ETV Bharat / state

ಗಣಿನಾಡಿನಲ್ಲೀಗ ಮೂರೊತ್ತಿನ ಊಟಕ್ಕೂ ಇಲ್ಲದಾಗಿದೆ!: ಶ್ರೀರಾಮುಲು - BALLARI DISTRICT TORANGALLU JINDAL NEWS

ನಾವು ಒಂದು ಕಾಲದಲ್ಲಿ ಬಡತನದಲ್ಲಿದ್ದೆವು. ಆದರೀಗ ಸ್ವಲ್ಪ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದೇವೆ. ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಅವಕಾಶ ಇರಲಿಲ್ಲ. ಈಗ ಆ ಅವಕಾಶ ದೊರೆತಿದೆ ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಶ್ರೀರಾಮುಲು
author img

By

Published : Jun 8, 2019, 11:07 PM IST

ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿ ಎಂದರೆ ಶ್ರೀಮಂತ ಜಿಲ್ಲೆಯಂತಾಗಿತ್ತು. ಹೊರಗಡೆ ನೋಡೋ ದೃಷ್ಠಿಕೋನವೇ ಬೇರೆಯಾಗಿತ್ತು. ಆದರೀಗ ಮೂರೊತ್ತಿನ ಊಟಕ್ಕೂ ಇಲ್ಲದ ಹಾಗೆ ಆಗಿದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರ ಸಭಾಂಗಣದಲ್ಲಿಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿ, ನಾವು ಒಂದು ಕಾಲದಲ್ಲಿ ಬಡತನದಲ್ಲಿದ್ದೆವು. ಆದರೀಗ ಸ್ವಲ್ಪ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದೇವೆ. ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಅವಕಾಶ ಇರಲಿಲ್ಲ. ಈಗ ಆ ಅವಕಾಶ ದೊರೆತಿದೆ. ಹಾಗಂತ, ಶ್ರೀಮಂತರೆಂದರೆ ಹೇಗೆ. ಇಂತಹ ವಕ್ರದೃಷ್ಠಿಯಿಂದಲೇ ಈ ದಿನ ನಮಗೆ ಮುರೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಶ್ರೀರಾಮುಲು

ಈ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಕುರಿತು ಗಂಭೀರ ಚಿಂತನೆ ನಡೆಯಬೇಕು. ಅದರೊಂದಿಗೆ ಕೃಷಿ ಚಟುವಟಿಕೆಗೂ ಆದ್ಯತೆ ನೀಡಬೇಕು. ಕೈಗಾರಿಕಾ ಕಂಪನಿಗಳ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ರೈತರ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಆ‌ ಕುರಿತು ಚಿಂತನೆಯಾಗಬೇಕು ಎಂದು ಅಗ್ರಹ ಮಾಡಿದರು.

ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿ ಎಂದರೆ ಶ್ರೀಮಂತ ಜಿಲ್ಲೆಯಂತಾಗಿತ್ತು. ಹೊರಗಡೆ ನೋಡೋ ದೃಷ್ಠಿಕೋನವೇ ಬೇರೆಯಾಗಿತ್ತು. ಆದರೀಗ ಮೂರೊತ್ತಿನ ಊಟಕ್ಕೂ ಇಲ್ಲದ ಹಾಗೆ ಆಗಿದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರ ಸಭಾಂಗಣದಲ್ಲಿಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿ, ನಾವು ಒಂದು ಕಾಲದಲ್ಲಿ ಬಡತನದಲ್ಲಿದ್ದೆವು. ಆದರೀಗ ಸ್ವಲ್ಪ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದೇವೆ. ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಅವಕಾಶ ಇರಲಿಲ್ಲ. ಈಗ ಆ ಅವಕಾಶ ದೊರೆತಿದೆ. ಹಾಗಂತ, ಶ್ರೀಮಂತರೆಂದರೆ ಹೇಗೆ. ಇಂತಹ ವಕ್ರದೃಷ್ಠಿಯಿಂದಲೇ ಈ ದಿನ ನಮಗೆ ಮುರೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಶ್ರೀರಾಮುಲು

ಈ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಕುರಿತು ಗಂಭೀರ ಚಿಂತನೆ ನಡೆಯಬೇಕು. ಅದರೊಂದಿಗೆ ಕೃಷಿ ಚಟುವಟಿಕೆಗೂ ಆದ್ಯತೆ ನೀಡಬೇಕು. ಕೈಗಾರಿಕಾ ಕಂಪನಿಗಳ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ರೈತರ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಆ‌ ಕುರಿತು ಚಿಂತನೆಯಾಗಬೇಕು ಎಂದು ಅಗ್ರಹ ಮಾಡಿದರು.

