ETV Bharat / state

ಲಂಬಾಣಿ ಎಂಬ ಕಾರಣಕ್ಕೆ ನನಗೆ ಗೌರವ ಸಿಗುತ್ತಿಲ್ಲ: ತಾಪಂ ಅಧ್ಯಕ್ಷೆ ಯಶೋಧಾ

author img

By

Published : Jun 12, 2020, 11:17 PM IST

ನಾನೊಬ್ಬ ಲಂಬಾಣಿ ಮಹಿಳೆಯಾಗಿದ್ದೇನೆ ಎನ್ನುವ ಕಾರಣಕ್ಕೆ ಗೌರವ ನೀಡುತ್ತಿಲ್ಲ. ಕಚೇರಿಗೆ ಬಂದರೆ ನನ್ನ ಜೊತೆ ಅಧಿಕಾರಿಗಳು ಯಾರು ಮಾತನಾಡಲ್ಲ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ್​ ಅಸಮಾಧಾನ ವ್ಯಕ್ತಪಡಿಸಿದರು.

Yashodha Rathod resents the authorities
ಅಧಿಕಾರಿಗಳ ವಿರುದ್ಧ ಯಶೋಧಾ ರಾಠೋಡ್​ ಅಸಮಾಧಾನ.

ಬಸವಕಲ್ಯಾಣ: ತಾಪಂ ಇಓ ಸೇರಿದಂತೆ ಕಚೇರಿ ಅಧಿಕಾರಿಗಳು ನಮಗೆ ಗೌರವವೇ ಕೊಡುತ್ತಿಲ್ಲ. ಜನ ಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾದರೆ ಜನರ ಮಧ್ಯೆ ನಾವು ಹೇಗೆ ಕೆಲಸ ಮಾಡಬೇಕು? ನಮ್ಮ ಮಾತಿಗೆ ಇಲ್ಲಿ ಬೆಲೆ ಇಲ್ಲ ಅಂದರೆ ಹೇಗೆ? ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ್​ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳ ವರ್ತನೆಯಿಂದ ಬೇಸರವಾಗುತ್ತಿದೆ. ಅವರನ್ನಾದರೂ ಕೆಲಸದಿಂದ ವಜಾಗೊಳಿಸಿ, ಇಲ್ಲವಾದಲ್ಲಿ ನನ್ನನ್ನಾದರೂ ಮನೆಗೆ ಕಳಿಸಿ. ಇದನ್ನು ಸರಿಪಡಿಸದಿದ್ದಲ್ಲಿ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಸಭೆಯಲ್ಲಿದ್ದ ಶಾಸಕರ ಮುಂದೆ ಅಸಹಾಯಕತೆ ತೋರ್ಪಡಿಸಿದರು.

ಅಧಿಕಾರಿಗಳ ವಿರುದ್ಧ ಯಶೋಧಾ ರಾಠೋಡ್​ ಅಸಮಾಧಾನ

ನಂತರ ಮಾತು ಮುಂದುವರೆಸಿದ ಅವರು, ನಾನೊಬ್ಬ ಲಂಬಾಣಿ ಮಹಿಳೆಯಾಗಿದ್ದೇನೆ ಎನ್ನುವ ಕಾರಣಕ್ಕೆ ನನಗೆ ಗೌರವ ನೀಡುತ್ತಿಲ್ಲ. ಕಚೇರಿಗೆ ಬಂದರೆ ನನ್ನ ಜೊತೆ ಅಧಿಕಾರಿಗಳು ಯಾರು ಮಾತನಾಡಲ್ಲ. ತಾಲೂಕಿನಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳು ಸೇರಿದಂತೆ ತಾಲೂಕು​ ಪಂಚಾಯ್ತಿಯಲ್ಲಿ ನಡೆಯುವ ಕಾರ್ಯಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಂತರ ಅಧ್ಯಕ್ಷರ ಮಾತಿಗೆ ಧ್ವನಿಗೂಡಿಸಿದ ಸದಸ್ಯ ರಾಜು ಢೋಲೆ, ನರಸಾರೆಡ್ಡಿ, ಸಿದ್ರಾಮ ಕಾಮಣ್ಣ ಸೇರಿದಂತೆ ಇತರ ಸದಸ್ಯರು, ನಮ್ಮ ಮಾತಿಗೆ ಇಲ್ಲಿ ಯಾರು ಬೆಲೆ ಕೊಡುತ್ತಿಲ್ಲ. ನಿಮ್ಮ ಮುಖ ನೋಡಿ ಸುಮ್ಮನಿದ್ದೇವೆ. ವ್ಯವಸ್ಥೆ ಸರಿಪಡಿಸದಿದ್ದರೆ ನಾವೆಲ್ಲ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.

ತದನಂತರ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಮಾಧಾನ ಪಡಿಸಿದ ಶಾಸಕ ಬಿ. ನಾರಾಯಣರಾವ್​, ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಗೌರವ ಕೊಡಬೇಕು. ಗೌರವ ಕೊಡದ ಅಧಿಕಾರಿಗಳನ್ನು ಇಲ್ಲಿ ಇರಲು ಒಂದು ಕ್ಷಣವೂ ಅವಕಾಶ ಕೊಡುವುದಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆಯಲು ಯತ್ನಿಸಿದರು.

ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ಗುರು ಬಸವಣ್ಣನವರ ನಾಡಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮೇಲು, ಕೀಳು ಎನ್ನುವ ಭಾವನೆಯಿಂದ ವರ್ತಿಸದೆ ಎಲ್ಲರನ್ನು ಸಮಾನರಾಗಿ ನೋಡಿಕೊಳ್ಳಬೇಕು. ಯೋಜನೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಬೇಕು. ಅಧಿಕಾರಿ-ಜನಪ್ರತಿನಿಧಿಗಳ ಪರಸ್ಪರ ಸಹಕಾರ ಮತ್ತು ಸಮನ್ವತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಬಸವಕಲ್ಯಾಣ: ತಾಪಂ ಇಓ ಸೇರಿದಂತೆ ಕಚೇರಿ ಅಧಿಕಾರಿಗಳು ನಮಗೆ ಗೌರವವೇ ಕೊಡುತ್ತಿಲ್ಲ. ಜನ ಪ್ರತಿನಿಧಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾದರೆ ಜನರ ಮಧ್ಯೆ ನಾವು ಹೇಗೆ ಕೆಲಸ ಮಾಡಬೇಕು? ನಮ್ಮ ಮಾತಿಗೆ ಇಲ್ಲಿ ಬೆಲೆ ಇಲ್ಲ ಅಂದರೆ ಹೇಗೆ? ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ್​ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳ ವರ್ತನೆಯಿಂದ ಬೇಸರವಾಗುತ್ತಿದೆ. ಅವರನ್ನಾದರೂ ಕೆಲಸದಿಂದ ವಜಾಗೊಳಿಸಿ, ಇಲ್ಲವಾದಲ್ಲಿ ನನ್ನನ್ನಾದರೂ ಮನೆಗೆ ಕಳಿಸಿ. ಇದನ್ನು ಸರಿಪಡಿಸದಿದ್ದಲ್ಲಿ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಸಭೆಯಲ್ಲಿದ್ದ ಶಾಸಕರ ಮುಂದೆ ಅಸಹಾಯಕತೆ ತೋರ್ಪಡಿಸಿದರು.

ಅಧಿಕಾರಿಗಳ ವಿರುದ್ಧ ಯಶೋಧಾ ರಾಠೋಡ್​ ಅಸಮಾಧಾನ

ನಂತರ ಮಾತು ಮುಂದುವರೆಸಿದ ಅವರು, ನಾನೊಬ್ಬ ಲಂಬಾಣಿ ಮಹಿಳೆಯಾಗಿದ್ದೇನೆ ಎನ್ನುವ ಕಾರಣಕ್ಕೆ ನನಗೆ ಗೌರವ ನೀಡುತ್ತಿಲ್ಲ. ಕಚೇರಿಗೆ ಬಂದರೆ ನನ್ನ ಜೊತೆ ಅಧಿಕಾರಿಗಳು ಯಾರು ಮಾತನಾಡಲ್ಲ. ತಾಲೂಕಿನಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳು ಸೇರಿದಂತೆ ತಾಲೂಕು​ ಪಂಚಾಯ್ತಿಯಲ್ಲಿ ನಡೆಯುವ ಕಾರ್ಯಚಟುವಟಿಕೆಗಳ ಬಗ್ಗೆಯೂ ಮಾಹಿತಿ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಂತರ ಅಧ್ಯಕ್ಷರ ಮಾತಿಗೆ ಧ್ವನಿಗೂಡಿಸಿದ ಸದಸ್ಯ ರಾಜು ಢೋಲೆ, ನರಸಾರೆಡ್ಡಿ, ಸಿದ್ರಾಮ ಕಾಮಣ್ಣ ಸೇರಿದಂತೆ ಇತರ ಸದಸ್ಯರು, ನಮ್ಮ ಮಾತಿಗೆ ಇಲ್ಲಿ ಯಾರು ಬೆಲೆ ಕೊಡುತ್ತಿಲ್ಲ. ನಿಮ್ಮ ಮುಖ ನೋಡಿ ಸುಮ್ಮನಿದ್ದೇವೆ. ವ್ಯವಸ್ಥೆ ಸರಿಪಡಿಸದಿದ್ದರೆ ನಾವೆಲ್ಲ ರಾಜೀನಾಮೆ ನೀಡಲು ನಿರ್ಧರಿಸಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.

ತದನಂತರ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಮಾಧಾನ ಪಡಿಸಿದ ಶಾಸಕ ಬಿ. ನಾರಾಯಣರಾವ್​, ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಗೌರವ ಕೊಡಬೇಕು. ಗೌರವ ಕೊಡದ ಅಧಿಕಾರಿಗಳನ್ನು ಇಲ್ಲಿ ಇರಲು ಒಂದು ಕ್ಷಣವೂ ಅವಕಾಶ ಕೊಡುವುದಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆಯಲು ಯತ್ನಿಸಿದರು.

ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ಗುರು ಬಸವಣ್ಣನವರ ನಾಡಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮೇಲು, ಕೀಳು ಎನ್ನುವ ಭಾವನೆಯಿಂದ ವರ್ತಿಸದೆ ಎಲ್ಲರನ್ನು ಸಮಾನರಾಗಿ ನೋಡಿಕೊಳ್ಳಬೇಕು. ಯೋಜನೆ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಬೇಕು. ಅಧಿಕಾರಿ-ಜನಪ್ರತಿನಿಧಿಗಳ ಪರಸ್ಪರ ಸಹಕಾರ ಮತ್ತು ಸಮನ್ವತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.