ETV Bharat / state

ಶಾಲಾವರಣದಲ್ಲಿ ಆಟವಾಡುತ್ತಿದ್ದ ಬಾಲಕ ಹಾವು ಕಚ್ಚಿ ಸಾವು

author img

By

Published : Apr 7, 2021, 4:44 PM IST

ಅಜ್ಜಿಯ ಊರಾದ ನಿಟ್ರೆಯಲ್ಲಿ ಓದುತ್ತಿದ್ದ ರಾಹುಲ್ ಶಾಲೆಗೆ ರಜೆ ಇದ್ದಿದ್ದರಿಂದ ಆಟವಾಡಲು ಶಾಲಾವರಣಕ್ಕೆ ತೆರಳಿದ್ದ ವೇಳೆ ಹಾವೊಂದು ಕಚ್ಚಿದೆ ಎನ್ನಲಾಗಿದೆ.

 Boy dead
Boy dead

ಚಾಮರಾಜನಗರ: ಶಾಲಾವರಣದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವ ಹಾವು ಕಡಿದು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಆಲಂಬೂರು ಗ್ರಾಮದ ರಾಹುಲ್ (09) ಮೃತ ದುರ್ದೈವಿ. ಅಜ್ಜಿಯ ಊರಾದ ನಿಟ್ರೆಯಲ್ಲಿ ಓದುತ್ತಿದ್ದ ರಾಹುಲ್ ಶಾಲೆಗೆ ರಜೆ ಇದ್ದಿದ್ದರಿಂದ ಆಟವಾಡಲು ಶಾಲಾವರಣಕ್ಕೆ ತೆರಳಿದ್ದ ವೇಳೆ ಹಾವೊಂದು ಕಚ್ಚಿದೆ ಎನ್ನಲಾಗಿದೆ.

ವಿಚಾರ ತಿಳಿದು ಕೊಡಗಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಕೆಲವು ವರ್ಷಗಳ ಹಿಂದೆ ರಾಹುಲ್ ತಂದೆಯೂ ತೀರಿಕೊಂಡಿದ್ದರಿಂದ ಅಜ್ಜಿ ಊರಿಗೆ ಬಂದು ಶಾಲೆಗೆ ದಾಖಲಾಗಿದ್ದ ಎಂದು ತಿಳಿದು ಬಂದಿದೆ.

ಚಾಮರಾಜನಗರ: ಶಾಲಾವರಣದಲ್ಲಿ ಆಟವಾಡುತ್ತಿದ್ದ ಬಾಲಕನೋರ್ವ ಹಾವು ಕಡಿದು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ನಿಟ್ರೆ ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಆಲಂಬೂರು ಗ್ರಾಮದ ರಾಹುಲ್ (09) ಮೃತ ದುರ್ದೈವಿ. ಅಜ್ಜಿಯ ಊರಾದ ನಿಟ್ರೆಯಲ್ಲಿ ಓದುತ್ತಿದ್ದ ರಾಹುಲ್ ಶಾಲೆಗೆ ರಜೆ ಇದ್ದಿದ್ದರಿಂದ ಆಟವಾಡಲು ಶಾಲಾವರಣಕ್ಕೆ ತೆರಳಿದ್ದ ವೇಳೆ ಹಾವೊಂದು ಕಚ್ಚಿದೆ ಎನ್ನಲಾಗಿದೆ.

ವಿಚಾರ ತಿಳಿದು ಕೊಡಗಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಕೆಲವು ವರ್ಷಗಳ ಹಿಂದೆ ರಾಹುಲ್ ತಂದೆಯೂ ತೀರಿಕೊಂಡಿದ್ದರಿಂದ ಅಜ್ಜಿ ಊರಿಗೆ ಬಂದು ಶಾಲೆಗೆ ದಾಖಲಾಗಿದ್ದ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.