Intro:ಹೊರಗಿನವರ ವಕ್ರದೃಷ್ಠಿ….
ಗಣಿನಾಡಿಗೀಗ ಮೂರೊತ್ತಿನ ಊಟಕ್ಕೂ ಇಲ್ಲದ್ಹಂಗ ಆಗೈದ!
ಬಳ್ಳಾರಿ: ಗಣಿಜಿಲ್ಲೆ ಬಳ್ಳಾರಿ ಎಂದರೆ ಶ್ರೀಮಂತ ಜಿಲ್ಲೆಯಂತಾಗಿತ್ತು. ಹೊರಗಡೆ ನೋಡೋ ದೃಷ್ಠಿಕೋನವೇ ಬೇರೆಯಾಗಿತ್ತು. ಈ ಜಿಲ್ಲೆ ಶ್ರೀಮಂತರೇ ನೆಲೆಸಿರುವ ಜಿಲ್ಲೆಯಂತಾಗಿತ್ತು. ಹೊರಗಿನವರ ವಕ್ರ ದೃಷ್ಠಿಯಿಂದ ಗಣಿನಾಡಿಗೀಗ ಮುರೊತ್ತಿನ ಊಟಕ್ಕೂ ಇಲ್ಲದ್ಹಂಗ ಅಗೈದ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರ ಸಭಾಂಗಣದಲ್ಲಿಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿ, ಗಣಿ ಜಿಲ್ಲೆ ಬಳ್ಳಾರಿ ಎಂದರೆ ಬರೀ ಶ್ರೀಮಂತರು ಇರುವ ಜಿಲ್ಲೆ ಅಂತಾ ಹೊರಗಿನವರ ಭಾವನೆಯಾಗಿದೆ. ನಾವೇನು ಶ್ರೀಮಂತರು ಅಂತಾ ಬೋರ್ಡ್ ಹಾಕಿಕೊಂಡ್ವೀನೇರ್ರೀ. ಒಂದ್ ಕಾಲದಲ್ಲಿ ಬಡತನದಲ್ಲಿದ್ದೇವು. ಆದರೀಗ ಸ್ವಲ್ಪ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದೇವೆ. ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಬಟ್ಟೆ ಹಾಕಿಕೊಳ್ಳಲು ಅವಕಾಶ ಇರಲಿಲ್ಲ. ಈಗ ಆ ಅವಕಾಶ ದೊರೆತಿದೆ. ಹಾಗಂತ, ಶ್ರೀಮಂತರೆಂದರೆ ಹೇಗೆ. ಇಂತಹ ವಕ್ರದೃಷ್ಠಿಯಿಂದಲೇ ಈ ದಿನ ನಮಗ ಮುರೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಕುರಿತು ಗಂಭೀರ ಚಿಂತನೆ ನಡಿಬೇಕು. ಅದರೊಂದಿಗೆ ಕೃಷಿ ಚಟುವಟಿಕೆಗೂ ಆದ್ಯತೆ ನೀಡ ಬೇಕು. ಕೈಗಾರಿಕಾ ಕಂಪನಿಗಳು ರಸಾಯನಿಕ ಪದಾರ್ಥಗಳ ಬಳಕೆ ಯಿಂದ ರೈತರ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ. ಆ‌ ಕುರಿತು ಚಿಂತನೆಯಾಗಬೇಕು ಎಂದರು.
Body:ಅಮೇರಿಕಾ ಅಧ್ಯಕ್ಷರು ಟ್ಯಾಕ್ಸ್ ಎಕ್ಸ್ ಮ್ ಸ್ಸನ್ ಕಡಿತಗೊಳಿಸುವ ನಿರ್ಧಾರ ಸೇರಿದಂತೆ ಇನ್ನಿತರೆ ಕೈಗಾರಿಕಾ ವಲಯಗಳ ಸಾಧಕ- ಬಾಧಕ ಕುರಿತ ಈ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಬೇಕು.
ಆ ನಿರ್ಣಯಗಳ ಪ್ರತಿಯನ್ನು ಪ್ರಧಾನಿ ಮೋದಿ ಹಾಗೂ ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸಲು ವೇದಿಕೆ ಕಲ್ಪಿಸಿಕೊಡುವೆ. ನಿರ್ಣಯಗಳ ಪ್ರತಿ ಹಿಡಿದು ಕೊಂಡು ತಾವೆಲ್ಲ ನನ್ನ ಹತ್ತಿರ ಬಂದರೆ ಸಾಕು. ದೆಹಲಿಗೆ ಹೋಗೋ ಣ ಎಂದರು.
ರಾಜಕಾರಣಿಗಳು ಒಂದೇ ಕುಟುಂಬದ ಸದಸ್ಯರಿದ್ದಂತೆ: ಶಾಸಕ ಬಿ.ಶ್ರೀರಾಮುಲು ಅವರು ಮಾತನಾಡುತ್ತಿರುವಾಗ ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಹೆಸರು ಹೇಳುತ್ತಲೇ ನಾವೆಲ್ಲ ಒಂದೇ ಕುಟುಂಬದ ಸದಸ್ಯರಿದ್ದಂತೆ ಎಂದರಲ್ಲದೇ, ಕೇವಲ ಚುನಾವಣೆ ಬಂದಾಗ ಮಾತ್ರ ಪಕ್ಷಗಳು ಬೇರೆ, ಬೇರೆಯಾಗಿರುತ್ತವೆ. ಉಳಿದ ಸಂದರ್ಭದಲ್ಲಿ ನಾವೆಲ್ಲ ಒಂದೇ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_04_08_MLA_SREE_RAMULU_SPEECH_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.