ETV Bharat / state

ಬೀದರ್​​: ತಹಶೀಲ್ದಾರ್ ಮೇಲೆ ಅಸಮಾಧಾನ ಹೊರ ಹಾಕಿದ ಸಚಿವ ಪ್ರಭು ಚವ್ಹಾಣ

author img

By

Published : Aug 31, 2020, 5:41 PM IST

Updated : Aug 31, 2020, 7:57 PM IST

ಹೊಸದಾಗಿ ಮಂಜೂರಾದ 13 ಕೋಟಿ ರೂ. ವೆಚ್ಚದ ನೂತನ ನ್ಯಾಯಾಲಯ ಕಾಮಗಾರಿಯ ಭೂ ಪರಿವರ್ತನೆ ಮಾಡುವುದು ವಿಳಂಬವಾದದ್ದನ್ನು ತಿಳಿದ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ತಹಶೀಲ್ದಾರ್​ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ್ ಮೇಲೆ ಅಸಮಾಧಾನ ಹೊರ ಹಾಕಿದ ಸಚಿವ ಪ್ರಭು ಚವ್ಹಾಣ
ತಹಶೀಲ್ದಾರ್ ಮೇಲೆ ಅಸಮಾಧಾನ ಹೊರ ಹಾಕಿದ ಸಚಿವ ಪ್ರಭು ಚವ್ಹಾಣ

ಬೀದರ್: ಮೂರು ವರ್ಷಗಳಿಂದ ಮಂಜೂರಾದ ನ್ಯಾಯಾಲಯದ ನೂತನ ಕಟ್ಟಡಕ್ಕಾಗಿ ಗುರುತಿಸಲಾದ ಸ್ಥಳವನ್ನು ವಿಲೇವಾರಿ ಮಾಡದೇ, ನಿರ್ಲಕ್ಷ್ಯ ವಹಿಸಿದ ತಹಶೀಲ್ದಾರ್​​ ಮೇಲೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಔರಾದ್ ಪಟ್ಟಣದ ಹಳೆ ತಹಶೀಲ್ದಾರ್​ ಕಚೇರಿ ಆವರಣದಲ್ಲಿ ಹೊಸದಾಗಿ ಮಂಜೂರಾದ 13 ಕೋಟಿ ರೂ. ವೆಚ್ಚದ ನೂತನ ನ್ಯಾಯಾಲಯ ಕಾಮಗಾರಿ, ಭೂ ಪರಿವರ್ತನೆ ಮಾಡದಕ್ಕೆ ವಿಳಂಬವಾಗಿದೆ. ವಿಷಯ ತಿಳಿದ ಸಚಿವ ಪ್ರಭು ಚವ್ಹಾಣ ಅವರು ಸ್ಥಳಕ್ಕೆ ದಿಢೀರ್​ ಭೇಟಿ ನೀಡಿ, ನ್ಯಾಯಾಲಯದ ಉಸ್ತುವಾರಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ತಹಶೀಲ್ದಾರ್ ಮೇಲೆ ಅಸಮಾಧಾನ ಹೊರ ಹಾಕಿದ ಸಚಿವ ಪ್ರಭು ಚವ್ಹಾಣ

