ETV Bharat / state

ಸ್ಮಶಾನವನ್ನೂ ಬಿಡದ ಭೂಗಳ್ಳರು: ಹೆಣ ಹೂಳಲು‌ ಗ್ರಾಮಸ್ಥರ ಪರದಾಟ - undefined

ಈ ಊರಿನಲ್ಲಿ ಒಂದೇ ಸ್ಮಶಾನವಿದ್ದು, ಮೊದಲು ಒಂದು ಎಕರೆ ಇದ್ದ ಭೂಮಿ ಭೂಗಳ್ಳರ ಒತ್ತುವರಿಯಿಂದ 10 ಗುಂಟೆಯೂ ಇಲ್ಲದಂತಾಗಿದ್ದು, ಸತ್ತ ವ್ಯಕ್ತಿಯನ್ನು ಹೂಳಲು ಮೊದಲಿದ್ದ ಘೋರಿಯನ್ನೇ ಅಗೆದು ಅದರ ಮೇಲೆ ಶವ ಹೂಳ ಬೇಕಾದ ದುಸ್ಥಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಲಾಪುರದಲ್ಲಿ ಕಂಡು ಬಂದಿದೆ.

ಹೆಣ ಹೂಳಲು‌ ಗ್ರಾಮಸ್ಥರ ಪರದಾಟ
author img

By

Published : Jul 1, 2019, 4:34 AM IST

ಬೆಂಗಳೂರು : ಊರಿನಲ್ಲಿ ಒಂದೇ ಸ್ಮಶಾನವಿದ್ದು, ಮೊದಲು ಒಂದು ಎಕರೆ ಇದ್ದ ಭೂಮಿ ಭೂಗಳ್ಳರ ಒತ್ತುವರಿಯಿಂದ 10 ಗುಂಟೆಯೂ ಇಲ್ಲದಂತಾಗಿದ್ದು, ಸತ್ತ ವ್ಯಕ್ತಿಯನ್ನು ಹೂಳಲು ಮೊದಲಿದ್ದ ಘೋರಿಯನ್ನೇ ಅಗೆದು ಅದರ ಮೇಲೆ ಶವ ಹೂಳ ಬೇಕಾದ ದುಸ್ಥಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಲಾಪುರದಲ್ಲಿ ಕಂಡು ಬಂದಿದೆ.

ಹೆಣ ಹೂಳಲು‌ ಗ್ರಾಮಸ್ಥರ ಪರದಾಟ

ಸರ್ಕಾರಿ ಜಮೀನಿನಲ್ಲಿ ಸತ್ತವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಆದ್ರೆ ದಿನಕಳೆದಂತೆ ಭೂಮಿಗೆ ಬಂಗಾರದ ಬೆಲೆ ಬಂದಾಗಿನಿಂದ ಕೆರೆ, ಕುಂಟೆಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲಿ, ಸ್ಮಶಾನ ಜಾಗವನ್ನು ಬಿಡದ ಭೂಗಳ್ಳರು ಸುಮಾರು ಮುಕ್ಕಾಲು ಎಕರೆಯಷ್ಟು ಸ್ಮಶಾನ ಜಾಗವನ್ನು ಕಬಳಿಸಿದ್ದಾರೆ. ಅಲ್ಲದೇ ಪಕ್ಕದಲ್ಲೇ ಇರುವ 1 ಎಕರೆ 6 ಗುಂಟೆಯನ್ನು ಕೂಡ ಕಬಳಿಸಿದ್ದಾರೆ.‌

ಇನ್ನು ಒತ್ತುವರಿಯಾಗಿರುವುದನ್ನ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಸರ್ಕಾರದ 2.6 ಎಕರೆ ಜಮೀನಿನಲ್ಲಿ ಒಂದು ಎಕರೆ ಕೂಡ ಇಲ್ಲದಂತಾಗಿದೆ. ಯಾರಾದರೂ ಸಾವನಪ್ಪಿದರೆ ಬೇರೆಯವರ ಗೋರಿ ಒಡೆದು ಹೂಳುವ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಸತ್ತರೆ ಅವರನ್ನು ರಸ್ತೆಯ ಮಧ್ಯದಲ್ಲಿ ಹೂಳ ಬೇಕಾಗುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

