ETV Bharat / state

ಚಾಮರಾಜನಗರದಲ್ಲಿ ಖಡಕ್ ಕಾನೂನು... ಮಾಸ್ಕ್ ಧರಿಸದೆ ವ್ಯಾಪಾರ ಮಾಡಿದರೆ ಅಂಗಡಿ ಲೈಸೆನ್ಸ್ ರದ್ದು - chamarajanagara corona rules

ಮಾಸ್ಕ್ ಧರಿಸದೆ ಗ್ರಾಹಕರೊಂದಿಗೆ ವ್ಯವಹರಿಸುವ ಅಂಗಡಿ, ಮಳಿಗೆ ವ್ಯಾಪಾರಿಗಳಿಗೆ ದುಪ್ಪಟ್ಟು ದಂಡ ವಿಧಿಸಿ, ಅಂಗಡಿಗಳನ್ನು ಮುಚ್ಚಿ ವ್ಯಾಪಾರ ಪರವಾನಗಿಯನ್ನೇ ರದ್ದುಗೊಳಿಸುವಂತೆ ಯೋಜನಾ ನಿರ್ದೇಶಕ ಕೆ.ಸುರೇಶ್ ಸೂಚಿಸಿದ್ದಾರೆ.

if-failed-to-follow-the-covid-rules-store-license-will-cancellation-in-chamarajanagara
ಚಾಮರಾಜನಗರದಲ್ಲಿ ಖಡಕ್ ಕಾನೂನು
author img

By

Published : Apr 15, 2021, 8:23 PM IST

ಚಾಮರಾಜನಗರ: ವ್ಯಾಪಾರಿಗಳು ಮಾಸ್ಕ್ ಹಾಕಿಕೊಳ್ಳದೆ ವ್ಯವಹರಿಸಿದರೆ ಅಂಗಡಿ ಪರವಾನಗಿಯನ್ನೇ ರದ್ದುಗೊಳಿಸಲು‌ ಡಿಸಿ ನಿರ್ದೇಶನದಂತೆ ಯೋಜನಾ ನಿರ್ದೇಶಕರು ಮುಂದಾಗಿದ್ದಾರೆ.‌

ಈ ಕುರಿತು ಇಂದು ಯೋಜನಾ ನಿರ್ದೇಶಕ ಕೆ.ಸುರೇಶ್, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಮಾಸ್ಕ್ ಧರಿಸದೆ ಗ್ರಾಹಕರೊಂದಿಗೆ ವ್ಯವಹರಿಸುವ ಅಂಗಡಿ, ಮಳಿಗೆ ವ್ಯಾಪಾರಿಗಳಿಗೆ ದುಪ್ಪಟ್ಟು ದಂಡ ವಿಧಿಸಿ, ಅಂಗಡಿಗಳನ್ನು ಮುಚ್ಚಿ ವ್ಯಾಪಾರ ಪರವಾನಗಿಯನ್ನೇ ರದ್ದುಗೊಳಿಸುವಂತೆ ಸೂಚಿಸಿದ್ದಾರೆ.

ಯೋಜನಾ ನಿರ್ದೇಶಕ ಕೆ.ಸುರೇಶ್

ಪೊಲೀಸ್ ಇಲಾಖೆ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಸರ್ಕಾರಿ ಮತ್ತು‌ ಖಾಸಗಿ ಬಸ್​ಗಳಲ್ಲಿ ಹಾಗೂ ಇನ್ನಿತರೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು, ಬೈಕ್ ಸವಾರರು ಜೊತೆಗೆ ಪಾದಚಾರಿಗಳು ಮಾಸ್ಕ್ ಧರಿಸದೆ ಇದ್ದರೆ ಸ್ಥಳದಲ್ಲೇ ದಂಡ ವಿಧಿಸಿ ಅರಿವು ಮೂಡಿಸಬೇಕು ಎಂದು ಸೂಚಿಸಿದ್ದಾರೆ.‌

if-failed-to-follow-the-covid-rules-store-license-will-cancellation-in-chamarajanagara
ಸುತ್ತೋಲೆ

