ETV Bharat / state

ಮನ್ಸೂರ್ ಖಾನ್ ರಕ್ಷಣೆಗೆ ಪೊಲೀಸ್ ಇಲಾಖೆ ಸಿದ್ಧ: ಎಸ್​ಐಟಿ ರವಿಕಾಂತೇಗೌಡ

ಐಎಂಎ ಜ್ಯುವೆಲ್ಲರಿ ಮುಖ್ಯಸ್ಥ ಮನ್ಸೂರ್ ಖಾನ್ ವಿಡಿಯೋ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ, ಮನ್ಸೂರ್​​​ ಎಲ್ಲಿದ್ದಾನೆ ಎಂಬ‌ ಮಾಹಿತಿ ಗೊತ್ತು ಹಾಗೂ ಆತ ವಿಡಿಯೋದಲ್ಲಿ ಹೇಳಿದ ಹೆಸರಿನವರು ನಿಜಾವಾಗ್ಲು ಐಎಂಎ ದೋಖಾದಲ್ಲಿ ಭಾಗಿಯಾಗಿದ್ರೆ ತನಿಖೆ ನಡೆಸುತ್ತೇವೆ ಎಂದು ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.

author img

By

Published : Jun 24, 2019, 2:48 PM IST

ರಕ್ಷಣೆಗೆ ಪೊಲೀಸ್ ಇಲಾಖೆ ಸಿದ್ದ

ಬೆಂಗಳೂರು: ಭಾನುವಾರ ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ್ದನ್ನು ಗಮನಿಸಲಾಗಿದೆ. ಹಾಗೆ ಆ ವಿಡಿಯೋದಲ್ಲಿ ಆತ ರಕ್ಷಣೆ ಕೋರಿದ್ದು, ಆತನಿಗೆ ರಕ್ಷಣೆ ಕೊಡಲು ನಮ್ಮ ಪೊಲೀಸ್ ಇಲಾಖೆ ಸಿದ್ಧವಿದೆ ಎಂದು ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಐಎಂಎ ಜ್ಯುವೆಲ್ಲರಿ ವಂಚನೆ ಆರೋಪಿ ಮನ್ಸೂರ್​​​ ಎಲ್ಲಿದ್ದಾನೆ ಎಂಬ‌ ಮಾಹಿತಿ ಗೊತ್ತು. ತನಿಖೆಯ ದೃಷ್ಟಿಯಿಂದ ಕೆಲ ವಿಚಾರ ಗೌಪ್ಯವಾಗಿಡಬೇಕು. ಐಎಂಎ ತನಿಖೆ ತೀವ್ರಗತಿಯಲ್ಲಿ ಚುರುಕುಗೊಳಿಸಿದ್ದೀವಿ. ಕಂಪನಿಯ‌ ಮಾಲೀಕ ಮನ್ಸೂರ್ ಎಲ್ಲಿ ಆಸ್ತಿ ಮಾಡಿದ್ದಾನೆ ಅನ್ನೋದ್ರ ಮಾಹಿತಿಯನ್ನ ಕಲೆಹಾಕಿದ್ದೀವಿ. ಹಾಗೆಯೇ ಪ್ರಾಥಮಿಕ ಹಂತವಾಗಿ ಕಂಪನಿಯ 12 ಜನ ನಿರ್ದಶಕರಾದ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತಿಳಿಸಿದರು.‌

ಮನ್ಸೂರ್​ಗೆ ರಕ್ಷಣೆ ಕೊಡಲು ಪೊಲೀಸ್ ಇಲಾಖೆ ಸಿದ್ಧ: ಎಸ್​ಐಟಿ ರವಿಕಾಂತೇಗೌಡ

ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ್ದನ್ನು ಗಮನಿಸಲಾಗಿದೆ. ಆ ವಿಡಿಯೋದಲ್ಲಿ ಮನ್ಸೂರ್​​ ರಕ್ಷಣೆ ಕೋರಿದ್ದಾನೆ, ಆತನಿಗೆ ಹಾಗೂ ಆತನ ಕುಟುಂಬಕ್ಕೆ ರಕ್ಷಣೆ ಕೊಡಲು ನಮ್ಮ ಪೊಲೀಸ್ ಇಲಾಖೆ ಸಿದ್ಧವಿದೆ. ಆದ್ರೆ ಆತ ವಿಡಿಯೋದಲ್ಲಿ ಕೆಲ ರಾಜಕಾರಣಿಗಳ ಹೆಸರನ್ನ ಹೇಳಿದ್ದಾನೆ. ಆತನ ಹೇಳಿಕೆ ಸತ್ಯ ಇರಬಹುದು, ಸುಳ್ಳು ಇರಬಹುದು. ಮನ್ಸೂರ್​ ಹೇಳಿದ ಹೆಸರಿನವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದಿಲ್ಲ. ಆತ ಹೇಳಿದ ಹೆಸರಿನವರು ನಿಜಾವಾಗ್ಲು ಐಎಂಎ ಜ್ಯುವೆಲ್ಲರಿ ಹಗರಣದಲ್ಲಿ ಭಾಗಿಯಾಗಿದ್ರೆ ತನಿಖೆ ನಡೆಸುತ್ತೇವೆ ಎಂದು ಎಸ್ ಐ ಟಿ ಮುಖ್ಯಸ್ಥ ರವಿಕಾಂತೇಗೌಡ ವಿವರಿಸಿದರು.

