ETV Bharat / state

ಐಎಂಎ ಜ್ಯುವೆಲ್ಲರ್ಸ್ ಹಗರಣ ಪ್ರಕರಣವನ್ನು ಸಿಬಿಐಗೆ ವಹಿಸಲಿ: ರಘು ಆಚಾರ್ - undefined

ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇದರಿಂದ ಪಾರದರ್ಶಕ ಹಾಗೂ ವಿಸ್ತೃತವಾದ ತನಿಖೆ ಆಗಲಿದೆ. ಸಿಐಟಿ, ಎಸ್‍ಐಟಿ ಅಥವಾ ಸಿಸಿಬಿ ತನಿಖೆ ಬದಲು ಸಿಬಿಐಗೆ ವಹಿಸುವುದು ಸೂಕ್ತ ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸಲಹೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ರಘು ಆಚಾರ್
author img

By

Published : Jun 12, 2019, 5:02 AM IST

ಬೆಂಗಳೂರು: ಕಳೆದ ಎರಡು ದಿನಗಳಿಂದ ಐಎಂಎ ಜ್ಯುವೆಲರ್ಸ್ ವಂಚನೆ ಸುದ್ದಿ ಬರ್ತಾ ಇದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲೂ 1500ಕ್ಕೂ ಹೆಚ್ಚು ಮಂದಿಗೆ ವಂಚನೆಯಾಗಿದೆ. ಇದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸಲಹೆ ನೀಡಿದ್ದಾರೆ.

ನಗರದ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಕರಣವನ್ನು ಸಿಬಿಐಗೆ ವಹಿಸುವುದರಿಂದ ಪಾರದರ್ಶಕ ಹಾಗೂ ವಿಸ್ತೃತವಾದ ತನಿಖೆ ಆಗಲಿದೆ. ಇದರಿಂದ ಸಿಐಟಿ, ಎಸ್‍ಐಟಿ ಅಥವಾ ಸಿಸಿಬಿ ತನಿಖೆ ಬದಲು ಸಿಬಿಐಗೆ ವಹಿಸುವುದು ಸೂಕ್ತ. ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕು. ಜನರಿಗೆ ದುಡ್ಡು ಕೊಡಿಸಬೇಕು. ಈ ನಿಟ್ಟಿನಲ್ಲಿ ಅವಕಾಶ ಸಿಕ್ಕರೆ ಸಿಎಂ ಎಚ್‍.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇನೆ ಎಂದರು.

ಚಿತ್ರದುರ್ಗಕ್ಕೆ ತೆರಳಿ, ಅಲ್ಲಿ ನಷ್ಟಕ್ಕೊಳಗಾದ ಮುಸಲ್ಮಾನ ಸಮುದಾದ ಸಾವಿರಾರು ನಾಗರಿಕರನ್ನು ಭೇಟಿ ಮಾಡುತ್ತೇನೆ. ಅವರಿಂದ ಸಿಗುವ ಮಾಹಿತಿಯನ್ನಾಧರಿಸಿ ಜನರಿಗೆ ಆದ ನಷ್ಟ ಇತ್ಯಾದಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ. ಸಿಎಂ ಖುದ್ದು ಭೇಟಿಯಾಗಿ ಸಿಬಿಐ ತನಿಖೆಗೆ ಮನವಿ ಮಾಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ರಘು ಆಚಾರ್

ನಮ್ಮ ಜಿಲ್ಲೆಯವರಿಗೆ ನಷ್ಟ...

ಕೆಲ ರಾಜಕಾರಣಿಗಳು ಐಎಂಎ ಮಾಲಿಕನ ಜತೆ ಇರೋ ಫೋಟೋ ಕೂಡ ಬರುತ್ತಿದೆ. ರಾಜಕಾರಣಿಗಳು ಕೂಡ ಕೆಲವೊಮ್ಮೆ ಸಭೆ ಸಮಾರಂಭಗಳಿಗೆ ಹೋಗಬೇಕಾಗುತ್ತೆ. ನನ್ನ ದಾವಣಗೆರೆ ಜಿಲ್ಲೆಯವರು ಕೂಡ ಹಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಇದೆ. ಒಂದೇ ದಿನದಲ್ಲಿ ನೂರಾರು ಕೋಟಿ ಮೋಸ ಮಾಡಲು ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದ ನಾಯಕರಿಗೂ ಕೂಡ ಜವಾಬ್ದಾರಿ ಇದೆ. ಪಕ್ಷಾತೀತವಾಗಿ ಈ ಪ್ರಕರಣವನ್ನ ಸಿಬಿಐಗೆ ನೀಡಬೇಕು. ಸಿಎಂ ಇದನ್ನ ಖಾಸಗಿಯಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದರು.

