ಬಳ್ಳಾರಿ: ನಮ್ಮ ಪಕ್ಷದಲ್ಲಿದ್ದಾಗ ಅಧಿಕಾರ ಅನುಭವಿಸಿದವರೇ ಇವತ್ತು ಪಕ್ಷ ತ್ಯಜಿಸಲು ಮುಂದಾದ್ರೆ ಪರ್ಯಾಯ ನಾಯಕತ್ವ ಸೃಷ್ಠಿಯೇ ನಮ್ಮ ಮುಂದಿರುವ ಆಯ್ಕೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.
ಪರ್ಯಾಯ ನಾಯಕತ್ವ ಸೃಷ್ಠಿಗೆ ಜೆಡಿಎಸ್ ಸನ್ನದ್ಧ: ಹೆಚ್.ಕೆ ಕುಮಾರಸ್ವಾಮಿ
ನಾಯಕತ್ವದ ವಿರುದ್ಧ ಮಾತನಾಡಿ ನಮ್ಮ ಪಕ್ಷ ಬಿಟ್ಟು ಹೋದವರು ಈಗ ವೆಂಟಿಲೇಟರ್ನಲ್ಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ವ್ಯಂಗ್ಯವಾಡಿದ್ರು.
ಪಕ್ಷದ ವಿರುದ್ಧವಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಪಕ್ಷದ ಗೌರವಕ್ಕೆ ಧಕ್ಕೆಯುಂಟು ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಪರ್ಯಾಯ ನಾಯಕತ್ವ ಸೃಷ್ಠಿಸಲು ಜೆಡಿಎಸ್ ಪಕ್ಷ ಯಾವತ್ತಿಗೂ ಸನ್ನದ್ಧವಾಗಿರುತ್ತದೆ. ಪಕ್ಷದ ಶಾಸಕರು ಪಕ್ಷ ತೊರೆದು ಹೋಗುತ್ತಾರೆ ಎಂಬ ವಿಚಾರ ಕಪೋಲಕಲ್ಪಿತವಾದದ್ದು. ಯಾರೂ ಪಕ್ಷ ಬಿಟ್ಟು ಹೋಗುತ್ತಿಲ್ಲ. ಭಿನ್ನಾಭಿಪ್ರಾಯ ಇರುವುದು ನಿಜ ಎಂದರು.
ರಾಜ್ಯವನ್ನು ರಾಜಕೀಯ ಅಸ್ಥಿರತೆ ಕಾಡುತ್ತಿದೆ. ಸರ್ಕಾರ ಕೇವಲ ವರ್ಗಾವಣೆ ವಿಚಾರದಲ್ಲಿ ಮಾತ್ರ ಮುಂದಿದೆ. ಅಧಿಕಾರಿಗಳು ಸರ್ಕಾರಕ್ಕೆ ದಾಸನಾಗಬೇಕು. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಕೊಡಿ, ಅಮಾನತು ಮಾಡಿ. ಆದರೆ, ತಿಂಗಳಲ್ಲಿ ಸಾವಿರಾರು ವರ್ಗಾವಣೆ ಯಾಕೆ? ಸರ್ಕಾರ ವಿರೋಧ ಪಕ್ಷಗಳಿಗೆ ಉತ್ತರಿಸದಿದ್ದರೂ ಜನರಿಗೆ ಉತ್ತರ ಕೊಡಲೇಬೇಕು. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದರೆ ಸಾಲದು, ನಿಜವಾಗಿ ಅಭಿವೃದ್ದಿಯಾಗಬೇಕಿದೆ ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಹೆಚ್.ಕೆ ಕುಮಾರಸ್ವಾಮಿ ಕಿಡಿ ಕಾರಿದ್ರು.
ಬಳ್ಳಾರಿ: ನಮ್ಮ ಪಕ್ಷದಲ್ಲಿದ್ದಾಗ ಅಧಿಕಾರ ಅನುಭವಿಸಿದವರೇ ಇವತ್ತು ಪಕ್ಷ ತ್ಯಜಿಸಲು ಮುಂದಾದ್ರೆ ಪರ್ಯಾಯ ನಾಯಕತ್ವ ಸೃಷ್ಠಿಯೇ ನಮ್ಮ ಮುಂದಿರುವ ಆಯ್ಕೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ವಿರುದ್ಧವಾಗಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಪಕ್ಷದ ಗೌರವಕ್ಕೆ ಧಕ್ಕೆಯುಂಟು ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಪರ್ಯಾಯ ನಾಯಕತ್ವ ಸೃಷ್ಠಿಸಲು ಜೆಡಿಎಸ್ ಪಕ್ಷ ಯಾವತ್ತಿಗೂ ಸನ್ನದ್ಧವಾಗಿರುತ್ತದೆ. ಪಕ್ಷದ ಶಾಸಕರು ಪಕ್ಷ ತೊರೆದು ಹೋಗುತ್ತಾರೆ ಎಂಬ ವಿಚಾರ ಕಪೋಲಕಲ್ಪಿತವಾದದ್ದು. ಯಾರೂ ಪಕ್ಷ ಬಿಟ್ಟು ಹೋಗುತ್ತಿಲ್ಲ. ಭಿನ್ನಾಭಿಪ್ರಾಯ ಇರುವುದು ನಿಜ ಎಂದರು.
