ETV Bharat / state

ಸಿಎಂ ಗ್ರಾಮ ವಾಸ್ತವ್ಯ: ಗಡಿಭಾಗದ ಈ ಕುಗ್ರಾಮದಲ್ಲಿ ದಿಢೀರ್​​ ಅಭಿವೃದ್ಧಿ ಪರ್ವ...! - undefined

ರಾಜಕೀಯ ವಲಯದಲ್ಲಿ ಚರ್ಚೆ ಆಗ್ತಿರುವ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಈಗ ಅವರು ವಾಸ್ತವ್ಯಕ್ಕೆ ಮುಂದಾಗಿರುವ ಗ್ರಾಮಗಳಲ್ಲಿ ದಿಢೀರ್​​ ಅಭಿವೃದ್ಧಿ ಕಾರ್ಯಗಳು ಆರಂಭವಾಗಿರೋದು ಸುದ್ದಿಯಾಗ್ತಿದೆ. ಈ ತಿಂಗಳಾಂತ್ಯದಲ್ಲಿ ಸಿಎಂ ವಾಸ್ತವ್ಯ ಹೂಡಲಿರುವ ಮೂನ್ಸೂಚನೆ ಸಿಗುತ್ತಿದ್ದಂತೆ ಈ ಕುಗ್ರಾಮದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ.

ಕುಗ್ರಾಮದಲ್ಲಿ ದಿಢೀರ್​​ ಅಭಿವೃದ್ಧಿ ಪರ್ವ
author img

By

Published : Jun 14, 2019, 9:56 AM IST

Updated : Jun 14, 2019, 12:03 PM IST

ಬೀದರ್​​: ಒಂದು ಹಳೇ ಶಾಲೆ ಕಟ್ಟಡವನ್ನು ನೆಲಸಮಗೊಳಿಸುತ್ತಿರುವ ಜೆಸಿಬಿ ಯಂತ್ರಗಳು. ಮತ್ತೊಂದೆಡೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಾಲೆಯ ಕೊಠಡಿಗಳು. ಊರ ತುಂಬೆಲ್ಲಾ ಜಿಲ್ಲಾ ಪಂಚಾಯತ್​​, ಲೋಕೋಪಯೋಗಿ, ಕಂದಾಯ ಇಲಾಖೆ ಅಧಿಕಾರಿಗಳ ದಂಡು, ಹಗಲಿರುಳು ಕೆಲಸ. ಈ ಅದೃಷ್ಟದ ಗ್ರಾಮ ಯಾವುದಂತೀರಾ? ಹಾಗಾದ್ರೆ ಈ ಸುದ್ದಿ ಓದಿ...

ಹೌದು, ಯಾವಾಗ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಈ ತಿಂಗಳಾಂತ್ಯದಲ್ಲಿ ಬೀದರ್​​​ ಜಿಲ್ಲೆಯ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂನ್ಸೂಚನೆ ನೀಡಿದ್ರೋ ಅಲ್ಲಿಂದ ಕಟ್ಟಡ ನಿರ್ಮಾಣ ಸುಣ್ಣ, ಬಣ್ಣ ಅಂತೆಲ್ಲ ಕೆಲಸಗಳು ಜೋರಾಗಿವೆ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದಲ್ಲಿನ ಕನ್ನಡ ಹಾಗೂ ಮರಾಠಿ ಮಾಧ್ಯಮದ ಶಾಲೆಯಲ್ಲಿ ನಾಡ ದೊರೆಯ ವಾಸ್ತವ್ಯಕ್ಕಾಗಿ ಜಿಲ್ಲಾಡಳಿತ ಫುಲ್​ ತಯಾರಿಯಲ್ಲಿದೆ.

