ETV Bharat / state

ಅಂತೂ ಇಂತೂ ನರಹಂತಕ ಹುಲಿ ಸೆರೆ: ನಿಟ್ಟುಸಿರು ಬಿಟ್ಟ ಜನತೆ

ಕಳೆದ ಒಂದೂವರೆ ತಿಂಗಳಿನಿಂದ ಜನರ ನಿದ್ರೆಗೆಡಿಸಿದ್ದ ನರಹಂತಕ ಹುಲಿ ಇಬ್ಬರನ್ನು ಬಲಿ ಪಡೆದು, ಆನೆಮರಿ ಸೇರಿದಂತೆ ಹತ್ತಾರು ಜಾನುವಾರುಗಳನ್ನು ಕೊಂದು ತಿಂದಿತ್ತು. ಕಳೆದ ಬಾರಿ 30 ದಿನಗಳ ಕಾರ್ಯಾಚರಣೆ ನಡೆಸಿದರೂ ಅರಣ್ಯ ಇಲಾಖೆಗೆ ನರಹಂತಕ ಹುಲಿ ಚಳ್ಳೆಹಣ್ಣು ತಿನ್ನಿಸಿದ್ದ. ಆದರೆ, ಈ ಬಾರಿ ಅರಣ್ಯ ಇಲಾಖೆಯ ತೀವ್ರ ಕಾರ್ಯಾಚರಣೆಯಿಂದ 5 ನೇ ದಿನ ಸೆರೆಯಾಗಿದೆ.

author img

By

Published : Oct 13, 2019, 4:30 PM IST

Updated : Oct 13, 2019, 5:19 PM IST

ಅಂತೂ ಇಂತೂ ನರಹಂತಕ ಹುಲಿ ಸೆರೆ

ಚಾಮರಾಜನಗರ: ನರಹಂತಕ ಹುಲಿಗೆ ಅರಿವಳಿಕೆ ಮದ್ದು ನೀಡುವ ಮೂಲಕ ವ್ಯಾಘ್ರನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಮಗುವಿನಹಳ್ಳಿಯ ಸಿದ್ದಿಕಿ ಎಂಬುವರ ಜಮೀನಿನಲ್ಲಿ ಕಾಣಿಸಿಕೊಂಡ ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿ ಸೆರೆಹಿಡಿಯಲಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ನಿದ್ರೆಗೆಡಿಸಿದ್ದ ನರಹಂತಕ ಹುಲಿ ಇಬ್ಬರನ್ನು ಬಲಿ ಪಡೆದು, ಆನೆಮರಿ ಸೇರಿದಂತೆ ಹತ್ತಾರು ಜಾನುವಾರುಗಳನ್ನು ಕೊಂದು ತಿಂದಿತ್ತು. ಕಳೆದ ಬಾರಿ 30 ದಿನಗಳ ಕಾರ್ಯಾಚರಣೆ ನಡೆಸಿದರೂ ಅರಣ್ಯ ಇಲಾಖೆಗೆ ನರಹಂತಕ ಹುಲಿ ಚಳ್ಳೆಹಣ್ಣು ತಿನ್ನಿಸಿದ್ದ. ಆದರೆ, ಈ ಬಾರಿ ಅರಣ್ಯ ಇಲಾಖೆಯ ತೀವ್ರ ಕಾರ್ಯಾಚರಣೆಯಿಂದ 5 ನೇ ದಿನಕ್ಕೆ ಸೆರೆಯಾಗಿದೆ.

ತೀವ್ರ ಕಾರ್ಯಾಚರಣೆಯಿಂದ 5 ನೇ ದಿನಕ್ಕೆ ಸೆರೆಯಾದ ಹುಲಿ

ಬಂಡೀಪುರ ಕ್ಯಾಂಪಿನಲ್ಲಿದ್ದ ರಾಣಾ ನಾಯಿಯನ್ನು ಹುಲಿ ಸೆರೆಹಿಡಿಯುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಇಬ್ಬರನ್ನು ಬಲಿಪಡೆದ ವ್ಯಾಘ್ರನಿಂದಾಗಿ ಹಲವು ಗ್ರಾಮಗಳ ಜನರು ಆತಂಕಗೊಂಡಿದ್ದರು. ಈಗ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.