ಬೆಂಗಳೂರು: ಭಾನುವಾರ ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ್ದನ್ನು ಗಮನಿಸಲಾಗಿದೆ. ಹಾಗೆ ಆ ವಿಡಿಯೋದಲ್ಲಿ ಆತ ರಕ್ಷಣೆ ಕೋರಿದ್ದು, ಆತನಿಗೆ ರಕ್ಷಣೆ ಕೊಡಲು ನಮ್ಮ ಪೊಲೀಸ್ ಇಲಾಖೆ ಸಿದ್ಧವಿದೆ ಎಂದು ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಐಎಂಎ ಜ್ಯುವೆಲ್ಲರಿ ವಂಚನೆ ಆರೋಪಿ ಮನ್ಸೂರ್​​​ ಎಲ್ಲಿದ್ದಾನೆ ಎಂಬ‌ ಮಾಹಿತಿ ಗೊತ್ತು. ತನಿಖೆಯ ದೃಷ್ಟಿಯಿಂದ ಕೆಲ ವಿಚಾರ ಗೌಪ್ಯವಾಗಿಡಬೇಕು. ಐಎಂಎ ತನಿಖೆ ತೀವ್ರಗತಿಯಲ್ಲಿ ಚುರುಕುಗೊಳಿಸಿದ್ದೀವಿ. ಕಂಪನಿಯ‌ ಮಾಲೀಕ ಮನ್ಸೂರ್ ಎಲ್ಲಿ ಆಸ್ತಿ ಮಾಡಿದ್ದಾನೆ ಅನ್ನೋದ್ರ ಮಾಹಿತಿಯನ್ನ ಕಲೆಹಾಕಿದ್ದೀವಿ. ಹಾಗೆಯೇ ಪ್ರಾಥಮಿಕ ಹಂತವಾಗಿ ಕಂಪನಿಯ 12 ಜನ ನಿರ್ದಶಕರಾದ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ತಿಳಿಸಿದರು.‌

ಮನ್ಸೂರ್​ಗೆ ರಕ್ಷಣೆ ಕೊಡಲು ಪೊಲೀಸ್ ಇಲಾಖೆ ಸಿದ್ಧ: ಎಸ್​ಐಟಿ ರವಿಕಾಂತೇಗೌಡ

ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ್ದನ್ನು ಗಮನಿಸಲಾಗಿದೆ. ಆ ವಿಡಿಯೋದಲ್ಲಿ ಮನ್ಸೂರ್​​ ರಕ್ಷಣೆ ಕೋರಿದ್ದಾನೆ, ಆತನಿಗೆ ಹಾಗೂ ಆತನ ಕುಟುಂಬಕ್ಕೆ ರಕ್ಷಣೆ ಕೊಡಲು ನಮ್ಮ ಪೊಲೀಸ್ ಇಲಾಖೆ ಸಿದ್ಧವಿದೆ. ಆದ್ರೆ ಆತ ವಿಡಿಯೋದಲ್ಲಿ ಕೆಲ ರಾಜಕಾರಣಿಗಳ ಹೆಸರನ್ನ ಹೇಳಿದ್ದಾನೆ. ಆತನ ಹೇಳಿಕೆ ಸತ್ಯ ಇರಬಹುದು, ಸುಳ್ಳು ಇರಬಹುದು. ಮನ್ಸೂರ್​ ಹೇಳಿದ ಹೆಸರಿನವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದಿಲ್ಲ. ಆತ ಹೇಳಿದ ಹೆಸರಿನವರು ನಿಜಾವಾಗ್ಲು ಐಎಂಎ ಜ್ಯುವೆಲ್ಲರಿ ಹಗರಣದಲ್ಲಿ ಭಾಗಿಯಾಗಿದ್ರೆ ತನಿಖೆ ನಡೆಸುತ್ತೇವೆ ಎಂದು ಎಸ್ ಐ ಟಿ ಮುಖ್ಯಸ್ಥ ರವಿಕಾಂತೇಗೌಡ ವಿವರಿಸಿದರು.

