ETV Bharat / state

ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಿದ ಸಿಎಂ ಬಿ.ಎಸ್‌.ಯಡಿಯೂರಪ್ಪ - ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೀದರ್ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು.

Bidar Airport was opened
ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆ
author img

By

Published : Feb 7, 2020, 4:00 PM IST

Updated : Feb 7, 2020, 4:11 PM IST

ಬೀದರ್: ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡ ಬೀದರ್ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆ

ನಗರದ ಚಿದ್ರಿ ರಿಂಗ್ ರೋಡ್​​​ನಲ್ಲಿ ನಿರ್ಮಾಣವಾದ ಟರ್ಮಿನಲ್ ಉದ್ಘಾಟಿಸಿದ ಬಿಎಸ್​​ವೈ, ಜನರು ರಾಜ್ಯ ರಾಜಧಾನಿಯಿಂದ ಬೀದರ್‌ಗೆ ಬರಬೇಕು ಅಂದ್ರೆ ಹೈದ್ರಾಬಾದ್ ಮೂಲಕ ಅಥವಾ ರೈಲಿನ ಮೂಲಕವೇ ಪ್ರಯಾಣ ಮಾಡಬೇಕಾಗಿತ್ತು. ಇದರಿಂದ ಸುಮಾರು 14 ಗಂಟೆಗಳ ಕಾಲ ಪ್ರಯಾಸದ ಪ್ರಯಾಣವಾಗುತ್ತಿತ್ತು. ಈಗ ವಿಮಾನ ಹಾರಾಟ ಆಗುತ್ತಿರುವುದರಿಂದ ಬೆಂಗಳೂರು-ಬೀದರ್ ಅಂತರ ಕೇವಲ 1.30 ಗಂಟೆಯ ಪ್ರಯಾಣವಷ್ಟೇ ಆಗಲಿದೆ. ಇದರಿಂದ ಈ ಭಾಗದ ಅಭಿವೃದ್ಧಿಗೂ ಹೊಸ ಆಯಾಮ ಸಿಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕರಾದ ಈಶ್ವರ ಖಂಡ್ರೆ, ಬಂಡೆಪ್ಪ ಕಾಶೆಂಪೂರ್, ರಾಜಶೇಖರ್ ಪಾಟಿಲ, ಬಿ.ನಾರಾಯಣರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೀದರ್: ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನೂತನವಾಗಿ ನಿರ್ಮಾಣಗೊಂಡ ಬೀದರ್ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆ

ನಗರದ ಚಿದ್ರಿ ರಿಂಗ್ ರೋಡ್​​​ನಲ್ಲಿ ನಿರ್ಮಾಣವಾದ ಟರ್ಮಿನಲ್ ಉದ್ಘಾಟಿಸಿದ ಬಿಎಸ್​​ವೈ, ಜನರು ರಾಜ್ಯ ರಾಜಧಾನಿಯಿಂದ ಬೀದರ್‌ಗೆ ಬರಬೇಕು ಅಂದ್ರೆ ಹೈದ್ರಾಬಾದ್ ಮೂಲಕ ಅಥವಾ ರೈಲಿನ ಮೂಲಕವೇ ಪ್ರಯಾಣ ಮಾಡಬೇಕಾಗಿತ್ತು. ಇದರಿಂದ ಸುಮಾರು 14 ಗಂಟೆಗಳ ಕಾಲ ಪ್ರಯಾಸದ ಪ್ರಯಾಣವಾಗುತ್ತಿತ್ತು. ಈಗ ವಿಮಾನ ಹಾರಾಟ ಆಗುತ್ತಿರುವುದರಿಂದ ಬೆಂಗಳೂರು-ಬೀದರ್ ಅಂತರ ಕೇವಲ 1.30 ಗಂಟೆಯ ಪ್ರಯಾಣವಷ್ಟೇ ಆಗಲಿದೆ. ಇದರಿಂದ ಈ ಭಾಗದ ಅಭಿವೃದ್ಧಿಗೂ ಹೊಸ ಆಯಾಮ ಸಿಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕರಾದ ಈಶ್ವರ ಖಂಡ್ರೆ, ಬಂಡೆಪ್ಪ ಕಾಶೆಂಪೂರ್, ರಾಜಶೇಖರ್ ಪಾಟಿಲ, ಬಿ.ನಾರಾಯಣರಾವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Last Updated : Feb 7, 2020, 4:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.