ETV Bharat / state

ಬಳ್ಳಾರಿಯಲ್ಲಿ ಇಎಸ್ಐಸಿ ಆಸ್ಪತ್ರೆ ಕಟ್ಟುವಂತೆ ಮನವಿ ಮಾಡಿದ ಕಾರ್ಮಿಕ ತಿಪ್ಪೆಸ್ವಾಮಿ

author img

By

Published : Nov 11, 2019, 4:54 PM IST

ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದ ಪತ್ರಿಕಾ ಭವನದಲ್ಲಿ ಮಾತನಾಡಿದ ಕಾರ್ಮಿಕ ತಿಪ್ಪೆಸ್ವಾಮಿ, ಜಿಲ್ಲೆಗೆ ಇಎಸ್ಐಸಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ 2017ರಲ್ಲಿ ಮಂಜುರಾಗಿದೆ. ಆದರೆ ಆರಂಭವಾಗಿಲ್ಲ. ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಆಸ್ಪತ್ರೆಯಿಂದಾಗಿ ಇಎಸ್ಐಸಿ ಫಲಾನುಭವಿಗಳು ವೈದ್ಯಕೀಯ ಚಿಕಿತ್ಸೆಗಾಗಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಕಲಬುರಗಿ, ಬೆಂಗಳೂರಿಗೆ ಹೋಗಿ ಪರದಾಡುವಂತಾಗಿದೆ ಎಂದರು.

ಕಾರ್ಮಿಕ ತಿಪ್ಪೆಸ್ವಾಮಿ ಸುದ್ದಿಗೋಷ್ಟಿ

ಬಳ್ಳಾರಿ: ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದ ಪತ್ರಿಕಾ ಭವನದಲ್ಲಿ ಮಾತನಾಡಿದ ಕಾರ್ಮಿಕ ತಿಪ್ಪೆಸ್ವಾಮಿ, ಜಿಲ್ಲೆಗೆ ಇಎಸ್ಐಸಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ 2017ರಲ್ಲಿ ಮಂಜುರಾಗಿದೆ. ಆದರೆ ಆರಂಭವಾಗಿಲ್ಲ. ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಆಸ್ಪತ್ರೆಯಿಂದಾಗಿ ಇಎಸ್ಐಸಿ ಫಲಾನುಭವಿಗಳು ವೈದ್ಯಕೀಯ ಚಿಕಿತ್ಸೆಗಾಗಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಕಲಬುರಗಿ, ಬೆಂಗಳೂರಿಗೆ ಹೋಗಿ ಪರದಾಡುವಂತಾಗಿದೆ ಎಂದರು.

ಕಾರ್ಮಿಕ ತಿಪ್ಪೆಸ್ವಾಮಿ ಸುದ್ದಿಗೋಷ್ಠಿ

ಇಎಸ್ಐಸಿ ಸೇವೆ ಬಳ್ಳಾರಿಯಲ್ಲಿ ಇಲ್ಲ. ದಾವಣಗೆರೆ, ಬೆಂಗಳೂರಿನ ಸಂಜೀವಿನಿ ಆಸ್ಪತ್ರೆಗೆ ಹೋದಾಗ ಇಎಸ್ಐಸಿ ಅಡಿಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ನನ್ನ ಮಗ ಮರಣ ಹೊಂದಿದ. ನನಗೆ ಆದ ಅನ್ಯಾಯ ಬೇರೆ ಯಾವ ಕುಟುಂಬದ ಕಾರ್ಮಿಕರಿಗೂ ಆಗಬಾರದು ಎನ್ನುವ ಉದ್ದೇಶದಿಂದ ಈ ಮಾಹಿತಿ ತಿಳಿಸಲು ಬಂದಿದ್ದೇನೆ ಎಂದರು.

ಬಳ್ಳಾರಿಯಲ್ಲಿ ಸುಮಾರು 5 ಲಕ್ಷಕ್ಕಿಂತ ಅಧಿಕ ಕಾರ್ಮಿಕರು ಇರುವುದರಿಂದ ಇಎಸ್ಐಸಿ ಆಸ್ಪತ್ರೆ ನಿರ್ಮಾಣವಾದರೆ ಅನುಕೂಲವಾಗುತ್ತದೆ. ಆಸ್ಪತ್ರೆ ನಿರ್ಮಾಣಕ್ಕೆ 5 ಎಕರೆ ಜಮೀನಿನ ಅಗತ್ಯವಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಭೂಮಿ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಬಳ್ಳಾರಿ: ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದ ಪತ್ರಿಕಾ ಭವನದಲ್ಲಿ ಮಾತನಾಡಿದ ಕಾರ್ಮಿಕ ತಿಪ್ಪೆಸ್ವಾಮಿ, ಜಿಲ್ಲೆಗೆ ಇಎಸ್ಐಸಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ 2017ರಲ್ಲಿ ಮಂಜುರಾಗಿದೆ. ಆದರೆ ಆರಂಭವಾಗಿಲ್ಲ. ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಆಸ್ಪತ್ರೆಯಿಂದಾಗಿ ಇಎಸ್ಐಸಿ ಫಲಾನುಭವಿಗಳು ವೈದ್ಯಕೀಯ ಚಿಕಿತ್ಸೆಗಾಗಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಕಲಬುರಗಿ, ಬೆಂಗಳೂರಿಗೆ ಹೋಗಿ ಪರದಾಡುವಂತಾಗಿದೆ ಎಂದರು.

