ETV Bharat / state

ಶಿವನಸಮುದ್ರದಲ್ಲಿ ಅಕ್ರಮ ತೆಪ್ಪ ಸವಾರಿ: ಪ್ರವಾಸಿಗರ ಜೀವದೊಂದಿದೆ ಚೆಲ್ಲಾಟ - ಅರಣ್ಯ ಇಲಾಖೆ

ನಿತ್ಯ ನೂರಾರು ಪ್ರವಾಸಿಗರ ದಂಡು ಲಗ್ಗೆ ಇಡುವ ತಾಣ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಪ್ರವಾಸಿ ಸ್ಥಳ ಶಿವನಸಮುದ್ರ. ಆದರೆ, ಸುರಕ್ಷಿತ ಉಪಕರಣಗಳಿಲ್ಲದೆ ತೆಪ್ಪದಲ್ಲಿ ಸಂಚರಿಸುವ ಪ್ರವಾಸಿಗರ ಜೀವ ಮಾತ್ರ ಅವರ ಕೈಯಲ್ಲಿಲ್ಲ.

ಸುರಕ್ಷಿತ ಉಪಕರಣವಿಲ್ಲದೇ ತೆಪ್ಪದಲ್ಲಿ ಸಂಚರಿಸುವ ಪ್ರವಾಸಿಗರು
author img

By

Published : Aug 1, 2019, 2:10 PM IST

ಚಾಮರಾಜನಗರ: ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಪ್ರವಾಸಿ ತಾಣವಾದ ಶಿವನಸಮುದ್ರಕ್ಕೆ ಬರುವ ಪ್ರವಾಸಿಗರು ಇಲ್ಲಿನ ತೆಪ್ಪದಲ್ಲಿ ಸುತ್ತಾಡುತ್ತಾರೆ. ಆದರೆ, ಕನಿಷ್ಠ ಸುರಕ್ಷತೆಗಳನ್ನು ತೆಗೆದುಕೊಳ್ಳದೆ ಇರುವುದು ಪ್ರವಾಸಿಗರ ಪ್ರಾಣದೆ ಜತೆ ಚೆಲ್ಲಾಟವಾಡುತ್ತಿದ್ದಾರೆ.

ಸುರಕ್ಷಿತ ಉಪಕರಣವಿಲ್ಲದೇ ತೆಪ್ಪದಲ್ಲಿ ಸಂಚರಿಸುವ ಪ್ರವಾಸಿಗರು

ಅರಣ್ಯ ಇಲಾಖೆ ಅನುಮತಿ ಇಲ್ಲದೆ, ಸುರಕ್ಷಿತ ಸಾಧನಗಳಿಲ್ಲದ ತೆಪ್ಪದಲ್ಲಿ ವೀಕೆಂಡ್​ ಮೋಜು ಮಾಡುವ ಪ್ರವಾಸಿಗರಿಗೆ 100 ರೂಪಾಯಿಯಂತೆ ದರ ವಿಧಿಸುತ್ತಾರೆ.

ಅವಘಡಗಳು ಸಂಭವಿಸುವ ಮುನ್ನ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ಮಂಡಳಿ ಎಚ್ಚೆತ್ತಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಚಾಮರಾಜನಗರ: ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಪ್ರವಾಸಿ ತಾಣವಾದ ಶಿವನಸಮುದ್ರಕ್ಕೆ ಬರುವ ಪ್ರವಾಸಿಗರು ಇಲ್ಲಿನ ತೆಪ್ಪದಲ್ಲಿ ಸುತ್ತಾಡುತ್ತಾರೆ. ಆದರೆ, ಕನಿಷ್ಠ ಸುರಕ್ಷತೆಗಳನ್ನು ತೆಗೆದುಕೊಳ್ಳದೆ ಇರುವುದು ಪ್ರವಾಸಿಗರ ಪ್ರಾಣದೆ ಜತೆ ಚೆಲ್ಲಾಟವಾಡುತ್ತಿದ್ದಾರೆ.

ಸುರಕ್ಷಿತ ಉಪಕರಣವಿಲ್ಲದೇ ತೆಪ್ಪದಲ್ಲಿ ಸಂಚರಿಸುವ ಪ್ರವಾಸಿಗರು

ಅರಣ್ಯ ಇಲಾಖೆ ಅನುಮತಿ ಇಲ್ಲದೆ, ಸುರಕ್ಷಿತ ಸಾಧನಗಳಿಲ್ಲದ ತೆಪ್ಪದಲ್ಲಿ ವೀಕೆಂಡ್​ ಮೋಜು ಮಾಡುವ ಪ್ರವಾಸಿಗರಿಗೆ 100 ರೂಪಾಯಿಯಂತೆ ದರ ವಿಧಿಸುತ್ತಾರೆ.

