ETV Bharat / state

ಹುಲಿ, ಆನೆ ಬಳಿಕ ಚಿರತೆಯ ಭಯ: ಪ್ರತ್ಯೇಕ ಪ್ರಕರಣದಲ್ಲಿ 3 ಕುರಿ ಬಲಿ! - ಕಾಡು ಪ್ರಾಣಿಗಳ ತಿರುಗಾಟ

ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದ್ದು ಹುಲಿ, ಆನೆ ಬಳಿಕ ಈಗ ಚಿರತೆಯ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ತರು ಆತಂಕದಿಂದ ಜೀವನ ನಡೆಸುತ್ತಿದ್ದಾರೆ.

3 ಕುರಿ ಬಲಿ
author img

By

Published : Oct 26, 2019, 3:42 AM IST

ಚಾಮರಾಜನಗರ: ಪ್ರಾಣಿಗಳ ಉಪಟಳ ದಿನ ದಿನಕ್ಕೆ ಹೆಚ್ಚುತ್ತಿದ್ದು ನರಹಂತಕ ಹುಲಿ, ಪುಂಡಾನೆ ಬಳಿಕ ಈಗ ಚಿರತೆ ಹಾವಳಿ ಹೆಚ್ಚಾಗಿದೆ.

ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದ ಮಹೇಶ್ ಎಂಬುವರ ಮನೆಯ ಬಳಿ ಚಿರತೆ ದಾಳಿ ನಡೆಸಿ ಒಂದು ಮೇಕೆ,ಒಂದು ಕುರಿಯನ್ನು ಬಲಿ ಪಡೆದಿದೆ. ಇನ್ನು ಚಾಮರಾಜನಗರ ತಾಲೂಕಿನ ಬಿ‌.ಮಲ್ಲಯ್ಯನಪುರ ಗ್ರಾಮದ ಶಂಕರಪ್ಪ ಎಂಬವರ ಜಮೀನಿನಲ್ಲಿ ಕುರಿಮರಿಯೊಂದರ ಮೇಲೆ ಚಿರತೆ ದಾಳಿ ಮಾಡಿ ಅರ್ಧ ತಿಂದು ಪರಾರಿಯಾಗಿದೆ.

ಹನೂರು ತಾಲೂಕಿನ‌ ಅಜ್ಜಿಪುರ ರಸ್ತೆಯಲ್ಲಿ ಚಿರತೆಯೊಂದು ಕೆಲದಿನಗಳಿಂದ ರಸ್ತೆಯ ಪಕ್ಕವೇ ಬಂದು ನಿಲ್ಲುತ್ತಿದ್ದು ವಾಹನ ಸವಾರರನ್ನು ಆತಂಕಕ್ಕೀಡುಮಾಡಿದೆ‌. ತಮಿಳುನಾಡಿನ ಪುಂಡಾನೆ ದಾಳಿಯ ಆತಂಕದಲ್ಲಿದ್ದ ಜನತೆಗೆ, ಇಂದು ಚಿರತೆಗಳು ಹಾವಳಿ ನಡೆಸಿರುವುದು ಜನರನ್ನು ಮತ್ತಷ್ಟು ಗಾಬರಿಗೊಳಿಸಿದೆ.

ಚಾಮರಾಜನಗರ: ಪ್ರಾಣಿಗಳ ಉಪಟಳ ದಿನ ದಿನಕ್ಕೆ ಹೆಚ್ಚುತ್ತಿದ್ದು ನರಹಂತಕ ಹುಲಿ, ಪುಂಡಾನೆ ಬಳಿಕ ಈಗ ಚಿರತೆ ಹಾವಳಿ ಹೆಚ್ಚಾಗಿದೆ.

ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದ ಮಹೇಶ್ ಎಂಬುವರ ಮನೆಯ ಬಳಿ ಚಿರತೆ ದಾಳಿ ನಡೆಸಿ ಒಂದು ಮೇಕೆ,ಒಂದು ಕುರಿಯನ್ನು ಬಲಿ ಪಡೆದಿದೆ. ಇನ್ನು ಚಾಮರಾಜನಗರ ತಾಲೂಕಿನ ಬಿ‌.ಮಲ್ಲಯ್ಯನಪುರ ಗ್ರಾಮದ ಶಂಕರಪ್ಪ ಎಂಬವರ ಜಮೀನಿನಲ್ಲಿ ಕುರಿಮರಿಯೊಂದರ ಮೇಲೆ ಚಿರತೆ ದಾಳಿ ಮಾಡಿ ಅರ್ಧ ತಿಂದು ಪರಾರಿಯಾಗಿದೆ.

ಹನೂರು ತಾಲೂಕಿನ‌ ಅಜ್ಜಿಪುರ ರಸ್ತೆಯಲ್ಲಿ ಚಿರತೆಯೊಂದು ಕೆಲದಿನಗಳಿಂದ ರಸ್ತೆಯ ಪಕ್ಕವೇ ಬಂದು ನಿಲ್ಲುತ್ತಿದ್ದು ವಾಹನ ಸವಾರರನ್ನು ಆತಂಕಕ್ಕೀಡುಮಾಡಿದೆ‌. ತಮಿಳುನಾಡಿನ ಪುಂಡಾನೆ ದಾಳಿಯ ಆತಂಕದಲ್ಲಿದ್ದ ಜನತೆಗೆ, ಇಂದು ಚಿರತೆಗಳು ಹಾವಳಿ ನಡೆಸಿರುವುದು ಜನರನ್ನು ಮತ್ತಷ್ಟು ಗಾಬರಿಗೊಳಿಸಿದೆ.

Intro:ಹುಲಿ, ಆನೆ ಬಳಿಕ ಚಿರತೆ ಭಯ: ಪ್ರತ್ಯೇಕ ಪ್ರಕರಣದಲ್ಲಿ ೩ ಕುರಿ ಬಲಿ!


ಚಾಮರಾಜನಗರ: ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ನರಹಂತಕ ಹುಲಿ, ಪುಂಡಾನೆ ಬಳಿಕ ಈಗ ಚಿರತೆ ಹಾವಳಿ ಹೆಚ್ಚಾಗಿದೆ.

Body:ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ ಗ್ರಾಮದ ಮಹೇಶ್ ಎಂಬವರ ಜಮೀನಿನ ಮನೆಯ ಬಳಿ ಚಿರತೆ ದಾಳಿ ನಡೆಸಿ ಒಂದು ಮೇಕೆ,ಒಂದು ಕುರಿಯನ್ನು ಸಾಯಿಸಿದೆ.

ಇನ್ನು ಚಾಮರಾಜನಗರ ತಾಲೂಕಿನ ಬಿ‌.ಮಲ್ಲಯ್ಯನಪುರ ಗ್ರಾಮದ ಶಂಕರಪ್ಪ ಎಂಬವರ ಜಮೀನಿನಲ್ಲಿ ಕುರಿಮರಿಯೊಂದರ ಮೇಲೆ ದಾಳಿ ಅರ್ಧ ತಿಂದು ಚಿರತೆ ಪರಾರಿಯಾಗಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು ಚಿರತೆ ಸೆರೆಗೆ ಗ್ರಾಮದ ಪ್ರಭು ಒತ್ತಾಯಿಸಿದ್ದಾರೆ.

ಹನೂರು ತಾಲೂಕಿನ‌ ಅಜ್ಜಿಪುರ ರಸ್ತೆಯಲ್ಲಿ ಚಿರತೆವೊಂದು ಕೆಲದಿನಗಳಿಂದ ರಸ್ತೆಯ ಪಕ್ಕವೇ ಬಂದು ನಿಲ್ಲುತ್ತಿದ್ದು ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ‌.

Conclusion:ತಮಿಳುನಾಡಿನ ಪುಂಡಾನೆ ದಾಳಿ ಇಟ್ಟು ಆತಂಕದಲ್ಲಿದ್ದ ಜನತೆಗೆ ಇಂದು ಚಿರತೆಗಳು ಹಾವಳಿ ನಡೆಸಿರುವುದು ಜನರನ್ನು ಮತ್ತಷ್ಟು ಗಾಬರಿ ಗೊಳಿಸಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.