ETV Bharat / state

ಎಲ್​ಎಲ್​ಸಿ ಕಾಲುವೆಗೆ ಹರಿದು ಬಂದ ತುಂಗಭದ್ರಾ ನೀರು: ಕೃಷಿಗೆ ಬಳಸದಂತೆ ಆದೇಶ - ತುಂಗಭದ್ರಾ ಬೋರ್ಡಿನ ಕಾರ್ಯದರ್ಶಿ ನಾಗಮೋಹನ

ಕುಡಿಯುವ ನೀರಿನ ಬವಣೆ ಹೋಗಲಾಡಿಸಲು ತುಂಗಭದ್ರಾ ಜಲಾಶಯದಿಂದ ಬಲದಂಡೆ ಕೆಳಮಟ್ಟದ ಕಾಲುವೆಗೆ ಇಂದು 1200 ಕ್ಯೂಸೆಕ್​ ನೀರನ್ನು ಹರಿಬಿಡಲಾಯಿತು.

ತುಂಗಭದ್ರಾ ಜಲಾಶಯದಿಂದ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡಲಾಗಿದೆ
author img

By

Published : Jul 30, 2019, 8:51 PM IST

ಬಳ್ಳಾರಿ: ಇಂದಿನಿಂದ ಹತ್ತು ದಿನಗಳ ಕಾಲ ತುಂಗಭದ್ರಾ ಜಲಾಶಯದಿಂದ ಬಲದಂಡೆ ಕೆಳಮಟ್ಟದ ಕಾಲುವೆ(ಎಲ್​ಎಲ್​ಸಿ)ಗೆ ನೀರು ಬಿಡಲಾಯಿತು. ಈ ಯೋಜನೆಗೆ ತುಂಗಭದ್ರಾ ಬೋರ್ಡಿನ ಕಾರ್ಯದರ್ಶಿ ನಾಗಮೋಹನ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಕೇವಲ ಕುಡಿಯುವ ನೀರಿನ ಉದ್ದೇಶದಿಂದ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ. ಬಳ್ಳಾರಿ, ಸಿರುಗುಪ್ಪ ಸೇರಿದಂತೆ ಹೊಸಪೇಟೆ ತಾಲೂಕಿನ 56 ಗ್ರಾಮ ಹಾಗೂ ನೆರೆಯ ಆಂಧ್ರಪ್ರದೇಶದ ಎರಡು ಪಾಯಿಂಟ್​ಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿದೆ. ಈ ಹಿನ್ನೆಲೆಯಲ್ಲಿ ನೀರನ್ನು ಹರಿಸಲಾಗಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

1200 ಕ್ಯೂಸೆಕ್ ನೀರನ್ನು ಹರಿಬಿಡಲು ನಿರ್ಧರಿಸಲಾಗಿದ್ದು, ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ರೈತರು ಬಳಕೆ ಮಾಡಿಕೊಳ್ಳಬಾರದೆಂದು ಆದೇಶಿಸಿದ್ದಾರೆ. ತುಂಗಭದ್ರಾ ಜಲಾಶಯದ ಸೂಪರಿಂಟೆಂಡೆಂಟ್ ಆಫ್ ಎಂಜಿನಿಯರ್ ವೆಂಕಟರಮಣ, ಕಾರ್ಯಪಾಲಕ ಅಭಿಯಂತರ ಸುರೇಶ ರೆಡ್ಡಿ, ಸಹಾಯಕ ಎಂಜಿನಿಯರ್ ರಾಮಕೃಷ್ಣ, ಶ್ರೀನಿವಾಸಲು ಹಾಗೂ ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದರು.

ಬಳ್ಳಾರಿ: ಇಂದಿನಿಂದ ಹತ್ತು ದಿನಗಳ ಕಾಲ ತುಂಗಭದ್ರಾ ಜಲಾಶಯದಿಂದ ಬಲದಂಡೆ ಕೆಳಮಟ್ಟದ ಕಾಲುವೆ(ಎಲ್​ಎಲ್​ಸಿ)ಗೆ ನೀರು ಬಿಡಲಾಯಿತು. ಈ ಯೋಜನೆಗೆ ತುಂಗಭದ್ರಾ ಬೋರ್ಡಿನ ಕಾರ್ಯದರ್ಶಿ ನಾಗಮೋಹನ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ಕೇವಲ ಕುಡಿಯುವ ನೀರಿನ ಉದ್ದೇಶದಿಂದ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ. ಬಳ್ಳಾರಿ, ಸಿರುಗುಪ್ಪ ಸೇರಿದಂತೆ ಹೊಸಪೇಟೆ ತಾಲೂಕಿನ 56 ಗ್ರಾಮ ಹಾಗೂ ನೆರೆಯ ಆಂಧ್ರಪ್ರದೇಶದ ಎರಡು ಪಾಯಿಂಟ್​ಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿದೆ. ಈ ಹಿನ್ನೆಲೆಯಲ್ಲಿ ನೀರನ್ನು ಹರಿಸಲಾಗಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

