ಬೀದರ್: ಹೊಸ ಲೇಔಟ್ ಹಾಗೂ ಸಾರ್ವಜನಿಕ ಬಳಕೆಯ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ನಗರಸಭೆಯಿಂದ ಸಾಮೂಹಿಕವಾಗಿ ತೆರವುಗೊಳಿಸಲಾಯಿತು.
ನಗರದ ನೌಬಾದ್ ಭಾಗದಲ್ಲಿ ತಲೆ ಎತ್ತಿದ ಕಟ್ಟಡಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ನಗರಸಭೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ಗೆ ಸ್ಪಂದಿಸದಕ್ಕೆ ನಗರಸಭೆ ಆಯುಕ್ತ ಬಿ. ಬಸಪ್ಪ, ತಹಶೀಲ್ದಾರ್ ಕಿರ್ತನಾ ಅವರ ತಂಡ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.
ಬೀದರ್ ಹೊರ ವಲಯದಲ್ಲಿ, ಅಲ್ಲಲ್ಲಿ ಇದ್ದ 18 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.