ETV Bharat / state

ವಿಶ್ವ ಬೈಸಿಕಲ್ ದಿನ: ಹೀರೋ ಸೈಕಲ್ಸ್​ ವತಿಯಿಂದ ಅಭಿಯಾನ

ವಿಶ್ವ ಸೈಕಲ್ ದಿನದ ಅಂಗವಾಗಿ ಹೀರೋ ಸೈಕಲ್ಸ್​ ವತಿಯಿಂದ ಸೈಕಲ್ ಬಳಸಿ - ಜಾಗೃತಿ ಮೂಡಿಸಿ ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು.

author img

By

Published : Jun 3, 2019, 9:11 AM IST

ಸೈಕಲ್ ರೇಸ್​ನಲ್ಲಿ ಪಾಲ್ಗೊಂಡಿರುವವರು

ಬೆಂಗಳೂರು: ವಿಶ್ವ ಸೈಕಲ್ ದಿನದ ಅಂಗವಾಗಿ ಸೈಕಲ್ ಬಳಸಿ, ಇಂಧನ ಉಳಿಸಿ, ಪರಿಸರ ರಕ್ಷಿಸಿ, ಆರೋಗ್ಯ ವೃದ್ಧಿಸಿ ಘೋಷಣೆಯಡಿ ನಿನ್ನೆ ಜಯನಗರದಲ್ಲಿ ಹೀರೋ ಸೈಕಲ್ಸ್​ ವತಿಯಿಂದ ಸೈಕಲ್ ರೇಸ್ ನಡೆಯಿತು.

ಜೂನ್ 3 ವಿಶ್ವ ಸೈಕಲ್ ದಿನ. ಇದರ ಅಂಗವಾಗಿ ಸೈಕಲ್‌ನ ಮಹತ್ವ ಸಾರುವ ಉದ್ದೇಶದಿಂದ ಹೀರೋ ಸೈಕಲ್ಸ್​ ವತಿಯಿಂದ ಸೈಕಲ್ ಬಳಸಿ - ಜಾಗೃತಿ ಮೂಡಿಸಿ ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು. ಜಯನಗರದ 4ನೇ ಬ್ಲಾಕ್‌ನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಿಂದ ಕಬ್ಬನ್ ಪಾರ್ಕ್‌ವರೆಗೆ ಸೈಕಲ್ ರೇಸ್ ನಡೆಯಿತು. ಬೆಳಕು ಹರಿಯುವ ಮುನ್ನವೇ ನೂರಾರು ಮಂದಿ ಪರಿಸರ ಜಾಗೃತಿ ಬಿಂಬಿಸುವ ಫಲಕಗಳನ್ನು ಹಿಡಿದು, ಟಿ-ಶರ್ಟ್ ತೊಟ್ಟು ಲವಲವಿಕೆಯಿಂದ ಕ್ರೀಡಾಂಗಣದಲ್ಲಿ ಹಾಜರಾಗಿ ತಮ್ಮ ಉತ್ಸುಕತೆ ತೋರಿದರು.

ಸೈಕಲ್ ರೇಸ್​ನಲ್ಲಿ ಪಾಲ್ಗೊಂಡಿರುವವರು

ಒಂದು ಸೈಕಲ್ ನಮ್ಮ ಬದುಕಿನ ಚಕ್ರವನ್ನೇ ಬದಲಿಸುತ್ತದೆ. ಸೈಕಲ್ ಭೂಮಿಯಷ್ಟೇ ಅಲ್ಲದೇ ದೇಹಕ್ಕೂ ಹಿತಕಾರಿ. ಸೈಕಲ್ ಬಳಕೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ ಎಂದು ರೇಸ್​ನಲ್ಲಿ ಪಾಲ್ಗೊಂಡಿದ್ದ ಬೈಸಿಕಲ್ ರೈಡರ್ ಹೇಳಿದರು.

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಿರೀಕ್ಷೆಗಿಂತ ಹೆಚ್ಚು ಜನ ರೇಸ್​ನಲ್ಲಿ ಉತ್ಸಾಹದಿಂದ ಪಾಲ್ಗೊಂಡು ನಮ್ಮ ಅಭಿಯಾನವನ್ನು ಯಶಸ್ವಿಗೊಳಿಸಿದರು ಎಂದು ಬೈಸಿಕಲ್ ರೇಸ್ ಆಯೋಜಕರಾದ ಅಭಿಜಿತ್ ತಿಳಿಸಿದರು.

