ಚಾಮರಾಜನಗರ: ಜಿಲ್ಲಾ ಕೇಂದ್ರಕ್ಕೆ ಬಂದರೇ ಸಿಎಂ ಅಧಿಕಾರ ಕಳೆದುಕೊಳ್ಳಲಿದ್ದಾರೆಂಬ ಮೌಢ್ಯಕ್ಕೆ ಕಟ್ಟುಬಿದ್ದು ಮಲೆಮಹದೇಶ್ವರ ಬೆಟ್ಟಕ್ಕೆ ಬಂದರೂ ನಗರಕ್ಕೆ ಬಾರದ ಸಿಎಂ ಯಡಿಯೂರಪ್ಪ ವಿರುದ್ಧ ಜಿಲ್ಲೆಯ ಜನತೆ ಆಕ್ರೋಶ ಹೊರಹಾಕಿದ್ದಾರೆ.
![post in social media](https://etvbharatimages.akamaized.net/etvbharat/prod-images/9643987_350_9643987_1606191944561.png)
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಹತ್ತಾರು ಬಾರಿ ನಗರಕ್ಕೆ ಭೇಟಿ ನೀಡಿ ನೂರಾರು ಕೋಟಿ ರೂ. ಅನುದಾನ ನೀಡಿದ್ದರು. ಜೊತೆಗೆ 5 ವರ್ಷಗಳ ಕಾಲ ಆಡಳಿತ ನಡೆಸಿ ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗಲಿದೆ ಎಂಬ ಮೌಢ್ಯವನ್ನು ಅಳಿಸಿದ್ದರು. ಆದರೆ ಯಡಿಯೂರಪ್ಪ ಮಾತ್ರ ಅಧಿಕಾರ ವಹಿಸಿಕೊಂಡು 15 ತಿಂಗಳಾದರೂ ನಗರಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ. ಎರಡು ದಿನ ಜಿಲ್ಲಾ ಪ್ರವಾಸ ಕೈಗೊಂಡರೂ ಚಾಮರಾಜನಗರಕ್ಕೆ ಆಗಮಿಸದಿರುವುದು ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ.
![post in social media](https://etvbharatimages.akamaized.net/etvbharat/prod-images/kn-cnr-01-goback-av-7202614_24112020091618_2411f_1606189578_869.jpg)
ಗೋಬ್ಯಾಕ್ ಅಭಿಯಾನ
ಚಾಮರಾಜನಗರಕ್ಕೆ ಬರಲು ಹಿಂದೇಟು ಹಾಕುತ್ತಿರುವ ಸಿಎಂ ಯಡಿಯೂರಪ್ಪ ವಿರುದ್ಧ ಕೆಲ ನೆಟ್ಟಿಗರು ಗೋಬ್ಯಾಕ್ ಸಿಎಂ ಅಭಿಯಾನ ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರಕ್ಕೆ ಬರದೇ ಮೌಢ್ಯಕ್ಕೆ ಜೋತುಬಿದ್ದು ಜಿಲ್ಲೆಯ ಜನರಿಗೆ ಅವಮಾನಿಸಬೇಡಿ. ಜಿಲ್ಲೆಗೆ ಬರಬೇಕೆಂದರೇ ಪುಣ್ಯ ಮಾಡಿರಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
![post in social media](https://etvbharatimages.akamaized.net/etvbharat/prod-images/kn-cnr-01-goback-av-7202614_24112020091618_2411f_1606189578_839.jpg)
ಇದನ್ನೂ ಓದಿ: ನ. 24ರಿಂದ 3 ದಿನ ಮೈಸೂರು, ಚಾಮರಾಜನಗರ ಜಿಲ್ಲಾ ಪ್ರವಾಸ.. ಮುಖ್ಯಮಂತ್ರಿಗೆ ಮೌಢ್ಯ ಭೀತಿ!?