ETV Bharat / state

ಹೊಸ ವರ್ಷವನ್ನು ಸ್ವಾಗತಿಸಿದ ಚಾಮರಾಜನಗರ: ಬಾರ್​ಗಳಲ್ಲಿ ಭರ್ಜರಿ ವ್ಯಾಪಾರ - Bandipura tiger reserve

2021ರ ಕೊನೆಯ ದಿನವಾದ ಡಿಸೆಂಬರ್ 31ರಂದು ಬಂಡೀಪುರ ಸರ್ಕಾರಿ ವಸತಿಗೃಹದಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಇದ್ದುದ್ದರಿಂದ ಪ್ರವಾಸಿಗರು ಸಫಾರಿಗೆ ಮೊರೆ ಹೋಗಿದ್ದು, 22 ಲಕ್ಷ ರೂಪಾಯಿ ಆದಾಯ ಬಂದಿದೆ.

New year in chamarajanagar
ಹೊಸ ವರ್ಷವನ್ನು ಸ್ವಾಗತಿಸಿದ ಚಾಮರಾಜನಗರ: ಬಾರ್​ಗಳಲ್ಲಿ ಭರ್ಜರಿ ವ್ಯಾಪಾರ
author img

By

Published : Jan 1, 2022, 2:23 AM IST

ಚಾಮರಾಜನಗರ: ನೂತನ ವರ್ಷಾಚರಣೆಗಾಗಿ ಜಿಲ್ಲೆಯ ಹಲವೆಡೆ ಬಾರ್​ಗಳ ಮುಂದೆ ಜನರು ಜಮಾಯಿಸಿ, ಮದ್ಯ ಖರೀದಿಸಿದ್ದಾರೆ. ಜನರ ದಂಡು ಬಾರ್​ಗಳತ್ತ ಮುಖ ಮಾಡಿದ್ದು, ರಾತ್ರಿ 11 ಬಳಿಕ ಕೆಲವರು ನಗರದ ರಸ್ತೆಗಳಲ್ಲಿ ಜಾಲಿ ರೈಡ್ ಮಾಡಿದ್ದಾರೆ.

ತಾಲೂಕು ಕಚೇರಿ ಸುತ್ತಮತ್ತ ಕೆಲವರು ಪಟಾಕಿಗಳನ್ನು ಸಿಡಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡರು. ನಗರದ ಜೋಡಿ ರಸ್ತೆ, ಪಚ್ಚಪ್ಪ ವೃತ್ತ ಹಾಗೂ ಸತ್ಯಮಂಗಲಂ ರಸ್ತೆಗಳಲ್ಲಿ ಕೆಲವರು ತಿರುಗಾಡುತ್ತಿರುವುದು ಕಂಡುಬಂತು.

ಹತ್ತಾರು ಬೇಕರಿಗಳಲ್ಲಿ ಹೊಸ ವರ್ಷಾಚರಣೆಯ ವಿಶೇಷ ಕೇಕ್​​ಗಳ ಮಾರಾಟವೂ ಜೋರಾಗಿತ್ತು. ಇದರೊಟ್ಟಿಗೆ, ಮಾಂಸಹಾರಿ ಹೋಟೆಲ್​ಗಳಲ್ಲಿ ಜನರು ಕಿಕ್ಕಿರಿದು ಆಹಾರ ಖರೀದಿಸಿ ಪಾರ್ಟಿ ಮೂಡ್​​ನಲ್ಲಿದ್ದರು.

ಸಫಾರಿ ಜೋರು: 2021ರ ಕೊನೆಯ ದಿನವಾದ ಡಿಸೆಂಬರ್ 31ರಂದು ಬಂಡೀಪುರ ಸರ್ಕಾರಿ ವಸತಿಗೃಹದಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಇದ್ದುದ್ದರಿಂದ ಪ್ರವಾಸಿಗರು ಸಫಾರಿಗೆ ಮೊರೆ ಹೋದರು.