ಬೆಂಗಳೂರು : ಊರಿನಲ್ಲಿ ಒಂದೇ ಸ್ಮಶಾನವಿದ್ದು, ಮೊದಲು ಒಂದು ಎಕರೆ ಇದ್ದ ಭೂಮಿ ಭೂಗಳ್ಳರ ಒತ್ತುವರಿಯಿಂದ 10 ಗುಂಟೆಯೂ ಇಲ್ಲದಂತಾಗಿದ್ದು, ಸತ್ತ ವ್ಯಕ್ತಿಯನ್ನು ಹೂಳಲು ಮೊದಲಿದ್ದ ಘೋರಿಯನ್ನೇ ಅಗೆದು ಅದರ ಮೇಲೆ ಶವ ಹೂಳ ಬೇಕಾದ ದುಸ್ಥಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಲಾಪುರದಲ್ಲಿ ಕಂಡು ಬಂದಿದೆ.

ಹೆಣ ಹೂಳಲು‌ ಗ್ರಾಮಸ್ಥರ ಪರದಾಟ

ಸರ್ಕಾರಿ ಜಮೀನಿನಲ್ಲಿ ಸತ್ತವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಆದ್ರೆ ದಿನಕಳೆದಂತೆ ಭೂಮಿಗೆ ಬಂಗಾರದ ಬೆಲೆ ಬಂದಾಗಿನಿಂದ ಕೆರೆ, ಕುಂಟೆಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇಲ್ಲಿ, ಸ್ಮಶಾನ ಜಾಗವನ್ನು ಬಿಡದ ಭೂಗಳ್ಳರು ಸುಮಾರು ಮುಕ್ಕಾಲು ಎಕರೆಯಷ್ಟು ಸ್ಮಶಾನ ಜಾಗವನ್ನು ಕಬಳಿಸಿದ್ದಾರೆ. ಅಲ್ಲದೇ ಪಕ್ಕದಲ್ಲೇ ಇರುವ 1 ಎಕರೆ 6 ಗುಂಟೆಯನ್ನು ಕೂಡ ಕಬಳಿಸಿದ್ದಾರೆ.‌

ಇನ್ನು ಒತ್ತುವರಿಯಾಗಿರುವುದನ್ನ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಸರ್ಕಾರದ 2.6 ಎಕರೆ ಜಮೀನಿನಲ್ಲಿ ಒಂದು ಎಕರೆ ಕೂಡ ಇಲ್ಲದಂತಾಗಿದೆ. ಯಾರಾದರೂ ಸಾವನಪ್ಪಿದರೆ ಬೇರೆಯವರ ಗೋರಿ ಒಡೆದು ಹೂಳುವ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಸತ್ತರೆ ಅವರನ್ನು ರಸ್ತೆಯ ಮಧ್ಯದಲ್ಲಿ ಹೂಳ ಬೇಕಾಗುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.

Intro:ಸ್ಮಶಾನವನ್ನು ಬಿಡದ ಭೂಗಳ್ಳರು, ಹೆಣ ಹೂಳಲು ಜಾಗವಿಲ್ಲದೆ‌ ಗ್ರಾಮಸ್ಥರ ಪರದಾಟ.


ಆ ಊರಿನಲ್ಲಿ ಯಾರಾದರೂ ಸಾವನಪ್ಪಿದರೆ ಇರೋದು ಅದೊಂದೇ ಸ್ಮಶಾನ, ಮೊದಲು ೧ ಎಕರೆ ಇದ್ದ ಸ್ಮಶಾನ ಭೂಗಳ್ಳರ ಒತ್ತುವರಿಯಿಂದ ೧೦ ಗುಂಟೆಯು ಇಲ್ಲದಂತಾಗಿದ್ದು, ಸತ್ತ ವ್ಯಕ್ತಿಯನ್ನು ಹೂಳ ಬೇಕಾದರೇ ಮೊದಲಿದ್ದ ಘೋರಿಯನ್ನೇ ಅಗೆದು ಅದರ ಮೇಲೆಯೇ ಹೂಳ ಬೇಕಾದ ದುಸ್ಥಿತಿ .



