ETV Bharat / state

ಮನೆ ಮುಂದೆ ನಿಲ್ಲಿಸಿದ ಬೈಕ್​ಗಳ ಕಳವು, ಕೆಲವೆಡೆ ಬೆಂಕಿ ಹಚ್ಚಿ ವಿಕೃತಿ

ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಎರಡು ಬೈಕ್​ಗಳು ಕಳುವಾದ ಘಟನೆ ಬಸವಕಲ್ಯಾಣ ನಗರದ ವೈಷ್ಣವಿ ಲೇಔಟ್​ನಲ್ಲಿ ನಡೆದಿದೆ. ಇನ್ನು ರಜಪುತ್ ಗಲ್ಲಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

author img

By

Published : Dec 20, 2020, 7:09 PM IST

ಟಿವಿಎಸ್ ಜುಪಿಟರ್ ಬೈಕ್​ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಟಿವಿಎಸ್ ಜುಪಿಟರ್ ಬೈಕ್​ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಬಸವಕಲ್ಯಾಣ: ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಕಳ್ಳತನ ಮಾಡಿದ್ದಲ್ಲದೆ, ಕೆಲವೆಡೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ನಗರದ ರಜಪುತ್ ಗಲ್ಲಿಯಲ್ಲಿ ನಡೆದಿದೆ.

ಟಿವಿಎಸ್ ಜುಪಿಟರ್ ಬೈಕ್​ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ನಗರದ ಹಜಾರಿ ಬಂಕ್ ಮಾಲೀಕರಾದ ಸೋನುಸಿಂಗ್ ಹಜಾರಿ ಅವರಿಗೆ ಸೇರಿದ ಟಿವಿಎಸ್ ಜುಪಿಟರ್ ಬೈಕ್​ ಅನ್ನು ತಮ್ಮ ಬಂಕ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿ ವಿಠಲ್​ ಸಿಂಗ್ ಎಂಬವರಿಗೆ ನೀಡಿದ್ದರು. ವಿಠಲ್​​ ಸಿಂಗ್ ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿ ಮಲಗಿದ್ದಾಗ ಕಿಡಿಗೇಡಿಗಳು ಬೈಕ್​ಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 50 ರೂ. ಸಾವಿರಕ್ಕೂ ಅಧಿಕ ಮೌಲ್ಯದ ಬೈಕ್ ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸುದ್ದಿ ತಿಳಿದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಿಡಿಗೇಡಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ 2 ಬೈಕ್​ಗಳ ಕಳವು
ಮನೆ ಮುಂದೆ ನಿಲ್ಲಿಸಿದ ಬೈಕ್​ಗಳ ಕಳವು

ಓದಿ: ಹಣದ ವಿಚಾರ: ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಕೊನೆ!

ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಎರಡು ಬೈಕ್​ಗಳು ಕಳುವಾದ ಘಟನೆ ನಗರದ ವೈಷ್ಣವಿ ಲೇಔಟ್​ನಲ್ಲಿ ನಡೆದಿದೆ. ಅವಿನಾಶ್ ದುಬೆ ಅವರಿಗೆ ಸೇರಿದ ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಹಾಗೂ ಇದೆ ಲೈಔಟ್​ನ ಚಂದ್ರಕಾಂತ್ ಅರ್ಜುನ್ ಎನ್ನುವರಿಗೆ ಸೇರಿದ ಹೀರೋ ಫ್ಯಾಷನ್ ಪ್ರೊ ಬೈಕ್​ಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮನೆ ಮುಂದೆ ನಿಲ್ಲಿಸಿದ ಬೈಕ್​ಗಳ ಕಳವು
ಮನೆ ಮುಂದೆ ನಿಲ್ಲಿಸಿದ ಬೈಕ್​ಗಳ ಕಳವು

ಒಂದೇ ರಾತ್ರಿಯಲ್ಲಿ ಮನೆ ಮುಂದೆ ನಿಲ್ಲಿಸಿದ 2 ಬೈಕ್​ಗಳ ಕಳವು ಪ್ರಕರಣ ಮತ್ತು ಬೈಕ್​ಗೆ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ನಡೆದಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.

ಬಸವಕಲ್ಯಾಣ: ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಕಳ್ಳತನ ಮಾಡಿದ್ದಲ್ಲದೆ, ಕೆಲವೆಡೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ನಗರದ ರಜಪುತ್ ಗಲ್ಲಿಯಲ್ಲಿ ನಡೆದಿದೆ.

ಟಿವಿಎಸ್ ಜುಪಿಟರ್ ಬೈಕ್​ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ನಗರದ ಹಜಾರಿ ಬಂಕ್ ಮಾಲೀಕರಾದ ಸೋನುಸಿಂಗ್ ಹಜಾರಿ ಅವರಿಗೆ ಸೇರಿದ ಟಿವಿಎಸ್ ಜುಪಿಟರ್ ಬೈಕ್​ ಅನ್ನು ತಮ್ಮ ಬಂಕ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿ ವಿಠಲ್​ ಸಿಂಗ್ ಎಂಬವರಿಗೆ ನೀಡಿದ್ದರು. ವಿಠಲ್​​ ಸಿಂಗ್ ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿ ಮಲಗಿದ್ದಾಗ ಕಿಡಿಗೇಡಿಗಳು ಬೈಕ್​ಗೆ ಬೆಂಕಿ ಹಚ್ಚಿದ್ದಾರೆ. ಸುಮಾರು 50 ರೂ. ಸಾವಿರಕ್ಕೂ ಅಧಿಕ ಮೌಲ್ಯದ ಬೈಕ್ ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಸುದ್ದಿ ತಿಳಿದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕಿಡಿಗೇಡಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಮನೆ ಮುಂದೆ ನಿಲ್ಲಿಸಿದ 2 ಬೈಕ್​ಗಳ ಕಳವು
ಮನೆ ಮುಂದೆ ನಿಲ್ಲಿಸಿದ ಬೈಕ್​ಗಳ ಕಳವು

ಓದಿ: ಹಣದ ವಿಚಾರ: ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಕೊನೆ!

ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ ಎರಡು ಬೈಕ್​ಗಳು ಕಳುವಾದ ಘಟನೆ ನಗರದ ವೈಷ್ಣವಿ ಲೇಔಟ್​ನಲ್ಲಿ ನಡೆದಿದೆ. ಅವಿನಾಶ್ ದುಬೆ ಅವರಿಗೆ ಸೇರಿದ ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಹಾಗೂ ಇದೆ ಲೈಔಟ್​ನ ಚಂದ್ರಕಾಂತ್ ಅರ್ಜುನ್ ಎನ್ನುವರಿಗೆ ಸೇರಿದ ಹೀರೋ ಫ್ಯಾಷನ್ ಪ್ರೊ ಬೈಕ್​ಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮನೆ ಮುಂದೆ ನಿಲ್ಲಿಸಿದ ಬೈಕ್​ಗಳ ಕಳವು
ಮನೆ ಮುಂದೆ ನಿಲ್ಲಿಸಿದ ಬೈಕ್​ಗಳ ಕಳವು

ಒಂದೇ ರಾತ್ರಿಯಲ್ಲಿ ಮನೆ ಮುಂದೆ ನಿಲ್ಲಿಸಿದ 2 ಬೈಕ್​ಗಳ ಕಳವು ಪ್ರಕರಣ ಮತ್ತು ಬೈಕ್​ಗೆ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ನಡೆದಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.