ಚಾಮರಾಜನಗರ: ರಾಜ್ಯ ಸರ್ಕಾರದ ನಿರ್ದೇಶನದಂತೆ ಕೈಗೊಳ್ಳುತ್ತಿರುವ ಪ್ರತಿ ಭಾನುವಾರದ ಲಾಕ್ ಡೌನ್ಗೆ ಮೂರನೇ ವಾರವೂ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೆಡಿಕಲ್ಸ್ ಮತ್ತು ಹಾಲು ಮಾರಾಟ ಕೇಂದ್ರ ಹೊರತುಪಡಿಸಿ, ಎಲ್ಲಾ ವಾಣಿಜ್ಯ ಚಟುವಟಿಕೆಗಳು ಬಂದ್ ಆಗಿವೆ. ಕೆಎಸ್ಆರ್ಟಿಸಿ ಬಸ್ ಗಳು ಸಂಚಾರ ನಿಲ್ಲಿಸಿದ್ದರಿಂದ ಬಸ್ ನಿಲ್ದಾಣ ಖಾಲಿ-ಖಾಲಿಯಾಗಿದೆ. ಖಾಸಗಿ ಬಸ್ ಗಳು, ಆಟೋಗಳು ರಸ್ತೆಗಿಳಿಯದಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿವೆ.
ಕಳೆದ ಎರಡು ಭಾನುವಾರವು ಕೂಡ ಗಡಿ ಜಿಲ್ಲೆಯ ಜನರು ಸಂಡೇ ಲಾಕ್ಡೌನ್ ಗೆ ಉತ್ತಮ ಬೆಂಬಲ ನೀಡಿದ್ದರು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಿಸುತ್ತಿರುವುದು ಕೂಡ ಜನರ ಈ ಬೆಂಬಲಕ್ಕೆ ಕಾರಣ ಇರಬಹುದು.