ETV Bharat / state

'ಕಟ್ಟಿದ ತಾಳಿ ಕಿತ್ತು ಮಾರಿ ಕುಡಿಯುವ ಗಂಡರಿಂದ ಬದುಕು ನರಕವಾಗಿದೆ': ಸ್ತ್ರೀಯರ ಅಳಲು - undefined

ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದ ನೂರಾರು ಮಹಿಳೆಯರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟ ತಡಯುವಂತೆ ಕೋರಿದರು.

ಮದ್ಯ ನಿಷೇಧಕ್ಕೆ ಮನವಿ ಮಾಡಿದ ಮಹಿಳೆಯರು
author img

By

Published : Jun 21, 2019, 2:22 AM IST

ಬೀದರ್​: ಗ್ರಾಮದ ಕಿರಾಣಿ ಅಂಗಡಿ, ಹೊಟೇಲ್​​ ಸೇರಿದಂತೆ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅದನ್ನು ತಡೆಯಬೇಕೆಂದು ಗ್ರಾಮದ ಮಹಿಳೆಯರು ಪೊಲೀಸರಿಗೆ ಮನವಿ ಸಲ್ಲಿಸಿದರು.

ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದ ನೂರಾರು ಮಹಿಳೆಯರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟ ತಡಯುವಂತೆ ಕೋರಿದರು.

ಔರದ್​ ಪೊಲೀಸ್​ ಠಾಣೆಗೆ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಮಹಿಳೆಯರು ಮನವಿ ಸಲ್ಲಿಸಿದರು

ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಈ ಬಗ್ಗೆ ವರ್ಷಗಳಿಂದಲೂ ಅಬಕಾರಿ ಇಲಾಖೆಗೆ ದೂರು ನೀಡುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮಧ್ಯರಾತ್ರಿಯೂ ಕುಡುಕರು ಆಗಮಿಸಿ ಜೋರಾಗಿ ಮಾತನಾಡುವುದು, ಗಲಾಟೆ ಮಾಡುವ ಕಾರಣಕ್ಕೆ ಮಾರಾಟ ಕೇಂದ್ರದ ಅಕ್ಕಪಕ್ಕದ ಮನೆಯ ಮಹಿಳೆಯರು, ಮಕ್ಕಳು ಜೀವಿಸುವುದಕ್ಕೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗಂಡಂದಿರು ನಮಗೆ ನೀಡುತ್ತಿರುವ ಕಿರುಕುಳ ತಡೆಯಲಾಗುತ್ತಿಲ್ಲ. ಮನೆಯಲ್ಲಿರುವ ಪಾತ್ರೆಯಿಂದ ಮೊದಲುಗೊಂಡು ಕಟ್ಟಿದ ತಾಳಿಯನ್ನೂ ಕಿತ್ತುಕೊಂಡು ಹೋಗಿ ಕುಡಿಯುವ ತನಕ ತಮ್ಮ ಕುಡಿತದ ಚಟವನ್ನು ಹೆಚ್ಚಿಸಿಕೊಂಡಿದ್ದು, ಹೆಂಡತಿಯರ ಗೋಳು ಹೇಳತೀರದಾಗಿದೆ ಎಂದು ನೋವು ತೋಡಿಕೊಂಡರು.

ಬೀದರ್​: ಗ್ರಾಮದ ಕಿರಾಣಿ ಅಂಗಡಿ, ಹೊಟೇಲ್​​ ಸೇರಿದಂತೆ ಹಲವೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಅದನ್ನು ತಡೆಯಬೇಕೆಂದು ಗ್ರಾಮದ ಮಹಿಳೆಯರು ಪೊಲೀಸರಿಗೆ ಮನವಿ ಸಲ್ಲಿಸಿದರು.

ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದ ನೂರಾರು ಮಹಿಳೆಯರು ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟ ತಡಯುವಂತೆ ಕೋರಿದರು.

ಔರದ್​ ಪೊಲೀಸ್​ ಠಾಣೆಗೆ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಮಹಿಳೆಯರು ಮನವಿ ಸಲ್ಲಿಸಿದರು

ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಈ ಬಗ್ಗೆ ವರ್ಷಗಳಿಂದಲೂ ಅಬಕಾರಿ ಇಲಾಖೆಗೆ ದೂರು ನೀಡುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮಧ್ಯರಾತ್ರಿಯೂ ಕುಡುಕರು ಆಗಮಿಸಿ ಜೋರಾಗಿ ಮಾತನಾಡುವುದು, ಗಲಾಟೆ ಮಾಡುವ ಕಾರಣಕ್ಕೆ ಮಾರಾಟ ಕೇಂದ್ರದ ಅಕ್ಕಪಕ್ಕದ ಮನೆಯ ಮಹಿಳೆಯರು, ಮಕ್ಕಳು ಜೀವಿಸುವುದಕ್ಕೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗಂಡಂದಿರು ನಮಗೆ ನೀಡುತ್ತಿರುವ ಕಿರುಕುಳ ತಡೆಯಲಾಗುತ್ತಿಲ್ಲ. ಮನೆಯಲ್ಲಿರುವ ಪಾತ್ರೆಯಿಂದ ಮೊದಲುಗೊಂಡು ಕಟ್ಟಿದ ತಾಳಿಯನ್ನೂ ಕಿತ್ತುಕೊಂಡು ಹೋಗಿ ಕುಡಿಯುವ ತನಕ ತಮ್ಮ ಕುಡಿತದ ಚಟವನ್ನು ಹೆಚ್ಚಿಸಿಕೊಂಡಿದ್ದು, ಹೆಂಡತಿಯರ ಗೋಳು ಹೇಳತೀರದಾಗಿದೆ ಎಂದು ನೋವು ತೋಡಿಕೊಂಡರು.

