ETV Bharat / state

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ‍್ಯಾರೂ 5 ವರ್ಷ ಪೂರೈಸಲೇ ಇಲ್ಲ!

author img

By

Published : Jul 26, 2019, 5:26 AM IST

1997ರಲ್ಲಿ ಜಿಲ್ಲೆಯಾಗಿ ರಚನೆಯಾದಾಗಿನಿಂದ ಇಲ್ಲಿಯವರೆಗೂ ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಐದು ವರ್ಷ ಪೂರೈಸಿಲ್ಲ. ಅಲ್ಪ ಕಾಲದಲ್ಲಿಯೇ ಉಸ್ತುವಾರಿ ಸ್ಥಾನ ಕಳೆದುಕೊಂಡ ಸಚಿವರ ಸಾಲಿಗೆ ಇದೀಗ ಪುಟ್ಟರಂಗ ಶೆಟ್ಟಿ ಅವರೂ ಸೇರಿದ್ದಾರೆ.

ಚಾಮರಾಜನಗರ

ಚಾಮರಾಜನಗರ: ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಈವರೆಗೆ 13 ಮಂದಿ ರಾಜಕೀಯ ನಾಯಕರು ಸೇವೆ ಸಲ್ಲಿಸಿದ್ದಾರೆ. ಆದರೆ ಈವರೆಗೆ ಒಬ್ಬ ಸಚಿವರೂ ಐದು ವರ್ಷದ ಪೂರೈಸಿಲ್ಲ!

ಹೌದು, 1997ರಲ್ಲಿ ಚಾಮರಾಜನಗರ ಜಿಲ್ಲೆಯಾಗಿ ರಚನೆಯಾದಾಗಿನಿಂದ ಇಲ್ಲಿಯವರೆಗೂ ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಐದು ವರ್ಷ ಪೂರೈಸಿಲ್ಲ. ಅಲ್ಪ ಕಾಲದಲ್ಲಿಯೇ ಉಸ್ತುವಾರಿ ಸ್ಥಾನ ಕಳೆದುಕೊಂಡ ಸಚಿವರ ಸಾಲಿಗೆ ಇದೀಗ ಪುಟ್ಟರಂಗ ಶೆಟ್ಟಿ ಅವರೂ ಸೇರಿದ್ದಾರೆ.

District Ministers
ಪುಟ್ಟರಂಗ ಶೆಟ್ಟಿ

ಇತ್ತೀಚೆಗೆ ಪತನವಾದ ಕುಮಾರಸ್ವಾಮಿ ಸರ್ಕಾರದಲ್ಲಿ ಚಾಮರಾಜನಗರ ತಾಲೂಕಿನವರೇ ಆದ ಪುಟ್ಟರಂಗಶೆಟ್ಟಿ ಅವರಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರಿ ಸ್ವೀಕರಿಸಿದ 14 ತಿಂಗಳಲ್ಲಿಯೇ ಅವರು ತಮ್ಮ ಸ್ಥಾನ ತೊರೆಯುವಂತಾಗಿದೆ. 1997ರಲ್ಲಿ ಮೊದಲ ಉಸ್ತುವಾರಿ ಸಚಿವರಾಗಿದ್ದ ನಾಗಪ್ಪರಿಂದ ಹಿಡಿದು, ಜಿ. ರಾಜೂಗೌಡ, ಬೆಂಕಿ ಮಹದೇವಪ್ಪ, ಡಿ.ಟಿ.ಜಯಕುಮಾರ್ ಹೆಚ್.ಎಸ್.ಮಹದೇವಪ್ರಸಾದ್, ಯು.ಟಿ.ಖಾದರ್, ಡಾ. ಗೀತಾ ಮಹದೇವಪ್ರಸಾದ್ ಸೇರಿದಂತೆ ಮತ್ಯಾರೂ ಪೂರ್ಣಾವಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿಲ್ಲ.

ಸಿಎಂ ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದುಕೊಳ್ತಾರೆ ಎಂಬ ಕಳಂಕ ಅಂಟಿತ್ತು. ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೂರ ಮಾಡಿದ್ದರು. ಈ ಮಧ್ಯೆ, ಜಿಲ್ಲೆಯ ಉಸ್ತುವಾರಿ ಸಚಿವರು ಯಾರೂ ಐದು ವರ್ಷ ಪೂರ್ಣಗೊಳಿಸದೇ ಇರುವುದು ವಿಪರ್ಯಾಸವೇ ಸರಿ.