ಇದೇ ವೇಳೆ ಸ್ಥಳಕ್ಕೆ ತಹಶೀಲ್ದಾರ್​ ಚಂದ್ರಶೇಖರ್ ಅವರನ್ನು ಕರೆಯಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಔರಾದ್ ಜತೆಯಲ್ಲೇ ಭಾಲ್ಕಿ ಪಟ್ಟಣದ ಕಟ್ಟಡ ಕಾಮಗಾರಿ ಕೂಡ ಇತ್ತು. ಆದ್ರೆ ಅದು ಮುಗಿದು ಹೋಗಿದೆ. ಸರ್ಕಾರಿ ಭೂಮಿಯನ್ನೇ ನ್ಯಾಯಾಲಯ ಕಟ್ಟಡ ಉದ್ದೇಶಕ್ಕಾಗಿ ವರ್ಗಾವಣೆ ಮಾಡಲಾಗದೆ ಮಂಜೂರಾದ ಅನುದಾನ ವಾಪಸ್​​ ಹೋಗುವ ಹಂತಕ್ಕೆ ತಲುಪಿದೆ. ನಿಮ್ಮಿಂದ ಕೆಲಸ ಮಾಡಲಿಕ್ಕೆ ಆಗೊಲ್ಲ ಅಂದ್ರೆ ಹೇಳಿ, ನಾವು ಒಂದೊಂದು ಯೋಜನೆಯನ್ನು ಎಷ್ಟು ಕಷ್ಟಪಟ್ಟು ಮಂಜೂರು ಮಾಡಿಸುತ್ತೇವೆ. ಆದ್ರೆ ನಿಮ್ಮಂತ ಅಧಿಕಾರಿಗಳಿಂದಾಗಿ ಜನಪ್ರತಿನಿಧಿಗಳು ಜನರಿಂದ ನಿಂದನೆಗೆ ಒಳಗಾಗುವ ಸಂದರ್ಭ ಬರ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೀದರ್: ಮೂರು ವರ್ಷಗಳಿಂದ ಮಂಜೂರಾದ ನ್ಯಾಯಾಲಯದ ನೂತನ ಕಟ್ಟಡಕ್ಕಾಗಿ ಗುರುತಿಸಲಾದ ಸ್ಥಳವನ್ನು ವಿಲೇವಾರಿ ಮಾಡದೇ, ನಿರ್ಲಕ್ಷ್ಯ ವಹಿಸಿದ ತಹಶೀಲ್ದಾರ್​​ ಮೇಲೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಔರಾದ್ ಪಟ್ಟಣದ ಹಳೆ ತಹಶೀಲ್ದಾರ್​ ಕಚೇರಿ ಆವರಣದಲ್ಲಿ ಹೊಸದಾಗಿ ಮಂಜೂರಾದ 13 ಕೋಟಿ ರೂ. ವೆಚ್ಚದ ನೂತನ ನ್ಯಾಯಾಲಯ ಕಾಮಗಾರಿ, ಭೂ ಪರಿವರ್ತನೆ ಮಾಡದಕ್ಕೆ ವಿಳಂಬವಾಗಿದೆ. ವಿಷಯ ತಿಳಿದ ಸಚಿವ ಪ್ರಭು ಚವ್ಹಾಣ ಅವರು ಸ್ಥಳಕ್ಕೆ ದಿಢೀರ್​ ಭೇಟಿ ನೀಡಿ, ನ್ಯಾಯಾಲಯದ ಉಸ್ತುವಾರಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ತಹಶೀಲ್ದಾರ್ ಮೇಲೆ ಅಸಮಾಧಾನ ಹೊರ ಹಾಕಿದ ಸಚಿವ ಪ್ರಭು ಚವ್ಹಾಣ

ಇದೇ ವೇಳೆ ಸ್ಥಳಕ್ಕೆ ತಹಶೀಲ್ದಾರ್​ ಚಂದ್ರಶೇಖರ್ ಅವರನ್ನು ಕರೆಯಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ. ಔರಾದ್ ಜತೆಯಲ್ಲೇ ಭಾಲ್ಕಿ ಪಟ್ಟಣದ ಕಟ್ಟಡ ಕಾಮಗಾರಿ ಕೂಡ ಇತ್ತು. ಆದ್ರೆ ಅದು ಮುಗಿದು ಹೋಗಿದೆ. ಸರ್ಕಾರಿ ಭೂಮಿಯನ್ನೇ ನ್ಯಾಯಾಲಯ ಕಟ್ಟಡ ಉದ್ದೇಶಕ್ಕಾಗಿ ವರ್ಗಾವಣೆ ಮಾಡಲಾಗದೆ ಮಂಜೂರಾದ ಅನುದಾನ ವಾಪಸ್​​ ಹೋಗುವ ಹಂತಕ್ಕೆ ತಲುಪಿದೆ. ನಿಮ್ಮಿಂದ ಕೆಲಸ ಮಾಡಲಿಕ್ಕೆ ಆಗೊಲ್ಲ ಅಂದ್ರೆ ಹೇಳಿ, ನಾವು ಒಂದೊಂದು ಯೋಜನೆಯನ್ನು ಎಷ್ಟು ಕಷ್ಟಪಟ್ಟು ಮಂಜೂರು ಮಾಡಿಸುತ್ತೇವೆ. ಆದ್ರೆ ನಿಮ್ಮಂತ ಅಧಿಕಾರಿಗಳಿಂದಾಗಿ ಜನಪ್ರತಿನಿಧಿಗಳು ಜನರಿಂದ ನಿಂದನೆಗೆ ಒಳಗಾಗುವ ಸಂದರ್ಭ ಬರ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Last Updated : Aug 31, 2020, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.