ಕುಗ್ರಾಮದಲ್ಲಿ ದಿಢೀರ್​​ ಅಭಿವೃದ್ಧಿ ಪರ್ವ

ಉಜಳಾಂಬ ಕರ್ನಾಟಕ ಮತ್ತು ಮಹರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮ. ಇಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಕನ್ನಡ ಹಾಗೂ ಮರಾಠಿ ಎರಡು ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿರುವ 8 ಕೊಠಡಿಗಳು ಶಿಥಿಲಾವಸ್ಥೆಯಲ್ಲಿರೋದರಿಂದ ಹಳೇ ಕಟ್ಟಡವನ್ನ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಸಾಕಷ್ಟ ಬಾರಿ ಮನವಿ ಮಾಡಲಾಗಿತ್ತು. ಆದ್ರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸಿರಲಿಲ್ಲವಂತೆ. ಆದ್ರೀಗ ಮುಖ್ಯಮಂತ್ರಿ ಬರುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ದಿನದ 24 ಗಂಟೆಗಳ ಕಾಲ ಕಾಮಗಾರಿ ಮಾಡುವ ಮೂಲಕ ಒಂದು ತಿಂಗಳಲ್ಲೇ ಶಾಲೆಯ ಕೊಠಡಿಗಳ ಮರು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಅಂತಾರೆ ಗ್ರಾಮಸ್ಥರು.

ಇನ್ನು ಇಲ್ಲಿನ ಜನರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಗೆ ಬೇಡಿಕೆ ಇಡುತ್ತಿದ್ದಾರೆ. ಕೇವಲ ಗ್ರಾಮವಾಸ್ತವ್ಯದ ಹೆಸರಿಗೆ ಮಾತ್ರವಾಗದೆ, ಜನರ ಸಮಸ್ಯೆಗಳಿಗೂ ಪರಿಹಾರ ಸಿಗಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.

ಒಟ್ಟಿನಲ್ಲಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಈ ಕುಗ್ರಾಮಕ್ಕೆ ಬರ್ತಾರೆ ಅನ್ನೋ ಕಾರಣ ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳು ಮುಕ್ತಿ ಹಾಡಿದ್ದಾರೆ. ಸಿಎಂ ಅವರು ಬಂದು ಹೋದ ಮೇಲೂ ಈ ಭಾಗದಲ್ಲಿ ಹೊಸ ಬದಲಾವಣೆಯಾಗಲಿ ಅನ್ನೋ ಆಶಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

ಬೀದರ್​​: ಒಂದು ಹಳೇ ಶಾಲೆ ಕಟ್ಟಡವನ್ನು ನೆಲಸಮಗೊಳಿಸುತ್ತಿರುವ ಜೆಸಿಬಿ ಯಂತ್ರಗಳು. ಮತ್ತೊಂದೆಡೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಾಲೆಯ ಕೊಠಡಿಗಳು. ಊರ ತುಂಬೆಲ್ಲಾ ಜಿಲ್ಲಾ ಪಂಚಾಯತ್​​, ಲೋಕೋಪಯೋಗಿ, ಕಂದಾಯ ಇಲಾಖೆ ಅಧಿಕಾರಿಗಳ ದಂಡು, ಹಗಲಿರುಳು ಕೆಲಸ. ಈ ಅದೃಷ್ಟದ ಗ್ರಾಮ ಯಾವುದಂತೀರಾ? ಹಾಗಾದ್ರೆ ಈ ಸುದ್ದಿ ಓದಿ...

ಹೌದು, ಯಾವಾಗ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಈ ತಿಂಗಳಾಂತ್ಯದಲ್ಲಿ ಬೀದರ್​​​ ಜಿಲ್ಲೆಯ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂನ್ಸೂಚನೆ ನೀಡಿದ್ರೋ ಅಲ್ಲಿಂದ ಕಟ್ಟಡ ನಿರ್ಮಾಣ ಸುಣ್ಣ, ಬಣ್ಣ ಅಂತೆಲ್ಲ ಕೆಲಸಗಳು ಜೋರಾಗಿವೆ. ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದಲ್ಲಿನ ಕನ್ನಡ ಹಾಗೂ ಮರಾಠಿ ಮಾಧ್ಯಮದ ಶಾಲೆಯಲ್ಲಿ ನಾಡ ದೊರೆಯ ವಾಸ್ತವ್ಯಕ್ಕಾಗಿ ಜಿಲ್ಲಾಡಳಿತ ಫುಲ್​ ತಯಾರಿಯಲ್ಲಿದೆ.