ಬೆಂಗಳೂರು: ವಿಶ್ವ ಸೈಕಲ್ ದಿನದ ಅಂಗವಾಗಿ ಸೈಕಲ್ ಬಳಸಿ, ಇಂಧನ ಉಳಿಸಿ, ಪರಿಸರ ರಕ್ಷಿಸಿ, ಆರೋಗ್ಯ ವೃದ್ಧಿಸಿ ಘೋಷಣೆಯಡಿ ನಿನ್ನೆ ಜಯನಗರದಲ್ಲಿ ಹೀರೋ ಸೈಕಲ್ಸ್​ ವತಿಯಿಂದ ಸೈಕಲ್ ರೇಸ್ ನಡೆಯಿತು.

ಜೂನ್ 3 ವಿಶ್ವ ಸೈಕಲ್ ದಿನ. ಇದರ ಅಂಗವಾಗಿ ಸೈಕಲ್‌ನ ಮಹತ್ವ ಸಾರುವ ಉದ್ದೇಶದಿಂದ ಹೀರೋ ಸೈಕಲ್ಸ್​ ವತಿಯಿಂದ ಸೈಕಲ್ ಬಳಸಿ - ಜಾಗೃತಿ ಮೂಡಿಸಿ ಎಂಬ ಅಭಿಯಾನವನ್ನು ಆಯೋಜಿಸಲಾಗಿತ್ತು. ಜಯನಗರದ 4ನೇ ಬ್ಲಾಕ್‌ನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಿಂದ ಕಬ್ಬನ್ ಪಾರ್ಕ್‌ವರೆಗೆ ಸೈಕಲ್ ರೇಸ್ ನಡೆಯಿತು. ಬೆಳಕು ಹರಿಯುವ ಮುನ್ನವೇ ನೂರಾರು ಮಂದಿ ಪರಿಸರ ಜಾಗೃತಿ ಬಿಂಬಿಸುವ ಫಲಕಗಳನ್ನು ಹಿಡಿದು, ಟಿ-ಶರ್ಟ್ ತೊಟ್ಟು ಲವಲವಿಕೆಯಿಂದ ಕ್ರೀಡಾಂಗಣದಲ್ಲಿ ಹಾಜರಾಗಿ ತಮ್ಮ ಉತ್ಸುಕತೆ ತೋರಿದರು.

ಸೈಕಲ್ ರೇಸ್​ನಲ್ಲಿ ಪಾಲ್ಗೊಂಡಿರುವವರು

ಒಂದು ಸೈಕಲ್ ನಮ್ಮ ಬದುಕಿನ ಚಕ್ರವನ್ನೇ ಬದಲಿಸುತ್ತದೆ. ಸೈಕಲ್ ಭೂಮಿಯಷ್ಟೇ ಅಲ್ಲದೇ ದೇಹಕ್ಕೂ ಹಿತಕಾರಿ. ಸೈಕಲ್ ಬಳಕೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ ಎಂದು ರೇಸ್​ನಲ್ಲಿ ಪಾಲ್ಗೊಂಡಿದ್ದ ಬೈಸಿಕಲ್ ರೈಡರ್ ಹೇಳಿದರು.

ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಿರೀಕ್ಷೆಗಿಂತ ಹೆಚ್ಚು ಜನ ರೇಸ್​ನಲ್ಲಿ ಉತ್ಸಾಹದಿಂದ ಪಾಲ್ಗೊಂಡು ನಮ್ಮ ಅಭಿಯಾನವನ್ನು ಯಶಸ್ವಿಗೊಳಿಸಿದರು ಎಂದು ಬೈಸಿಕಲ್ ರೇಸ್ ಆಯೋಜಕರಾದ ಅಭಿಜಿತ್ ತಿಳಿಸಿದರು.

Intro:June 3 world cycle dayBody:ವಿಶ್ವ ಸೈಕಲ್ ದಿನ: ಸೈಕಲ್ ಬಳಸಿ, ಇಂಧನ ಉಳಿಸಿ, ಪರಿಸರ ರಕ್ಷಿಸಿ, ಆರೋಗ್ಯ ವೃದ್ಧಿಸಿ ಘೋಷಣೆಯಡಿ ನಡೆದ ಜಯನಗರದಲ್ಲಿ ಸೈಕಲ್ ರೇಸ್ ನಡೆಯಿತು.

