ETV Bharat / state

ಬೇಗೂರು ಪೊಲೀಸ್ ಠಾಣೆ ಸಮೀಪವೇ ಸರಣಿ ಕಳ್ಳತನ: ಬಿಯರ್ ಕುಡಿದು ಖದೀಮರು ಗಾಯಬ್​​​!

ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಪೊಲೀಸ್ ಠಾಣೆ ಅನತಿ ದೂರದಲ್ಲಿ ಸರಣಿ ಕಳ್ಳತನ ನಡೆದಿದೆ.

author img

By

Published : Oct 6, 2020, 11:44 AM IST

serial theft near the Begur police station
ಬೇಗೂರು ಪೊಲೀಸ್ ಠಾಣೆ ಸಮೀಪವೇ ಸರಣಿ ಕಳ್ಳತನ..

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಸರಣಿ ಕಳ್ಳತನ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಪೊಲೀಸ್ ಠಾಣೆಯ ಅನತಿ ದೂರದಲ್ಲಿ ಕಳ್ಳತನ ನಡೆದಿದೆ.

ಬೇಗೂರು ಪೊಲೀಸ್ ಠಾಣೆ ಸಮೀಪವೇ ಸರಣಿ ಕಳ್ಳತನ: ಬಿಯರ್ ಕುಡಿದು ಖದೀಮರು ಗಾಯಬ್..

ರಾಘವೇಂದ್ರ ಎಂಟರ್ ಪ್ರೈಸಸ್ ಎಂಬ ರಸಗೊಬ್ಬರದ ಅಂಗಡಿ, ವೈನ್ ಸ್ಟೋರ್ ಹಾಗೂ ಪೆಟ್ಟಿಗೆ ಅಂಗಡಿಗಳಿಗೆ ಕನ್ನ ಹಾಕಿರುವ ಖದೀಮರು, ರಸಗೊಬ್ಬರ ಅಂಗಡಿಯಲ್ಲಿದ್ದ 1.25 ಲಕ್ಷ ರೂ., ವೈನ್ ಸ್ಟೋರ್​ನಲ್ಲಿದ್ದ 5 ಸಾವಿರ ರೂ. ಜೊತೆಗೆ ಸಿಸಿಟಿವಿ ಹಾರ್ಡ್ ಡಿಸ್ಕ್ ಹೊತ್ತೊಯ್ದಿದ್ದಾರೆ.

ವೈನ್ ಸ್ಟೋರ್​ನಲ್ಲಿದ್ದ ಟಿನ್ ಬಿಯರ್​ಗಳನ್ನು ಕುಡಿದು ಪೆಟ್ಟಿಗೆ ಅಂಗಡಿಯಲ್ಲಿದ್ದ ಟೂತ್​​​ ಪೇಸ್ಟ್, ಸೋಪು, ಬೀಡಿ-ಸಿಗರೇಟ್ ಪೊಟ್ಟಣಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಸರಣಿ ಕಳ್ಳತನ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಪೊಲೀಸ್ ಠಾಣೆಯ ಅನತಿ ದೂರದಲ್ಲಿ ಕಳ್ಳತನ ನಡೆದಿದೆ.

ಬೇಗೂರು ಪೊಲೀಸ್ ಠಾಣೆ ಸಮೀಪವೇ ಸರಣಿ ಕಳ್ಳತನ: ಬಿಯರ್ ಕುಡಿದು ಖದೀಮರು ಗಾಯಬ್..

ರಾಘವೇಂದ್ರ ಎಂಟರ್ ಪ್ರೈಸಸ್ ಎಂಬ ರಸಗೊಬ್ಬರದ ಅಂಗಡಿ, ವೈನ್ ಸ್ಟೋರ್ ಹಾಗೂ ಪೆಟ್ಟಿಗೆ ಅಂಗಡಿಗಳಿಗೆ ಕನ್ನ ಹಾಕಿರುವ ಖದೀಮರು, ರಸಗೊಬ್ಬರ ಅಂಗಡಿಯಲ್ಲಿದ್ದ 1.25 ಲಕ್ಷ ರೂ., ವೈನ್ ಸ್ಟೋರ್​ನಲ್ಲಿದ್ದ 5 ಸಾವಿರ ರೂ. ಜೊತೆಗೆ ಸಿಸಿಟಿವಿ ಹಾರ್ಡ್ ಡಿಸ್ಕ್ ಹೊತ್ತೊಯ್ದಿದ್ದಾರೆ.

ವೈನ್ ಸ್ಟೋರ್​ನಲ್ಲಿದ್ದ ಟಿನ್ ಬಿಯರ್​ಗಳನ್ನು ಕುಡಿದು ಪೆಟ್ಟಿಗೆ ಅಂಗಡಿಯಲ್ಲಿದ್ದ ಟೂತ್​​​ ಪೇಸ್ಟ್, ಸೋಪು, ಬೀಡಿ-ಸಿಗರೇಟ್ ಪೊಟ್ಟಣಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.