ಚಾಮರಾಜನಗರ : ಜಿಲ್ಲೆಯಲ್ಲಿ ಎರಡನೇ ಸೋಂಕಿತ ವ್ಯಕ್ತಿ ಕಾಣಿಸಿಕೊಂಡ 8 ದಿನದ ಒಳಗಾಗಿ ಸೋಂಕಿತರ ಸಂಖ್ಯೆ 20ಕ್ಕೇರಿದ್ದು ಗುಂಡ್ಲುಪೇಟೆ ಜಿಲ್ಲೆಯು ಕೊರೊನಾ ಹಾಟ್ಸ್ಪಾಟ್ ಆಗುತ್ತಿದೆ.
ಸೋಂಕಿತ 20 ಮಂದಿಯಲ್ಲಿ ಓರ್ವ ಕೆಎಸ್ಆರ್ಟಿಸಿ ಚಾಲಕ ಕಂ ನಿರ್ವಾಹಕ ಸೇರಿದಂತೆ ಒಟ್ಟು ಐವರು ಚಾಲಕರು ಸೋಂಕು ತಗುಲಿದ್ದು, ಈ ಐವರಿಂದಲೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ದಾಟುವ ಎಲ್ಲಾ ಆತಂಕ ಗೋಚರಿಸುತ್ತಿದೆ.
ಬೆಂಗಳೂರು-ಕೊಳ್ಳೇಗಾಲ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಗಂಟಲು ದ್ರವ ಪರೀಕ್ಷೆಗೆ ನೀಡಿದ ಬಳಿಕ 2 ದಿನ ಕರ್ತವ್ಯ ನಿರ್ವಹಿಸಿದ್ದರು. ಜೊತೆಗೆ ಇವರೇ ಕಂಡಕ್ಟರ್ ಕೂಡ ಆಗಿರುವುದರಿಂದ ಇವರ ಸಹೋದ್ಯೋಗಿ ಹಾಗೂ ಪ್ರಯಾಣಿಕರಿಗೆ ಸೋಂಕು ರವಾನಿಸಿರುವ ಆತಂಕ ಹೆಚ್ಚಾಗಿದೆ.
ಇನ್ನೊಂದೆಡೆ ಗುಂಡ್ಲುಪೇಟೆ ಮಹಾದೇವಪ್ರಸಾದ್ ನಗರದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕೂಡ ಸೋಂಕಿಗೆ ತುತ್ತಾಗಿದ್ದು ಗುಂಡ್ಲುಪೇಟೆ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ.
ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದ ಚಾಲಕರುಗಳ ಟ್ರಾವೆಲ್ ಹಿಸ್ಟರಿ ಭಯಾನಕವಾಗಿದ್ದು, ಕೊರೊನಾಗೆ ಇನ್ನೂ ಎಷ್ಟು ಮಂದಿ ತುತ್ತಾಗುವರೋ ಎನ್ನುವ ಆತಂಕ ಹೆಚ್ಚಿಸಿದೆ.