ಜೂನ್ 3 ವಿಶ್ವ ಸೈಕಲ್ ದಿನ. ಇದರ ಅಂಗವಾಗಿ ಸೈಕಲ್‌ನ ಮಹತ್ವ ಸಾರುವ ಉದ್ದೇಶದಿಂದ ಜಯನಗರದ ೪ನೇ ಬ್ಲಾಕ್‌ನ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಿಂದ ಕಬ್ಬನ್ ಪಾರ್ಕ್‌ವರೆಗೆ ಸೈಕಲ್ ರೇಸ್ ನಡೆಯಿತು. ಬೆಳಕು ಹರಿಯುವ ಮುನ್ನವೇ ನೂರಾರು ಮಂದಿ ಪರಿಸರ ಜಾಗೃತಿ ಬಿಂಬಿಸುವ ಫಲಕಗಳು, ಟಿ ಶರ್ಟ್ ತೊಟ್ಟು ಲವಲವಿಕೆಯಿಂದ ಕ್ರೀಡಾಂಗಣದಲ್ಲಿ ಹಾಜರಾಗಿ ತಮ್ಮ ಉತ್ಸುಕತೆಯಿಂದ ತೋರಿದರು. ಸಮಾಜಕ್ಕೆ ಕೆಲ ಸಂದೇಶ ಸಾರುವುದು ಈ ರೇಸಿನ ಉದ್ದೇಶವಾಗಿತ್ತು,ಒಂದು ಸೈಕಲ್ ನಮ್ಮ ಬದುಕಿನ ಚಕ್ರವನ್ನೇ ಬದಲಿಸುತ್ತದೆ. ಸೈಕಲ್ ಭೂಮಿಯಷ್ಟೇ ಅಲ್ಲದೇ ದೇಹಕ್ಕೂ ಹಿತಕಾರಿ ಎಂದರು. 

ಸೈಕಲ್ ಬಳಕೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚೆಗೆ ನಗರ ಪ್ರದೇಶದ ಜನರನ್ನು ಕಾಡುತ್ತಿರುವ ರಕ್ತದೊತ್ತಡ, ಅಧಿಕ ರಕ್ತದೊತ್ತಡ, ಮದುಮೇಹ ಮತ್ತಿತರ ದೈಹಿಕ ಸಮಸ್ಯೆಗಳಿಗೆ ಪರಿಹಾರವಾಗಿದೆ. ಸೈಕಲ್ ಬಳಕೆಯಿಂದ ದೇಹದ ನರನಾಡಿಗಳಲ್ಲಿ ರಕ್ತ ಸಂಚಾರ ಸುಗಮವಾಗಿ ದೇಹ ಉಲ್ಲಾಸದಿಂದಿರುತ್ತದೆ. ಜನತೆ ವಾಹನ ಅವಲಂಬನೆಯನ್ನು ಕಡಿಮೆ ಮಾಡಿ ಸೈಕಲ್ ಬಳಕೆಯತ್ತ ಆಸಕ್ತರಾಗಬೇಕು ಎಂದು ಸೌಮ್ಯ ರೆಡ್ಡಿ ಕರೆ ನೀಡಿದರು. 

ಸೈಕಲ್ ಬಳಸಿ - ಜಾಗೃತಿ ಮೂಡಿಸಿ ಎನ್ನುವ ಅಭಿಯಾನದೊಂದಿಗೆ ಪಾಲ್ಗೊಂಡಿದ್ದ ಸೈಕಲ್ ಸರವಾರರು ಜನರತ್ತ ಕೈ ಬೀಸಿ ನೀವು ಬನ್ನಿ, ಸೈಕಲ್ ತನ್ನಿ ಎಂದು ಜನ ಸಾಮಾನ್ಯರನ್ನು ಹುರಿದುಂಬಿಸುತ್ತಿದ್ದರು. ಆರೋಗ್ಯ ಕಾಪಾಡಲು ಸೈಕಲ್ ಬಳಕೆ ಅತ್ಯುತ್ತಮವಾಗಿದ್ದು, ದಿನನಿತ್ಯದ ಚಟುವಟಿಕೆಗಳಿಗೆ ಸೈಕಲ್ ಅತ್ಯಂತ ಪ್ರಭಾವಶಾಲಿ ಸಂಚಾರಿ ಸಾಧನವಾಗಿದೆ ಎಂದು ಜಾಥದಲ್ಲಿ ಪಾಲ್ಗೊಂಡಿದ್ದವರು ತಮ್ಮ ವೀಕೆಂಡ್ ಅನ್ನು ಪಾರ್ಟಿ ಎಂದು ಕಳೆಯದೆ ಸೈಕಲ್ ತುಳಿದು ಜನರಲ್ಲಿ ಜಾಗೃತಿ ಮೂಡಿಸಿದರು. Conclusion:Visual from mojo

Plzz use mojo visuals also

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.