New year in chamarajanaga
ಸಫಾರಿಗೆ ಮುಗಿಬಿದ್ದ ಪ್ರವಾಸಿಗರು

ಸಫಾರಿಗೆ ಪ್ರವಾಸಿಗರ ದಂಡೇ ಹರಿದುಬಂದಿದೆ. ಕಳೆದ ಒಂದು ವಾರದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಸಫಾರಿ ನಡೆಸಿದ್ದು, ಅರಣ್ಯ ಇಲಾಖೆಗೆ ಬರೋಬ್ಬರಿ 22 ಲಕ್ಷ ರೂ.‌ ಆದಾಯ ಹರಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನ ಎಂಜಿ ರಸ್ತೆಗೆ ಭೇಟಿ ನೀಡಿದ ಗೃಹ ಸಚಿವ: ಪೊಲೀಸರಿಗೆ ಸಿಹಿ ಹಂಚಿ ಶುಭಾಶಯ

ಚಾಮರಾಜನಗರ: ನೂತನ ವರ್ಷಾಚರಣೆಗಾಗಿ ಜಿಲ್ಲೆಯ ಹಲವೆಡೆ ಬಾರ್​ಗಳ ಮುಂದೆ ಜನರು ಜಮಾಯಿಸಿ, ಮದ್ಯ ಖರೀದಿಸಿದ್ದಾರೆ. ಜನರ ದಂಡು ಬಾರ್​ಗಳತ್ತ ಮುಖ ಮಾಡಿದ್ದು, ರಾತ್ರಿ 11 ಬಳಿಕ ಕೆಲವರು ನಗರದ ರಸ್ತೆಗಳಲ್ಲಿ ಜಾಲಿ ರೈಡ್ ಮಾಡಿದ್ದಾರೆ.

ತಾಲೂಕು ಕಚೇರಿ ಸುತ್ತಮತ್ತ ಕೆಲವರು ಪಟಾಕಿಗಳನ್ನು ಸಿಡಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡರು. ನಗರದ ಜೋಡಿ ರಸ್ತೆ, ಪಚ್ಚಪ್ಪ ವೃತ್ತ ಹಾಗೂ ಸತ್ಯಮಂಗಲಂ ರಸ್ತೆಗಳಲ್ಲಿ ಕೆಲವರು ತಿರುಗಾಡುತ್ತಿರುವುದು ಕಂಡುಬಂತು.

ಹತ್ತಾರು ಬೇಕರಿಗಳಲ್ಲಿ ಹೊಸ ವರ್ಷಾಚರಣೆಯ ವಿಶೇಷ ಕೇಕ್​​ಗಳ ಮಾರಾಟವೂ ಜೋರಾಗಿತ್ತು. ಇದರೊಟ್ಟಿಗೆ, ಮಾಂಸಹಾರಿ ಹೋಟೆಲ್​ಗಳಲ್ಲಿ ಜನರು ಕಿಕ್ಕಿರಿದು ಆಹಾರ ಖರೀದಿಸಿ ಪಾರ್ಟಿ ಮೂಡ್​​ನಲ್ಲಿದ್ದರು.

ಸಫಾರಿ ಜೋರು: 2021ರ ಕೊನೆಯ ದಿನವಾದ ಡಿಸೆಂಬರ್ 31ರಂದು ಬಂಡೀಪುರ ಸರ್ಕಾರಿ ವಸತಿಗೃಹದಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ಇದ್ದುದ್ದರಿಂದ ಪ್ರವಾಸಿಗರು ಸಫಾರಿಗೆ ಮೊರೆ ಹೋದರು.

New year in chamarajanaga
ಸಫಾರಿಗೆ ಮುಗಿಬಿದ್ದ ಪ್ರವಾಸಿಗರು

ಸಫಾರಿಗೆ ಪ್ರವಾಸಿಗರ ದಂಡೇ ಹರಿದುಬಂದಿದೆ. ಕಳೆದ ಒಂದು ವಾರದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಸಫಾರಿ ನಡೆಸಿದ್ದು, ಅರಣ್ಯ ಇಲಾಖೆಗೆ ಬರೋಬ್ಬರಿ 22 ಲಕ್ಷ ರೂ.‌ ಆದಾಯ ಹರಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನ ಎಂಜಿ ರಸ್ತೆಗೆ ಭೇಟಿ ನೀಡಿದ ಗೃಹ ಸಚಿವ: ಪೊಲೀಸರಿಗೆ ಸಿಹಿ ಹಂಚಿ ಶುಭಾಶಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.