Intro:ಮನ್ಸೂರ್ ಎಲ್ಲಿದ್ದಾನೆ ಎಂಬ‌ ಮಾಹಿತಿ ಗೊತ್ತು. ತನಿಖೆಯ ದೃಷ್ಟಿಯಿಂದ ಕೆಲ ವಿಚಾರ ಗೌಪ್ಯವಾಗಿರಬೇಕು. ಎಸ್ಐಟಿ ಮುಖ್ಯಸ್ಥ ಹೇಳಿಕೆ.

ಮೋಜೋ ಬೈಟ್ English kanada ಇದೆ

ಮನ್ಸೂರ್ ಖಾನ್ ವಿಡಿಯೋ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ರವಿಕಾಂತೇಗೌಡ ಮಾಧ್ಯಮ ಜೊತೆ ಮಾತಡಿ ಐಎಂಎ ತನಿಖೆ ತೀವ್ರಗತಿಯಲ್ಲಿ ಚುರುಕುಗೊಳಿಸಿದ್ದಿವಿ. ಐ ಎಂ ಎ ಕಂಪನಿಯ‌ ಮಾಲೀಕ ಮನ್ಸೂರ್ ಎಲ್ಲಿ ಎಲ್ಲಾ ಆಸ್ತಿ ಮಾಡಿದ್ದಾನೆ ಅನ್ನೋದ್ರ ಮಾಹಿತಿಯನ್ನ ಕಲೆಹಾಕಿದ್ದಿವಿ

ಹಾಗೆ ಪ್ರಾಥಮಿಕ ಹಂತವಾಗಿ ಕಂಪೆನಿಯ 12 ಜನ ನಿರ್ದಶಕರಾದ ಆರೋಪಿಗಳನ್ನ ಬಂಧನ ಮಾಡಲಾಗಿದೆ.‌ಹಾಗೆ ನಿನ್ನೆ ಮನ್ಸೂರ್ ವಿಡಿಯೋ ಬಿಡುಗಡೆ ಮಾಡಿದ್ದನ್ನು ಗಮನಿಸಲಾಗಿದೆ. ಹಾಗೆ ಆ ವಿಡಿಯೋದಲ್ಲಿ ಆತ ರಕ್ಷಣೆ ಕೋರಿದ್ದಾನೆ, ಆತನಿಗೆ ರಕ್ಷಣೆ ಕೊಡಲು ನಮ್ಮ ಪೊಲೀಸ್ ಇಲಾಖೆ ಸಿದ್ದವಿದೆ. ಹಾಗೆ ಆತನಿಗೆ ಆತನ ಕುಟುಂಬಕ್ಕೆ ನಾವು ರಕ್ಷಣೆ ನೀಡುತ್ತೇವೆ .

ಆದ್ರೆ ಆತ ವಿಡಿಯೋದಲ್ಲಿ ಕೆಲ ವ್ಯಕ್ತಿಗಳು ರಾಜಕಾರಣಿಗಳ ಹೆಸರನ್ನ ಹೇಳಿದ್ದಾನೆ. ಆದ್ರೆ ಆತನ ಹೇಳಿಕೆ ಸತ್ಯ ಇರಬಹುದು, ಸುಳ್ಳು ಇರಬಹುದು.ಮನ್ಸೂರು ಹೇಳಿದ ಹೆಸರಿನವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದಿಲ್ಲ. ಆತ ಹೇಳಿದ ಹೆಸರಿನವರು ನಿಜಾವಾಗ್ಲು ಐಎಂವಜ್ಯುವೇಲರಿ ದೋಖಾದಲ್ಲಿ ಭಾಗಿಯಾಗಿದ್ರೆ ತನಿಖೆ ನಡೆಸ್ತಿವಿ.
ಸದ್ಯ ಆತ ಎಲ್ಲಿದ್ದಾನೆ ಎಂಬುದು ಗೊತ್ತಿದೆ. ತನಿಖೆ ಹಂತದಲ್ಲಿ ಇರೋದ್ರಿಂದ ಆತ ಎಲ್ಲಿದ್ದಾನೆ ಎಂಬುದನ್ನು ಹೇಳೋದಿಲ್ಲ .ಹಾಗೆ ಇಂದು ಮುಂಜಾನೆ ಯಿಂದ ಐಎಂಎ ಸಂಸ್ಥೆಯಲ್ಲಿ ಎಸ್ಐಟಿ ತಂಡ ದಾಳಿ ನಡೆಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ಎಸ್ ಐ ಟಿ ಮುಖ್ಯಸ್ಥ ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ.Body:KN_BNG_04_24_IMA_BYITE_BHAVYA_7204498Conclusion:KN_BNG_04_24_IMA_BYITE_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.