ETV Bharat / state

ಐಎಂಎ ಹಗರಣದಲ್ಲಿ ತಮ್ಮ ಹೆಸರು: ರೋಷನ್ ಬೇಗ್ ಹೇಳಿದ್ದೇನು? - undefined

ಐಎಂಎ ಜ್ಯುವೆಲ್ಲರ್ಸ್ ಹಗರಣದಂತೆ ಇನ್ನೂ ಅನೇಕ ಸಂಸ್ಥೆಗಳಿದ್ದಾವೆ. ಇವುಗಳ ಕುರಿತೂ ಸಿಬಿಐ ತನಿಕೆ ನಡೆಸಬೇಕು ಎಂದು ಮಾಜಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.

ರೋಷನ್ ಬೇಗ್
author img

By

Published : Jun 12, 2019, 7:01 PM IST

Updated : Jun 12, 2019, 7:28 PM IST

ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್ ಹಗರಣದ ಕುರಿತು ಸಿಬಿಐ ತನಿಖೆಯಾಗಬೇಕು. ಜೊತೆಗೆ ಕ್ಯಾಪಿಟಲ್, ಅಲಾ, ಅಜ್ಮೇರಾ, ಆ್ಯಬಿಡೆಂಟ್​​ನಂತಹ ಸಂಸ್ಥೆಗಳಿದ್ದಾವೆ. ಅವುಗಳ ತನಿಖೆಯೂ ಆಗಲಿ ಎಂದು ಮಾಜಿ ಸಚಿವ ರೋಷನ್ ಬೇಗ್ ಆಗ್ರಹಿಸಿದ್ದಾರೆ.

ಐಎಂಎ ಜ್ಯುವೆಲ್ಲರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಸುದ್ದಿಗೋಷ್ಟಿ

ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕೂಡ ಇದೆ ರೀತಿ ಆಗಿದೆ. ಆದಷ್ಟು ಬೇಗ ಹಣ ಕಳೆದುಕೊಂಡವರಿಗೆ ವಾಪಸ್ ಕೊಡಿಸಬೇಕು. ಈ ಕುರಿತು ತನಿಖೆಯನ್ನು ಸಿಬಿಐಗೆ ನೀಡಿದರೆ ರೆಡ್ ಅಲರ್ಟ್ ಜಾರಿಗೊಳಿಸುತ್ತಾರೆ. ಮನ್ಸೂರ್ ಖಾನ್ 1000 ಕೋಟಿ ತನ್ನ ಸ್ವಂತ ಅಕೌಂಟ್​ಗೆ ಹಾಕಿಕೊಂಡಿದ್ದಾರೆ. ತಕ್ಷಣ ಅವನ ಅಕೌಂಟ್ ಸೀಜ್ ಮಾಡಬೇಕು ಎಂದರು.

ನಾನು ಪಕ್ಕಾ ರಾಜಕಾರಣಿಯಲ್ಲ, ಹೋರಾಟಗಾರ. ಬೆಂಗಳೂರಿನಲ್ಲಿ ಒಂದೇ ಮೆಡಿಕಲ್ ಕಾಲೇಜು ಇತ್ತು. ಬೋರಿಂಗ್​ನಲ್ಲಿ ಮೆಡಿಕಲ್ ಕಾಲೇಜ್ ಆರಂಭವಾಗಲಿದೆ. ನಾನಾಗಲಿ ನಮ್ಮ ಫ್ಯಾಮಿಲಿಯಾಗಲೀ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಪಾಲುದರರೂ ಅಲ್ಲ ಎಂದರು.

ಇನ್ನು ನಾನು ಪಕ್ಷದ ನಾಯಕರ ವಿರುದ್ಧ ಮಾತನಾಡಿದ ತಕ್ಷಣ ಈ ರೀತಿಯ ಬೆಳವಣಿಗೆ ಆಗಿರುವುದು ನನಗೆ ಆಶ್ಚರ್ಯವಾಗಿದೆ. ಜಮೀರ್ ನನಗೆ ಕಿರಿಯ ಸಹೋದರ. ಅವರ ಮೇಲೆ ನನಗೆ ಅಪನಂಬಿಕೆ ಇಲ್ಲ. ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಲಿ ಎಂದರು.

ಐಎಂಎ ಆಡಿಯೋ ಬಿಡುಗಡೆ ಬಗ್ಗೆ ನನಗೆ ಮಾಹಿತಿ ಬಂತು. ಯಾರೋ ಸ್ನೇಹಿತರು ಮಾಹಿತಿ ಕೊಟ್ಟರು. ಇದನ್ನ ಸಿಬಿಐಗೆ ವಹಿಸಲು ಒತ್ತಾಯ ಮಾಡುತ್ತೇನೆ. ಐಎಂಎ ಅಷ್ಟೇ ಅಲ್ಲ, ಆ್ಯಂಬಿಡೆಂಟ್​​ ಸೇರಿದಂತೆ ಹಲವು ಕಂಪನಿಗಳು ಇವೆ. ಎಲ್ಲವನ್ನೂ ಸಿಬಿಐಗೆ ಕೊಡಲಿ ಎಂದರು.