ಕೆಲವರು ಈ ಪ್ರಕರಣದ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ನಾನು ಇದನ್ನ ತನಿಖಾಧಿಕಾರಿಗೆ ಮಾಹಿತಿ ನೀಡುತ್ತೇನೆ. ಇದು ಸಿಐಡಿಗೆ ನೀಡೋ ವಿಷಯ ಅಲ್ಲ. ಹಿಂದೆ ಕೂಡ ಇದೇ ರೀತಿ ಪ್ರಕರಣ ಬಂದಿತ್ತು. ಅದರೆ ಏನೂ ಆಗಿಲ್ಲ. ಪೊಲೀಸರಿಗೆ ಗೊತ್ತಿಲ್ಲದೇ ಆಗುತ್ತಾ? ಗುಪ್ತಾಚರ ಇಲಾಖೆಗೆ ಗೊತ್ತಿಲ್ಲದೇ ಆಗುತ್ತಾ? ಗೃಹ ಸಚಿವರು ಸ್ಥಳಿಯ ಪೊಲೀಸ್ ಅಧಿಕಾರಿಯನ್ನ ಅಮಾನತು ಮಾಡಬೇಕು. ಹೀಗಾಗಿ ಸಿಬಿಐ ತನಿಖೆ ಮಾಡಬೇಕು ಎಂದು ಹೇಳಿದರು.

ಬೆಂಗಳೂರು: ಕಳೆದ ಎರಡು ದಿನಗಳಿಂದ ಐಎಂಎ ಜ್ಯುವೆಲರ್ಸ್ ವಂಚನೆ ಸುದ್ದಿ ಬರ್ತಾ ಇದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲೂ 1500ಕ್ಕೂ ಹೆಚ್ಚು ಮಂದಿಗೆ ವಂಚನೆಯಾಗಿದೆ. ಇದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸಲಹೆ ನೀಡಿದ್ದಾರೆ.

ನಗರದ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಕರಣವನ್ನು ಸಿಬಿಐಗೆ ವಹಿಸುವುದರಿಂದ ಪಾರದರ್ಶಕ ಹಾಗೂ ವಿಸ್ತೃತವಾದ ತನಿಖೆ ಆಗಲಿದೆ. ಇದರಿಂದ ಸಿಐಟಿ, ಎಸ್‍ಐಟಿ ಅಥವಾ ಸಿಸಿಬಿ ತನಿಖೆ ಬದಲು ಸಿಬಿಐಗೆ ವಹಿಸುವುದು ಸೂಕ್ತ. ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕು. ಜನರಿಗೆ ದುಡ್ಡು ಕೊಡಿಸಬೇಕು. ಈ ನಿಟ್ಟಿನಲ್ಲಿ ಅವಕಾಶ ಸಿಕ್ಕರೆ ಸಿಎಂ ಎಚ್‍.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇನೆ ಎಂದರು.

ಚಿತ್ರದುರ್ಗಕ್ಕೆ ತೆರಳಿ, ಅಲ್ಲಿ ನಷ್ಟಕ್ಕೊಳಗಾದ ಮುಸಲ್ಮಾನ ಸಮುದಾದ ಸಾವಿರಾರು ನಾಗರಿಕರನ್ನು ಭೇಟಿ ಮಾಡುತ್ತೇನೆ. ಅವರಿಂದ ಸಿಗುವ ಮಾಹಿತಿಯನ್ನಾಧರಿಸಿ ಜನರಿಗೆ ಆದ ನಷ್ಟ ಇತ್ಯಾದಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ. ಸಿಎಂ ಖುದ್ದು ಭೇಟಿಯಾಗಿ ಸಿಬಿಐ ತನಿಖೆಗೆ ಮನವಿ ಮಾಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ರಘು ಆಚಾರ್

ನಮ್ಮ ಜಿಲ್ಲೆಯವರಿಗೆ ನಷ್ಟ...

