ETV Bharat / state

ಲಾಳಗೊಂಡ ಸಮುದಾಯ ಆರ್ಥಿಕ ಸಬಲೀಕರಣಗೊಳ್ಳಲಿ: ಶಿವಶಾಂತವೀರ ಶರಣರು - undefined

ಲಾಳಗೊಂಡ ಸಮುದಾಯ ಆರ್ಥಿಕವಾಗಿ, ರಾಜಕೀಯವಾಗಿ ಮತ್ತಷ್ಟು ಸಬಲೀಕರಣ ಆಗಬೇಕು. ಸಮುದಾಯದ ಶ್ರೀಮಂತರು, ಸಮುದಾಯದಲ್ಲಿನ ಬಡ ಮತ್ತು ಕೃಷಿ ಕೂಲಿಕಾರ್ಮಿಕರ ಶ್ರೇಯೋಭಿವೃದ್ಧಿಗೆ ತಾವೆಲ್ಲ ಮುಂದಾಗಬೇಕೆಂದು ಕರೆಕೊಟ್ಟ ಶಿವಶಾಂತವೀರ ಶರಣರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
author img

By

Published : Jun 30, 2019, 10:23 PM IST

ಬಳ್ಳಾರಿ: ಹೈದ್ರಾಬಾದ್​ ಕರ್ನಾಟಕ ಭಾಗದಲ್ಲಿ ನೆಲೆಸಿರುವ ಲಿಂಗಾಯತ ಲಾಳಗೊಂಡ ಸಮುದಾಯವು ಆರ್ಥಿಕವಾಗಿ, ರಾಜಕೀಯವಾಗಿ ಸಬಲೀಕರಣಗೊಳ್ಳಲಿ ಎಂದು ಬಳಗಾನೂರು ಚಿಕ್ಕೇನಕೊಪ್ಪ ಮಠದ ಶಿವಶಾಂತ ವೀರ ಶರಣರು ಅಭಿಪ್ರಾಯಪಟ್ಟರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ನಗರದ ಎಂ.ಆರ್.ವಿ ಲೇಔಟ್​ನಲ್ಲಿರುವ ಅಖಿಲ ಕರ್ನಾಟಕ ಲಾಳಗೊಂಡ ಸಂಘದ ಜಿಲ್ಲಾ ಘಟಕದಿಂದ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 80 ರಷ್ಟು ಅಂಕ ಪಡೆದ ಸುಮಾರು ಎಂಭತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜ್ಞಾನಾಮೃತ ಕಾಲೇಜಿನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಕೋರ್ಸಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಶೇಕಡ 50 ರಷ್ಟು ಆರ್ಥಿಕ‌ ನೆರವು‌ ನೀಡುವ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಶಾಂತ ವೀರ ಶರಣರು ಈ ಸಮುದಾಯದ ಕುಲಕಸುಬು ಜಾನುವಾರು ಸಾಕಾಣಿಕೆ ಹಾಗೂ ಕೃಷಿ ಚಟುವಟಿಕೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಶೈಕ್ಷಣಿಕವಾಗಿ ಈ ಸಮುದಾಯ ಸುಧಾರಿಸಿಕೊಳ್ಳುತ್ತಿದ್ದು, ಆರ್ಥಿಕವಾಗಿ ಒಂದಿಷ್ಟು ಸಬಲೀಕರಣಗೊಂಡಿದ್ದಾರೆ. ಇಂತಹ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಶ್ರಮಿಸಬೇಕೆಂದು ಸ್ವಾಮೀಜಿ ಮನವಿ ಮಾಡಿದರು.