Intro:ಸಿಕ್ಕ ಸಿಕ್ಕಲ್ಲಿ ಮಧ್ಯ ಮಾರಾಟ, ಸಿಟ್ಟಿಗೆದ್ದ ಮಹಿಳೆಯರು ಮಾಡಿದ್ದೇನು...?

ಬೀದರ್:
ನಮ್ಮೂರಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರೆಗೆ ಎಲ್ಲರೂ ಸರಾಯಿ ಕುಡಿತದ ಚಟಕ್ಕೆ ಬಿದ್ದು ನಮ್ಮಗಳ ಸಂಸಾರ ಬೀದಿಗೆ ಬಂದಿದೆ. ತಿನ್ನಲಿಕ್ಕೆ ಒಂದು ತುತ್ತು ಅನ್ನಕ್ಕೂ ಗತಿ ಇಲ್ಲದಂಗ ಮಾಡಿದ ಈ ಸರಾಯಿ ಸಹವಾಸ. ಕುಡಿಯಲಿಕ್ಕ ನೀರ ಸಿಗ್ತಿಲ್ಲ ಆದ್ರ ನಮ್ಮೂರಾಗ ಮಧ್ಯದ ಬಾಟಲಗಳು ಎಲ್ಲ ಬೇಕಾದಲ್ಲಿ ಸಿಗ್ತವೆ ಸಾಹೇಬ್ರೆ ನಾವು ಬದುಕಿದ್ದು ಸತ್ತಂಗೆ ಎಂದು ಕಣ್ಣೀರು ಹಾಕುತ್ತ ಗೋಳಿಡುತ್ತಿದ್ದಾರೆ ಈ ಗ್ರಾಮದ ನೊಂದ ಮಹಿಳೆ.

ಇದು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದ ನೊಂದ ಮಹಿಳೆಯರ ಬಾಯಲ್ಲಿ ಬರುವ ನೋವಿನ ಮಾತು. ಕಳೇದೆರಡು ವರ್ಷಗಳಿಂದ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಜೋರಾಗಿದೆ. ಇಗಂತೂ ಕಿರಾಣ ಅಂಗಡಿ, ಪಾನ ಬೀಡಾ ಅಂಗಡಿ, ಹೊಟೆಲ್ ಮತ್ತು ಮನೆಗಳಲ್ಲಿ ಸರಾಯಿ ಮಾರಾಟ ಮಾಡುವುದರಿಂದ ಬಾಲಕರು ಚಟಕ್ಕಡ ಬಲಿಯಾಗಿ ತುಂಬಿದ ಮನೆಗಳು ಬೀದಿಪಾಲಾಗಿವೆ. ಅಕ್ರಮ ದಂಧೆಕೊರರ ವ್ಯಾಪಾರಕ್ಕೆ ಬಡ ಕುಟುಂಬಗಳ ಪುರುಷರು ಕುಡಕರಾಗಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಮಾರಾಟ ಮಾಡಿ ಚಟ ತಿರಿಸಿಕೊಳ್ತಿದ್ದಾರೆ. ಅಷ್ಟೇ ಅಲ್ಲ ಅವರ ನಶೇಗೆ ಮಹಿಳೆಯರು ಬಲಿಯಾಗ್ತಿದ್ದಾರೆ‌. ಕಂಠಪೂರ್ತಿ ಕುಡಿದು ಮನೆಗೆ ಬಂದು ಹೆಂಡ್ತಿ ಮಕ್ಕಳು ತಾಯಿ ತಂದೆ ಎನ್ನದೆ ಹಲ್ಲೆ ಮಾಡ್ತಿದ್ದಾರೆ ಇದರಿಂದ ನಮ್ಮ ಬದುಕು ನರಕವಾಗಿದೆ ಎಂದು ಮಹಿಳೆಯರು ಔರಾದ್ ಪೊಲೀಸ್ ಠಾಣೆ ಮೆಟ್ಟಿಲೇರಿ ಪೊಲೀಸರ ಮುಂದೆ ಕಣ್ಣಿರು ಹಾಕುತ್ತಾ ಗೋಳು ತೊಡಿಕೊಂಡಿದ್ದಾರೆ.

ಅಬಕಾರಿ ಇಲಾಖೆ ಅಧಿಕಾರಿಗಳ ಜಾನಮೌನ ಹಾಗೂ ಲಿಕ್ಕರ್ ಮಾಫೀಯಾದ ಕೈಗೊಂಬೆಯಾದ ಕೆಲ ರಾಜಕೀಯ ಮುಖಂಡರ ಬಲದಿಂದ ಈ ಅಕ್ರಮ ಮಧ್ಯ ಮಾರಾಟ ಹೆಚ್ಚಾಗಿದೆ ನಮಗೆ ನ್ಯಾಯ ಕೊಡಿ ಇಲ್ಲ ಅಂದ್ರೆ ನಾವೆಲ್ಲ ಮಹಿಳೆಯರು ಪೊಲೀಸ್ ಠಾಣೆಯಲ್ಲೆ ಬಂದು ಜೀವನ ಮಾಡಬೇಕಾಗುತ್ತೆ ಎಂದು ಎಚ್ವರಿಕೆ ನೀಡಿದ್ದಾರೆ.

ಬೈಟ್-೧: ಪಾರ್ವತಿ- ಸ್ಥಳೀಯರು

ಬೈಟ್-೨: ಮಂಗಲಬಾಯಿ- ಸ್ಥಳೀಯರು

ಬೈಟ್-೩: ಶಾಂತಾಬಾಯಿ- ಸ್ಥಳೀಯರು(ಕಣ್ಣಿರು ಹಾಕಿದ ಮಹಿಳೆ)Body:ಅನಿಲConclusion:ಬೀದರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.