1200 ಕ್ಯೂಸೆಕ್ ನೀರನ್ನು ಹರಿಬಿಡಲು ನಿರ್ಧರಿಸಲಾಗಿದ್ದು, ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ರೈತರು ಬಳಕೆ ಮಾಡಿಕೊಳ್ಳಬಾರದೆಂದು ಆದೇಶಿಸಿದ್ದಾರೆ. ತುಂಗಭದ್ರಾ ಜಲಾಶಯದ ಸೂಪರಿಂಟೆಂಡೆಂಟ್ ಆಫ್ ಎಂಜಿನಿಯರ್ ವೆಂಕಟರಮಣ, ಕಾರ್ಯಪಾಲಕ ಅಭಿಯಂತರ ಸುರೇಶ ರೆಡ್ಡಿ, ಸಹಾಯಕ ಎಂಜಿನಿಯರ್ ರಾಮಕೃಷ್ಣ, ಶ್ರೀನಿವಾಸಲು ಹಾಗೂ ಶ್ರೀನಿವಾಸ ನಾಯ್ಕ ಉಪಸ್ಥಿತರಿದ್ದರು.

Intro:ಎಲ್ ಎಲ್ ಸಿ ಕಾಲುವೆಗೆ ಹರಿಬಿಟ್ಟ ತುಂಗಭದ್ರಾ ಜಲಾಶಯದ ನೀರು!
ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಬಲದಂಡೆ ಕೆಳಮಟ್ಟದ
(ಎಲ್ ಎಲ್ ಸಿ) ಕಾಲುವೆಗಿಂದು ನೀರನ್ನು ಹರಿಬಿಡಲಾಯಿತು.
ತುಂಗಭದ್ರಾ ಬೋರ್ಡಿನ ಕಾರ್ಯದರ್ಶಿ ನಾಗಮೋಹನ ಅವರು ಚಾಲನೆ ನೀಡಿದರು. ಇಂದಿನಿಂದ ಹತ್ತು ದಿನಗಳಕಾಲ ಜಲಾಶಯದ ನೀರನ್ನು ಹರಿಬಿಡಲಾಗಿದ್ದು, ಕೇವಲ ಕುಡಿಯುವ ನೀರಿನ ಉದ್ದೇಶ ಸಲುವಾಗಿ ಈ ನೀರನ್ನು ಕಾಲುವೆಗೆ ಹರಿಸಲಾಗುತ್ತದೆ ಎಂದರು. ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ ಸೇರಿದಂತೆ ಹೊಸಪೇಟೆ ತಾಲೂಕಿನ 56 ಗ್ರಾಮ, ನೆರೆಯ ಆಂಧ್ರ ಪ್ರದೇಶದ ಎರಡು ಪಾಯಿಂಟ್ ಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿದ್ದು, ಆಗಾಗಿ, ಈ ನೀರನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳ ಬೇಕೆಂದರು.
Body:ಎಲ್ ಎಲ್ ಸಿ ಕಾಲುವೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 1200 ಕ್ಯೂಸೆಕ್ ನೀರನ್ನು ಹರಿಬಿಡಲು ನಿರ್ಧರಿಸಲಾಗಿದೆ. ಈ ಕಾಲುವೆಗೆ ನೀರನ್ನು ಹರಿಬಿಟ್ಟಾಗ ಕೃಷಿ ಚಟುವಟಿಕೆಗಳಿಗೆ ರೈತರು ಬಳಕೆ ಮಾಡಿಕೊಳ್ಳಬಾರದೆಂದರು.
ತುಂಗಭದ್ರಾ ಜಲಾಶಯದ ಸೂಪರಿಂಟೆಂಡೆಂಟ್ ಆಫ್ ಎಂಜಿನಿಯರ್ ವೆಂಕಟ ರಮಣ, ಕಾರ್ಯಪಾಲಕ ಅಭಿಯಂತರ ಸುರೇಶರೆಡ್ಡಿ, ಸಹಾಯಕ ಎಂಜಿನಿಯರ್ ಗಳಾದ ರಾಮಕೃಷ್ಣ, ಶ್ರೀನಿವಾಸಲು, ಶ್ರೀನಿವಾಸ ನಾಯ್ಕ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_LLC_CANAL_WATER_DISTRIBUTE_7203310

KN_BLY_3a_LLC_CANAL_WATER_DISTRIBUTE_7203310

KN_BLY_3b_LLC_CANAL_WATER_DISTRIBUTE_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.