ಬೆಂಗಳೂರು: ಐಎಂಎ ಜ್ಯುವೆಲ್ಲರ್ಸ್ ಹಗರಣದ ಕುರಿತು ಸಿಬಿಐ ತನಿಖೆಯಾಗಬೇಕು. ಜೊತೆಗೆ ಕ್ಯಾಪಿಟಲ್, ಅಲಾ, ಅಜ್ಮೇರಾ, ಆ್ಯಬಿಡೆಂಟ್​​ನಂತಹ ಸಂಸ್ಥೆಗಳಿದ್ದಾವೆ. ಅವುಗಳ ತನಿಖೆಯೂ ಆಗಲಿ ಎಂದು ಮಾಜಿ ಸಚಿವ ರೋಷನ್ ಬೇಗ್ ಆಗ್ರಹಿಸಿದ್ದಾರೆ.

ಐಎಂಎ ಜ್ಯುವೆಲ್ಲರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಸುದ್ದಿಗೋಷ್ಟಿ

ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕೂಡ ಇದೆ ರೀತಿ ಆಗಿದೆ. ಆದಷ್ಟು ಬೇಗ ಹಣ ಕಳೆದುಕೊಂಡವರಿಗೆ ವಾಪಸ್ ಕೊಡಿಸಬೇಕು. ಈ ಕುರಿತು ತನಿಖೆಯನ್ನು ಸಿಬಿಐಗೆ ನೀಡಿದರೆ ರೆಡ್ ಅಲರ್ಟ್ ಜಾರಿಗೊಳಿಸುತ್ತಾರೆ. ಮನ್ಸೂರ್ ಖಾನ್ 1000 ಕೋಟಿ ತನ್ನ ಸ್ವಂತ ಅಕೌಂಟ್​ಗೆ ಹಾಕಿಕೊಂಡಿದ್ದಾರೆ. ತಕ್ಷಣ ಅವನ ಅಕೌಂಟ್ ಸೀಜ್ ಮಾಡಬೇಕು ಎಂದರು.

ನಾನು ಪಕ್ಕಾ ರಾಜಕಾರಣಿಯಲ್ಲ, ಹೋರಾಟಗಾರ. ಬೆಂಗಳೂರಿನಲ್ಲಿ ಒಂದೇ ಮೆಡಿಕಲ್ ಕಾಲೇಜು ಇತ್ತು. ಬೋರಿಂಗ್​ನಲ್ಲಿ ಮೆಡಿಕಲ್ ಕಾಲೇಜ್ ಆರಂಭವಾಗಲಿದೆ. ನಾನಾಗಲಿ ನಮ್ಮ ಫ್ಯಾಮಿಲಿಯಾಗಲೀ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಪಾಲುದರರೂ ಅಲ್ಲ ಎಂದರು.

ಇನ್ನು ನಾನು ಪಕ್ಷದ ನಾಯಕರ ವಿರುದ್ಧ ಮಾತನಾಡಿದ ತಕ್ಷಣ ಈ ರೀತಿಯ ಬೆಳವಣಿಗೆ ಆಗಿರುವುದು ನನಗೆ ಆಶ್ಚರ್ಯವಾಗಿದೆ. ಜಮೀರ್ ನನಗೆ ಕಿರಿಯ ಸಹೋದರ. ಅವರ ಮೇಲೆ ನನಗೆ ಅಪನಂಬಿಕೆ ಇಲ್ಲ. ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಲಿ ಎಂದರು.

ಐಎಂಎ ಆಡಿಯೋ ಬಿಡುಗಡೆ ಬಗ್ಗೆ ನನಗೆ ಮಾಹಿತಿ ಬಂತು. ಯಾರೋ ಸ್ನೇಹಿತರು ಮಾಹಿತಿ ಕೊಟ್ಟರು. ಇದನ್ನ ಸಿಬಿಐಗೆ ವಹಿಸಲು ಒತ್ತಾಯ ಮಾಡುತ್ತೇನೆ. ಐಎಂಎ ಅಷ್ಟೇ ಅಲ್ಲ, ಆ್ಯಂಬಿಡೆಂಟ್​​ ಸೇರಿದಂತೆ ಹಲವು ಕಂಪನಿಗಳು ಇವೆ. ಎಲ್ಲವನ್ನೂ ಸಿಬಿಐಗೆ ಕೊಡಲಿ ಎಂದರು.

Intro:newsBody:ಐಎಂಎ ಜ್ಯುವೆಲ್ಲರ್ಸ್ ಜತೆ ಜೊತೆ ಇನ್ನಷ್ಟು ಹಗರಣಗಳನ್ನು ಸಿಬಿಐಗೆ ವಹಿಸಲಿ: ರೋಷನ್ ಬೇಗ್

ಬೆಂಗಳೂರು: ಐಎಂ ಎ ಹಗರಣದ ಬಗ್ಗೆ ಸಿಬಿಐ ಗೆ ವಹಿಸಬೇಕು. ಇದರ ಜೊತೆಗೆ ಕ್ಯಾಪಿಟಲ್, ಅಲಾ, ಅಜ್ಮೇರಾ, ಅನಿಬೆಂಟ್ ಅಂತ ಸಂಸ್ಥೆಗಳಿದ್ದಾವೆ ಅವುಗಳ ತನಿಖೆಯೂ ಆಗಲಿ ಎಂದು ಮಾಜಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಳಗಾವಿ ಯಲ್ಲಿ ಕೂಡ ಇದೆ ರೀತಿ ಆಗಿದೆ. ಆದಷ್ಟು ಬೇಗ ಹಣ ಕಳೆದುಕೊಂಡವರಿಗೆ ಹಣ ವಾಪಸ್ ಮಾಡಬೇಕು. ಅವರು ಕೊನೆಯಲ್ಲಿ ಯಾರ ಜೊತೆಗೆ ಸಂಪರ್ಕ ಮಾಡಿದ್ದಾರೆ. ವಾಟ್ಸ್ ಆಪ್ ಯಾರ ಜೊತೆ ಮಾಡಿದ್ದಾರೆ ಎನ್ನುವುದನ್ನು ತನಿಖೆ ನಡೆಸಬೇಕು
ಸಿಬಿಐ ಗೆ ನಿಡಿದರೆ ರೆಡ್ ಅಲರ್ಟ್ ಜಾರಿಗೊಳಿಸುತ್ತಾರೆ. ತಕ್ಷಣ ಎಲ್ಲ ಕಡೆ ಹುಡುಕುತ್ತಾರೆ ಎಂದರು.
ಮನ್ಸೂರ್ ಖಾನ್ 1000 ಕೋಟಿ ತನ್ನ ಸ್ವಂತ ಅಕೌಂಟ್ ಗೆ ಹಾಕಿಕೊಂಡಿದ್ದಾರೆ. ತಕ್ಷಣ ಅವನ. ಅಕೌಂಟ್ ಸೀಜ್ ಮಾಡಬೇಕು. ಸಿಯಾಸತ್ ಅಂತ ಒಂದು ಉರ್ದು ಪತ್ರಿಕೆ ಇದೆ. ಅವರು ನಮ್ಮ ಕ್ಷೇತ್ರದ ಶಾಲೆಗೆ ದೇಣಿಗೆ ನೀಡುತ್ತಿದ್ದಾರೆ. ಒಂದು ವರ್ಷದಲ್ಲಿ ಯಾರು ಚಾರ್ಟರ್ ಫ್ಲೈಟ್ ನಲ್ಲಿ ಹೋಗಿದಾರೆ ಎನ್ನುವ ತನಿಖೆ ನಡೆಸಬೇಕು.
ನಾನು ಪಕ್ಕಾ ರಾಜಕಾರಣಿಯಲ್ಲ ಹೋರಾಟಗಾರ.
ಬೆಂಗಳೂರಿನಲ್ಲಿ ಒಂದೆ ಮೆಡಿಕಲ್ ಕಾಲೇಜು ಇತ್ತು ಬೋರಿಂಗ್ ನಲ್ಲಿ ಮೆಡಿಕಲ್ ಕಾಲೇಜ್ ಆರಂಭವಾಗಲಿದೆ.ನಾನಾಗಲಿ ನಮ್ಮ ಫ್ಯಾಮಿಲಿ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ. ಪಾಲುದರರೂ ಅಲ್ಲ ಎಂದರು.
ಆಶ್ಚರ್ಯ ತಂದಿದೆ
