ETV Bharat / state

'ಭಿಕ್ಷೆಯ ಅಕ್ಕಿ ಮಾದಪ್ಪನಿಗೆ - ನಿಮ್ಮ ವೋಟು ನನ್ನ ಪತ್ನಿಗೆ'... ಕೈಯಲ್ಲಿ ಕಂಸಾಳೆ ಹಿಡಿದು ವಿನೂತನ ಮತಯಾಚನೆ

ಗ್ರಾಮ ಪಂಚಾಯತ್​ ಚುನಾವಣೆ ಈ ಬಾರಿ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ. ಜನರೂ ಸಹ ಈ ಬಾರಿಯ ಚುನಾವಣೆಗೆ ಉತ್ಸುಕತೆ ತೋರಿದ್ದಾರೆ. ಅಂತೆಯೇ ಅಭ್ಯರ್ಥಿಗಳ ಪರ ಮತಯಾಚನೆ ಸಹಾ ಜೋರಾಗಿದೆ. ಮತಯಾಚನೆಯಲ್ಲೂ ವಿವಿಧತೆ ಕಂಡುಕೊಂಡ ಜನ ವಿಶಿಷ್ಟವಾಗಿ ಕ್ಯಾಂಪೇನ್​ ಮಾಡುತ್ತಿದ್ದಾರೆ.. ಇಲ್ಲೊಬ್ಬ ವ್ಯಕ್ತಿಯ ಅದಕ್ಕೆ ಸಾಕ್ಷಿಯಾಗಿದ್ದಾರೆ..

author img

By

Published : Dec 23, 2020, 3:35 PM IST

Updated : Dec 23, 2020, 6:00 PM IST

chamarajanagar
ಚಾಮರಾಜನಗರ

ಚಾಮರಾಜನಗರ: ತಂದನಾ‌ ತಾನನ- ತಂದನಾನಾ ತಾನನ ವೋಟು ಹಾಕಿ ಗೆಲ್ಲಿಸಿ, ಗ್ರಾಮದ ಅಭಿವೃದ್ಧಿ ನೋಡಿ.. ಎಂದು ಕೊರಳಲ್ಲಿ ನಾಮಪತ್ರ ಹಾಕಿಕೊಂಡು, ಕೈಯಲ್ಲಿ ಕಂಸಾಳೆ ಬಾರಿಸುತ್ತಾ ಪತ್ನಿ ಪರ ಮತಯಾಚಿಸುತ್ತಿರುವ ವ್ಯಕ್ತಿ.

ವಿನೂತನ ಮತಯಾಚನೆ ಮಾಡುತ್ತಿರುವ ಬ್ಯಾಂಗೇಗೌಡ

ಹೌದು, ಹೀಗೆ ಪ್ರಚಾರ ಮಾಡುತ್ತಿರುವ ವ್ಯಕ್ತಿ ಹನೂರು ತಾಲೂಕಿನ‌ ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ 5 ನೇ ವಾರ್ಡ್​ನಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಜಯಮ್ಮ ಅವರ ಪತಿ ಬ್ಯಾಂಗೇಗೌಡ. ತಮ್ಮ ವಿನೂತನ ಶೈಲಿಯ ಪ್ರಚಾರಕ್ಕೆ ಇಳಿದು ಮತದಾರರನ್ನು ಸೆಳೆಯುತ್ತಿದ್ದಾರೆ.

ಜೋಳಿಗೆ ತುಂಬಾ ಕರಪತ್ರಗಳನ್ನು ತುಂಬಿಕೊಂಡು ಕೊರಳಿಗೂ ಕರಪತ್ರ ಅಂಟಿಸಿಕೊಂಡು 'ಮಾದಪ್ಪನಿಗೆ ಅಕ್ಕಿ ಕೊಡಿ - ವೋಟು ನನ್ನ ಪತ್ನಿಗೆ ಕೊಡಿ' ಎಂದು ಮನೆಮನೆ, ಬೀದಿ ಬೀದಿ ತಿರುಗುತ್ತಿದ್ದಾರೆ. ಸಿಲಿಂಡರ್ ಗುರುತು ಮರೆಯದಿರಿ ಎಂದು ಕಂಸಾಳೆ ಬಾರಿಸುತ್ತಾ, ಗ್ರಾಮಾಭಿವೃದ್ದಿಯನ್ನು ಮರೆಯುವುದಿಲ್ಲ ಎಂದು ವಾಗ್ದಾನ ನೀಡುವ ಮೂಲಕ ವಿನೂತನ ಪ್ರಚಾರಕ್ಕೆ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಪರಿಸರ ಸಂರಕ್ಷಣೆ ಜಾಗೃತಿ ಕುರಿತಾದ ವಿಡಿಯೋ ಚಿತ್ರೀಕರಣದಲ್ಲಿ ಪವರ್ ಸ್ಟಾರ್​​​​​​​​​​​​​​​​​​​​​​​​​​​​​