ಚಾಮರಾಜನಗರ: ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಈವರೆಗೆ 13 ಮಂದಿ ರಾಜಕೀಯ ನಾಯಕರು ಸೇವೆ ಸಲ್ಲಿಸಿದ್ದಾರೆ. ಆದರೆ ಈವರೆಗೆ ಒಬ್ಬ ಸಚಿವರೂ ಐದು ವರ್ಷದ ಪೂರೈಸಿಲ್ಲ!

ಹೌದು, 1997ರಲ್ಲಿ ಚಾಮರಾಜನಗರ ಜಿಲ್ಲೆಯಾಗಿ ರಚನೆಯಾದಾಗಿನಿಂದ ಇಲ್ಲಿಯವರೆಗೂ ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಐದು ವರ್ಷ ಪೂರೈಸಿಲ್ಲ. ಅಲ್ಪ ಕಾಲದಲ್ಲಿಯೇ ಉಸ್ತುವಾರಿ ಸ್ಥಾನ ಕಳೆದುಕೊಂಡ ಸಚಿವರ ಸಾಲಿಗೆ ಇದೀಗ ಪುಟ್ಟರಂಗ ಶೆಟ್ಟಿ ಅವರೂ ಸೇರಿದ್ದಾರೆ.

District Ministers
ಪುಟ್ಟರಂಗ ಶೆಟ್ಟಿ

ಇತ್ತೀಚೆಗೆ ಪತನವಾದ ಕುಮಾರಸ್ವಾಮಿ ಸರ್ಕಾರದಲ್ಲಿ ಚಾಮರಾಜನಗರ ತಾಲೂಕಿನವರೇ ಆದ ಪುಟ್ಟರಂಗಶೆಟ್ಟಿ ಅವರಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರಿ ಸ್ವೀಕರಿಸಿದ 14 ತಿಂಗಳಲ್ಲಿಯೇ ಅವರು ತಮ್ಮ ಸ್ಥಾನ ತೊರೆಯುವಂತಾಗಿದೆ. 1997ರಲ್ಲಿ ಮೊದಲ ಉಸ್ತುವಾರಿ ಸಚಿವರಾಗಿದ್ದ ನಾಗಪ್ಪರಿಂದ ಹಿಡಿದು, ಜಿ. ರಾಜೂಗೌಡ, ಬೆಂಕಿ ಮಹದೇವಪ್ಪ, ಡಿ.ಟಿ.ಜಯಕುಮಾರ್ ಹೆಚ್.ಎಸ್.ಮಹದೇವಪ್ರಸಾದ್, ಯು.ಟಿ.ಖಾದರ್, ಡಾ. ಗೀತಾ ಮಹದೇವಪ್ರಸಾದ್ ಸೇರಿದಂತೆ ಮತ್ಯಾರೂ ಪೂರ್ಣಾವಧಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಲಿಲ್ಲ.

ಸಿಎಂ ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಕಳೆದುಕೊಳ್ತಾರೆ ಎಂಬ ಕಳಂಕ ಅಂಟಿತ್ತು. ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೂರ ಮಾಡಿದ್ದರು. ಈ ಮಧ್ಯೆ, ಜಿಲ್ಲೆಯ ಉಸ್ತುವಾರಿ ಸಚಿವರು ಯಾರೂ ಐದು ವರ್ಷ ಪೂರ್ಣಗೊಳಿಸದೇ ಇರುವುದು ವಿಪರ್ಯಾಸವೇ ಸರಿ.

Intro:ಅವಧಿ ಮುಗಿಸದ ಚಾಮರಾಜನಗರ ಉಸ್ತುವಾರಿ ಸಚಿವರುಗಳು: ೨೩ ವರ್ಷದಲ್ಲಿ ೧೩ ಮಿನಿಸ್ಟರ್ ಮ್ಯಾರಥಾನ್!

ಚಾಮರಾಜನಗರ: 1997 ರಲ್ಲಿ ಜಿಲ್ಲೆಯಾಗಿದ್ದರಿಂದ ಇಂದಿನ ಕುಮಾರಪರ್ವದವರಿಗೆ ಓರ್ವ ಸಚಿವ ಕೂಡ ೫ ವರ್ಷ
ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿಲ್ಲ.