ನಾವು ತೋರಿಸುತ್ತೀರುವ ಸ್ಮಶಾನ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಲಾಪುರದಲ್ಲಿ. ಇಂದಿನ ಕಾಲದಿಂದಲೂ ಸರ್ಕಾರಿ ಜಮೀನಿನಲ್ಲಿ ಸತ್ತವರ ಅಂತ್ಯ ಕ್ರಿಯೆ ನಡೆಸಲಾಗುತ್ತಿತ್ತು. ಈ ಮೊದಲು ೧ ಎಕರೆ ಸರ್ಕಾರಿ ಜಾಗದಲ್ಲಿ ಸ್ಮಶಾನವಿತ್ತು ..ದಿನಕಳೆದಂತೆ ಭೂಮಿಗೆ ಬಂಗಾರದ ಬೆಲೆ ಬಂದಾಗಿನಿಂದ ಕೆರೆ, ಕುಂಟೆಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಂಡಿರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೇ ಇಲ್ಲಿ ಸ್ಮಶಾನ ಜಾಗವನ್ನು ಬಿಡದ ಭೂಗಳ್ಳರು ಸುಮಾರು ಮುಕ್ಕಾಲು ಎಕರೆಯಷ್ಟು ಸ್ಮಶಾನ ಜಾಗವನ್ನು ಕಬಳಿಸಿದ್ದಾರೆ.ಅಲ್ಲದೇ ಪಕ್ಕದಲ್ಲೇ ಇರುವ 1 ಎಕರೆ ೬ ಗುಂಟೆ ಕುಂಟೆಯನ್ನು ಕೂಡಾ ಕಬಳಿಸಿದ್ದಾರೆ.‌ ಒತ್ತುವರಿಯಾಗಿರುವುದನ್ನ ಜಿಲ್ಲಾಧಿಕಾರಿಗಳಿಗೆ ಹತ್ತು ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜವಾಗಿಲ್ಲ. ಸರ್ಕಾರದ ೨.೬ಎಕರೆ ಜಮೀನಿನಲ್ಲಿ ಒಂದು ಎಕರೆ ಕೂಡಾ ಇಲ್ಲದಂತಾಗಿದೆ. ಯಾರಾದರೂ ಸಾವನಪ್ಪಿದರೆ ಬೇರೆಯವರ ಗೋರಿ ಹೊಡೆದು ಹೂಳುವ ಪರಿಸ್ಥಿತಿ ಬಂದಿದೆ ಅನ್ನುತ್ತಾರೆ ಅಲ್ಲಿನ ಸ್ಥಳೀಯರು.



Body:ದೇವಲಾಪುರದಲ್ಲಿ ಇರುವ ಸ್ಮಶಾನ ಹಾಗೂ ಕುಂಟೆಯ ಪಹಣಿ ತೆಗಿಸಿದರೆ, ಒಂದು ಎಕರೆ ಆರು ಗುಂಟೆ ಕುಂಟೆ ಮತ್ತು ಒಂದು ಎಕರೆ ಸ್ಮಶಾನ ಎಂದು ಪಹಣಿ ಬರುತ್ತೇ. ಆದರೆ ಅದು ಎಲ್ಲಿಯವರಿಗೆ ಜಾಗವಿದೆ ಎಂಬುವುದು ಬೌಂಡರಿ ಮಾತ್ರ ಇಲ್ಲ. ನಾವು ಚಿಕ್ಕವರಾಗಿದ್ದಾಗಿನಿಂದಲೂ ಸಮಸ್ಯೆಯಿದೆ. ಅಧಿಕಾರಿಗಳಿಗೂ, ಜನಪ್ರತಿನಿಧಿಗಳೂ ಮನವಿ ಮಾಡಿದರು ಯಾರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಯಾರಾದರೂ ಸತ್ತರೇ ಅವರನ್ನು ರಸ್ತೆಯ ಮಧ್ಯದಲ್ಲಿ ಹೂಳ ಬೇಕಾಗುತ್ತದೆ.



Conclusion:ಏನೇ ಆದರೂ ಮನುಷ್ಯನ ಆಸೆ ಎಷ್ಟಿದೇ ಎಂದರೇ ತಾನೂ ಎಷ್ಟೇ ಭೂಮಿಯ ಒಡೆಯನಾದರೂ ಕೂಡಾ ಸತ್ತ ಮೇಲೆ ಸ್ಮಶಾನದಲ್ಲಿ ಸ್ವಲ್ಪವೇ ಜಾಗವನ್ನು ಪಡೆದುಕೊಳ್ಳುತ್ತೇನೆ ಎನ್ನುವ ಸತ್ಯವನ್ನ ಮರೆತು ದುರಾಸೆಯಿಂದ ಪಡೆಯುತ್ತಿರುವುದು ಸರಿ.


ಧರ್ಮರಾಜು ಎಂ ಕೆಆರ್ ಪುರ

ಬೈಟ್: ಪ್ರಕಾಶ್, ಗ್ರಾಮಸ್ಥರು

ಬಸವರಜ್‌ ,ಗ್ರಾಮಸ್ಥರು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.