ಚಾಮರಾಜನಗರ: ಎರಡು ಕಾಲೇಜುಗಳ ಬೀಗ ಒಡೆದು ಖದೀಂರು ಕೈಚಳಕ ತೋರಿಸಿರುವ ಪ್ರಕರಣ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
ಬೇಗೂರಿನ ಪದವಿಪೂರ್ವ ಕಾಲೇಜಿನಲ್ಲಿ ಬೀಗ ಒಡೆದು 16 ಯುಪಿಎಸ್, 1 ಕಂಪ್ಯೂಟರ್ ಹಾಗೂ ಎರಡು ಬೆಲೆಬಾಳುವ ರಿವೈಂಡಿಂಗ್ ಕುರ್ಚಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಭಾನುವಾರದ ವಿಶೇಷ ತರಗತಿಗೆ ವಿದ್ಯಾರ್ಥಿಗಳು ಬಂದ ವೇಳೆ ಈ ಕಳ್ಳತನ ಬೆಳಕಿಗೆ ಬಂದಿದೆ.
ಮತ್ತೊಂದೆಡೆ ಐಟಿಐ ಕಾಲೇಜಿನ ಬೀಗವ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.