ಕೆಲ ರಾಜಕಾರಣಿಗಳು ಐಎಂಎ ಮಾಲಿಕನ ಜತೆ ಇರೋ ಫೋಟೋ ಕೂಡ ಬರುತ್ತಿದೆ. ರಾಜಕಾರಣಿಗಳು ಕೂಡ ಕೆಲವೊಮ್ಮೆ ಸಭೆ ಸಮಾರಂಭಗಳಿಗೆ ಹೋಗಬೇಕಾಗುತ್ತೆ. ನನ್ನ ದಾವಣಗೆರೆ ಜಿಲ್ಲೆಯವರು ಕೂಡ ಹಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಇದೆ. ಒಂದೇ ದಿನದಲ್ಲಿ ನೂರಾರು ಕೋಟಿ ಮೋಸ ಮಾಡಲು ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದ ನಾಯಕರಿಗೂ ಕೂಡ ಜವಾಬ್ದಾರಿ ಇದೆ. ಪಕ್ಷಾತೀತವಾಗಿ ಈ ಪ್ರಕರಣವನ್ನ ಸಿಬಿಐಗೆ ನೀಡಬೇಕು. ಸಿಎಂ ಇದನ್ನ ಖಾಸಗಿಯಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದರು.

ಕೆಲವರು ಈ ಪ್ರಕರಣದ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ನಾನು ಇದನ್ನ ತನಿಖಾಧಿಕಾರಿಗೆ ಮಾಹಿತಿ ನೀಡುತ್ತೇನೆ. ಇದು ಸಿಐಡಿಗೆ ನೀಡೋ ವಿಷಯ ಅಲ್ಲ. ಹಿಂದೆ ಕೂಡ ಇದೇ ರೀತಿ ಪ್ರಕರಣ ಬಂದಿತ್ತು. ಅದರೆ ಏನೂ ಆಗಿಲ್ಲ. ಪೊಲೀಸರಿಗೆ ಗೊತ್ತಿಲ್ಲದೇ ಆಗುತ್ತಾ? ಗುಪ್ತಾಚರ ಇಲಾಖೆಗೆ ಗೊತ್ತಿಲ್ಲದೇ ಆಗುತ್ತಾ? ಗೃಹ ಸಚಿವರು ಸ್ಥಳಿಯ ಪೊಲೀಸ್ ಅಧಿಕಾರಿಯನ್ನ ಅಮಾನತು ಮಾಡಬೇಕು. ಹೀಗಾಗಿ ಸಿಬಿಐ ತನಿಖೆ ಮಾಡಬೇಕು ಎಂದು ಹೇಳಿದರು.