ಚಾಮರಾಜನಗರ: ನರಹಂತಕ ಹುಲಿಗೆ ಅರಿವಳಿಕೆ ಮದ್ದು ನೀಡುವ ಮೂಲಕ ವ್ಯಾಘ್ರನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಮಗುವಿನಹಳ್ಳಿಯ ಸಿದ್ದಿಕಿ ಎಂಬುವರ ಜಮೀನಿನಲ್ಲಿ ಕಾಣಿಸಿಕೊಂಡ ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿ ಸೆರೆಹಿಡಿಯಲಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ನಿದ್ರೆಗೆಡಿಸಿದ್ದ ನರಹಂತಕ ಹುಲಿ ಇಬ್ಬರನ್ನು ಬಲಿ ಪಡೆದು, ಆನೆಮರಿ ಸೇರಿದಂತೆ ಹತ್ತಾರು ಜಾನುವಾರುಗಳನ್ನು ಕೊಂದು ತಿಂದಿತ್ತು. ಕಳೆದ ಬಾರಿ 30 ದಿನಗಳ ಕಾರ್ಯಾಚರಣೆ ನಡೆಸಿದರೂ ಅರಣ್ಯ ಇಲಾಖೆಗೆ ನರಹಂತಕ ಹುಲಿ ಚಳ್ಳೆಹಣ್ಣು ತಿನ್ನಿಸಿದ್ದ. ಆದರೆ, ಈ ಬಾರಿ ಅರಣ್ಯ ಇಲಾಖೆಯ ತೀವ್ರ ಕಾರ್ಯಾಚರಣೆಯಿಂದ 5 ನೇ ದಿನಕ್ಕೆ ಸೆರೆಯಾಗಿದೆ.

ತೀವ್ರ ಕಾರ್ಯಾಚರಣೆಯಿಂದ 5 ನೇ ದಿನಕ್ಕೆ ಸೆರೆಯಾದ ಹುಲಿ

ಬಂಡೀಪುರ ಕ್ಯಾಂಪಿನಲ್ಲಿದ್ದ ರಾಣಾ ನಾಯಿಯನ್ನು ಹುಲಿ ಸೆರೆಹಿಡಿಯುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಇಬ್ಬರನ್ನು ಬಲಿಪಡೆದ ವ್ಯಾಘ್ರನಿಂದಾಗಿ ಹಲವು ಗ್ರಾಮಗಳ ಜನರು ಆತಂಕಗೊಂಡಿದ್ದರು. ಈಗ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.

Intro:ಅಂತೂ ಇಂತೂ ಹುಲಿ ಸೆರೆ: ನರಹಂತಕ ವ್ಯಾಘ್ರನೇ ಎಂಬುದಕ್ಕೇ ನಡೀತಿದೆ ಪರೀಕ್ಷೆ!


ಚಾಮರಾಜನಗರ: ಹುಲಿಯೊಂದಕ್ಕೆ ಅರವಳಿಕೆ ಮದ್ದು ನೀಡುವ ಮೂಲಕ ವ್ಯಾಘ್ರನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

Body:ಮಗುವಿನಹಳ್ಳಿಯ ಸಿದ್ದೀಕಿ ಎಂಬವರ ಜಮೀನಿನಲ್ಲಿ ಬಳಿ ಹುಲಿಯನ್ನು ಟ್ರಾಂಕಲೈಸಿಂಗ್ ಗನ್ ಮೂಲಕ ಅರವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಹುಲಿಯನ್ನು ಸೆರೆಹಿಡಿಯಲಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ನಿದ್ರೆಗೆಡಿಸಿದ್ದ ನರಹಂತಕ ಹುಲಿ ಈತನೇ ಎಂಬುದನ್ನು ದೃಢಪಡಿಸಿಕೊಳ್ಳಲು ರಕ್ತ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.


ಹುಲಿ ಸೆರೆಯಾದ ಜಾಗಕ್ಕೆ ಅಧಿಕಾರಿಗಳ‌ ಹೊರತಾಗಿ ಎಲ್ಲರ ಪ್ರವೇಶ ನಿರ್ಭಂದಿಸಿದ್ದು ಕೆಲವು ತಾಸುಗಳಲ್ಲಿ ಹುಲಿ ಯಾವುದೆಂದು ಸಿಎಫ್ಒ ಧೃಡಪಡಿಸಲಿದ್ದಾರೆ.

Conclusion:ಬಂಡೀಪುರ ಕ್ಯಾಂಪಿನಲ್ಲಿದ್ದ ರಾಣಾ ನಾಯಿಯನ್ನು ಇಂದು ಬಳಸಿಕೊಳ್ಳಲಾಗಿತ್ತು. ಇಬ್ಬರನ್ನು ಬಲಿಪಡೆದ ವ್ಯಾಘ್ರನಿಂದಾಗಿ ೪-೫ ಗ್ರಾಮಗಳ ಜನರನ್ನು ಆತಂಕಗೊಳಿಸಿತ್ತು. ಕಳೆದ ಬಾರಿ ೩೦ ದಿನಗಳ ಕಾರ್ಯಾಚರಣೆ ನಡೆಸಿದರೂ ಅರಣ್ಯ ಇಲಾಖೆ ನರಹಂತಕ ಚಳ್ಳೆ ಹಣ್ಣು ತಿನಿಸಿದ್ದ.
Last Updated : Oct 13, 2019, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.