ಅವಘಡಗಳು ಸಂಭವಿಸುವ ಮುನ್ನ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ಮಂಡಳಿ ಎಚ್ಚೆತ್ತಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Intro:ಶಿವನಸಮುದ್ರದಲ್ಲಿ ಅಕ್ರಮ ತೆಪ್ಪ ಸವಾರಿ: ಪ್ರವಾಸಿಗರ ಜೀವದೊಂದಿದೆ ಚೆಲ್ಲಾಟ

ಚಾಮರಾಜನಗರ: ಬನ್ನಿ, ಬನ್ನಿ ಸೂಪರ್ ಬೋಟಿಂಗ್- ಸಖತ್ ಬೋಟಿಂಗ್ ಎಂಬ ಕರೆಗೆ ಓಗೊಟ್ಟು ಹೋಗಿ ಎಚ್ಚರ ತಪ್ಪಿದರೇ ಶಿವನಪಾದ ಸೇರೋದು ಗ್ಯಾರಂಟಿ ಎಂಬ ವಾತಾವರಣ ಶಿವನಸಮುದ್ರದಲ್ಲಿ ಸೃಷ್ಟಿಯಾಗಿದೆ.

Body:ಹೌದು, ಕೊಳ್ಳೇಗಾಲ ತಾಲೂಕಿನ ಪ್ರವಾಸಿ ತಾಣವಾದ ಶಿವನಸಮುದ್ರದಲ್ಲಿ ಅಕ್ರಮವಾಗಿ ತೆಪ್ಪ ಸವಾರಿ ನಡೆಯುತ್ತಿರುವ ಆರೋಪ ಕೇಳಿಬಂದಿದ್ದು, ಸುರಕ್ಷಿತ ಸಾಧನಗಳನ್ನು ಬಳಸದೇ ಜೀವಗಳ ಜೊತೆ ಚೆಲ್ಲಾಟ ಆಡುತ್ತಿರುವುದು ಬೆಳಕಿಗೆ ಬಂದಿದೆ.

ದೂರದೂರಿನಿಂದ ವೀಕೆಂಡ್ ಮೋಜಿಗಾಗಿ ಬರುವ ಪ್ರವಾಸಿಗರು ತೆಪ್ಪ ನಡೆಸುವರ ಮಾತಿಗೆ ಬೆರಗಾಗಿ ಹೋಗುತ್ತಿದ್ದು ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತದ ದಿವ್ಯ ನಿರ್ಲಕ್ಷ್ಯ ಅಪಾಯಕ್ಕೆ ಅಡಿಪಾಯ ಹಾಕಿದೆ. ಇನ್ನು, ಈ ತೆಪ್ಪ ಸವಾರಿಗೆ ಯಾವುದೇ ರೀತಿಯ ಅನುಮತಿ ನೀಡಲಾಗಿಲ್ಲ ಎಂಬುದನ್ನು ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಉನ್ನತಮೂಲಗಳು ಈಟಿವಿ ಭಾರತಕ್ಕೆ ಖಚಿತಪಡಿಸಿವೆ‌.

ವಾರವೊಂದಕ್ಕೆ ೧೫೦೦-೨೦೦೦ ಮಂದಿ ತೆಪ್ಪದಲ್ಲಿ ಸವಾರಿ ಹೋಗುತ್ತಿದ್ದು ಒಬ್ಬರಿಗೆ ೧೦೦ ರೂ. ಶುಲ್ಕವಿದ್ದು ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂಬುದು ಸ್ಥಳೀಯರ ಆರೋಪ.

Conclusion:ಒಟ್ಟಿನಲ್ಲಿ, ಪ್ರವಾಸಿಗರ ಪ್ರಾಣದೊಂದಿಗೆ ಚೆಲ್ಲಾಟ ಆಡುತ್ತಿರುವ ತೆಪ್ಪ ಸವಾರಿಗೆ ಬ್ರೇಕ್ ಹಾಕಬೇಕಿದೆ ಇಲ್ಲವೇ ಸೂಕ್ತ ಸುರಕ್ಷಿತ ಸಾಧನಗಳನ್ನು ಬಳಸುವಂತೆ ತಾಕೀತು ಮಾಡಬೇಕಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.