ಚಾಮರಾಜನಗರ: ಪ್ರತಿಷ್ಠಿತ ರಾಜಕೀಯ ಪಕ್ಷಗಳು ಮುಸುಕಿನ ಗುದ್ದಾಟ ನಡೆಸಿದ ಗ್ರಾಪಂ ಚುನಾವಣೆಯ ಮೊದಲನೆ ಹಂತ ಮುಕ್ತಾಯವಾಗಿದ್ದು, ಸ್ಟ್ರಾಂಗ್ ರೂಮ್ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.
ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ ನಡೆದ ಚುನಾವಣೆಯಲ್ಲಿ ಮತದಾರರು ಭರ್ಜರಿ ಪ್ರತಿಕ್ರಿಯೆಯನ್ನೇ ನೀಡಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಉತ್ಸಾಹದಾಯಕ ಮತದಾನ ಕಂಡುಬಂತು.
ವೃದ್ಧರ ಹವಾ-ಭೂರಿ ಭೋಜನ: ಜನತಂತ್ರದ ಹಬ್ಬದಲ್ಲಿ ಯುವಕರು ನಾಚುವಂತೆ ಹಿರಿಯ ನಾಗರಿಕರು ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು. ಇವರಲ್ಲಿ, ಮಲ್ಲಯ್ಯನಪುರ ಗ್ರಾಮದ ಮುದ್ದಮ್ಮ ಸಿದ್ದೇಗೌಡ ಮತ್ತು ಹಿರೇಬೇಗೂರಿನ ಮಾದಮ್ಮ ಎಂಬ ಶತಾಯುಷಿ ತಾಯಂದಿರು ಮತದಾನ ಮಾಡಿ ತಮ್ಮ ಆಸಕ್ತಿ ಇನ್ನು ಕುಂದಿಲ್ಲ ಎಂದು ಸಾಬೀತು ಪಡಿಸಿದರು. ಗಾಲಿಕುರ್ಚಿ ಸಹಾಯದಿಂದ ವಿಶೇಷ ಚೇತನರು ಮತದಾನ ಮಾಡಿ ತಾವು ಯಾರಿಗೂ ಕಮ್ಮಿಯಿಲ್ಲ ಎಂದು ತೋರಿಸಿದರು.
ಗಡಿಜಿಲ್ಲೆ ಗ್ರಾಮ ಸಮರ.. ಮತದಾನದಲ್ಲಿ ಗಮನ ಸೆಳೆದ ಅಂಶಗಳು ಇವು! - Chamarajanagar Grama panchayat Election 2020
ಕೆರೆಹಳ್ಳಿಯಲ್ಲಿ ಮತಗಟ್ಟೆ ಕೇಂದ್ರದ ಬಳಿ ಕುಡಿಕೆಗಳನ್ನು ಬಿಸಾಡಿ ಹೋಗಿದ್ದು ಹಲವು ಅಭ್ಯರ್ಥಿಗಳಿಗೆ, ಮತದಾರರಿಗೆ ನಡುಕ ಹುಟ್ಟಿಸಿತ್ತು. ಶ್ಯಾನಡ್ರಹಳ್ಳಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ, ಮೃತ್ಯಂಜಯ ಮನೆ ಮುಂದೆ ಹಾಗೂ ಪ್ರಮುಖ ಬೀದಿಗಳಲ್ಲಿ ನಿಂಬೆಹಣ್ಣು, ಕುಂಕುಮ, ಕುಡಿಕೆಗಳನ್ನು ಇಟ್ಟು ಭಯಭೀತಗೊಳಿಸಿದ್ದರು...
ಚಾಮರಾಜನಗರ: ಪ್ರತಿಷ್ಠಿತ ರಾಜಕೀಯ ಪಕ್ಷಗಳು ಮುಸುಕಿನ ಗುದ್ದಾಟ ನಡೆಸಿದ ಗ್ರಾಪಂ ಚುನಾವಣೆಯ ಮೊದಲನೆ ಹಂತ ಮುಕ್ತಾಯವಾಗಿದ್ದು, ಸ್ಟ್ರಾಂಗ್ ರೂಮ್ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.
ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲೂಕು ವ್ಯಾಪ್ತಿಯಲ್ಲಿ ನಡೆದ ಚುನಾವಣೆಯಲ್ಲಿ ಮತದಾರರು ಭರ್ಜರಿ ಪ್ರತಿಕ್ರಿಯೆಯನ್ನೇ ನೀಡಿದ್ದು, ಬೆಳಗ್ಗೆಯಿಂದ ಸಂಜೆವರೆಗೆ ಉತ್ಸಾಹದಾಯಕ ಮತದಾನ ಕಂಡುಬಂತು.
ವೃದ್ಧರ ಹವಾ-ಭೂರಿ ಭೋಜನ: ಜನತಂತ್ರದ ಹಬ್ಬದಲ್ಲಿ ಯುವಕರು ನಾಚುವಂತೆ ಹಿರಿಯ ನಾಗರಿಕರು ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು. ಇವರಲ್ಲಿ, ಮಲ್ಲಯ್ಯನಪುರ ಗ್ರಾಮದ ಮುದ್ದಮ್ಮ ಸಿದ್ದೇಗೌಡ ಮತ್ತು ಹಿರೇಬೇಗೂರಿನ ಮಾದಮ್ಮ ಎಂಬ ಶತಾಯುಷಿ ತಾಯಂದಿರು ಮತದಾನ ಮಾಡಿ ತಮ್ಮ ಆಸಕ್ತಿ ಇನ್ನು ಕುಂದಿಲ್ಲ ಎಂದು ಸಾಬೀತು ಪಡಿಸಿದರು. ಗಾಲಿಕುರ್ಚಿ ಸಹಾಯದಿಂದ ವಿಶೇಷ ಚೇತನರು ಮತದಾನ ಮಾಡಿ ತಾವು ಯಾರಿಗೂ ಕಮ್ಮಿಯಿಲ್ಲ ಎಂದು ತೋರಿಸಿದರು.