ಬಳ್ಳಾರಿ: ಹೈದ್ರಾಬಾದ್​ ಕರ್ನಾಟಕ ಭಾಗದಲ್ಲಿ ನೆಲೆಸಿರುವ ಲಿಂಗಾಯತ ಲಾಳಗೊಂಡ ಸಮುದಾಯವು ಆರ್ಥಿಕವಾಗಿ, ರಾಜಕೀಯವಾಗಿ ಸಬಲೀಕರಣಗೊಳ್ಳಲಿ ಎಂದು ಬಳಗಾನೂರು ಚಿಕ್ಕೇನಕೊಪ್ಪ ಮಠದ ಶಿವಶಾಂತ ವೀರ ಶರಣರು ಅಭಿಪ್ರಾಯಪಟ್ಟರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ನಗರದ ಎಂ.ಆರ್.ವಿ ಲೇಔಟ್​ನಲ್ಲಿರುವ ಅಖಿಲ ಕರ್ನಾಟಕ ಲಾಳಗೊಂಡ ಸಂಘದ ಜಿಲ್ಲಾ ಘಟಕದಿಂದ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 80 ರಷ್ಟು ಅಂಕ ಪಡೆದ ಸುಮಾರು ಎಂಭತ್ತಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜ್ಞಾನಾಮೃತ ಕಾಲೇಜಿನ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಕೋರ್ಸಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಶೇಕಡ 50 ರಷ್ಟು ಆರ್ಥಿಕ‌ ನೆರವು‌ ನೀಡುವ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಶಾಂತ ವೀರ ಶರಣರು ಈ ಸಮುದಾಯದ ಕುಲಕಸುಬು ಜಾನುವಾರು ಸಾಕಾಣಿಕೆ ಹಾಗೂ ಕೃಷಿ ಚಟುವಟಿಕೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಶೈಕ್ಷಣಿಕವಾಗಿ ಈ ಸಮುದಾಯ ಸುಧಾರಿಸಿಕೊಳ್ಳುತ್ತಿದ್ದು, ಆರ್ಥಿಕವಾಗಿ ಒಂದಿಷ್ಟು ಸಬಲೀಕರಣಗೊಂಡಿದ್ದಾರೆ. ಇಂತಹ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಶ್ರಮಿಸಬೇಕೆಂದು ಸ್ವಾಮೀಜಿ ಮನವಿ ಮಾಡಿದರು.