ಕುಗ್ರಾಮದಲ್ಲಿ ದಿಢೀರ್​​ ಅಭಿವೃದ್ಧಿ ಪರ್ವ

ಉಜಳಾಂಬ ಕರ್ನಾಟಕ ಮತ್ತು ಮಹರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮ. ಇಲ್ಲಿ ಒಂದನೇ ತರಗತಿಯಿಂದ 10ನೇ ತರಗತಿವರೆಗೂ ಕನ್ನಡ ಹಾಗೂ ಮರಾಠಿ ಎರಡು ಭಾಷೆಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿರುವ 8 ಕೊಠಡಿಗಳು ಶಿಥಿಲಾವಸ್ಥೆಯಲ್ಲಿರೋದರಿಂದ ಹಳೇ ಕಟ್ಟಡವನ್ನ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಸಾಕಷ್ಟ ಬಾರಿ ಮನವಿ ಮಾಡಲಾಗಿತ್ತು. ಆದ್ರೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಸ್ಪಂದಿಸಿರಲಿಲ್ಲವಂತೆ. ಆದ್ರೀಗ ಮುಖ್ಯಮಂತ್ರಿ ಬರುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ದಿನದ 24 ಗಂಟೆಗಳ ಕಾಲ ಕಾಮಗಾರಿ ಮಾಡುವ ಮೂಲಕ ಒಂದು ತಿಂಗಳಲ್ಲೇ ಶಾಲೆಯ ಕೊಠಡಿಗಳ ಮರು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಅಂತಾರೆ ಗ್ರಾಮಸ್ಥರು.

ಇನ್ನು ಇಲ್ಲಿನ ಜನರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಗೆ ಬೇಡಿಕೆ ಇಡುತ್ತಿದ್ದಾರೆ. ಕೇವಲ ಗ್ರಾಮವಾಸ್ತವ್ಯದ ಹೆಸರಿಗೆ ಮಾತ್ರವಾಗದೆ, ಜನರ ಸಮಸ್ಯೆಗಳಿಗೂ ಪರಿಹಾರ ಸಿಗಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.

ಒಟ್ಟಿನಲ್ಲಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಈ ಕುಗ್ರಾಮಕ್ಕೆ ಬರ್ತಾರೆ ಅನ್ನೋ ಕಾರಣ ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳು ಮುಕ್ತಿ ಹಾಡಿದ್ದಾರೆ. ಸಿಎಂ ಅವರು ಬಂದು ಹೋದ ಮೇಲೂ ಈ ಭಾಗದಲ್ಲಿ ಹೊಸ ಬದಲಾವಣೆಯಾಗಲಿ ಅನ್ನೋ ಆಶಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

Intro:ಸಿಎಂ ಗ್ರಾಮ ವಾಸ್ತವ್ಯ ಮಾಡಲಿರುವ ಗ್ರಾಮದಲ್ಲಿ ಶೂರುವಾಗಿದೆ ಅಭಿವೃದ್ಧಿ ಪರ್ವ...!

ಬೀದರ್:
ಬರೋಬ್ಬರಿ ಒಂದು ದಶಕದಿಂದ ಊರ ಮಂದಿ ಅಧಿಕಾರಿಗಳ ಮುಂದೆ ಅಂಗಲಾಚಿದ್ರು ಕ್ಯಾರೇ ಎನ್ನದೆ ಮೊಂಡುತನ ತೊರುತ್ತಿದ್ದ ಅಧಿಕಾರಿಗಳ ದಂಡು ಈಗ ಈ ಊರಿನತ್ತ ಓಡೋಡಿ ಬರ್ತಾ ಇದಾರೆ. ಹೊಸ ಶಾಲೆ ಕಟ್ಟಡ ಕೊಡ್ರಿ ಅಂತ ಲೀಡರ್ ಗಳ ಮುಂದೆ ಹೇಳಿದ್ರು ಯಾರು ಕೆಳಿಲ್ಲ. ಈಗ ಒಂದು ತಿಂಗಳಲ್ಲೆ ಹೊಸ ಕಟ್ಟಡ ನಿರ್ಮಾಣ ಮಾಡ್ತಿದೆ ಜಿಲ್ಲಾಡಳಿತ. ಧೂಳು ತಿನ್ನುವ ಮೂಲೆಗುಂಪಾದ ಕಟ್ಟಡ ನೆಲಕ್ಕುರುಳಿಸಿ ಸುಣ್ಣ ಬಣ್ಣ ರೋಡ್ ಚರಂಡಿ, ಸ್ವಚ್ಚತೆ, ನೀರು ಹೀಗೆ ಅಭಿವೃದ್ಧಿ ಪರ್ವವೆ ಈ ಗ್ರಾಮದಲ್ಲಿ ಆರಂಭವಾಗಿದೆ ಅಂದ ಹಾಗೆ ಎನಿದು ಕಮಾಲ್ ಅಂತಿರಾ...?

