ETV Bharat / state

ಶ್ರೀಲಂಕಾ ಸರಣಿ ಸ್ಫೋಟ: ಬೆಂಗಳೂರಿನತ್ತ ಮುಖ ಮಾಡಿದ ಕನ್ನಡಿಗರು - undefined

ಕೇವಲ ಕನ್ನಡಿಗರಷ್ಟೇ ಅಲ್ಲದೆ ನೆರೆಯ ಆಂಧ್ರದ ಕರ್ನೂಲು ಮೂಲದ ಮೂವತ್ತು ಜನರು ತಡ ರಾತ್ರಿ ಬೆಂಗಳೂರಿನ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಬೆಂಗಳೂರಿಗೆ ಆಗಮಿಸದ ಕನ್ನಡಿಗ
author img

By

Published : Apr 23, 2019, 9:07 AM IST

ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಿಂದ ಬೆಚ್ಚಿದ ಕನ್ನಡಿಗರು ತಂಡೋಪತಂಡವಾಗಿ ತಾಯಿನಾಡಿನತ್ತ ಮುಖ ಮಾಡಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಹೆಚ್ಎಸ್ಆರ್ ಬಡಾವಣೆ ನಿವಾಸಿ ಮಯೂರ್ ಮತ್ತು ಅಮೂಲ್ಯ ದಂಪತಿ, ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ ಆಗಮಿಸಿದರು. ಕಳೆದ ರಾತ್ರಿ ಏರ್ ಇಂಡಿಯಾ ವಿಮಾನ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ದಂಪತಿ, ಶ್ರೀಲಂಕಾದ ಸರಣಿ ಬಾಂಬ್‌ ಸ್ಫೋಟದ ಬಗ್ಗೆ ಆಘಾತಕಾರಿ ಸಂಗತಿಗಳನ್ನ ಹಂಚಿಕೊಂಡರು. 'ಬಾಂಬ್ ಸ್ಫೋಟವಾದ ಶಾಂಗ್ರೀಲಾ ಹೋಟೆಲ್ ಪಕ್ಕದ ಮತ್ತೊಂದು ಹೋಟೆಲ್​​​ನಲ್ಲಿ ತಂಗಿದ್ದೆವು. ಅದೃಷ್ಟವಶಾತ್ ಘಟನೆ ನಡೆದ ದಿನ ಬೇರೆ ಕಡೆ ತೆರಳಿದ್ದರಿಂದ ಸಂಭವನೀಯ ದುರಂತದಿಂದ ಪಾರಾಗಿದ್ದೇವೆ' ಎಂದು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದರು.

ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸದ ಕನ್ನಡಿಗ

'ನಮಗೆ ಎಂದೂ ಈ ರೀತಿಯ ಅನುಭವ ಆಗಿಲ್ಲ. ಬಾಂಬ್ ಸ್ಫೋಟದ ಬಳಿಕ ನಾವೆಲ್ಲಾ ಸಾಕಷ್ಟು ಭಯಪಟ್ಟಿದ್ದೆವು. ದೇವರ ದಯೆ ನಾವೆಲ್ಲಾ ಮತ್ತೆ ನಮ್ಮ ನಾಡಿಗೆ ಬಂದಿದ್ದೇವೆ' ಎಂದು ಬೆಂಗಳೂರು ನಿವಾಸಿ ನಿತೇಶ್ ನಾಯಕ್ ಸೇರಿದಂತೆ ಹಲವರು ವಿಧ್ವಂಸಕ ದಾಳಿ ಕುರಿತು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಿಂದ ಬೆಚ್ಚಿದ ಕನ್ನಡಿಗರು ತಂಡೋಪತಂಡವಾಗಿ ತಾಯಿನಾಡಿನತ್ತ ಮುಖ ಮಾಡಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಹೆಚ್ಎಸ್ಆರ್ ಬಡಾವಣೆ ನಿವಾಸಿ ಮಯೂರ್ ಮತ್ತು ಅಮೂಲ್ಯ ದಂಪತಿ, ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ ಆಗಮಿಸಿದರು. ಕಳೆದ ರಾತ್ರಿ ಏರ್ ಇಂಡಿಯಾ ವಿಮಾನ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ದಂಪತಿ, ಶ್ರೀಲಂಕಾದ ಸರಣಿ ಬಾಂಬ್‌ ಸ್ಫೋಟದ ಬಗ್ಗೆ ಆಘಾತಕಾರಿ ಸಂಗತಿಗಳನ್ನ ಹಂಚಿಕೊಂಡರು. 'ಬಾಂಬ್ ಸ್ಫೋಟವಾದ ಶಾಂಗ್ರೀಲಾ ಹೋಟೆಲ್ ಪಕ್ಕದ ಮತ್ತೊಂದು ಹೋಟೆಲ್​​​ನಲ್ಲಿ ತಂಗಿದ್ದೆವು. ಅದೃಷ್ಟವಶಾತ್ ಘಟನೆ ನಡೆದ ದಿನ ಬೇರೆ ಕಡೆ ತೆರಳಿದ್ದರಿಂದ ಸಂಭವನೀಯ ದುರಂತದಿಂದ ಪಾರಾಗಿದ್ದೇವೆ' ಎಂದು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದರು.

ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸದ ಕನ್ನಡಿಗ

'ನಮಗೆ ಎಂದೂ ಈ ರೀತಿಯ ಅನುಭವ ಆಗಿಲ್ಲ. ಬಾಂಬ್ ಸ್ಫೋಟದ ಬಳಿಕ ನಾವೆಲ್ಲಾ ಸಾಕಷ್ಟು ಭಯಪಟ್ಟಿದ್ದೆವು. ದೇವರ ದಯೆ ನಾವೆಲ್ಲಾ ಮತ್ತೆ ನಮ್ಮ ನಾಡಿಗೆ ಬಂದಿದ್ದೇವೆ' ಎಂದು ಬೆಂಗಳೂರು ನಿವಾಸಿ ನಿತೇಶ್ ನಾಯಕ್ ಸೇರಿದಂತೆ ಹಲವರು ವಿಧ್ವಂಸಕ ದಾಳಿ ಕುರಿತು ಆತಂಕ ವ್ಯಕ್ತಪಡಿಸಿದರು.

Intro:SLUG: : ಶ್ರೀಲಂಕಾದಿಂದ ಬೆಂಗಳೂರಿನತ್ತ ಬಂದ ಮತ್ತಷ್ಟು ಮಂದಿ ಕನ್ನಡಿಗರು.

ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾ ದ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಬೆದರಿದ ಕನ್ನಡಿಗರು ಒಬ್ಬೊಬ್ಬರಾಗಿ ತಾಯ್ನಾಡು ಕರ್ನಾಟಕದತ್ತ ಅಗಮಿಸುತ್ತಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಎಚ್ ಎಸ್ ಅರ್ ಲೇಔಟ್ ನಿವಾಸಿಗಳಾದ ಮಯೂರ್-ಅಮೂಲ್ಯ ದಂಪತಿ ತಮ್ಮ ಮಗು ಜೊತೆಗೆ ಕ್ಷೇಮವಾಗಿ ಬೆಂಗಳೂರಿಗೆ ಆಗಮಿಸಿದರು. ಕಳೆದ ರಾತ್ರಿ ಏರ್ ಇಂಡಿಯಾ ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗಮಿಸಿದ ದಂಪತಿ ಶ್ರೀಲಂಕಾದ ದ ಘಟನಾವಳಿಗಳ ಬಗ್ಗೆ ಹಂಚಿಕೊಂಡರು. ಬಾಂಬ್ ಬ್ಲಾಸ್ಟ್ ಆದ ಪಕ್ಕದ ಹೋಟೆಲ್ ನಲ್ಲಿ ತಂಗಿದ್ದ ದಂಪತಿ ಅದೃಷ್ಟವಶಾತ್ ಘಟನೆ ನಡೆದ ದಿನ ನಾವು ಬೇರೋಂದು ಕಡೆ ತೆರಳಿದ್ದವು. ತಾವು ತಂಗಿದ್ದ ಪಕ್ಕದ ಶಾಂಗ್ರೀಲಾ ಹೋಟೆಲ್ ನಲ್ಲೇ ಘಟನೆ ನಡೆದ ವಿಷಯ ತಿಳಿದು ಅಘಾತವಾಯಿತು. ಹೇಗೋ ದೇವರ ದಯೆಯಿಂದ ಬದುಕಿ ಬೆಂಗಳೂರಿಗೆ ವಾಪಾಸ್ಸಾದೆವು ಎಂದರು.

ಇನ್ನು ಇದಕ್ಕೂ ಮುನ್ನ ಬಂದ ಬೆಂಗಳೂರು ನಿವಾಸಿ ನಿತೇಶ್ ನಾಯಕ್ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಬೆಂಗಳೂರಿಗೆ ಆಗಮಿಸಿದ್ರು. ಮತ್ತೊಂದೆಡೆ ಕೇವಲ ಕನ್ನಡಿಗರಷ್ಟೇ ಅಲ್ಲದೆ ನೆರೆಯ ರಾಜ್ಯ ಆಂಧ್ರದ ಕರ್ನೂಲು ಮೂಲದ ಮೂವತ್ತು ಜನರ ತಡ ರಾತ್ರಿ ೨.೩೦ ರ ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿನ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು. ಇನ್ನೂ ಈ ಬಗ್ಗೆ ಶ್ರೀಲಂಕಾದಿಂದ ಸುರಕ್ಷಿತವಾಗಿ ವಾಪಾಸ್ಸಾದ ಕನ್ನಡಿಗರು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡರು. ನಮಗೆ ಎಂದೂ ಈ ರೀತಿಯ ಅನುಭವ ಆಗಿಲ್ಲ.. ಬಾಂಬ್ ಬ್ಲಾಸ್ಟ್ ಆಗಿದ್ದು, ನಾವೆಲ್ಲಾ ಸಾಕಷ್ಟು ಭಯಪಟ್ಟಿದ್ವಿ.. ದೇವರ ದಯೆ ನಾವೆಲ್ಲಾ ಮತ್ತೇ ನಮ್ಮ ನಾಡಿಗೆ ಬಂದೇವು ಎಂದು ತಮ್ಮ ಅನುಭವವನ್ನು ಬಿಚ್ಚಿಟ್ಟರು..Body:NoConclusion:No

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.