Intro:ಲಾಳಗೊಂಡ ಸಮುದಾಯ ಆರ್ಥಿಕ ಸಬಲೀಕರಣಗೊಳ್ಳಲಿ: ಶಿವಶಾಂತವೀರ ಶರಣರು!
ಬಳ್ಳಾರಿ: ಹೈಕ ಭಾಗದಲ್ಲಿ ನೆಲೆಸಿರುವ ಲಿಂಗಾಯತ ಲಾಳಗೊಂಡ ಸಮುದಾಯವು ಆರ್ಥಿಕವಾಗಿ, ರಾಜಕೀಯವಾಗಿ ಸಬಲೀಕರಣ ಗೊಳ್ಳಲಿ ಎಂದು ಬಳಗಾನೂರು ಚಿಕ್ಕೇನಕೊಪ್ಪ ಮಠದ ಶಿವಶಾಂತ ವೀರ ಶರಣರು ಅಭಿಪ್ರಾಯಪಟ್ಟರು.
ಬಳ್ಳಾರಿ ನಗರದ ಮೋಕಾ ರಸ್ತೆಯಲ್ಲಿನ ಎಂ.ಆರ್.ವಿ ಲೇಔಟ್ ನಲ್ಲಿರುವ ಅಖಿಲ ಕರ್ನಾಟಕ ಲಾಳಗೊಂಡ ಸಂಘದ ಜಿಲ್ಲಾ ಘಟಕ ದಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 80 ರಷ್ಟು ಅಂಕಪಡೆದ ಸುಮಾರು ಎಂಭತ್ತಕ್ಕೂ ಅಧಿಕ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಷ್ಠಿತ ಜ್ಞಾನಾಮೃತ ಕಾಲೇಜಿ ನಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಕೋರ್ಸಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಶೇಕಡ 50 ರಷ್ಟು ಆರ್ಥಿಕ‌ ನೆರವು‌ ನೀಡುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿ, ಈ ಸಮುದಾಯದ ಕುಲಕಸುಬು ಜಾನುವಾರು ಸಾಕಾಣಿಕೆ ಹಾಗೂ ಕೃಷಿ ಚಟುವಟಿಕೆಯಲ್ಲೇ ತೊಡಗಿಕೊಂಡಿದ್ದು, ಈವರೆಗೂ ಬಡತನ, ಹಸಿವು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಲಾಳಗೊಂಡ ಸಮುದಾಯ ಎದುರಿಸುತ್ತಿದೆ. ಇತ್ತೀಚಿನ ಕೆಲ ವರ್ಷ ಗಳಲ್ಲಿ ಶೈಕ್ಷಣಿಕವಾಗಿ ಈ ಸಮುದಾಯ ಸುಧಾರಿಸಿಕೊಳ್ಳುತ್ತಿದೆ. ಅರೆ ಸರ್ಕಾರಿ‌, ಸರ್ಕಾರಿ ಇಲಾಖೆಗಳಲ್ಲಿ ಈ ಸಮುದಾಯದ ಅಕ್ಷರವಂತರು ಕರ್ತವ್ಯ ನಿರ್ವಹಿಸುವ ಆರ್ಥಿಕವಾಗಿ ಒಂದಿಷ್ಟು ಸಬಲೀಕರಣಗೊಂಡಿದ್ದಾರೆ.
Body:ಈ ಸಮುದಾಯದ ಶ್ರೇಯೋಭಿವೃ ದ್ಧಿಗೆ‌ ಆರ್ಥಿಕವಾಗಿ, ರಾಜಕೀಯವಾಗಿ ಮತ್ತಷ್ಟು ಸಬಲೀಕರಣ ಆಗಬೇಕು. ಸಮುದಾಯದ ಶ್ರೀಮಂತರು, ಸಮುದಾಯದಲ್ಲಿನ ಬಡ ಮತ್ತು ಕೃಷಿಕೂಲಿಕಾರ್ಮಿಕರನ್ನು ಮೇಲೆತ್ತುವ ಕಾರ್ಯಕ್ಕೆ ತಾವೆಲ್ಲ ಮುಂದಾಗಬೇಕೆಂದರು.
ಆಗಮಾತ್ರ ಈ ಲಾಳಗೊಂಡ ಸಮುದಾಯವು ಹೈದರಾಬಾದ ಕರ್ನಾಟಕ ಭಾಗದ ಉತ್ತಮ ಸಮುದಾಯವಾಗಿ ಹೊರಹೊಮ್ಮ ಲಿದೆ. ಸಮುದಾಯದ ಜನರು ಮುಗ್ಧರು, ಡಾಂಬಿಕ ಭಕ್ತಿವುಳ್ಳವರು. ಯಾರೊಬ್ಬರಿಗೂ‌ ಕೇಡನು ಬಯಸದೆ, ಎಲ್ಲರೂ ನಮ್ಮವರೆಂದೇ ಮುನ್ನಡೆಯುವ ಮನಸ್ಥಿತಿಯುಳ್ಳವರು ಈ ಲಾಳಗೊಂಡ ಸಮು ದಾಯದವರು. ಇಂತಹ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸಬೇಕೆಂದರು.
ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ, ಅಖಿಲ ಕರ್ನಾಟಕ ಲಾಳಗೊಂಡ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅರವಿ ಬಸವನಗೌಡ, ಜಿಲ್ಲಾ ಘಟಕದ ಮಲ್ಲಿಕಾರ್ಜುನಗೌಡ ಬೇವಿನಹಳ್ಳಿ, ಮುಖಂಡರಾದ ಆರ್.ಜೆ.ಪಂಪನಗೌಡ, ಎಂ.ಆರ್.ಪಂಪನಗೌಡ, ಮೀನಳ್ಳಿ ಚಂದ್ರಶೇಖರಗೌಡ, ದಯಾಕರಗೌಡ, ಬಿ.ಡಿ.ಗೌಡ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_03_LALAGONDA_SANGH_PRATHIBHA_PURSKAR_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.