ಚಾಮರಾಜನಗರ: ನೀರೆಂದು ಭಾವಿಸಿ ಸೀಮೆಎಣ್ಣೆ ಕುಡಿದು ಮೂರು ವರ್ಷದ ಬಾಲಕಿವೋರ್ವಳು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡರಪುರದಲ್ಲಿ ನಡೆದಿದೆ.
ರಕ್ಷಿತಾ ಮೃತಪಟ್ಟ ಬಾಲಕಿ. ಮೈಸೂರಿನಿಂದ ಅಜ್ಜಿ ಮನೆಗೆ ಬಂದಿದ್ದ ರಕ್ಷಿತಾ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ನೀರೆಂದು ಸೀಮೆಎಣ್ಣೆ ಸೇವಿಸಿದ್ದಳು.
ವಿಚಾರ ಅರಿತ ಪಾಲಕರು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಈ ಕುರಿತು ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.