ETV Bharat / state

ಮಾರಾಟ ಮಾಡಿದ ಜಮೀನಿನ ಹಣ ಸಿಗಲಿಲ್ಲವೆಂದು ಮನನೊಂದ ರೈತ ಆತ್ಮಹತ್ಯೆ - money for farmland sold

ಬಸವಕಲ್ಯಾಣ ತಾಲೂಕಿನ ಗುತ್ತಿ ಗ್ರಾಮದ ಕೃಷ್ಣಾಜಿ ಹಣಮಂತರಾವ ಬಿರಾದಾರ ಎಂಬುವರು ತಮ್ಮ 1 ಎಕರೆ ಜಮೀನನ್ನು 12 ಲಕ್ಷ ರೂ.ಗೆ ಮಾರಾಟ ಮಾಡಿದ್ರು. ಆದ್ರೆ ಸಂಪೂರ್ಣ ಹಣ ಸಿಗಲಿಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ಆತ್ಮಹತ್ಯೆ
ರೈತ ಆತ್ಮಹತ್ಯೆ
author img

By

Published : Jun 27, 2020, 12:01 AM IST

ಬಸವಕಲ್ಯಾಣ (ಬೀದರ್​): ಜಮೀನು ಮಾರಿದ ಹಣ ನೀಡಲಿಲ್ಲವೆಂದು ಮನನೊಂದ ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುತ್ತಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೃಷ್ಣಾಜಿ ಹಣಮಂತರಾವ ಬಿರಾದಾರ (48) ಜಮೀನಿನ ಮರಕ್ಕೆ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಗಳ ಮದುವೆ ಸಂಬಂಧ ಹಣದ ಅಡಚಣೆ ಇದ್ದ ಕಾರಣ ಪಕ್ಕದ ಖಂಡಾಳ ಗ್ರಾಮದ ಕಾಶಪ್ಪ ಮೇತ್ರೆ ಎನ್ನುವಾತನಿಗೆ 1 ಎಕರೆ ಜಮೀನನ್ನು 12 ಲಕ್ಷ ರೂ. ಬೆಲೆಗೆ ಮಾರಾಟ ಮಾಡಲಾಗಿತ್ತು.

ಮುಂಗಡವಾಗಿ 4 ಲಕ್ಷ ರೂ. ಪಡೆಯಲಾಗಿತ್ತು. ಆದರೆ, ಉಳಿದ ಹಣ ನೀಡುವಂತೆ ಪದೇ, ಪದೇ ಕೇಳಿದರೂ ಹಣ ನೀಡಿರಲಿಲ್ಲ. ಮಾರಾಟ ಮಾಡಿದ 1 ಎಕರೆ ಜಮೀನಿನ ಬದಲಾಗಿ ಮತ್ತೊಂದು ಎಕರೆ ಜಮೀನು ಕೂಡ ಕಬ್ಜಾ ಮಾಡಲಾಗಿದೆ ಎಂದು ಮೃತನ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಲಸೂರ ಠಾಣೆ ಪೊಲೀಸರ ತಂಡ, ಆರೋಪಿ ಬಂಧನಕ್ಕೆ ಜಾಲ ಬಿಸಿದೆ.

ಬಸವಕಲ್ಯಾಣ (ಬೀದರ್​): ಜಮೀನು ಮಾರಿದ ಹಣ ನೀಡಲಿಲ್ಲವೆಂದು ಮನನೊಂದ ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುತ್ತಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೃಷ್ಣಾಜಿ ಹಣಮಂತರಾವ ಬಿರಾದಾರ (48) ಜಮೀನಿನ ಮರಕ್ಕೆ ನೇಣು ಬಿಗಿದಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮಗಳ ಮದುವೆ ಸಂಬಂಧ ಹಣದ ಅಡಚಣೆ ಇದ್ದ ಕಾರಣ ಪಕ್ಕದ ಖಂಡಾಳ ಗ್ರಾಮದ ಕಾಶಪ್ಪ ಮೇತ್ರೆ ಎನ್ನುವಾತನಿಗೆ 1 ಎಕರೆ ಜಮೀನನ್ನು 12 ಲಕ್ಷ ರೂ. ಬೆಲೆಗೆ ಮಾರಾಟ ಮಾಡಲಾಗಿತ್ತು.

ಮುಂಗಡವಾಗಿ 4 ಲಕ್ಷ ರೂ. ಪಡೆಯಲಾಗಿತ್ತು. ಆದರೆ, ಉಳಿದ ಹಣ ನೀಡುವಂತೆ ಪದೇ, ಪದೇ ಕೇಳಿದರೂ ಹಣ ನೀಡಿರಲಿಲ್ಲ. ಮಾರಾಟ ಮಾಡಿದ 1 ಎಕರೆ ಜಮೀನಿನ ಬದಲಾಗಿ ಮತ್ತೊಂದು ಎಕರೆ ಜಮೀನು ಕೂಡ ಕಬ್ಜಾ ಮಾಡಲಾಗಿದೆ ಎಂದು ಮೃತನ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹುಲಸೂರ ಠಾಣೆ ಪೊಲೀಸರ ತಂಡ, ಆರೋಪಿ ಬಂಧನಕ್ಕೆ ಜಾಲ ಬಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.