ರಾಜ್ಯವನ್ನು ರಾಜಕೀಯ ಅಸ್ಥಿರತೆ ಕಾಡುತ್ತಿದೆ. ಸರ್ಕಾರ ಕೇವಲ ವರ್ಗಾವಣೆ ವಿಚಾರದಲ್ಲಿ ಮಾತ್ರ ಮುಂದಿದೆ. ಅಧಿಕಾರಿಗಳು ಸರ್ಕಾರಕ್ಕೆ ದಾಸನಾಗಬೇಕು. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಕೊಡಿ, ಅಮಾನತು ಮಾಡಿ. ಆದರೆ, ತಿಂಗಳಲ್ಲಿ ಸಾವಿರಾರು ವರ್ಗಾವಣೆ ಯಾಕೆ? ಸರ್ಕಾರ ವಿರೋಧ ಪಕ್ಷಗಳಿಗೆ ಉತ್ತರಿಸದಿದ್ದರೂ ಜನರಿಗೆ ಉತ್ತರ ಕೊಡಲೇಬೇಕು. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದರೆ ಸಾಲದು, ನಿಜವಾಗಿ ಅಭಿವೃದ್ದಿಯಾಗಬೇಕಿದೆ ಎಂದು ರಾಜ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ಹೆಚ್.ಕೆ ಕುಮಾರಸ್ವಾಮಿ ಕಿಡಿ ಕಾರಿದ್ರು.
ಬಳ್ಳಾರಿ: ಎಲ್ಲ ಆಯಾಮಗಳಲ್ಲಿ ಅಧಿಕಾರ ಅನುಭವಿಸಿದವರೇ ಇವತ್ತು ಪಕ್ಷವನ್ನು ತ್ಯಜಿಸಲು ಮುಂದಾದ್ರೆ ಪರ್ಯಾಯ ನಾಯಕತ್ವ ಸೃಷ್ಠಿಯೇ ನಮ್ಮ ಮುಂದಿರುವ ಆಯ್ಕೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿಯವ್ರು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿ ನಗರದ ಡಾ.ರಾಜ್ ರಸ್ತೆಯಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಕ್ಷದಲ್ಲಿ ನಾನಾ ಹುದ್ದೆಗಳನ್ನು ಅಲಂಕರಿಸಿ ಅಧಿಕಾರವನ್ನು ಅನುಭವಿಸಿದವರೇ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಪಕ್ಷದ ಗೌರವಕ್ಕೆ ಧಕ್ಕೆಯುಂಟು ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವನ್ನು ಜರುಗಿಸಲಾಗುವುದು. ಅಲ್ಲದೇ, ಪರ್ಯಾಯ ನಾಯಕತ್ವದ ಸೃಷ್ಠಿಸಲು ಜೆಡಿಎಸ್ ಪಕ್ಷ ಯಾವತ್ತಿಗೂ ಸನ್ನದ್ಧವಾಗಿದೆಂದು ತಿಳಿಸಿದ್ದಾರೆ.
ಪಕ್ಷದ ಶಾಸಕರು ಪಕ್ಷ ತೊರೆದು ಹೋಗುತ್ತಾರೆ ಎಂಬ ವಿಚಾರ ಕಪೋಲಕಲ್ಪಿತವಾದದು. ಯಾರೂ ಪಕ್ಷ ಬಿಟ್ಟು ಹೋಗುತ್ತಿಲ್ಲ. ಭಿನ್ನಾಭಿಪ್ರಾಯ ಇರುವುದು ನಿಜ. ನಾಯಕತ್ವದ ವಿರುದ್ಧ ಪಕ್ಷ ಬಿಟ್ಟು ಹೋದವರು ಈಗ ವೆಂಟಿಲೇಟರ್ನಲ್ಲಿದ್ದಾರೆ ಎಂದು ನೆನಪಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಮತ್ತು ಆ ರೀತಿ ಹೇಳಿಕೆಗಳನ್ನು ಯಾರೂ ನೀಡಬಾರದು. ಆ ವಿಚಾರಗಳು ಪಕ್ಷದ ಚೌಕಟ್ಟಿನಲ್ಲೇ ಚರ್ಚೆಯಾಗಬೇಕು. ಅಂತಹ ಶಾಸಕರ ವಿರುದ್ದ ದೇವೇಗೌಡರು ಹಾಗೂ ಕುಮಾರಸ್ವಾಮಿಯವರೊಂದಿಗೆ ಚರ್ಚಿಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರಾಜೀನಾಮೆ ನೀಡಲು ಶಾಸಕರಿಗೆ ಬಿಜೆಪಿ ಪ್ರಚೋದನೆ ಇರಲೂ ಬಹುದು. ಪ್ರಚೋದನೆ ಮಾಡಿ ವಾಮಮಾರ್ಗದಿಂದ ಅಧಿಕಾರ ಹಿಡಿದಿರುವ ಬಿಜೆಪಿ ತ್ರಿಶಂಕು ಸ್ಥಿತಿಯಲ್ಲಿರುವ ಅನರ್ಹ 17 ಮಂದಿ ಶಾಸಕರಿಗೆ ಮಾರ್ಗ ತೋರಿಸಲಿ. ಪಕ್ಷ ಬಿಟ್ಟು ಹೋದವರಿಗೆ ಪರ್ಯಾಯ ನಾಯಕರು ಹುಟ್ಟಿಕೊಳ್ಳಲಿದ್ದಾರೆ. ಅಧಿಕಾರ ಅನುಭವಿಸಿ ಬೇರೆ ಪಕ್ಷಕ್ಕೆ ಹೋಗುವಾಗ ಬೇಡವಾದ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಾದ ತೀರ್ಮಾನಗಳನ್ನು ಮುಂದಿನ ಸರ್ಕಾರಗಳು ಮುಂದುವರೆಸಬೇಕು. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವುಗಳನ್ನು ಸ್ಥಗಿತಗೊಳಿಸಿದ್ದಾರೆ. ಅವರು ಆಡಳಿತ ನಡೆಸುವಲ್ಲಿ ವಿಫಲ ವಾಗಿದ್ದಾರೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಕಾಡುತ್ತಿದೆ.