ವೈ.ಓ:
ಒಂದು ಹಳೆ ಶಾಲೆ ಕಟ್ಟಡ ನೆಲಸಮ ಗೊಳಿಸುತ್ತಿರುವ ಜೆಸಿಬಿ ಯಂತ್ರಗಳು. ಮತ್ತೊಂದು ಕಡೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಾಲೆಯ ಕೊಠಡಿಗಳು. ಊರ ತುಂಬೆಲ್ಲಾ ಜಿಲ್ಲಾ ಪಂಚಾಯತ, ಲೋಕೊಪಯೋಗಿ, ಕಂದಾಯ ಇಲಾಖೆ ಅಧಿಕಾರಿಗಳ ದಂಡು ಹಗಲು ರಾತ್ರಿ ಎನ್ನದೆ ಕೆಲಸ ಮಾಡ್ತಿದ್ದಾರೆ. ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಈ ತಿಂಗಳಾಂತ್ಯದಲ್ಲಿ ಬೀದರ್ ನ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂನ್ಸೂಚನೆ ಕೊಡ್ತಿದ್ದಂಗೆ ಜೋರಾಗಿದೆ ನೋಡಿ ಸುಣ್ಣ ಬಣ್ಣ ತಯ್ಯಾರಿ. ಹೌದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಲಾಂಬ ಗ್ರಾಮದಲ್ಲಿನ ಕನ್ನಡ ಹಾಗೂ ಮರಾಠಿ ಮಾಧ್ಯಮದ ಶಾಲೆಯಲ್ಲಿ ನಾಡ ದೊರೆಯ ವಾಸ್ತವ್ಯಕ್ಕಾಗಿ ಜಿಲ್ಲಾಡಳಿತ ತಯ್ಯಾರಿ ಮಾಡುತ್ತಿದೆ.

ವೈ.ಓ:
ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮ ಕರ್ನಾಟಕ ಹಾಗೂ ಮಹರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಗ್ರಾಮ. ಮಹಾರಾಷ್ಟ್ರಕ್ಕೆ ಹತ್ತಿರವಾದ ಗ್ರಾಮವಾಗಿದ್ದರಿಂದ 1960 ರಲ್ಲಿ ಮರಾಠೀ ಹಾಗೂ ಕನ್ನಡ ಶಾಲೆಯನ್ನ ನಿರ್ಮಾಣ ಮಾಡಲಾಗಿತ್ತು, ಒಂದನೆ ತರಗತಿಯಿಂದ 10ನೇ ತರಗತಿವರೆಗೂ ಕನ್ನಡ ಹಾಗೂ ಮರಾಠಿ ಎರಡು ಭಾಷೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ಇಲ್ಲಿರುವ 8 ಕೊಠಡಿಗಳು ಶಿಥಿಲಾವಸ್ಥೆಯಲ್ಲಿರೋದರಿಂದ ಹಳೆ ಕಟ್ಟಡವನ್ನ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಸಾಕಷ್ಟ ಬಾರಿ ಮನವಿ ಮಾಡಿತ್ತು ಆದ್ರೆ ಜನ ಪ್ರತಿನಿಧಿಯಾಗಲಿ ಅಧೀಕಾರಿಗಳಾಗಲಿ ಸ್ಪಂದಿಸಿರಲಿಲ್ಲಾ, ಈಗ ಮುಖ್ಯಮಂತ್ರಿಗಳು ಬರುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ದಿನದ 24ಗಂಟೆ ಕಾಲ ಕಾಮಗಾರಿ ಮಾಡುವ ಮೂಲಕ ಒಂದು ತಿಂಗಳಲ್ಲೆ ಶಾಲೆ ಕೊಠಡಿಗಳನ್ನ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಬೈಟ್-01: ಚಂದ್ರಕಾಂತ್ ಪಾಟೀಲ್, ಗ್ರಾಮಸ್ಥರು