ಕಳೆದ ಬಾರಿಯ ಚುನಾವಣೆಯಲ್ಲಿ ಪತ್ನಿ ಜಯಮ್ಮ ಕಣಕ್ಕಿಳಿದು ಪರಾಭವಗೊಂಡಿದ್ದರು. ಆದ್ದರಿಂದ, ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಪತಿ ಬ್ಯಾಂಗೇಗೌಡ ಕಂಸಾಳೆ ಹಿಡಿದು ಮತ ಭಿಕ್ಷೆ ಕೇಳುತ್ತಿದ್ದಾರೆ. ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದ ಕಲಾವಿದರೊಬ್ಬರು ತಂಬೂರಿ ಹಿಡಿದಿದ್ದರು. ಎರಡನೇ ಹಂತದ ಮತದಾನದಲ್ಲಿ ಬ್ಯಾಂಗೇಗೌಡ ಕಂಸಾಳೆ ಹಿಡಿದು ಮತಯಾಚಿಸುತ್ತಿದ್ದಾರೆ.

ಚಾಮರಾಜನಗರ: ತಂದನಾ‌ ತಾನನ- ತಂದನಾನಾ ತಾನನ ವೋಟು ಹಾಕಿ ಗೆಲ್ಲಿಸಿ, ಗ್ರಾಮದ ಅಭಿವೃದ್ಧಿ ನೋಡಿ.. ಎಂದು ಕೊರಳಲ್ಲಿ ನಾಮಪತ್ರ ಹಾಕಿಕೊಂಡು, ಕೈಯಲ್ಲಿ ಕಂಸಾಳೆ ಬಾರಿಸುತ್ತಾ ಪತ್ನಿ ಪರ ಮತಯಾಚಿಸುತ್ತಿರುವ ವ್ಯಕ್ತಿ.

ವಿನೂತನ ಮತಯಾಚನೆ ಮಾಡುತ್ತಿರುವ ಬ್ಯಾಂಗೇಗೌಡ

ಹೌದು, ಹೀಗೆ ಪ್ರಚಾರ ಮಾಡುತ್ತಿರುವ ವ್ಯಕ್ತಿ ಹನೂರು ತಾಲೂಕಿನ‌ ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ 5 ನೇ ವಾರ್ಡ್​ನಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಜಯಮ್ಮ ಅವರ ಪತಿ ಬ್ಯಾಂಗೇಗೌಡ. ತಮ್ಮ ವಿನೂತನ ಶೈಲಿಯ ಪ್ರಚಾರಕ್ಕೆ ಇಳಿದು ಮತದಾರರನ್ನು ಸೆಳೆಯುತ್ತಿದ್ದಾರೆ.

ಜೋಳಿಗೆ ತುಂಬಾ ಕರಪತ್ರಗಳನ್ನು ತುಂಬಿಕೊಂಡು ಕೊರಳಿಗೂ ಕರಪತ್ರ ಅಂಟಿಸಿಕೊಂಡು 'ಮಾದಪ್ಪನಿಗೆ ಅಕ್ಕಿ ಕೊಡಿ - ವೋಟು ನನ್ನ ಪತ್ನಿಗೆ ಕೊಡಿ' ಎಂದು ಮನೆಮನೆ, ಬೀದಿ ಬೀದಿ ತಿರುಗುತ್ತಿದ್ದಾರೆ. ಸಿಲಿಂಡರ್ ಗುರುತು ಮರೆಯದಿರಿ ಎಂದು ಕಂಸಾಳೆ ಬಾರಿಸುತ್ತಾ, ಗ್ರಾಮಾಭಿವೃದ್ದಿಯನ್ನು ಮರೆಯುವುದಿಲ್ಲ ಎಂದು ವಾಗ್ದಾನ ನೀಡುವ ಮೂಲಕ ವಿನೂತನ ಪ್ರಚಾರಕ್ಕೆ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಪರಿಸರ ಸಂರಕ್ಷಣೆ ಜಾಗೃತಿ ಕುರಿತಾದ ವಿಡಿಯೋ ಚಿತ್ರೀಕರಣದಲ್ಲಿ ಪವರ್ ಸ್ಟಾರ್​​​​​​​​​​​​​​​​​​​​​​​​​​​​​

ಕಳೆದ ಬಾರಿಯ ಚುನಾವಣೆಯಲ್ಲಿ ಪತ್ನಿ ಜಯಮ್ಮ ಕಣಕ್ಕಿಳಿದು ಪರಾಭವಗೊಂಡಿದ್ದರು. ಆದ್ದರಿಂದ, ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಪತಿ ಬ್ಯಾಂಗೇಗೌಡ ಕಂಸಾಳೆ ಹಿಡಿದು ಮತ ಭಿಕ್ಷೆ ಕೇಳುತ್ತಿದ್ದಾರೆ. ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದ ಕಲಾವಿದರೊಬ್ಬರು ತಂಬೂರಿ ಹಿಡಿದಿದ್ದರು. ಎರಡನೇ ಹಂತದ ಮತದಾನದಲ್ಲಿ ಬ್ಯಾಂಗೇಗೌಡ ಕಂಸಾಳೆ ಹಿಡಿದು ಮತಯಾಚಿಸುತ್ತಿದ್ದಾರೆ.

Last Updated : Dec 23, 2020, 6:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.