Intro:newsBody:ಐಎಂಎ ಜ್ಯುವೆಲ್ಲರ್ಸ್ ಹಗರಣ ಸಿಬಿಐ ತನಿಖೆಗೆ ವಹಿಸಲಿ: ರಘು ಆಚಾರ್

ಬೆಂಗಳೂರು: ಕಳೆದ ಎರಡು ದಿನಗಳಿಂದ ಐಎಂಎ ಜ್ಯವೆಲರ್ಸ್ ವಂಚನೆ ಸುದ್ದಿ ಬರ್ತಾ ಇದೆ. ನನ್ನ ಕ್ಷೇತ್ರ ವ್ಯಾಪ್ತಿಯಲ್ಲೂ 1500ಕ್ಕೂ ಹೆಚ್ಚು ಮಂದಿಗೆ ವಂಚನೆಯಾಗಿದೆ. ಇದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸಲಹೆ ನೀಡಿದ್ದಾರೆ.
ಬೆಂಗಳೂರಿನ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರಕರಣವನ್ನು ಸಿಬಿಐಗೆ ವಹಿಸುವುದರಿಂದ ಪಾರದರ್ಶಕ ಹಾಗೂ ವಿಸ್ತೃತವಾದ ತನಿಖೆ ಆಗಲಿದೆ. ಇದರಿಂದ ಸಿಐಟಿ, ಎಸ್‍ಐಟಿ ಅಥವಾ ಸಿಸಿಬಿ ತನಿಖೆ ಬದಲು ಸಿಬಿಐಗೆ ವಹಿಸುವುದು ಸೂಕ್ತ. ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕು, ಜನರಿಗೆ ದುಡ್ಡು ಕೊಡಿಸಬೇಕು. ಈ ನಿಟ್ಟಿನಲ್ಲಿ ಅವಕಾಶ ಸಿಕ್ಕರೆ ಇಂದು ಇಲ್ಲಾ ಗುರುವಾರ ಸಿಎಂ ಎಚ್‍.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇನೆ. ನಾಳೆ ಚಿತ್ರದುರ್ಗಕ್ಕೆ ತೆರಳುತ್ತಿದ್ದು, ಅಲ್ಲಿ ನಷ್ಟಕ್ಕೊಳಗಾದ ಮುಸಲ್ಮಾನ್ ಸಮುದಾದ ಸಾವಿರಾರು ನಾಗರಿಕರನ್ನು ಭೇಟಿ ಮಾಡುತ್ತೇನೆ. ಅವರಿಂದ ಸಿಗುವ ಮಾಹಿತಿ ಆಧರಿಸಿ ಜನರಿಗೆ ಆದ ನಷ್ಟ ಇತ್ಯಾದಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ. ಸಿಎಂ ಖುದ್ದು ಭೇಟಿಯಾಗಿ ಸಿಬಿಐ ತನಿಖೆಗೆ ಮನವಿ ಮಾಡುತ್ತೇನೆ ಎಂದರು.
ನಮ್ಮ ಜಿಲ್ಲೆಯವರಿಗೆ ನಷ್ಟ
ಕೆಲ ರಾಜಕಾರಣಿಗಳು ಐಎಂಎ ಮಾಲಿಕನ ಜತೆ ಇರೋ ಫೋಟೋ ಕೂಡ ಬರ್ತಾಇದೆ. ರಾಜಕಾರಣಿಗಳು ಕೂಡ ಕೆಲವೊಮ್ಮೆ ಸಭೆ ಸಮಾರಂಭಗಳಿಗೆ ಹೋಗಬೇಕಾಗುತ್ತೆ. ನನ್ನ ದಾವಣಗೆರೆ ಜಿಲ್ಲೆಯವರು ಕೂಡ ಹಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಇದೆ. ಒಂದೇ ದಿನದಲ್ಲಿ ನೂರಾರು ಕೋಟಿ ಮೋಸ ಮಾಡಲು ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಸೇರಿದಂತೆ ವಿರೋಧ ಪಕ್ಷದ ನಾಯಕರಿಗೂ ಕೂಡ ಜವಾಬ್ದಾರಿ ಇದೆ. ಪಕ್ಷಾತೀತವಾಗಿ ಈ ಪ್ರಕರಣವನ್ನ ಸಿಬಿಐಗೆ ನೀಡಬೇಕು. ಸಿಎಂ ಇದನ್ನ ಖಾಸಗಿಯಾಗಿ ತೆಗೆದುಕೊಂಡು ತನಿಖೆ ನಡೆಸಬೇಕು ಎಂದರು.