ವೈ.ಓ:
ಇನ್ನು ಒಂದು ಕಡೆ ಕರ್ನಾಟಕ ಮತ್ತೊಂದು ಕಡೆ ಮಹರಾಷ್ಟ್ರ ಗಡಿಭಾಗಕ್ಕೆ ಹೊಂದು ಕೊಂಡಿರುವ ಈ ಉಜಲಾಂಬ ಗ್ರಾಮ ಬೀದರ್ ಜಿಲ್ಲಾ ಕೇಂದ್ರದಿಂದ ಬರೊಬ್ಬರಿ 95 ಕಿ.ಮೀ ದೂರದಿಲ್ಲಿದ್ದು,ಮತ್ತೊಂದು ಕಡೆ ಬಸವಣ್ಣನ ಕರ್ಮ ಭೂಮಿ ಬಸವಕಲ್ಯಾಣದಿಂದ 25 ಕಿ.ಮಿ ದೂರದಲ್ಲಿದೆ,ಇಲ್ಲಿವರೆಗೂ ಈ ಗ್ರಾಮದ ಜನ್ರ ಸಮಸ್ಯೆ ಆಲಿಸದ ಅಧೀಕಾರಿಗಳು, ಗ್ರಾಮವಾಸ್ತವ್ಯಕ್ಕೆ ಮುಖ್ಯಮಂತ್ರಿಗಳು ಬರುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅಧಿಕಾರಿಗಳು ಇತ್ತ ತಿರುಗಾಡುತ್ತಿದ್ದು, ಗ್ರಾಮದಲ್ಲಿ ಅಬೀವೃದ್ದಿಯ ಬೇಡಿಕೆ ಗಿಂತ ಇಲ್ಲಿನ ಜನರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಹಿನ್ನಲೆಯಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪನೆಗೆ ಬೇಡಿಕೆ ಇಡುತ್ತಿದ್ದು, ಕೇವಲ ಗ್ರಾಮವಾಸ್ತವ್ಯ ಹೆಸರಿಗೆ ಮಾತ್ರವಾಗದೆ ಜನ್ರ ಸಮಸ್ಯೆ ಗೆ ಪರಿಹಾರ ಸಿಗಬೇಕು ಎನ್ನುವದು ಸ್ಥಳೀಯರ ಒತ್ತಾಶೆಯಾಗಿದೆ.

ಬೈಟ್-02: ಮಹೇಶ್ ಪಾಟೀಲ್, ಗ್ರಾಮಸ್ಥರು

ಬೈಟ್-03: ಶಿವರಾಜ್ ನರಶೆಟ್ಟಿ- ಕಾಂಗ್ರೇಸ್ ಮುಖಂಡರು

ವೈ.ಓ:
ಒಟ್ಟಿನಲ್ಲಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಈ ಕುಗ್ರಾಮಕ್ಕೆ ಬರ್ತಾರೆ ಅನ್ನೊದರಲ್ಲೆ ಹಲವಾರು ಸಮಸ್ಯೆಗಳಿಗೆ ಅಧಿಕಾರಿಗಳು ಮುಕ್ತಿ ಹಾಡಿದ್ದಾರೆ. ಅವರು ಬಂದು ಹೊದ ಮೇಲೆ ಜನರ ದಶಕದ ಹಲವು ನೋವಿಗೆ ಪರಿಹಾರ ಸಿಗುವ ಬೆಟ್ಟದಷ್ಟು ನಿರೀಕ್ಷೆ ಜನ ಇಟ್ಟಕೊಂಡಿದ್ದು ತರಾತುರಿಯಲ್ಲಿ ಮಾಡುವ ಅಭಿವೃದ್ಧಿ ಕಳಪೆಯಾಗದಿರಲಿ ಸಿಎಂ ಅವರು ಬಂದು ಹೊದ ಮೇಲೂ ಈ ಭಾಗದಲ್ಲಿ ಹೊಸ ಬದಲಾವಣೆಯಾಗಲಿ ಅನ್ನೋ ಆಶಯ ಜನ ವ್ಯಕ್ತಪಡಿಸಿದ್ದಾರೆ.

---- ಬ್ಯೂರೊ ರಿಪೋರ್ಟ್ ಈಟಿವಿ ಭಾರತ ಬೀದರ್----Body:AnilConclusion:Bidar
Last Updated : Jun 14, 2019, 12:03 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.