ETV Bharat / state

ಆರ್. ಟಿ. ಇ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಿರಿ: ಬಿ. ಎನ್. ಯೋಗಾನಂದ

author img

By

Published : Nov 3, 2019, 7:15 PM IST

ಮೈತ್ರಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ತಿದ್ದುಪಡಿಯನ್ನು ವಾಪಸ್ ಪಡಿಯಬೇಕಿದೆ. ಇದರಿಂದ 1.50 ಲಕ್ಷ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಈ ಶೈಕ್ಷಣಿಕ ವರ್ಷದಿಂದ ಆರ್.ಟಿ.ಇ.ಕಲಂ 12(1) ಸಿ ಗೆ ಮರುಚಾಲನೆ ನೀಡಬೇಕಿದೆ ಎಂದು ಅನುದಾನರಹಿತ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಯೋಗಾನಂದ ಒತ್ತಾಯಿಸಿದರು.

ಆರ್. ಟಿ. ಇ. ಕಾಯ್ದೆ ತಿದ್ದುಪಡಿ ವಾಪಾಸ್ ಪಡೆಯಿರಿ: ಬಿ. ಎನ್ ಯೋಗಾನಂದ

ಬೆಂಗಳೂರು/ಹೊಸಪೇಟೆ: ಬಡ ಮಕ್ಕಳಿಗೆ ವಸ್ತುನಿಷ್ಠ ವಿದ್ಯಾಭ್ಯಾಸ ನೀಡಲು ಆರ್. ಟಿ.ಇ. ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಾಪಸ್ ಪಡೆಯಬೇಕೆಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ ಆಗ್ರಹಿಸಿದರು.

ಬಳ್ಳಾರಿಯ ಕಲ್ಯಾಣ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆ ಒಕ್ಕೂಟ ಮಂಡಳಿ ಇಂದು ಬೆಂಗಳೂರು ನಗರದ ಅಮೃತ ರೆಸ್ಟೋರೆಂಟ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ತಿದ್ದುಪಡಿಯನ್ನು ವಾಪಸ್ ಪಡಿಯಬೇಕಿದೆ. ಮೈತ್ರಿ ಸರ್ಕಾರ ಕೆಲವು ಖಾಸಗಿ ಶಿಕ್ಷಣದ ಶಾಲೆಗಳ ಲಾಬಿಗೆ ಮಣಿದು ಈ ತಿದ್ದುಪಡಿಯನ್ನು ಜಾರಿಗೆ ತಂದಿತ್ತು. ಇದರಿಂದ 1.50 ಲಕ್ಷ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಈ ಶೈಕ್ಷಣಿಕ ವರ್ಷದಿಂದ ಆರ್.ಟಿ.ಇ.ಕಲಂ 12(1) ಸಿ ಗೆ ಮರುಚಾಲನೆ ನೀಡಬೇಕಿದೆ ಎಂದು ಒತ್ತಾಯಿಸಿದರು.

ಈ ತಿದ್ದುಪಡಿಯನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ‌ ಸಾರ್ವಜನಿಕ ಅರ್ಜಿಯನ್ನು ಸಲ್ಲಿಸಲಾಗಿದೆ. ಆದ್ರೆ, ನ್ಯಾಯಾಲಯವು ಈ ವಿಚಾರದ ವಾದ ಪ್ರತಿವಾದವನ್ನು ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ‌ ಮೊಕದ್ದಮೆ ಹೂಡಲಾಗಿದೆ ಎಂದರು‌.

2012-13 ನೇ ಸಾಲಿನಿಂದ 18-19ನೇ ಸಾಲಿನವರೆಗೂ ರಾಜ್ಯದಲ್ಲಿ 6.50‌ಲಕ್ಷ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅನುದಾನ ರಹಿತ ಶಾಲೆಗಳಲ್ಲಿ ಪಡೆದಿದ್ದಾರೆ. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಶಿಕ್ಷಣ ನೀತಿಯನ್ನು ಯು.ಪಿ.ಎ. ಸರ್ಕಾರ 2009 ರಲ್ಲಿ ಜಾರಿಗೆ ತಂದಿತ್ತು. ಆರ್.ಟಿ.ಇ ಮುಖ್ಯ ಉದ್ದೇಶ ಎಂದರೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡವುದಾಗಿದೆ ಎಂದು ಯೋಗಾನಂದ ತಿಳಿಸಿದರು.

ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. 10 ಜಿಲ್ಲೆಗಳಲ್ಲಿ ನಿಯೋಗ ಕರೆದೊಯ್ದು ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಈ ಕುರಿತು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು/ಹೊಸಪೇಟೆ: ಬಡ ಮಕ್ಕಳಿಗೆ ವಸ್ತುನಿಷ್ಠ ವಿದ್ಯಾಭ್ಯಾಸ ನೀಡಲು ಆರ್. ಟಿ.ಇ. ಕಾಯ್ದೆ ತಿದ್ದುಪಡಿ ಮಸೂದೆಯನ್ನು ವಾಪಸ್ ಪಡೆಯಬೇಕೆಂದು ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಯೋಗಾನಂದ ಆಗ್ರಹಿಸಿದರು.

ಬಳ್ಳಾರಿಯ ಕಲ್ಯಾಣ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆ ಒಕ್ಕೂಟ ಮಂಡಳಿ ಇಂದು ಬೆಂಗಳೂರು ನಗರದ ಅಮೃತ ರೆಸ್ಟೋರೆಂಟ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ತಿದ್ದುಪಡಿಯನ್ನು ವಾಪಸ್ ಪಡಿಯಬೇಕಿದೆ. ಮೈತ್ರಿ ಸರ್ಕಾರ ಕೆಲವು ಖಾಸಗಿ ಶಿಕ್ಷಣದ ಶಾಲೆಗಳ ಲಾಬಿಗೆ ಮಣಿದು ಈ ತಿದ್ದುಪಡಿಯನ್ನು ಜಾರಿಗೆ ತಂದಿತ್ತು. ಇದರಿಂದ 1.50 ಲಕ್ಷ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಈ ಶೈಕ್ಷಣಿಕ ವರ್ಷದಿಂದ ಆರ್.ಟಿ.ಇ.ಕಲಂ 12(1) ಸಿ ಗೆ ಮರುಚಾಲನೆ ನೀಡಬೇಕಿದೆ ಎಂದು ಒತ್ತಾಯಿಸಿದರು.

ಈ ತಿದ್ದುಪಡಿಯನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ‌ ಸಾರ್ವಜನಿಕ ಅರ್ಜಿಯನ್ನು ಸಲ್ಲಿಸಲಾಗಿದೆ. ಆದ್ರೆ, ನ್ಯಾಯಾಲಯವು ಈ ವಿಚಾರದ ವಾದ ಪ್ರತಿವಾದವನ್ನು ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ‌ ಮೊಕದ್ದಮೆ ಹೂಡಲಾಗಿದೆ ಎಂದರು‌.

2012-13 ನೇ ಸಾಲಿನಿಂದ 18-19ನೇ ಸಾಲಿನವರೆಗೂ ರಾಜ್ಯದಲ್ಲಿ 6.50‌ಲಕ್ಷ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಅನುದಾನ ರಹಿತ ಶಾಲೆಗಳಲ್ಲಿ ಪಡೆದಿದ್ದಾರೆ. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಶಿಕ್ಷಣ ನೀತಿಯನ್ನು ಯು.ಪಿ.ಎ. ಸರ್ಕಾರ 2009 ರಲ್ಲಿ ಜಾರಿಗೆ ತಂದಿತ್ತು. ಆರ್.ಟಿ.ಇ ಮುಖ್ಯ ಉದ್ದೇಶ ಎಂದರೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡವುದಾಗಿದೆ ಎಂದು ಯೋಗಾನಂದ ತಿಳಿಸಿದರು.

ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. 10 ಜಿಲ್ಲೆಗಳಲ್ಲಿ ನಿಯೋಗ ಕರೆದೊಯ್ದು ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಈ ಕುರಿತು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

Intro: ಆರ್.ಟಿ. ಇ. ಕಾಯ್ದೆಯನ್ನು ತಿದ್ದುಪಡಿ ವಾಪಾಸ್ ಪಡೆಯಿರಿ: ಬಿ.ಎನ್ ಯೋಗಾನಂದ
ಹೊಸಪೇಟೆ: ನಗರ ಅಮೃತ ರೆಸ್ಟೋರೆಂಟ್ ನಲ್ಲಿ ಇಂದು ಕಲ್ಯಾಣ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆ ಒಕ್ಕೂಟ ಮಂಡಳಿ ಬಳ್ಳಾರಿ. ಆರ್. ಟಿ.ಇ. ಕಾಯ್ದೆಯನ್ನು ತಿದ್ದುಪಡಿ ವಾಪಾಸ್ ಮಾಡಬೇಕಿದೆ. ಬಡ ಮಕ್ಕಳಿಗೆ ವಸ್ತುನಿಷ್ಠ ವಿದ್ಯಾಬ್ಯಾಸವನ್ನು ನೀಡಲು ಈ ಕಾಯ್ದೆಯನ್ನು ತಿದ್ದುಪಡಿ ವಾಪಾಸ್ ಮಾಡಬೇಕೆಂದು ಬಿ.ಎನ್.ಯೋಗಾನಂದ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಬೆಂಗಳೂರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.



Body:ಕಳೆದ ಮೈತ್ರಿ ಸರಕಾರದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ನಿಯಮ 4 ಕ್ಕೆ ತಂದಿದೆ. ಈ ಕಾಯ್ದೆಯ ತಿದ್ದುಪಡಿಯನ್ನು ವಾಪಾಸ್ ಪಡಿಯಬೇಕಿದೆ. ಮೈತ್ರಿ ಸರಕಾರ ಕೆಲವು ಖಾಸಗಿ ಶಿಕ್ಷಣದ ಶಾಲೆಗಳ ಲಾಭಿಗೆ ಮಣಿದು ಈ ತಿದ್ದುಪಡಿಯನ್ನು ಜಾರಿಗೆ ತಂದಿದೆ. ಇದರಿಂದ 1.50 ಲಕ್ಷ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ.ಶೈಕ್ಷಣಿಕ ವರ್ಷದಿಂದ ಆರ್.ಟಿ.ಇ.ಕಲಂ 12(1) ಸಿ ಮರುಚಾಲನೆಯನ್ನು ಮಾಡಬೇಕಿದೆ ಎಂದು ಹೇಳಿದರು.
ಈ ತಿದ್ದುಪಡಿಯನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯದಲ್ಲಿ‌ ಸಾರ್ವಜನಿಕ ಅರ್ಜಿಯನ್ನು ಸಲ್ಲಿಸಲಾಗಿದೆ.ನ್ಯಾಯಾಲಯವು ವಾದ ಪ್ರತಿವಾದವನ್ನು ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ
ಸರ್ವೋಚ್ಚ ನ್ಯಾಯಾಲಯದಲ್ಲಿ‌ ಮೊಕದಮೆಯನ್ನು ಹೂಡಲಾಗಿದೆ ಎಂದರು‌.
2012_13 ನೇ ಸಾಲಿನಿಂದ 18_19ನೇ ಸಾಲಿನ ವರೆಗೂ ರಾಜ್ಯದಲ್ಲಿ 6.50‌ಲಕ್ಷ ವಿದ್ಯಾರ್ಥಿಗಳು ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ಅನುದಾನ ರಹಿತ ಶಾಲೆಗಳಲ್ಲಿ ಪಡೆದಿದ್ದಾರೆ. ಖಾಸಗಿ ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಶಿಕ್ಷಣ ನೀತಿಯನ್ನು ಯು.ಪಿ.ಎ. ಸರಕಾರ 2009 ರಲ್ಲಿ ಜಾರಿಗೆ ತಂದಿದೆ. ಆರ್ ಟಿ.ಇ.ಮುಖ್ಯ ಉದ್ದೇಶ ಎಂದರೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡವುದಾಗಿದೆ ಎಂದರು.
ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಮಾಡಿಲಾಗಿದೆ. 10 ಜಿಲ್ಲೆಗಳಲ್ಲಿ ನಿಯೋಗ ಕರೆದುಕೊಂಡು ಮುಖ್ಯ ಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ, ಸೇರಿದಂತೆ ಮನವಿಯನ್ನು ಮಾಡಲಾಗಿದೆ ಎಂದು ಹೇಳಿದರು.




Conclusion:STUDENTS_PARENTS ASSOCIATION_PHOTO_KA10028

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.