ETV Bharat / state

ತಾನೇ ಹಾಕಿದ ಕಬ್ಬಿನ ತರಗಿನ ಬೆಂಕಿಗೆ ಸಿಲುಕಿ ರೈತ ಸಾವು

author img

By

Published : Apr 22, 2021, 7:42 PM IST

ತನ್ನ ಜಮೀನಿನ ವ್ಯಾಪ್ತಿ ಮೀರಿ ಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಸಸಿ ಕಬ್ಬಿಗೆ ಬೆಂಕಿ ತಗುಲುವುದನ್ನು ಕಂಡು ರೈತ ನಂದಿಸುವಾಗ ಕೆಳಗೆ ಬಿದ್ದು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ರೈತ ಸಾವು
ರೈತ ಸಾವು

ಚಾಮರಾಜನಗರ: ಕಬ್ಬಿನ ತರಗಿಗೆ ಹಾಕಿದ್ದ ಬೆಂಕಿಗೆ ಸಿಲುಕಿ ರೈತನೋರ್ವ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಆಲೂರು ಹೊಮ್ಮ ಗ್ರಾಮದಲ್ಲಿ ನಡೆದಿದೆ.

ರೈತ ವೆಂಕಟರಂಗೇಗೌಡ(65) ಮೃತಪಟ್ಟಿರುವ ವೃದ್ಧ. ತಮಗೆ ಸೇರಿದ ಸರ್ವೆ ನಂ 60/2 ರ 27 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಕಟಾವು ಮಾಡಿದ ಬಳಿಕ ಇಂದು ಜಮೀನಿನಲ್ಲಿ ಕಬ್ಬಿನ ತರಗಿಗೆ ಬೆಂಕಿ ಹಾಕಿದ್ದಾರೆ.

ತನ್ನ ಜಮೀನಿನ ವ್ಯಾಪ್ತಿ ಮೀರಿ ಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಸಸಿ ಕಬ್ಬಿಗೆ ಬೆಂಕಿ ತಗುಲುವುದನ್ನು ತಡೆಯಲು ಹೋದಾಗ ಕೆಳಗೆ ಬಿದ್ದು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಮರಾಜನಗರ: ಕಬ್ಬಿನ ತರಗಿಗೆ ಹಾಕಿದ್ದ ಬೆಂಕಿಗೆ ಸಿಲುಕಿ ರೈತನೋರ್ವ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಆಲೂರು ಹೊಮ್ಮ ಗ್ರಾಮದಲ್ಲಿ ನಡೆದಿದೆ.

ರೈತ ವೆಂಕಟರಂಗೇಗೌಡ(65) ಮೃತಪಟ್ಟಿರುವ ವೃದ್ಧ. ತಮಗೆ ಸೇರಿದ ಸರ್ವೆ ನಂ 60/2 ರ 27 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಕಟಾವು ಮಾಡಿದ ಬಳಿಕ ಇಂದು ಜಮೀನಿನಲ್ಲಿ ಕಬ್ಬಿನ ತರಗಿಗೆ ಬೆಂಕಿ ಹಾಕಿದ್ದಾರೆ.

ತನ್ನ ಜಮೀನಿನ ವ್ಯಾಪ್ತಿ ಮೀರಿ ಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಸಸಿ ಕಬ್ಬಿಗೆ ಬೆಂಕಿ ತಗುಲುವುದನ್ನು ತಡೆಯಲು ಹೋದಾಗ ಕೆಳಗೆ ಬಿದ್ದು ಬೆಂಕಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.