಲ್ಲಿಗೆ ಭೇಟಿ ನೀಡಿ ಧ್ಯಾನ ಮಾಡಿದ್ದರು ಎಂಬ ಇತಿಹಾಸ ಈ ಮಠಕ್ಕಿದೆ. ಮಠಾಧ್ಯಕ್ಷರ ಆಯ್ಕೆಯಲ್ಲಿ ಗುರು ಪರಂಪರೆಯನ್ನು ಹೊಂದಿರುವ ಇದಕ್ಕೆ 16ನೇ ಮಠಾಧ್ಯಕ್ಷರಾಗಿ ಸಾಗರ್ ಎಂಬ ವಟುವನ್ನು ಆಯ್ಕೆ ಮಾಡಲಾಗಿದೆ ಎಂದು ಬಸವಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.‌

ಇದನ್ನೂ ಓದಿ : ಚಾಮರಾಜನಗರ ದುರಂತ: ತನಿಖೆ ನಡೆಸಲು ಮುಂದಾದ ಲೋಕಾಯುಕ್ತ ಸಂಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.