ಕೆಲವರು ಈ ಪ್ರಕರಣದ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ನಾನು ಇದನ್ನ ತನಿಖಾದಧಿಕಾರಿಗೆ ಮಾಹಿತಿ ನೀಡುತ್ತೇನೆ. ಇದು ಸಿಐಡಿಗೆ ನೀಡೋ ವಿಷಯ ಅಲ್ಲ. ಹಿಂದೆ ಕೂಡ ಇದೇ ರೀತಿ ಪ್ರಕರಣ ಬಂದಿತ್ತು. ಅದರೆ ಏನು ಆಗಿಲ್ಲ. ಪೋಲಿಸರಿಗೆ ಗೊತ್ತಿಲ್ಲದೇ ಆಗುತ್ತಾ? ಗುಪ್ತಾಚರ ಇಲಾಖೆಗೆ ಗೊತ್ತಿಲ್ಲದೇ ಆಗುತ್ತಾ? ಗೃಹ ಸಚಿವರು ಸ್ಥಳಿಯ ಪೋಲಿಸ್ ಅಧಿಕಾರಿಯನ್ನ ಅಮಾನತು ಮಾಡಬೇಕು. ಹೀಗಾಗಿಯೇ ಸಿಬಿಐ ತನಿಖೆ ಮಾಡಬೇಕು ಎಂದು ಹೇಳಿದರು
ಹಿಂದಿನ ಪ್ರಕರಣ ಏನಾದವು?
ಎಂಬಿಡೆಂಟ್ ಅಗ್ರಿಗೋಲ್ಡ್ ಎಲ್ಲಾ ಏನಾಯ್ತು? ಎಲ್ಲಾ ಆಚೇನೇ ಇದಾರೆ. ಸಿಐಡಿ ತನಿಖೆ ಮಾಡಿದ್ರು ಜನ ನಂಬೋ ಸ್ಟೇಜ್ ಅಲ್ಲಿ ಇಲ್ಲ. ಹೀಗಾಗಿ ಸಿಬಿಐ ತನಿಖೆ ಆಗಬೇಕು. ರೋಷನ್ ಬೇಗ್ ಅವರೇ ಸಿಬಿಐ ತನಿಖೆ ನಡೆಸಬೇಕು ಅಂದಿದ್ದಾರೆ. ಅಲ್ಪಸಂಖ್ಯಾತರಲ್ಲಿ ಬಹಳ ಬಡ ಜನತೆ ಈ ಸಂಸ್ಥೆಯಲ್ಲಿ ಹಣ ಹೂಡಿದ್ದಾರೆ. ಅದಕ್ಕಾಗಿಯೇ ಸರ್ಕಾರ ಸಿಬಿಐಗೆ ಈ ಪ್ರಕರಣವನ್ನ ನೀಡಲಿ. 10-15 ಕಂಪನಿಗಳು ಹೀಗೆ ಮಾಡಿವೆ. ಅವೆಲ್ಲದರ ತನಿಖೆ ಏನಾಯ್ತು ? ಗೊತ್ತೇ ಆಗ್ತಿಲ್ಲ. ಹಾಗೆಯೇ ಇದು ಆಗಬಾರದು. ಮತ್ತೆ ಜನಪ್ರತಿನಿಧಿಗಳು ಗ್ರಾಮ ಪಂಚಾಯತಿ ಚುನಾವಣೆಗೆ ಜನರ ಬಳಿ ಹೋಗಬೇಕಿದೆ. ಅದಕ್ಕಾಗಿಯಾದರೂ ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ. ಎಸ್ಐಟಿ ಹಾಗೂ ಸಿಐಡಿ ಮೇಲೆ ನನಗೆ ನಂಬಿಕೆ ಇಲ್ಲ. ಪ್ರಕರಣವನ್ನ ಸಿಬಿಐಗೆ ನೀಡೋದು ಒಳ್ಳೆಯದು ಎಂದು ಹೇಳಿದರು.
ಇಂತಹ ಪ್ರಕರಣಗಳು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿರಲ್ವಾ ? ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಗೊತ್ತಿರಲ್ವಾ ? ಜನಪ್ರತಿನಿಧಿಗಳಿಗೆ ಗೊತ್ತಿರಲ್ವಾ ? ಗ್ರಾಮ ವಾಸ್ತವ್ಯ ಮಾಡಿ ಗ್ರಾಮದ ಜನರಿಗೆ ಒಳ್ಳೆಯದಾಗ್ಲಿ ಅಂತಾ, ಆದ್ರೆ ಬೆಂಗಳೂರಿಗೂ ಒಳ್ಳೆಯದಾಗಬೇಕಲ್ವಾ ? ಆ ಬಗ್ಗೆ ಸಿಎಂ ಗಮನ ಹರಿಸಬೇಕಿದೆ ಎಂದು ಹೇಳಿದರು.

Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.