ಸರ್ಕಾರ ಕೇವಲ ವರ್ಗಾವಣೆ ವಿಚಾರದಲ್ಲಿ ಮಾತ್ರ ಮುಂದಿದೆ. ಅಧಿಕಾರಿಗಳು ಸರ್ಕಾರಕ್ಕೆ ದಾಸನಾಗಬೇಕು. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಕೊಡಿ, ಅಮಾನತ್ತು ಮಾಡಿ. ಆದರೆ, ತಿಂಗಳಲ್ಲಿ ಸಾವಿರಾರು ವರ್ಗಾವಣೆ ಯಾಕೆ? ಇದನ್ನು ದಂಧೆ ನಡೆಯುತ್ತಿದೆ ಎಂದು ಕೊಳ್ಳಬೇಕಾ. ಅವರು, ವಿರೋಧ ಪಕ್ಷಗಳಿಗೆ ಉತ್ತರಿಸದಿದ್ದರೂ ಜನರಿಗೆ ಉತ್ತರ ಕೊಡಲೇಬೇಕು. ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದರೇ ಸಾಲದು ನಿಜವಾಗಿ ಅದರ ಕಲ್ಯಾಣವಾಗಬೇಕಿದೆ ಎಂದು ಅಭಿಪ್ರಾಯಿಸಿದ್ದಾರೆ.
Body:ರಾಜ್ಯದಲ್ಲಿ ಕಳೆದ ತಿಂಗಳಿನಿಂದ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇನ್ನೂ ಕೇಂದ್ರ ಸರ್ಕಾರಕ್ಕೆ ಅಧಿಕೃತ ವರದಿ ಸಲ್ಲಿಸಿಲ್ಲ. ಯಾಕೆ ತಡವಾಗುತ್ತಿದೆ. ಇವರ ಮನವಿಗೆ ಕೇಂದ್ರ ಒಗೊಡುತ್ತಿಲ್ಲವಾ. ಇದು ರಾಜ್ಯದ ಅಭಿವೃದ್ದಿಗೆ ಮಾರಕ. ಕೇವಲ 3 ಸಾವಿರ ಕೋಟಿ ರೂ.ಗಳ ಮಾತ್ರ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿದಿದೆ.
ಸಹಜವಾಗಿ ಮಹಾರಾಷ್ಟ್ರದೊಂದಿಗೆ ಚುನಾವಣೆ ಬರಬಹುದು. ಜಿಲ್ಲಾ ಸಮಿತಿ, ವಿಭಾಗಗಳ ಅಧ್ಯಕ್ಷರನ್ನು ನೇಮಿಸಿ, ಪಕ್ಷದ ಸದಸ್ಯತ್ವ ನೊಂದಣಿ ಪ್ರಾರಂಭಿಸುತ್ತೇವೆ. ಕಾರ್ಯಕರ್ತರು ಹಳ್ಳಿ ಹಳ್ಳಿಗಳಿಗೆ ಹೋಗಿ ನೊಂದಣಿ ಮಾಡಿಸಬೇಕು ಎಂದರು.
ಜಿಲ್ಲಾ ಜೆಡಿಎಸ್ ಪಕ್ಷದ ಮುಖಂಡರಾದ ಮೀನಳ್ಳಿ ತಾಯಣ್ಣ, ಕಿರಣಕುಮಾರ, ಡಿ.ವಿಜಯಕುಮಾರ ಇದ್ದರು.
ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.
ಬೈಟ್: ಹೆಚ್.ಕೆ.ಕುಮಾರಸ್ವಾಮಿ, ರಾಜಾಧ್ಯಕ್ಷ, ಜೆಡಿಎಸ್.
Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_4_JDS_STATE_PRESIDENT_PRESS_MEET_BYTE_VISUALS_7203310
TAGGED:
JDS President HK Kumaraswamy