ಕಾರ್ಮಿಕ ತಿಪ್ಪೆಸ್ವಾಮಿ ಸುದ್ದಿಗೋಷ್ಠಿ

ಇಎಸ್ಐಸಿ ಸೇವೆ ಬಳ್ಳಾರಿಯಲ್ಲಿ ಇಲ್ಲ. ದಾವಣಗೆರೆ, ಬೆಂಗಳೂರಿನ ಸಂಜೀವಿನಿ ಆಸ್ಪತ್ರೆಗೆ ಹೋದಾಗ ಇಎಸ್ಐಸಿ ಅಡಿಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ನನ್ನ ಮಗ ಮರಣ ಹೊಂದಿದ. ನನಗೆ ಆದ ಅನ್ಯಾಯ ಬೇರೆ ಯಾವ ಕುಟುಂಬದ ಕಾರ್ಮಿಕರಿಗೂ ಆಗಬಾರದು ಎನ್ನುವ ಉದ್ದೇಶದಿಂದ ಈ ಮಾಹಿತಿ ತಿಳಿಸಲು ಬಂದಿದ್ದೇನೆ ಎಂದರು.

ಬಳ್ಳಾರಿಯಲ್ಲಿ ಸುಮಾರು 5 ಲಕ್ಷಕ್ಕಿಂತ ಅಧಿಕ ಕಾರ್ಮಿಕರು ಇರುವುದರಿಂದ ಇಎಸ್ಐಸಿ ಆಸ್ಪತ್ರೆ ನಿರ್ಮಾಣವಾದರೆ ಅನುಕೂಲವಾಗುತ್ತದೆ. ಆಸ್ಪತ್ರೆ ನಿರ್ಮಾಣಕ್ಕೆ 5 ಎಕರೆ ಜಮೀನಿನ ಅಗತ್ಯವಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಭೂಮಿ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

Intro:ಕಾರ್ಮಿಕರ ಹಿತದೃಷ್ಟಿಯಿಂದ ಇ.ಎಸ್.ಐ.ಸಿ ಆಸ್ಪತ್ರೆಯನ್ನು ಜಿಲ್ಲಾ ಕೇಂದ್ರದಲ್ಲಿ ಮಾಡಿ : ತಿಪ್ಪೇಸ್ವಾಮಿ ಗಡ್ಡೆ.

ಇ.ಎಸ್.ಐ.ಸಿ ಆಸ್ಪತ್ರೆ ಬಳ್ಳಾರಿ ಜಿಲ್ಲೆಯಲ್ಲಿ ಇರದ ಕಾರಣ ಬಳ್ಳಾರಿ‌ಯಿಂದ ದಾವಣಗೆರೆ, ದಾವಣಗೆರೆಯಿಂದ ಬೆಂಗಳೂರಿನ ಸಂಜೀವಿನಿ ಆಸ್ಪತ್ರೆಗೆ ಹೋದಾಗ ಇ.ಎಸ್.ಐ.ಸಿ ಅಡಿಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ನನ್ನ ಮಗ ಮರಣ ಹೊಂದಿದ. ನನಗೆ ಆದ ಅನ್ಯಾಯ ಬೇರೆ ಯಾವ ಕುಟುಂಬದ ಕಾರ್ಮಿಕರಿಗೆ ಆಗಬಾರದು ಎನ್ನುವ ಉದ್ದೇಶದಿಂದ ಈ ಮಾಹಿತಿ ತಿಳಿಸಲು ಬಂದಿದ್ದೆನೆ ಎಂದರು


Body:.

ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದ ಪತ್ರಿಕಾ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಮಿಕ ತಿಪ್ಪೆಸ್ವಾಮಿ ಗಡ್ಡೆ ಬಳ್ಳಾರಿ ಜಿಲ್ಲೆಯಲ್ಲಿ ಇ.ಎಸ್.ಐ.ಸಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ 2017 ರಲ್ಲಿ ಮಂಜುರಾಗಿದೆ ಆದ್ರೇ ಆರಂಭವಾಗಿಲ್ಲ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಆಸ್ಪತ್ರೆ ಇ.ಎಸ್.ಐ.ಸಿ ಫಲಾನುಭವಿಗಳು, ವೈದ್ಯಕೀಯ ಚಿಕಿತ್ಸೆ ಪರವಾಗಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಗುಲ್ಬರ್ಗ, ಬೆಂಗಳೂರು ಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹೋಗಲು ಹಣಕಾಸಿನ ತೊಂದರೆ, ಮಾರ್ಗ ಮಧ್ಯದಲ್ಲಿಯೇ ಸಾವುಗಳು ಆಗುತ್ತಿವೆ. ಶೀಘ್ರದಲ್ಲೇ ಆರಂಭ ಇ.ಎಸ್.ಐ.ಸಿ ಆಸ್ಪತ್ರೆಯನ್ನು ಬಳ್ಳಾರಿಯಲ್ಲಿ ಪ್ರಾರಂಭ ಮಾಡಿ ಹಾಗೂ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೊಂದಾಣಿಕೆಯನ್ನು ಮಾಡಬೇಕೆಂದು ಒತ್ತಾಯ ಮಾಡಿದರು.

ಇದರಿಂದಾಗಿ ಜಿಲ್ಲೆಯಲ್ಲಿ ಗಣಿ ಕಂಪನಿ, ರೈಸ್ ಮಿಲ್ ಗಳು, ಕುಡುತಿನಿ ಶಾಖೋತ್ಪನ್ನ ಕೇಂದ್ರ, ಎ.ಸಿ.ಸಿ ಕಂಪನಿ, ಮಿನರಾ ಸ್ಡೀಲ್, ಜೆ.ಎಸ್.ಡಬ್ಲ್ಯೂ, ಆಟೋ ಚಾಲಕರು ಕಾರ್ಮಿಕರು ಸಿ.ಎಸ್.ಐ.ಸಿ ಕುಟುಂಬದ ಸದಸ್ಯರು 5,80,000 ಇದ್ದಾರೆ ಅವರೆಲ್ಲರಿಗೂ ಅನುಕೂಲವಾಗುತ್ತದೆ ಎಂದರು‌‌.

ಬಳ್ಳಾರಿ‌ಯಿಂದ ಹೊಸಪೇಟೆಯವರೆಗೆ ಕೈಗಾರಿಕೆಗಳು ಬಳ ಇವೆ ಅದರಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಅನೇಕ ಬಾರಿ ಜಿಲ್ಲೆಯ ಅಧಿಕಾರಿಗಳಿಗೆ ಇ.ಎಸ್.ಐ.ಸಿ ಆಸ್ಪತ್ರೆ ಸಲುವಾಗಿ ಅನೇಕ ಬಾರಿ ವಿವಿಧ ಸಂಘಟನೆಗಳು ಮೂಲಕ ಮನವಿ ಪತ್ರಗಳನ್ನು ಸಲ್ಲಿಸಿದ್ದೆ ಮತ್ತು ಇ.ಎಸ್.ಐ.ಸಿ ಆಸ್ಪತ್ರೆಗಾಗಿ 5 ಎಕರೆ ಜಮೀನಿನ ಅಗತ್ಯವಿದೆ, ಜಿಲ್ಲಾಡಳಿತ ನೀಡಬೇಕು. ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ ಇ.ಎಸ್.ಐ.ಸಿ ಆಸ್ಪತ್ರೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಜೈ ಕರ್ನಾಟಕ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಮಾತನಾಡಿದರು‌.

ಜಿಲ್ಲೆಯ ಖಾಸಗಿ ಆಸ್ಪತ್ರೆ ಸಂಜೀವಿನಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ತೋರಣಗಲ್ಲು ಜಿಂದಾಲ್ ನೊಂದಿಗೆ ಇ.ಎಸ್‌.ಐ.ಸಿ ನೊಂದಿಗೆ ಮಾತ್ರ ಹೊಂದಾಣಿಕೆ ಮಾಡಿಕೊಂಡಿದೆ‌.




Conclusion:ಒಟ್ಟಾರೆಯಾಗಿ ಬಳ್ಳಾರಿಯಲ್ಲಿ ಇ.ಎಸ್.ಐ.ಸಿ ಆಸ್ಪತ್ರೆ ಆರಂಭ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಈ ಸುದ್ದಿಗೋಷ್ಟಿಯಲ್ಲಿ ತಿಪ್ಪೆಸ್ವಾಮಿ, ಸಂತೋಷ, ರವಿ, ಭರತ್ ಕುಮಾರ್, ತೇಜಸ್, ಪವನ್ ಕುಮಾರ್ ಭಾಗವಹಿಸಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.