ETV Bharat / state

ಜಿ.ಎನ್.ನಂಜುಂಡಸ್ವಾಮಿಗೆ ಮಾಹಿತಿ ಇಲ್ಲ: ಮಾಜಿ ಸಂಸದ ದ್ರುವ ನಾರಾಯಣ​​ ಟಾಂಗ್​​​ - ಮಾಜಿ ಶಾಸಕ ಜಿಎನ್ ನಂಜುಂಡಸ್ವಾಮಿ

ಅವಿವೇಕಿ ಹಾಗೂ ಅರೆ ಪ್ರಜ್ಞಾವಂತರಾಗಿರುವ ದ್ರುವ ನಾರಾಯಣ ಕೇಂದ್ರ ಸರ್ಕಾರದ ವಿರುದ್ದ ಇಲ್ಲಸಲದ ಆರೋಪ ‌ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ ಮಾತಿಗೆ ಮಾಜಿ ಸಂಸದರು ಪ್ರತ್ಯುತ್ತರ ನೀಡಿದ್ದಾರೆ.

druvanarayana-reaction-on-gn-nanjundaswamy-statement
ಮಾಜಿ ಸಂಸದ ಧ್ರುವನಾರಾಯಣ್
author img

By

Published : May 2, 2020, 11:39 AM IST

ಕೊಳ್ಳೇಗಾಲ: ಮಾಜಿ ಸಂಸದ ದ್ರುವ ನಾರಾಯಣ​​ ಅವರ ಕುರಿತು ಅವಿವೇಕಿ ಹಾಗೂ ಅರೆ ಪ್ರಜ್ಞಾವಂತ, ಕೇಂದ್ರ ಸರ್ಕಾರ ವಿರುದ್ದ ಇಲ್ಲಸಲ್ಲದ ಆರೋಪ ‌ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ ಮಾತಿಗೆ ದ್ರುವ ನಾರಾಯಣ ಟಾಂಗ್ ನೀಡಿದ್ದಾರೆ.

ಜಿ.ಎನ್. ನಂಜುಂಡಸ್ವಾಮಿ ಮಾತಿಗೆ ಮಾಜಿ ಸಂಸದ ದ್ರುವ ನಾರಾಯಣ​ ಪ್ರತ್ಯುತ್ತರ

ಕೇಂದ್ರ ಸರ್ಕಾರ, ಮಲ್ಯ, ನೀರವ್ ಮೋದಿ, ಇನ್ನಿತರ ಉದ್ಯಮಿಗಳ 68 ಸಾವಿರ ಕೋಟಿ ಸಾಲದ‌ ಹಣವನ್ನು ವಜಾ ಮಾಡಿದೆ ಎಂಬುದು ತಿಳಿದುಬಂದಿದೆ. ಈ‌ ಬಗ್ಗೆ ನಾನು‌ ಮಾತನಾಡಿದ್ದೇನೆ. ಬಹುಶಃ ನಂಜುಂಡಸ್ವಾಮಿಗೆ ಈ ಬಗ್ಗೆ ಮಾಹಿತಿ ಇಲ್ಲದಂತೆ ಕಾಣುತ್ತಿದೆ ಎಂದು ದ್ರುವ ನಾರಾಯಣ​ ಹೇಳಿದ್ರು.

ಮಾಜಿ ಶಾಸಕ ಬಾಲರಾಜು, ದ್ರುವ ನಾರಾಯಣ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅವರೊಬ್ಬ ದಕ್ಷ ರಾಜಕಾರಣಿ. ಅವರ ಬಗ್ಗೆ ಮಾತನಾಡುವ ನೈತಿಕತೆ ನಂಜುಂಡಸ್ವಾಮಿಗೆ ಇಲ್ಲ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿರುವ ವಿಚಾರದಲ್ಲಿ ಪರವಹಿಸಿ ಮಾತನಾಡುವುದು ಒಂದು ದೇಶ ದ್ರೋಹದ ಕೆಲಸ‌ ಎಂದು ಕಿಡಿಕಾರಿದರು.

ಕೊಳ್ಳೇಗಾಲ: ಮಾಜಿ ಸಂಸದ ದ್ರುವ ನಾರಾಯಣ​​ ಅವರ ಕುರಿತು ಅವಿವೇಕಿ ಹಾಗೂ ಅರೆ ಪ್ರಜ್ಞಾವಂತ, ಕೇಂದ್ರ ಸರ್ಕಾರ ವಿರುದ್ದ ಇಲ್ಲಸಲ್ಲದ ಆರೋಪ ‌ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ ಮಾತಿಗೆ ದ್ರುವ ನಾರಾಯಣ ಟಾಂಗ್ ನೀಡಿದ್ದಾರೆ.

ಜಿ.ಎನ್. ನಂಜುಂಡಸ್ವಾಮಿ ಮಾತಿಗೆ ಮಾಜಿ ಸಂಸದ ದ್ರುವ ನಾರಾಯಣ​ ಪ್ರತ್ಯುತ್ತರ

ಕೇಂದ್ರ ಸರ್ಕಾರ, ಮಲ್ಯ, ನೀರವ್ ಮೋದಿ, ಇನ್ನಿತರ ಉದ್ಯಮಿಗಳ 68 ಸಾವಿರ ಕೋಟಿ ಸಾಲದ‌ ಹಣವನ್ನು ವಜಾ ಮಾಡಿದೆ ಎಂಬುದು ತಿಳಿದುಬಂದಿದೆ. ಈ‌ ಬಗ್ಗೆ ನಾನು‌ ಮಾತನಾಡಿದ್ದೇನೆ. ಬಹುಶಃ ನಂಜುಂಡಸ್ವಾಮಿಗೆ ಈ ಬಗ್ಗೆ ಮಾಹಿತಿ ಇಲ್ಲದಂತೆ ಕಾಣುತ್ತಿದೆ ಎಂದು ದ್ರುವ ನಾರಾಯಣ​ ಹೇಳಿದ್ರು.

ಮಾಜಿ ಶಾಸಕ ಬಾಲರಾಜು, ದ್ರುವ ನಾರಾಯಣ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅವರೊಬ್ಬ ದಕ್ಷ ರಾಜಕಾರಣಿ. ಅವರ ಬಗ್ಗೆ ಮಾತನಾಡುವ ನೈತಿಕತೆ ನಂಜುಂಡಸ್ವಾಮಿಗೆ ಇಲ್ಲ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿರುವ ವಿಚಾರದಲ್ಲಿ ಪರವಹಿಸಿ ಮಾತನಾಡುವುದು ಒಂದು ದೇಶ ದ್ರೋಹದ ಕೆಲಸ‌ ಎಂದು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.