ETV Bharat / state

ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕ ನೀರು ಪಾಲು: ಪ್ರಕರಣ ದಾಖಲು - Cauvery River Man washed away

ಕಾವೇರಿ ನದಿಯಲ್ಲಿ (Cauvery River) ಸ್ನಾನಕ್ಕೆಂದು ತೆರಳಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು, ನದಿ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಶಿವನ ಸಮುದ್ರದಲ್ಲಿ ನಡೆದಿದೆ. ಯುವಕ ಕೋಲ್ಕತ್ತಾ ಮೂಲದವನು ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

a-young-man-washed-away-in-cauvery-river
ಯುವಕ ನೀರು ಪಾಲು
author img

By

Published : Nov 22, 2021, 7:18 AM IST

ಕೊಳ್ಳೇಗಾಲ: ಕಾವೇರಿ ನದಿಯಲ್ಲಿ (Cauvery River) ಸ್ನಾನ ಮಾಡಲು ತೆರಳಿದ್ದ ನಾಲ್ಕು ಜನ ಯುವಕರ ಪೈಕಿ ಒರ್ವ ಯುವಕ ನೀರು ಪಾಲಾಗಿರುವ ಘಟನೆ ಶಿವನ ಸಮುದ್ರದ ಬಳಿ ನಡೆದಿದೆ.

ಕೋಲ್ಕತ್ತಾ ಮೂಲದ ಮಹಮ್ಮದ್ ಪೈಜ಼ರ್ (21) ಕಾಲು ಜಾರಿ ಬಿದ್ದು, ನದಿಯಲ್ಲಿ ಕೊಚ್ಚಿ ಹೋದ ಯುವಕನಾಗಿದ್ದಾನೆ. ವೀಕೆಂಡ್ ಹಿನ್ನೆಲೆ ಬೆಂಗಳೂರಿನಿಂದ ನಾಲ್ವರ ಸ್ನೇಹಿತರು ಶಿವನ ಸಮುದ್ರದ ಸಮೀಪದ ಜಲಪಾತ ವೀಕ್ಷಣೆಗೆ ಬಂದಿದ್ದರು. ಈ ವೇಳೆ, ದರ್ಗಾ ಬಳಿಯ ಕಾವೇರಿ ನದಿಯಲ್ಲಿ ಸ್ನಾನಮಾಡಲು ಹೋಗಿದ್ದಾಗ ಕಾಲು ಜಾರಿ ಬಿದ್ದು, ಮಹಮ್ಮದ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಶೋಧಕ ಕಾರ್ಯ ನಡೆಯಲಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಳ್ಳೇಗಾಲ: ಕಾವೇರಿ ನದಿಯಲ್ಲಿ (Cauvery River) ಸ್ನಾನ ಮಾಡಲು ತೆರಳಿದ್ದ ನಾಲ್ಕು ಜನ ಯುವಕರ ಪೈಕಿ ಒರ್ವ ಯುವಕ ನೀರು ಪಾಲಾಗಿರುವ ಘಟನೆ ಶಿವನ ಸಮುದ್ರದ ಬಳಿ ನಡೆದಿದೆ.

ಕೋಲ್ಕತ್ತಾ ಮೂಲದ ಮಹಮ್ಮದ್ ಪೈಜ಼ರ್ (21) ಕಾಲು ಜಾರಿ ಬಿದ್ದು, ನದಿಯಲ್ಲಿ ಕೊಚ್ಚಿ ಹೋದ ಯುವಕನಾಗಿದ್ದಾನೆ. ವೀಕೆಂಡ್ ಹಿನ್ನೆಲೆ ಬೆಂಗಳೂರಿನಿಂದ ನಾಲ್ವರ ಸ್ನೇಹಿತರು ಶಿವನ ಸಮುದ್ರದ ಸಮೀಪದ ಜಲಪಾತ ವೀಕ್ಷಣೆಗೆ ಬಂದಿದ್ದರು. ಈ ವೇಳೆ, ದರ್ಗಾ ಬಳಿಯ ಕಾವೇರಿ ನದಿಯಲ್ಲಿ ಸ್ನಾನಮಾಡಲು ಹೋಗಿದ್ದಾಗ ಕಾಲು ಜಾರಿ ಬಿದ್ದು, ಮಹಮ್ಮದ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಶೋಧಕ ಕಾರ್ಯ ನಡೆಯಲಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.