ಮುಂಚೂಣಿ ವಾರಿಯರ್ಸ್​ ಲಸಿಕೆ ಹಾಕಿಸಿಕೊಂಡಿರುವುದನ್ನು ಖಾತ್ರಿಪಡಿಸಿಕೊಂಡು ನಗರಸಭೆ ಆಯುಕ್ತರು, ಮುಖ್ಯಾಧಿಕಾರಿಗಳು ವರದಿ ನೀಡುವಂತೆ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.‌ 45 ವರ್ಷ ಮೇಲ್ಪಟ್ಟವರು‌ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಓದಿ: ಆರನೇ ವೇತನ ಆಯೋಗ ಜಾರಿಯಾಗೋವರೆಗೂ ಹೋರಾಟ ನಿರಂತರ: ನೀರಲಕೇರಿ

ಚಾಮರಾಜನಗರ: ವ್ಯಾಪಾರಿಗಳು ಮಾಸ್ಕ್ ಹಾಕಿಕೊಳ್ಳದೆ ವ್ಯವಹರಿಸಿದರೆ ಅಂಗಡಿ ಪರವಾನಗಿಯನ್ನೇ ರದ್ದುಗೊಳಿಸಲು‌ ಡಿಸಿ ನಿರ್ದೇಶನದಂತೆ ಯೋಜನಾ ನಿರ್ದೇಶಕರು ಮುಂದಾಗಿದ್ದಾರೆ.‌

ಈ ಕುರಿತು ಇಂದು ಯೋಜನಾ ನಿರ್ದೇಶಕ ಕೆ.ಸುರೇಶ್, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಮಾಸ್ಕ್ ಧರಿಸದೆ ಗ್ರಾಹಕರೊಂದಿಗೆ ವ್ಯವಹರಿಸುವ ಅಂಗಡಿ, ಮಳಿಗೆ ವ್ಯಾಪಾರಿಗಳಿಗೆ ದುಪ್ಪಟ್ಟು ದಂಡ ವಿಧಿಸಿ, ಅಂಗಡಿಗಳನ್ನು ಮುಚ್ಚಿ ವ್ಯಾಪಾರ ಪರವಾನಗಿಯನ್ನೇ ರದ್ದುಗೊಳಿಸುವಂತೆ ಸೂಚಿಸಿದ್ದಾರೆ.

ಯೋಜನಾ ನಿರ್ದೇಶಕ ಕೆ.ಸುರೇಶ್

ಪೊಲೀಸ್ ಇಲಾಖೆ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಸರ್ಕಾರಿ ಮತ್ತು‌ ಖಾಸಗಿ ಬಸ್​ಗಳಲ್ಲಿ ಹಾಗೂ ಇನ್ನಿತರೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು, ಬೈಕ್ ಸವಾರರು ಜೊತೆಗೆ ಪಾದಚಾರಿಗಳು ಮಾಸ್ಕ್ ಧರಿಸದೆ ಇದ್ದರೆ ಸ್ಥಳದಲ್ಲೇ ದಂಡ ವಿಧಿಸಿ ಅರಿವು ಮೂಡಿಸಬೇಕು ಎಂದು ಸೂಚಿಸಿದ್ದಾರೆ.‌

if-failed-to-follow-the-covid-rules-store-license-will-cancellation-in-chamarajanagara
ಸುತ್ತೋಲೆ

ಮುಂಚೂಣಿ ವಾರಿಯರ್ಸ್​ ಲಸಿಕೆ ಹಾಕಿಸಿಕೊಂಡಿರುವುದನ್ನು ಖಾತ್ರಿಪಡಿಸಿಕೊಂಡು ನಗರಸಭೆ ಆಯುಕ್ತರು, ಮುಖ್ಯಾಧಿಕಾರಿಗಳು ವರದಿ ನೀಡುವಂತೆ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.‌ 45 ವರ್ಷ ಮೇಲ್ಪಟ್ಟವರು‌ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಓದಿ: ಆರನೇ ವೇತನ ಆಯೋಗ ಜಾರಿಯಾಗೋವರೆಗೂ ಹೋರಾಟ ನಿರಂತರ: ನೀರಲಕೇರಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.