ನಾನು ಪಕ್ಷದ ನಾಯಕರ ವಿರುದ್ಧ ಮಾತನಾಡಿದ ತಕ್ಷಣ ಈ ರೀತಿ ಬೆಳವಣಿಗೆ ಆಗಿರುವುದು ನನಗೆ ಆಶ್ಚರ್ಯವಾಗಿದೆ. ಜಮೀರ್ ನನಗೆ ಕಿರಿಯ ಸಹೋದರ ಅವರ ಮೇಲೆ ನನಗೆ ಅಪನಬಿಕೆ ಇಲ್ಲ. ಐಎಂಎ ನಲ್ಲಿ ಜನಾ ಹೋಗಿ ಇನ್ವೆಸ್ಟ್ ಮಾಡ್ತಾ ಇದ್ರೆ ನಾನು ಬೇಡ ಅಂತಾ ಹೇಳೊಕೆ ಆಗುತ್ತಾ? ಜನರು ಹೂಡಿಕೆ ಮಾಡಿದ್ರು, ಪ್ರಕರಣವನ್ನ ಸಿಬಿಐ ತನಿಖೆಗೆ ಕೊಡಲಿ ಎಂದರು.
ಮಾಹಿತಿ ಬಂತು
ಐಎಂಎ ಆಡಿಯೋ ಬಿಡುಗಡೆ ಬಗ್ಗೆ ನನಗೆ ಮಾಹಿತಿ ಬಂತು. ಯಾರೋ ಸ್ನೇಹಿತರು ಮಾಹಿತಿ ಕೊಟ್ಟರು. ಇದನ್ನ ಸಿಬಿಐಗೆ ವಹಿಸಲು ಒತ್ತಾಯ ಮಾಡುತ್ತೇನೆ. ಎಸ್ಐಟಿ ಕೆಲವರ ಆಸಕ್ತಿ ಇಂದ ಕೊಟ್ಟಿದ್ದಾರೆ. ಐಎಂಎ ಅಷ್ಟೇ ಅಲ್ಲ ಅಂಬಿಡೇಂಟ್ ಸೇರಿದಂತೆ ಹಲವು ಕಂಪನಿಗಳು ಇವೆ. ಎಲ್ಲವನ್ನೂ ಸಿಬಿಐ ಗೆ ಕೊಡ್ಲಿ ಎಂದರು.
ಮನ್ಸೂರ್ ಖಾನ್‌ ಸೇರಿದಂತೆ ಹಲವರು ಯಾರ ಜತೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಯಾರು ಯಾರು ವ್ಯವಹಾರ ಮಾಡಿದ್ದಾರೆ ಅಂತ ಗೊತ್ತಾಗುತ್ತೆ. ಎಸ್ ಐಟಿಗೆ ಎಲ್ಲ ರೀತಿಯ ಸಹಕಾರ ಕೊಡುತ್ತೇನೆ. ನನ್ನ ಮತ ಕ್ಷೇತ್ರದಲ್ಲಿ ಉರ್ದು ಶಾಲೆ ಇದೆ. ಆ ಶಾಲೆಯಲ್ಲಿ ನಾನು ಓದಿದ್ದೆ. ವಿಕೆಓ ಶಾಲೆಯನ್ನ ಅಭಿವೃದ್ಧಿ ಮಾಡ್ತೀವಿ ಅಂತ ಬಂದ್ರು. ಅಷ್ಟಕ್ಕೇ ಮಾತ್ರ ನನಗೂ ಅವರಿಗೂ ಸಂಬಂಧ ಅಷ್ಟೇ. ಈ ಕಾರ್ಯಕ್ಕೆ ಮುಖ್ಯಮಂತ್ರಿ ಗಳು ಸಹ ಶ್ಲಾಘನೆ ಕೊಟ್ಟಿದ್ರು. ನಾನು ಅವರಿಂದ ಯಾವುದೇ ಸಾಲ ತೆಗೆದುಕೊಂಡಿಲ್ಲ. ನನ್ನ ಮಗ ಸಹ ತೆಗೆದುಕೊಂಡಿಲ್ಲ. ನನ್ನ ಬೆಂಬಲಿಗರು ಸಹ ತೆಗೆದುಕೊಂಡಿಲ್ಲ. ಯಾವುದೇ ಆರ್ಥಿಕ ವ್ಯವಹಾರ ನಡೆದಿಲ್ಲ. ನನ್ನ ಮಗ ಚಾರ್ಟರ್ ಫ್ಲೈಟ್ ಲ್ಲಿ ಹೋಗಿದ್ದಾರೆ ಅಂತ ಸುದ್ದಿ ಮಾಡುತ್ತಿದ್ದಾರೆ. ಅದು ಸಹ ಸುಳ್ಳು. ಒಂದು ವರ್ಷದಿಂದ ಯಾರ್ಯಾರು ಚಾರ್ಟರ್ ಫ್ಲೈಟ್ ಲ್ಲಿ ಹೋಗಿದ್ದಾರೆ ಅನ್ನೋದು ತನಿಖೆ ಆಗ್ಲಿ ಎಂದರು.
Conclusion:news
Last Updated : Jun 12, 2019, 7:28 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.