ETV Bharat / state

ಸಿದ್ದರಾಮಯ್ಯ ಸಿಎಂ ಆಗುವುದು ಕನಸಿನ ಮಾತು: ಸಂಸದ ವಿ.ಶ್ರೀ

author img

By

Published : Oct 29, 2020, 4:57 PM IST

ಚುನಾವಣೆಗೆ ಇನ್ನು ಎರಡೂವರೆ ವರ್ಷವಿದೆ. ಈಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ ಎಂದು ಸಂಸದ ವಿ‌‌.ಶ್ರೀನಿವಾಸಪ್ರಸಾದ್ ವ್ಯಂಗ್ಯವಾಡಿದ್ದಾರೆ.

MP V Srinivasaprasad
ಸಂಸದ ವಿ.ಶ್ರೀನಿವಾಸಪ್ರಸಾದ್

ಚಾಮರಾಜನಗರ: ಸಿದ್ದರಾಮಯ್ಯ ಮತ್ತೇ ಸಿಎಂ ಆಗುವುದು ಕನಸಿನ ಮಾತು ಎಂದು ಸಂಸದ ವಿ‌‌.ಶ್ರೀನಿವಾಸಪ್ರಸಾದ್ ಕುಟುಕಿದರು.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚುನಾವಣೆಗೆ ಇನ್ನು ಎರಡೂವರೆ ವರ್ಷವಿದೆ. ಈಗಲೇ ಅವರು ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ಅವರು ಮತ್ತೆ ಸಿಎಂ ಕನಸಿನ ಮಾತು ಎಂದು ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆಂಬ ಮಾತುಗಳಿಗೆ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗುವುದು ಕನಸಿನ ಮಾತು: ಸಂಸದ ವಿ.ಶ್ರೀ

ಯಾವ ಸಿಎಂ ಕೂಡ ಎರಡು ಕಡೆ ಸ್ಪರ್ಧೆ ಮಾಡಲ್ಲ. ಬಾದಾಮಿಯಲ್ಲಿ 1600 ಮತದಿಂದ ಗೆಲ್ಲದಿದ್ದರೇ ಎಚ್.ಸಿ.ಮಹಾದೇವಪ್ಪ, ಧ್ರುವನಾರಯಣ ರೀತಿ ಎಲ್ಲಾದರೂ ಅವಿತುಕೊಳ್ಳುತ್ತಿದ್ದರು. ಅತ್ತು ಕರೆದು ವಿರೋಧ ಪಕ್ಷದ ನಾಯಕರಾಗಿದ್ದು, ಆ ಕೆಲಸ ಮಾಡಿಕೊಂಡು ಹೋಗಲಿ ಎಂದರು.

ಚಾಮರಾಜನಗರ: ಸಿದ್ದರಾಮಯ್ಯ ಮತ್ತೇ ಸಿಎಂ ಆಗುವುದು ಕನಸಿನ ಮಾತು ಎಂದು ಸಂಸದ ವಿ‌‌.ಶ್ರೀನಿವಾಸಪ್ರಸಾದ್ ಕುಟುಕಿದರು.

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಚುನಾವಣೆಗೆ ಇನ್ನು ಎರಡೂವರೆ ವರ್ಷವಿದೆ. ಈಗಲೇ ಅವರು ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ಅವರು ಮತ್ತೆ ಸಿಎಂ ಕನಸಿನ ಮಾತು ಎಂದು ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆಂಬ ಮಾತುಗಳಿಗೆ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗುವುದು ಕನಸಿನ ಮಾತು: ಸಂಸದ ವಿ.ಶ್ರೀ

ಯಾವ ಸಿಎಂ ಕೂಡ ಎರಡು ಕಡೆ ಸ್ಪರ್ಧೆ ಮಾಡಲ್ಲ. ಬಾದಾಮಿಯಲ್ಲಿ 1600 ಮತದಿಂದ ಗೆಲ್ಲದಿದ್ದರೇ ಎಚ್.ಸಿ.ಮಹಾದೇವಪ್ಪ, ಧ್ರುವನಾರಯಣ ರೀತಿ ಎಲ್ಲಾದರೂ ಅವಿತುಕೊಳ್ಳುತ್ತಿದ್ದರು. ಅತ್ತು ಕರೆದು ವಿರೋಧ ಪಕ್ಷದ ನಾಯಕರಾಗಿದ್ದು, ಆ ಕೆಲಸ ಮಾಡಿಕೊಂಡು ಹೋಗಲಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.