Body:ಹೌದು, ಇಲ್ಲಿಯವರೆಗೆ ಚಾಮರಾಜನಗರ ಉಸ್ತುವಾರಿಗಳಾಗಿ ೧೩ ಮಂದಿ ಸಚಿವರು ಹೊಣೆ ಹೊತ್ತರೂ ಎಲ್ಲರೂ ಅಲ್ಪಕಾಲದಲ್ಲೆ ಜಿಲ್ಲಾ ಉಸ್ತುವಾರಿ ಪಟ್ಡ ತೊರೆದಿರುವುದು ವಿಪರ್ಯಾಸವೇ ಸರಿ. ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾದ ಪುಟ್ಟರಂಗಶೆಟ್ಟಿ ಚಾಮರಾಜನಗರ ತಾಲೂಕಿನ ಮೊದಲ ಸಚಿವರೂ ಆಗಿದ್ದ ಶೆಟ್ಟರು ೧೪ ತಿಂಗಳುಗಳಿಗೇ ಮಾಜಿ ಆಗಿದ್ದಾರೆ.

೧೯೯೭ರಲ್ಲಿ ಜೆ.ಎಚ್.ಪಟೇಲ್ ಸಂಪುಟದಲ್ಲಿ ಹನೂರಿನ‌ ಶಾಸಕರಾಗಿದ್ದ ನಾಗಪ್ಪ ಮೊದಲ ಉಸ್ತುವಾರಿ ಸಚಿವರಾಗಿದ್ದರು‌.‌ಆದರೆ, ೧೯೯೯ ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಎಸ್ಎಂಕೆ ಸಂಪುಟದಲ್ಲಿ ಹನೂರಿನ ಜಿ. ರಾಜೂಗೌಡ ಉಸ್ತುವಾರಿ ಸಚಿವರಾಗಿದ್ದರು. ಬಳಿಕ, ನಂಜನಗೂಡಿನ ಬೆಂಕಿ ಮಹದೇವಪ್ಪ ಉಸ್ತುವಾರಿಯಾದರು. ಹೀಗೆ, ೨೦೦೪ರಲ್ಲಿ ನಂಜನಗೂಡಿನ ಡಿ.ಟಿ. ಜಯಕುಮಾರ್, ನಂತರ ಗುಂಡ್ಲುಪೇಟೆ ಶಾಸಕರಾಗಿದ್ದ ಎಚ್.ಎಸ್. ಮಹದೇವಪ್ರಸಾದ್,
೨೦೦೮ರ ಬಿಜೆಪಿ ಸರ್ಕಾರದ ವೇಳೆ ಹೋದ ಪುಟ್ಟ-ಬಂದ ಪುಟ್ಟ ಎಂಬಂತೆ ಐವರು ಜಿಲ್ಲಾ ಉಸ್ತುವಾರಿ ಸಚಿವರಾದರು.
೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಎಚ್.ಎಸ್.ಎಂ ಉಸ್ತುವಾರಿಯಾಗಿದ್ದಾಗಲೇ ಅಕಾಲಿಕವಾಗಿ ಮೃತಪಟ್ಟಿದ್ದರಿಂದ ಯು.ಟಿ.ಖಾದರ್ ಉಸ್ತುವಾರಿ ಉಸ್ತುವಾರಿ ಸಚಿವರಾಗಿದ್ದರು. ಬಳಿಕ, ಗುಂಡ್ಲುಪೇಟೆ ಉಪಚುನಾಣೆಯಲ್ಲಿ ಜಯಿಸಿದ್ದ ಡಾ. ಗೀತಾ ಮಹದೇವಪ್ರಸಾದ್ ೬ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ಕುಮಾರಪರ್ವದಲ್ಲಿ ಪುಟ್ಟರಂಗಶೆಟ್ಟಿ ಜಿಲ್ಲಾ ಉಸ್ತುವಾರಿಯಾಗಿದ್ದರು‌. ಆದರೆ, ವಿಶ್ವಾಸಮತ ಸಾಬೀತುಪಡಿಸುವಲ್ಲಿ ಎಚ್ಡಿಕೆ ವಿಫಲವಾದ್ದರಿಂದ ೧೪ ತಿಂಗಳಲ್ಲೆ ಮಾಜಿಯಾಗಿದ್ದಾರೆ.

Conclusion:ಒಟ್ಟಿನಲ್ಲಿ ೨೩ ವರ್ಷದಿಂದ ಆರಂಭವಾದ ಅಲ್ಪಕಾಲದ ಜಿಲ್ಲಾ ಉಸ್ತುವಾರಿ ಸಚಿವರ ಮ್ಯಾರಥಾನ್ ಓಟ ದೋಸ್ತಿ ಸರ್ಕಾರದಲ್ಲೂ ಮುಂದುವರೆದಿದೆ.
Photos- wtsp with caption

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.