ಹೊಸಪೇಟೆ: ಹಂಪಿಯ ಆರಾಧ್ಯದೈವ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 27.33 ಲಕ್ಷ ರೂ. ಸಂಗ್ರಹವಾಗಿದೆ.
2019ರ ಆ. 2ರಂದು ದೇವಸ್ಥಾನದಲ್ಲಿ ಮೂರು ಹುಂಡಿಗಳನ್ನು ಅಳವಡಿಸಲಾಗಿತ್ತು. ಈಗ ಎಣಿಕೆ ಮಾಡಿದಾಗ 27.33 ಲಕ್ಷ ರೂ. ಸಂಗ್ರಹವಾಗಿರುವುದು ಕಂಡುಬಂದಿದೆ.
![rs-27-dot-33-lakh-hundi-collection-in-hampi-temple](https://etvbharatimages.akamaized.net/etvbharat/prod-images/kn-hpt-02-hampi-a-sum-of-rs-2733lakhs-collect-in-veerupaksh-bundles-photo-ka10031_26082020045453_2608f_1598397893_738.jpg)
ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಂ.ಹೆಚ್. ಪ್ರಕಾಶ್ ರಾವ್, ಕೆನರಾ ಬ್ಯಾಂಕ್ ಹಂಪಿ ಶಾಖೆಯ ವ್ಯವಸ್ಥಾಪಕ ಶಿವಕುಮಾರ್ ರಾವ್, ಹೊಸಪೇಟೆ ಶಾಖೆಯ ವಿಜಯನಾರಾಯಣ, ಪೊಲೀಸ್ ಸಿಬ್ಬಂದಿ ಕೊಟ್ರೇಶ್ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು.